ರಾಜ್​ಘಾಟ್​ನಲ್ಲಿ ಪ್ರಣಬ್ ಮುಖರ್ಜಿ ಸ್ಮಾರಕದ ಬಳಿ ಮನಮೋಹನ್ ಸಿಂಗ್ ಸ್ಮಾರಕ ನಿರ್ಮಾಣಕ್ಕೆ ಕೇಂದ್ರ ಚಿಂತನೆ

ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರ ಸ್ಮಾರಕದ ಬಳಿಯೇ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಸ್ಮಾರಕ ನಿರ್ಮಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಕುಟುಂಬವು ಟ್ರಸ್ಟ್ ಸ್ಥಾಪಿಸುವವರೆಗೆ ಕೇಂದ್ರವು ಕಾಯುತ್ತಿದೆ, ನಂತರ ಸ್ಮಾರಕಕ್ಕಾಗಿ ಜಾಗವನ್ನು ಹಂಚಿಕೆ ಮಾಡಲಾಗುತ್ತದೆ. ಸ್ಮಾರಕ ನಿರ್ಮಾಣಕ್ಕಾಗಿ ಸರ್ಕಾರವು ಟ್ರಸ್ಟ್‌ಗೆ 25 ಲಕ್ಷ ರೂ.ಗಳನ್ನು ದೇಣಿಗೆ ನೀಡಲಿದೆ ಎಂದು ಅವರು ಹೇಳಿದರು.

ರಾಜ್​ಘಾಟ್​ನಲ್ಲಿ ಪ್ರಣಬ್ ಮುಖರ್ಜಿ ಸ್ಮಾರಕದ ಬಳಿ ಮನಮೋಹನ್ ಸಿಂಗ್ ಸ್ಮಾರಕ ನಿರ್ಮಾಣಕ್ಕೆ ಕೇಂದ್ರ ಚಿಂತನೆ
ಮನಮೋಹನ್ ಸಿಂಗ್
Image Credit source: France24

Updated on: Feb 04, 2025 | 2:45 PM

ರಾಜ್​ಘಾಟ್​ನಲ್ಲಿ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರ ಸ್ಮಾರಕದ ಬಳಿಯೇ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಸ್ಮಾರಕ ನಿರ್ಮಿಸಲು ಕೇಂದ್ರ ಸರ್ಕಾರ ಚಿಂತನೆ ನಡೆಸುತ್ತಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಮನಮೋಹನ್ ಸಿಂಗ್ ಅವರ ಸ್ಮಾರಕಕ್ಕಾಗಿ ರಾಜ್​ಘಾಟ್ ಸಂಕೀರ್ಣದಲ್ಲಿ ಸ್ಥಳಾವಕಾಶ ನೀಡಲಾಗಿದೆ. ಹಂಚಿಕೆಯಾಗಲಿರುವ ಜಾಗದೊಂದಿಗೆ, ಸರ್ಕಾರವು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಸ್ಮಾರಕವನ್ನು ಸ್ಥಾಪಿಸುವ ಅಂತಿಮ ಹಂತದಲ್ಲಿದೆ.

ಕುಟುಂಬವು ಟ್ರಸ್ಟ್ ಸ್ಥಾಪಿಸುವವರೆಗೆ ಕೇಂದ್ರವು ಕಾಯುತ್ತಿದೆ, ನಂತರ ಸ್ಮಾರಕಕ್ಕಾಗಿ ಜಾಗವನ್ನು ಹಂಚಿಕೆ ಮಾಡಲಾಗುತ್ತದೆ. ಸ್ಮಾರಕ ನಿರ್ಮಾಣಕ್ಕಾಗಿ ಸರ್ಕಾರವು ಟ್ರಸ್ಟ್‌ಗೆ 25 ಲಕ್ಷ ರೂ.ಗಳನ್ನು ದೇಣಿಗೆ ನೀಡಲಿದೆ ಎಂದು ಅವರು ಹೇಳಿದರು.

ಹೊಸ ನೀತಿಯಡಿಯಲ್ಲಿ, ಸ್ಮಾರಕ ಭೂಮಿಯನ್ನು ಟ್ರಸ್ಟ್‌ಗೆ ಮಾತ್ರ ಹಂಚಿಕೆ ಮಾಡಬಹುದು, ಸ್ಟ್ ಸ್ಥಾಪನೆಯಾದ ನಂತರ, ಅದು ಭೂ ಹಂಚಿಕೆಗೆ ಅರ್ಜಿ ಸಲ್ಲಿಸುತ್ತದೆ, ನಂತರ ನಿರ್ಮಾಣಕ್ಕಾಗಿ ಕೇಂದ್ರ ಲೋಕೋಪಯೋಗಿ ಇಲಾಖೆಯೊಂದಿಗೆ (CPWD) ಒಪ್ಪಂದಕ್ಕೆ ಸಹಿ ಹಾಕುತ್ತದೆ.

ದೆಹಲಿಯ ರಾಜ್‌ಘಾಟ್ ಆವರಣದಲ್ಲಿರುವ ರಾಷ್ಟ್ರೀಯ ಸಮಿತಿ’ ಸಂಕೀರ್ಣದೊಳಗೆ ಪ್ರಣಬ್ ಮುಖರ್ಜಿ ಅವರ ಸ್ಮಾರಕಕ್ಕಾಗಿ ಸರ್ಕಾರ ಒಂದು ಸ್ಥಳವನ್ನು ಮಂಜೂರು ಮಾಡಿದೆ ಎಂದು ಅವರ ಪುತ್ರಿ ಶರ್ಮಿಷ್ಠಾ ಮುಖರ್ಜಿ ಕಳೆದ ತಿಂಗಳು ದೃಢಪಡಿಸಿದ್ದರು. ಕಳೆದ ತಿಂಗಳು, ಸರ್ಕಾರವು ಕುಟುಂಬಕ್ಕೆ ಸಂಭಾವ್ಯ ಸ್ಥಳಗಳನ್ನು ಸೂಚಿಸುವ ಮೂಲಕ ಸ್ಮಾರಕವನ್ನು ನಿರ್ಮಿಸುವ ಪ್ರಕ್ರಿಯೆಯನ್ನು ಪ್ರಾರಂಭಿಸಿತು.

ಮತ್ತಷ್ಟು ಓದಿ: ಮೌನಕ್ಕೆ ಜಾರಿದ ಮನಮೋಹನ್ ಸಿಂಗ್​, ಮಾಜಿ ಪ್ರಧಾನಿಯ ವ್ಯಕ್ತಿಚಿತ್ರಣ ಇಲ್ಲಿದೆ

ರಾಜ್‌ಘಾಟ್, ರಾಷ್ಟ್ರೀಯ ಸ್ಮೃತಿ ಸ್ಥಳ ಅಥವಾ ಕಿಸಾನ್ ಘಾಟ್ ಬಳಿ ಸುಮಾರು 1 ರಿಂದ 1.5 ಎಕರೆ ಭೂಮಿ ಸ್ಮಾರಕಕ್ಕಾಗಿ ಪ್ರಸ್ತಾಪಿಸಲಾದ ಸ್ಥಳಗಳಲ್ಲಿ ಸೇರಿವೆ ಎಂದು ಮೂಲಗಳು ತಿಳಿಸಿವೆ. 92 ವರ್ಷದ ನಾಯಕ ಡಿಸೆಂಬರ್ 26, 2024 ರಂದು ನಿಧನರಾದರು. ಪ್ರಣಬ್ ಮುಖರ್ಜಿ ಆಗಸ್ಟ್​ 31, 2020ರಲ್ಲಿ ನಿಧನರಾಗಿದ್ದಾರೆ.