AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಾಟ್ಸಾಪ್ ಖಾಸಗಿತನ ನಿಯಮಾವಳಿಗಳ ಅಪ್​ಡೇಟ್​ಗೆ ದೆಹಲಿ ಹೈಕೋರ್ಟ್​ನಲ್ಲಿ ತಡೆ ಕೋರಿದ ಸರ್ಕಾರ

ವಾಟ್ಸಾಪ್​ನಿಂದ ಖಾಸಗಿತನ ನಿಯಮಾವಳಿಗಳಲ್ಲಿ ಅಪ್​ಡೇಟ್ ಮಾಡುವುದಕ್ಕೆ ತಡೆ ನೀಡಬೇಕು ಎಂದು ಕೇಂದ್ರ ಸರ್ಕಾರವು ದೆಹಲಿ ಹೈಕೋರ್ಟ್​ನಲ್ಲಿ ಕೇಳಿಕೊಂಡಿದೆ. ಈ ಬಗ್ಗೆ ಅಫಿಡವಿಟ್ ಅನ್ನು ಸಲ್ಲಿಸಿದೆ.

ವಾಟ್ಸಾಪ್ ಖಾಸಗಿತನ ನಿಯಮಾವಳಿಗಳ ಅಪ್​ಡೇಟ್​ಗೆ ದೆಹಲಿ ಹೈಕೋರ್ಟ್​ನಲ್ಲಿ ತಡೆ ಕೋರಿದ ಸರ್ಕಾರ
ದೆಹಲಿ ಹೈ ಕೋರ್ಟ್
Srinivas Mata
|

Updated on:Mar 20, 2021 | 4:38 PM

Share

ನವದೆಹಲಿ: ವಾಟ್ಸಾಪ್​​ನಿಂದ ಖಾಸಗಿತನ ನಿಯಮಾವಳಿಗಳ ಅಪ್​ಡೇಟ್ ಮಾಡುವುದಕ್ಕೆ ತಡೆ ನೀಡಬೇಕು. ಅವುಗಳು ಮಾಹಿತಿ ತಂತ್ರಜ್ಞಾನ ನಿಯಮಗಳಿಗೆ ತಕ್ಕಂತೆ ಇಲ್ಲ ಎಂದು ಕೇಂದ್ರ ಸರ್ಕಾರವು ಶುಕ್ರವಾರ ದೆಹಲಿ ಹೈಕೋರ್ಟ್​​ನಲ್ಲಿ ಕೇಳಿಕೊಂಡಿದೆ. ಈ ಬಗ್ಗೆ ಅಫಿಡವಿಟ್ ಸಲ್ಲಿಸಿರುವ ಸರ್ಕಾರ, ಪ್ರಸ್ತಾವಿತ ದತ್ತಾಂಶ ಸುರಕ್ಷತಾ ಮಸೂದೆ, 2019ಕ್ಕೆ ಇನ್ನೂ ಸಂಸತ್​​ನಲ್ಲಿ ಅನುಮೋದನೆ ಪಡೆಯಬೇಕಿದೆ. ಈ ಮಸೂದೆಯು ವಾಟ್ಸಾಪ್​ನಂಥ ಸೇವಾ ಪೂರೈಕೆದಾರರು ಖಾಸಗಿತನ ನಿಯಮವನ್ನು ನೀಡುವ ಸಾಮರ್ಥ್ಯ ಮಿತಿಗೊಳಿಸುತ್ತದೆ. ಅವುಗಳು ಸೂಕ್ತ ಗುಣಮಟ್ಟದ ಭದ್ರತೆ ಹಾಗೂ ದತ್ತಾಂಶ ರಕ್ಷಣಾ ವ್ಯವಸ್ಥೆಯನ್ನು ಹೊಂದಿಲ್ಲ ಎಂದು ತಿಳಿಸಲಾಗಿದೆ.

ವಾಟ್ಸಾಪ್​ನ ಪ್ರಸ್ತಾವಿತ ಖಾಸಗಿತನ ನಿಯಮಗಳ ಬದಲಾವಣೆಗೆ ತಡೆ ಕೋರಿ ಹಾಕಿದ್ದ ಅರ್ಜಿಗೆ ಪ್ರತಿಕ್ರಿಯೆಯಾಗಿ ಕೇಂದ್ರದಿಂದ ಅಫಿಡವಿಟ್ ಸಲ್ಲಿಸಲಾಗಿದೆ. ಬಳಕೆದಾರರು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದರಿಂದ ಭಾರತದಲ್ಲಿ ವಾಟ್ಸಾಪ್ ಕಂಪೆನಿಯು ಬದಲಾವಣೆಯನ್ನು ಮುಂದೂಡಿತ್ತು. ಅಪ್​ಡೇಟ್​ನಿಂದ ಪ್ಲಾಟ್​ಫಾರ್ಮ್​ನಲ್ಲಿ ಮೂಲಭೂತವಾದ ಬದಲಾವಣೆ ಆಗಲ್ಲ. ಒಂದೋ ವಾಟ್ಸಾಪ್, ಇಲ್ಲ ಫೇಸ್​ಬುಕ್ ಅಥವಾ ಥರ್ಡ್ ಪಾರ್ಟಿ ಯಾರಿಗೆ ಸಂಪರ್ಕಕ್ಕೆ ಅವಕಾಶ ಇದೆಯೋ ಅವುಗಳಿಂದ (ಫೋನ್​ನಲ್ಲಿ ಸ್ಪೈವೇರ್ ಯಾವುದೂ ಇಲ್ಲದ ಪಕ್ಷದಲ್ಲಿ) ಮೊದಲಿಂದ ಕೊನೆ ತನಕ ಎನ್​ಕ್ರಿಪ್ಟ್ ಆಗುತ್ತದೆ. ಆದರೆ ಪಾವತಿ ಅಥವಾ ಖರೀದಿ ಮಾಹಿತಿ (ಉದ್ಯಮಕ್ಕಾಗಿ ವಾಟ್ಸಾಪ್​ನಲ್ಲಿ ಮಾಡಿದ್ದು) ಫೇಸ್​ಬುಕ್​ನೊಂದಿಗೆ ಹಂಚಿಕೆಯಾಗುತ್ತದೆ.

ಆದರೆ, ಈಚೆಗೆ ಕೇಂದ್ರ ಸರ್ಕಾರದಿಂದ ಪರಿಚಯಿಸಿದ ನೀತಿಗಳು ಆನ್​ಲೈನ್ ಬಳಕೆದಾರರ ಖಾಸಗಿತನ ಮತ್ತು ಎನ್​ಕ್ರಿಪ್ಷನ್​ಗೆ ಅಪಾಯ ತಂದೊಡ್ಡುತ್ತದೆ ಎನ್ನಲಾಗಿದೆ. ಸಾಮಾಜಿಕ ಮಾಧ್ಯಮಗಳು, ಡಿಜಿಟಲ್ ಸುದ್ದಿ ಮಾಧ್ಯಮ ಹಾಗೂ ಸ್ಟ್ರೀಮಿಂಗ್ ಸೇವೆಗಳ ಮೇಲೆ ನಿಯಂತ್ರಣ ಹೇರುವ ಸಲುವಾಗಿ ಸರ್ಕಾರ ಹೊಸ ಸಂಹಿತೆಯೊಂದನ್ನು ತಂದಿದೆ. ಉದಾಹರಣೆಗೆ, ವಾಟ್ಸಾಪ್​ನಂಥ ಪ್ಲಾಟ್​ಫಾರ್ಮ್​ಗಳಲ್ಲಿ ಮಾಹಿತಿಯ ಮೊದಲ ಮೂಲ ಎಲ್ಲಿಂದ ಬಂದಿದ್ದು ಎಂದು ವಿಚಾರಣೆ ನಡೆಸುವುದಕ್ಕೆ ಸರ್ಕಾರಕ್ಕೆ ವಾಟ್ಸಾಪ್​ನಿಂದ ಸಹಾಯ ಮಾಡಬೇಕಾಗುತ್ತದೆ.

ವಾಟ್ಸಾಪ್ ಸಂದೇಶವನ್ನು ಮೊದಲಿಂದ ಕೊನೆ ತನಕ ಎನ್​ಕ್ರಿಪ್ಷನ್ ಮುರಿಯದ ಹೊರತು ಸರ್ಕಾರದಿಂದ ಹೇಳುತ್ತಿರುವುದು ಪಾಲನೆ ಮಾಡಲು ಸಾಧ್ಯವೇ ಇಲ್ಲ ಎಂದು ಡೈಲಾಗ್ ತಂತ್ರಜ್ಞಾನ ನಿಯಮಾವಳಿಯ ಥಿಂಕ್ ಟ್ಯಾಂಕ್ ಸ್ಥಾಪಕರಾದ ಕಜೀಂ ರಿಜ್ವಿ ಹೇಳಿದ್ದಾರೆ.

ಇದನ್ನೂ ಓದಿ: WhatsApp Features: ಈ ಐದು ವಾಟ್ಸ್​​ಆ್ಯಪ್​ ಫೀಚರ್​ ಬಗ್ಗೆ ನೀವು ತಿಳಿದಿರಲೇಬೇಕು

Published On - 3:52 pm, Sat, 20 March 21

Follow Us
ಹಾಸನ: ಬೆಂಗಳೂರು-ಮಂಗಳೂರು ಹೆದ್ದಾರಿಯಲ್ಲಿ ಪೆಟ್ರೋಲ್ ಟ್ಯಾಂಕರ್ ಪಲ್ಟಿ
ಹಾಸನ: ಬೆಂಗಳೂರು-ಮಂಗಳೂರು ಹೆದ್ದಾರಿಯಲ್ಲಿ ಪೆಟ್ರೋಲ್ ಟ್ಯಾಂಕರ್ ಪಲ್ಟಿ
ಶಾರ್ಟ್​ ಸರ್ಕ್ಯೂಟ್​ಗೆ ಸಿಲಿಂಡರ್​ ಸ್ಫೋಟ; 21 ಲಕ್ಷ ರೂ. ಕಳೆದುಕೊಂಡ ಮಾಲೀಕ
ಶಾರ್ಟ್​ ಸರ್ಕ್ಯೂಟ್​ಗೆ ಸಿಲಿಂಡರ್​ ಸ್ಫೋಟ; 21 ಲಕ್ಷ ರೂ. ಕಳೆದುಕೊಂಡ ಮಾಲೀಕ
80ರ ಫೋಟೊ ಟ್ರೆಂಡ್: ಸೈಬರ್ ವಂಚನೆ ಸಾಧ್ಯತೆಗಳ ಬಗ್ಗೆ ಪೊಲೀಸರಿಂದ ಸಂದೇಶ
80ರ ಫೋಟೊ ಟ್ರೆಂಡ್: ಸೈಬರ್ ವಂಚನೆ ಸಾಧ್ಯತೆಗಳ ಬಗ್ಗೆ ಪೊಲೀಸರಿಂದ ಸಂದೇಶ
ದಾಳಿಯನ್ನೇ ದೊಡ್ಡ ಸಾಧನೆಯಂತೆ ಬಿಂಬಿಸಿಕೊಳ್ತಿದೆ ಇಡಿ: ವಿಜಯ್ ಮಲ್ಯ ಟೀಕೆ
ದಾಳಿಯನ್ನೇ ದೊಡ್ಡ ಸಾಧನೆಯಂತೆ ಬಿಂಬಿಸಿಕೊಳ್ತಿದೆ ಇಡಿ: ವಿಜಯ್ ಮಲ್ಯ ಟೀಕೆ
ಬಿಗ್ ಬಾಸ್ ಮನೆಯಲ್ಲಿ ಮಹಿಳೆಯರು ಕೆಲಸಕ್ಕೆ ಮಾತ್ರ ಸೀಮಿತ? ಗಂಭೀರ ಆರೋಪ
ಬಿಗ್ ಬಾಸ್ ಮನೆಯಲ್ಲಿ ಮಹಿಳೆಯರು ಕೆಲಸಕ್ಕೆ ಮಾತ್ರ ಸೀಮಿತ? ಗಂಭೀರ ಆರೋಪ
8 ಜನ ನಾಮಿನೇಟ್; ಇದರಲ್ಲಿ ಎಲಿಮಿನೇಟ್ ಆಗೋದು ಯಾರು?
8 ಜನ ನಾಮಿನೇಟ್; ಇದರಲ್ಲಿ ಎಲಿಮಿನೇಟ್ ಆಗೋದು ಯಾರು?
ಚಂದ್ರ ಕನ್ಯಾ ರಾಶಿಯಲ್ಲಿ ಸಂಚಾರ: 12 ರಾಶಿಗಳ ದಿನ ಭವಿಷ್ಯ ಇಲ್ಲಿದೆ
ಚಂದ್ರ ಕನ್ಯಾ ರಾಶಿಯಲ್ಲಿ ಸಂಚಾರ: 12 ರಾಶಿಗಳ ದಿನ ಭವಿಷ್ಯ ಇಲ್ಲಿದೆ
ಮೊಬೈಲ್ ನೋಡುತ್ತಾ ಹೋಗುತ್ತಿದ್ದಾಗ ಫ್ಲೋರ್​ನಿಂದ ಕೆಳಗೆ ಬಿದ್ದ ವ್ಯಕ್ತಿ
ಮೊಬೈಲ್ ನೋಡುತ್ತಾ ಹೋಗುತ್ತಿದ್ದಾಗ ಫ್ಲೋರ್​ನಿಂದ ಕೆಳಗೆ ಬಿದ್ದ ವ್ಯಕ್ತಿ
ನಿಮ್ಮ ಏರಿಯಾದಲ್ಲಿ ಗಣೇಶ ಕೂರಿಸ್ಬೇಕಾ? ಹಾಗಾದರೆ ಈ ವಿಡಿಯೋ ನೋಡಿ
ನಿಮ್ಮ ಏರಿಯಾದಲ್ಲಿ ಗಣೇಶ ಕೂರಿಸ್ಬೇಕಾ? ಹಾಗಾದರೆ ಈ ವಿಡಿಯೋ ನೋಡಿ
ಒಂದು ವಾರದಲ್ಲಿ ಮಂಜ ಕಾಮಿಡಿ ಪೀಸ್ ಆಗ್ತಾನೆ; ತಾಂಡವ್ ರಾಮ್ ಭವಿಷ್ಯ
ಒಂದು ವಾರದಲ್ಲಿ ಮಂಜ ಕಾಮಿಡಿ ಪೀಸ್ ಆಗ್ತಾನೆ; ತಾಂಡವ್ ರಾಮ್ ಭವಿಷ್ಯ