AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗೂಗಲ್ ಅನ್ಯಾಯ ಮಾಡುತ್ತಿದೆಯೆಂದು​ ದೂರು ಕೊಟ್ಟ ಡಿಜಿಟಲ್​ ನ್ಯೂಸ್​ ಪ್ರಕಾಶಕರ ಸಂಘ; ಸಿಸಿಐನಿಂದ ತನಿಖೆಗೆ ಆದೇಶ

ಗೂಗಲ್​ ವಿರುದ್ಧ ದೂರು ಕೊಟ್ಟ ಡಿಜಿಟಲ್​ ನ್ಯೂಸ್ ಪಬ್ಲಿಶರ್ಸ್​ ಅಸೋಸಿಯೇಶನ್​, ಡಿಜಿಟಲ್​ ಸುದ್ದಿ ಪ್ರಕಾಶಕರ ಹಿತಾಸಕ್ತಿಗಳನ್ನು ಉತ್ತೇಜಿಸುವ ಮತ್ತು ಬಲಪಡಿಸುವ ಒಂದು ಖಾಸಗಿ ಕಂಪನಿ.

ಗೂಗಲ್ ಅನ್ಯಾಯ ಮಾಡುತ್ತಿದೆಯೆಂದು​ ದೂರು ಕೊಟ್ಟ ಡಿಜಿಟಲ್​ ನ್ಯೂಸ್​ ಪ್ರಕಾಶಕರ ಸಂಘ; ಸಿಸಿಐನಿಂದ ತನಿಖೆಗೆ ಆದೇಶ
ಪ್ರಾತಿನಿಧಿಕ ಚಿತ್ರ
TV9 Web
| Edited By: |

Updated on: Jan 09, 2022 | 12:21 PM

Share

ಇಂಟರ್​ನೆಟ್​ ದೈತ್ಯ ಗೂಗಲ್​ ವಿರುದ್ಧ ಭಾರತೀಯ ಸ್ಪರ್ಧಾತ್ಮಕ ಆಯೋಗ (CCI-Competition Commission of India) ತನಿಖೆಗೆ ಆದೇಶಿಸಿದೆ. ಕೆಲವು ಆನ್​ಲೈನ್​ ಸರ್ಚಿಂಗ್​ ಸೇವೆಗಳಲ್ಲಿ ಪ್ರಾಬಲ್ಯ ಹೊಂದಿರುವ ಗೂಗಲ್​, ಸುದ್ದಿ ಸಂಗ್ರಹಣೆ ವಿಚಾರದಲ್ಲಿ ತನ್ನ ಪ್ರಬಲ ಸ್ಥಾನದ ದುರುಪಯೋಗ ಮಾಡಿಕೊಳ್ಳುತ್ತಿದೆ ಎಂದು ಡಿಜಿಟಲ್​ ನ್ಯೂಸ್​ ಪ್ರಕಾಶಕರ ಸಂಘ (DNPA) ನೀಡಿದ ದೂರಿನ ಮೇರೆಗೆ ಈ ತನಿಖೆ ನಡೆಸಲು ನಿರ್ಧರಿಸಿದ್ದಾಗಿ ಸಿಸಿಐ ತಿಳಿಸಿದೆ.  ಡಿಜಿಟಲ್​ ಮಾಧ್ಯಮಗಳು ಟ್ರಾಫಿಕ್​ (ಅಂದರೆ ಹೆಚ್ಚಿನ ಜನರು ಓದಲು ಬರುವುದು)ಗಾಗಿ ಗೂಗಲ್​​ ಮೇಲೆ ಅವಲಂಬಿತರಾಗಿರುತ್ತಾರೆ. ಹೀಗಾಗಿ ಗೂಗಲ್​ ಎಂಬುದು ಅವರ ವ್ಯವಹಾರದಲ್ಲಿ ಅನಿವಾರ್ಯವಾಗಿ ಪಾಲುದಾರ ಆಗಿರುತ್ತದೆ. ಆದರೆ ಗೂಗಲ್​ ಈ ಸುದ್ದಿ ಕ್ರೋಢಿಕರಣದ ವಿಚಾರದಲ್ಲಿ ತನ್ನ ಪ್ರಾಬಲ್ಯವನ್ನು ಬಳಸಿಕೊಂಡು ತಾರತಮ್ಯ ಮಾಡುತ್ತಿದೆ ಎಂಬ ಆರೋಪ ಕೇಳಿ ಬಂದಿದೆ ಎಂದು ಸಿಸಿಐ ಮಾಹಿತಿ ನೀಡಿದೆ. 

ಹೀಗೆ ಗೂಗಲ್​ ವಿರುದ್ಧ 21 ಪುಟಗಳ ತನಿಖಾ ಆದೇಶ ನೀಡಿರುವ ಸಿಸಿಐ,  ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸುತ್ತಿರುವ ಪ್ರಜಾಪ್ರಭುತ್ವದಲ್ಲಿ, ಸುದ್ದಿ ಮಾದ್ಯಮಗಳನ್ನು ದುರ್ಬಲಗೊಳಿಸುವಂತಿಲ್ಲ. ಡಿಜಿಟಲ್​ ಮಾಧ್ಯಮಗಳಿಗೆ ಓದುಗರು ಬರುವ ಪ್ರವೇಶದಂತೆ ಇರುವ ಸಂಸ್ಥೆಗಳು (ಉದಾ-ಗೂಗಲ್​ ಮತ್ತು ಅಂಥ ಇತರ ಸರ್ಚ್​ ಇಂಜಿನ್ ಸಂಸ್ಥೆಗಳು) ತಾರತಮ್ಯ ಮಾಡಿ ಅಥವಾ ತಮ್ಮ ಪ್ರಾಬಲ್ಯವನ್ನು ದುರುಪಯೋಗಪಡಿಸಿಕೊಳ್ಳುವ ಮೂಲಕ ಸ್ಪರ್ಧಾತ್ಮಕ ಪ್ರಕ್ರಿಯೆಗೆ ಹಾನಿ ಮಾಡಬಾರದು. ತಮ್ಮ ಮೂಲಕ ಬರುವ ಆದಾಯದ ಅಸಮರ್ಪಕ, ಅನ್ಯಾಯಯುತ ವಿತರಣೆ ಆಗಲು ಬಿಡಬಾರದು ಎಂದು ಸಿಸಿಐ ತಿಳಿಸಿದೆ.

ಗೂಗಲ್​ ವಿರುದ್ಧ ದೂರು ಕೊಟ್ಟ ಡಿಜಿಟಲ್​ ನ್ಯೂಸ್ ಪಬ್ಲಿಶರ್ಸ್​ ಅಸೋಸಿಯೇಶನ್​, ಡಿಜಿಟಲ್​ ಸುದ್ದಿ ಪ್ರಕಾಶಕರ ಹಿತಾಸಕ್ತಿಗಳನ್ನು ಉತ್ತೇಜಿಸುವ ಮತ್ತು ಬಲಪಡಿಸುವ ಒಂದು ಖಾಸಗಿ ಕಂಪನಿ. ಗೂಗಲ್​ ತಮಗೆ ಬರುವ ಆದಾಯದಲ್ಲಿ ನಷ್ಟವುಂಟು ಮಾಡುತ್ತದೆ ಎಂದು ಆರೋಪಿಸಿರುವ ಈ ಕಂಪನಿ, ಸದ್ಯ ಅಲ್ಪಾಬೆಟ್​ ಇಂಕ್​, ಗೂಗಲ್​ ಎಲ್​ಎಲ್​ಸಿ ಮತ್ತು ಗೂಗಲ್ ಇಂಡಿಯಾ ಪ್ರೈವೇಟ್​ ಲಿಮಿಟೆಡ್​ ವಿರುದ್ಧ ದೂರು ದಾಖಲಿಸಿದೆ. ಆಂಡ್ರ್ಯಾಯ್ಡ್​ ಮಾರುಕಟ್ಟೆಯಲ್ಲಿ ಗಟ್ಟಿ ಸ್ಥಾನ ಹೊಂದಿರುವ ಗೂಗಲ್​​ನಿಂದಾಗಿ ಪ್ರಕಾಶಕರಿಗೆ ಜಾಹೀರಾತಿನಲ್ಲೂ ನಷ್ಟವಾಗಿದೆ. ಶೇ.51ರಷ್ಟನ್ನು ನಾವು ಪಡೆಯುವಂತಾಗಿದೆ ಎಂದೂ ಸಂಘ ಆರೋಪಿಸಿದೆ. ಡಿಜಿಟಲ್​ ನ್ಯೂಸ್ ಪಬ್ಲಿಶರ್ಸ್​ ಅಸೋಸಿಯೇಶನ್ ಮಾಡಿರುವ ಆರೋಪಕ್ಕೆ ಸಂಬಂಧಪಟ್ಟಂತೆ ತನಿಖೆ ನಡೆಸಿ, 60 ದಿನಗಳಲ್ಲಿ ವರದಿ ಸಲ್ಲಿಸುವಂತೆ ಸಿಸಿಐ, ಮಹಾನಿರ್ದೇಶಕರಿಗೆ ಸೂಚಿಸಿದೆ.

ಇದನ್ನೂ ಓದಿ: ಬಿತ್ತಿದ್ದು ಆರು ಕೆಜಿ ಬೀಜ, ಬೆಳೆದಿದ್ದು 31 ಕ್ವಿಂಟಾಲ್ ಮೆಕ್ಕೆಜೋಳ; ಅಡಿಕೆ ತೋಟದಲ್ಲಿ ಬಂಪರ್ ಬೆಳೆಯಾಗಿ ಬಂದ ಮೆಕ್ಕೆಜೋಳ, ರೈತನ ವಿಶಿಷ್ಟ ಸಾಧನೆ

Follow Us
‘ಮೋಡ ಕವಿದ ವಾತಾವರಣ’ ಸಿನಿಮಾದಲ್ಲಿದೆ ಹಲವು ವಿಶೇಷ; ವಿವರಿಸಿದ ಚಿತ್ರತಂಡ
‘ಮೋಡ ಕವಿದ ವಾತಾವರಣ’ ಸಿನಿಮಾದಲ್ಲಿದೆ ಹಲವು ವಿಶೇಷ; ವಿವರಿಸಿದ ಚಿತ್ರತಂಡ
ಫೀಲ್ಡಿಗಿಳಿದ ಸಚಿವ: ಪಿಂಕ್ ಲೈನ್ ಮೆಟ್ರೋ ಕಾಮಗಾರಿಗೆ ಡೆಡ್​​ಲೈನ್ ಫಿಕ್ಸ್
ಫೀಲ್ಡಿಗಿಳಿದ ಸಚಿವ: ಪಿಂಕ್ ಲೈನ್ ಮೆಟ್ರೋ ಕಾಮಗಾರಿಗೆ ಡೆಡ್​​ಲೈನ್ ಫಿಕ್ಸ್
ಗ್ಯಾರಂಟಿ ಯೋಜನೆಗಳಿಗೆ ಮತ್ತೊಂದು ರೂಲ್ಸ್: ಮನೆಗೆ ಬಂದು ದಾಖಲೆ ಚೆಕ್ಕಿಂಗ್
ಗ್ಯಾರಂಟಿ ಯೋಜನೆಗಳಿಗೆ ಮತ್ತೊಂದು ರೂಲ್ಸ್: ಮನೆಗೆ ಬಂದು ದಾಖಲೆ ಚೆಕ್ಕಿಂಗ್
‘ನಾನು ಇಲ್ಲಿ ನಿಂತಿದ್ದಕ್ಕೆ ಟೈಗರ್ ಪ್ರಭಾಕರ್ ಕಾರಣ’: ವಿನೋದ್ ಪ್ರಭಾಕರ್
‘ನಾನು ಇಲ್ಲಿ ನಿಂತಿದ್ದಕ್ಕೆ ಟೈಗರ್ ಪ್ರಭಾಕರ್ ಕಾರಣ’: ವಿನೋದ್ ಪ್ರಭಾಕರ್
ರಾಜ್ಯದ ಜನತೆಗೆ ಶೀಘ್ರದಲ್ಲೇ ಕಾದಿದ್ಯಾ ಬಸ್ ಪ್ರಯಾಣ ದರ ಏರಿಕೆ ಶಾಕ್?
ರಾಜ್ಯದ ಜನತೆಗೆ ಶೀಘ್ರದಲ್ಲೇ ಕಾದಿದ್ಯಾ ಬಸ್ ಪ್ರಯಾಣ ದರ ಏರಿಕೆ ಶಾಕ್?
ಗ್ಯಾರಂಟಿ ಯೋಜನೆಗಳ ಬಗ್ಗೆ ಕಟ್ಟು ನಿಟ್ಟಿನ ಕ್ರಮ:ಸಿಎಂ ಕೊಟ್ಟ ಸೂಚನೆಗಳೇನು?
ಗ್ಯಾರಂಟಿ ಯೋಜನೆಗಳ ಬಗ್ಗೆ ಕಟ್ಟು ನಿಟ್ಟಿನ ಕ್ರಮ:ಸಿಎಂ ಕೊಟ್ಟ ಸೂಚನೆಗಳೇನು?
ಬಹು ನಿರೀಕ್ಷಿತ ‘ಕರಾವಳಿ’ ಸಿನಿಮಾ ಬಿಡುಗಡೆ ದಿನಾಂಕ ಘೋಷಣೆ
ಬಹು ನಿರೀಕ್ಷಿತ ‘ಕರಾವಳಿ’ ಸಿನಿಮಾ ಬಿಡುಗಡೆ ದಿನಾಂಕ ಘೋಷಣೆ
ಗ್ಯಾರಂಟಿ ಯೋಜನೆಗಳ ಪರಿಷ್ಕರಣೆ ಬಗ್ಗೆ ಬಿಗ್​​ ಅಪ್ಡೇಟ್​ ಕೊಟ್ಟ ರೇವಣ್ಣ
ಗ್ಯಾರಂಟಿ ಯೋಜನೆಗಳ ಪರಿಷ್ಕರಣೆ ಬಗ್ಗೆ ಬಿಗ್​​ ಅಪ್ಡೇಟ್​ ಕೊಟ್ಟ ರೇವಣ್ಣ
‘ಬಲರಾಮನ ದಿನಗಳು’ ಸಿನಿಮಾ ಬಗ್ಗೆ ಗೆಳೆಯರಾದ ವಿಜಯ್-ಬುಜ್ಜಿ ಮಾತು
‘ಬಲರಾಮನ ದಿನಗಳು’ ಸಿನಿಮಾ ಬಗ್ಗೆ ಗೆಳೆಯರಾದ ವಿಜಯ್-ಬುಜ್ಜಿ ಮಾತು
ಶಿಕ್ಷಕನ ಸಾವು: ಐವರು ಶಿಕ್ಷಕರು ಶಾಲೆಗೆ ಬರುವುದು ಬೇಡವೆಂದ ಗ್ರಾಮಸ್ಥರು
ಶಿಕ್ಷಕನ ಸಾವು: ಐವರು ಶಿಕ್ಷಕರು ಶಾಲೆಗೆ ಬರುವುದು ಬೇಡವೆಂದ ಗ್ರಾಮಸ್ಥರು