AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪೆಗಾಸಸ್​ ಸ್ಪೈವೇರ್​ನ್ನು ಮೋದಿ ಸರ್ಕಾರವೇ ಖರೀದಿಸಿತ್ತು ಎಂದು ವರದಿ ಮಾಡಿದ್ದ ನ್ಯೂಯಾರ್ಕ್​ ಟೈಮ್ಸ್​ಗೆ ಲೀಗಲ್​ ನೋಟಿಸ್​ ಕಳಿಸಿದ ಚೆನ್ನೈ ವಕೀಲ

ನ್ಯೂಯಾರ್ಕ್ ಟೈಮ್ಸ್​​ನಲ್ಲಿ ಪ್ರಕಟವಾದ ಲೇಖನ ದೇಶದ ಗೌರವವನ್ನು ಹಾಳುಮಾಡುವಂತಿದೆ. ಭಾರತ ಸ್ಪೈವೇರ್​ ಖರೀದಿಸಿರುವ ಬಗ್ಗೆ ಇಸ್ರೇಲ್​​ನ ಎನ್ಎಸ್​ಒ (ಸ್ಪೈವೇರ್​ ಉತ್ಪಾದನಾ ಸಂಸ್ಥೆ) ದೃಢೀಕರಿಸಿಲ್ಲ ಎಂದು ವಕೀಲರಾದ ಶ್ರೀನಿವಾಸನ್​ ತಿಳಿಸಿದ್ದಾರೆ.

ಪೆಗಾಸಸ್​ ಸ್ಪೈವೇರ್​ನ್ನು ಮೋದಿ ಸರ್ಕಾರವೇ ಖರೀದಿಸಿತ್ತು ಎಂದು ವರದಿ ಮಾಡಿದ್ದ ನ್ಯೂಯಾರ್ಕ್​ ಟೈಮ್ಸ್​ಗೆ ಲೀಗಲ್​ ನೋಟಿಸ್​ ಕಳಿಸಿದ ಚೆನ್ನೈ ವಕೀಲ
ಸಾಂಕೇತಿಕ ಚಿತ್ರ
TV9 Web
| Updated By: Lakshmi Hegde|

Updated on:Feb 03, 2022 | 4:10 PM

Share

2022ರ ಜನವರಿ 8ರಂದು ಪೆಗಾಸಸ್ ಸ್ಪೈವೇರ್​ (Pegasus Spyware)​ ಬಗ್ಗೆ ಪ್ರಕಟಿಸಿರುವ ವರದಿಗೆ ಸಂಬಂಧಪಟ್ಟಂತೆ ಚೆನ್ನೈ ಮೂಲದ ಹಿರಿಯ ವಕೀಲ ಎಂ.ಶ್ರೀನಿವಾಸನ್​ ಅವರು ನ್ಯೂಯಾರ್ಕ್​ ಟೈಮ್ಸ್​ಗೆ ಲೀಗಲ್​ ನೋಟಿಸ್​ ಕೊಟ್ಟಿದ್ದಾರೆ. 2021ರಲ್ಲಿ ವಿವಾದ ಸೃಷ್ಟಿಸಿದ್ದ ಈ ಪೆಗಾಸಸ್​ ಸ್ಪೈವೇರ್​ ಕುರಿತಂತೆ ನ್ಯೂಯಾರ್ಕ್​ ಟೈಮ್ಸ್​ ವರದಿ ಪ್ರಕಟಿಸಿ, ಭಾರತದ ಕೇಂದ್ರ ಸರ್ಕಾರ 2017ರಲ್ಲಿ ಇಸ್ರೇಲ್​​ನೊಂದಿಗೆ ಮಾಡಿಕೊಂಡ 2 ಬಿಲಿಯನ್​ ಡಾಲರ್​ಗಳಷ್ಟು ಮೊತ್ತದ ರಕ್ಷಣಾ ಒಪ್ಪಂದದ ಭಾಗವಾಗಿ ಈ ಸ್ಪೈವೇರ್​ನ್ನು ಕೂಡ ಖರಿದಿ ಮಾಡಿತ್ತು ಎಂದು ಹೇಳಿದೆ. ಈ ವರದಿಯನ್ನು ಯಾವ ಆಧಾರದ ಮೇಲೆ ಪ್ರಕಟಿಸಲಾಗಿದೆ ಎಂಬುದನ್ನು ನ್ಯೂಯಾರ್ಕ್​ ಟೈಮ್ಸ್ ತಿಳಿಸಬೇಕು. ಒಂದು ವಾರದಲ್ಲಿ ಕ್ಷಮೆ ಕೇಳಬೇಕು. ಇಲ್ಲದೆ ಇದ್ದರೆ 1 ಸಾವಿರ ಕೋಟಿ ರೂಪಾಯಿ ಮಾನನಷ್ಟ ಮೊಕದ್ದಮೆ ಸೇರಿ, ಇನ್ನಿತರ ಕಾನೂನು ಕ್ರಮ ಎದುರಿಸಬೇಕಾಗುತ್ತದೆ ಎಂದು ಲೀಗಲ್​ ನೋಟಿಸ್​ನಲ್ಲಿ ತಿಳಿಸಲಾಗಿದೆ. ಎಂ.ಶ್ರೀನಿವಾಸನ್​ ಅವರು ಮದ್ರಾಸ್ ಹೈಕೋರ್ಟ್​​ನಲ್ಲಿ ಪ್ರ್ಯಾಕ್ಟೀಸ್ ಮಾಡುತ್ತಿದ್ದು, ಜ.31ರಂದು ಇಮೇಲ್ ಮೂಲಕ ನ್ಯೂಯಾರ್ಕ್ ಟೈಮ್ಸ್​ಗೆ ನೋಟಿಸ್​ ನೀಡಿದ್ದಾರೆ. 

ನ್ಯೂಯಾರ್ಕ್ ಟೈಮ್ಸ್​​ನಲ್ಲಿ ಪ್ರಕಟವಾದ ಲೇಖನ ದೇಶದ ಗೌರವವನ್ನು ಹಾಳುಮಾಡುವಂತಿದೆ. ಭಾರತ ಸ್ಪೈವೇರ್​ ಖರೀದಿಸಿರುವ ಬಗ್ಗೆ ಇಸ್ರೇಲ್​​ನ ಎನ್ಎಸ್​ಒ (ಸ್ಪೈವೇರ್​ ಉತ್ಪಾದನಾ ಸಂಸ್ಥೆ) ದೃಢೀಕರಿಸಿಲ್ಲ. ಹಾಗಾಗಿ ಈ ವರದಿ ದುರುದ್ದೇಶಪೂರಿತವಾಗಿದೆ ಎಂದೂ ಶ್ರೀನಿವಾಸನ್​ ಹೇಳಿದ್ದಾರೆ. ಅಷ್ಟೇ ಅಲ್ಲ, ವಿಶ್ವಸಂಸ್ಥೆಯಲ್ಲಿ ಭಾರತ ಇಸ್ರೇಲ್​ ಪರವಾಗಿ ಮತಹಾಕಿದ್ದನ್ನೂ ಕೂಡ ಪೆಗಾಸಸ್​ ಸ್ಪೈವೇರ್​ ಖರೀದಿಗೆ ಲಿಂಕ್​ ಮಾಡಿ ಬರೆಯಲಾಗಿದೆ. ಇದೆಲ್ಲವೂ ಸಂಪೂರ್ಣ ತಪ್ಪಾದ ವರದಿ ಎಂದಿದ್ದಾರೆ.

ಆ ದಿನಗಳಲ್ಲಿ ಯುಎಸ್​​ನಲ್ಲಿದ್ದ ಭಾರತದ ಶಾಶ್ವತ ಪ್ರತಿನಿಧಿ ಸೈಯದ್ ಅಕ್ಬರುದ್ದೀನ್​ ಕೂಡ ಆರೋಪವನ್ನು ಸಂಪೂರ್ಣವಾಗಿ ನಿರಾಕರಿಸಿದ್ದಾರೆ. ಭಾರತದ ಗೌರವಕ್ಕೆ ಚ್ಯುತಿ ತರುವ ಸಲುವಾಗಿಯೇ ಇಂಥದ್ದೊಂದು ಲೇಖನ ಪ್ರಕಟಿಸಿರುವುದು ಮೇಲ್ನೋಟಕ್ಕೆ ಗೊತ್ತಾಗುತ್ತದೆ. ನಾನೀಗ ಕಳಿಸಿರುವ ಲೀಗಲ್ ನೋಟಿಸ್​ಗೆ ಒಂದು ವಾರದೊಳಗೆ ನ್ಯೂಯಾರ್ಕ್​ ಟೈಮ್ಸ್ ಉತ್ತರ ನೀಡಬೇಕು. ಹಾಗೊಮ್ಮೆ ಉತ್ತರ ಕೊಡದೆ ಹೋದಲ್ಲಿ, ನಾನು ಕಾನೂನು ಕ್ರಮಕ್ಕೆ ಮುಂದಾಗುತ್ತೇನೆ ಎಂದು ಶ್ರೀನಿವಾಸನ್​ ಐಎಎನ್​ಎಸ್​ಗೆ ತಿಳಿಸಿದ್ದಾರೆ.

ಪೆಗಾಸಸ್​ ಸ್ಪೈವೇರ್​​  2021ರಲ್ಲಿ ಭರ್ಜರಿ ಸುದ್ದಿ ಮಾಡಿತ್ತು. ಭಾರತದಲ್ಲಿ ಇಸ್ರೇಲಿ ಮೂಲದ ಪೆಗಾಸಸ್​ ಬಳಸಿ, ರಾಜಕಾರಣಿಗಳು, ಪತ್ರಕರ್ತರು, ಮತ್ತಿತರ ಗಣ್ಯರೆಲ್ಲ ಸೇರಿ 300ಕ್ಕೂ ಹೆಚ್ಚು ಜನರ ಫೋನ್​ ಟ್ಯಾಪ್​ ಮಾಡಲಾಗಿದೆ ಎಂದು ದಿ ವೈರ್​ ಪ್ರಕಟಿಸಿತ್ತು. ಹಾಗೇ ಬಹುಮುಖ್ಯವಾಗಿ ಯಾರೆಲ್ಲರ ಫೋನ್​ ಟ್ಯಾಪ್​ ಆಗಿದೆ ಎಂಬ ಹೆಸರುಗಳನ್ನೂ ಬಹಿರಂಗಪಡಿಸಲಾಗಿತ್ತು. ಅದರಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಚುನಾವಣಾ ತಂತ್ರಜ್ಞ ಪ್ರಶಾಂತ್​ ಕಿಶೋರ್​ ಸೇರಿ ಅನೇಕರ ಹೆಸರುಗಳು ಇದ್ದವು.  ಈ ಪೆಗಾಸಸ್​ ಸ್ನೂಪಿಂಗ್​ ಕುರಿತು ತನಿಖೆ ನಡೆಸಲು ಸುಪ್ರೀಂಕೋರ್ಟ್​​ನಿಂದ ಸಮಿತಿ ರಚಿಸಲಾಗಿದ್ದು, ತನಿಖೆ ನಡೆಯುತ್ತಲೂ ಇದೆ. ನ್ಯೂಯಾರ್ಕ್ ಟೈಮ್ಸ್ ವರದಿ ಬೆನ್ನಲ್ಲೇ ಸುಪ್ರೀಂಕೋರ್ಟ್​​ನಲ್ಲಿ ಇನ್ನೊಂದು ಅರ್ಜಿ ಕೂಡ ಸಲ್ಲಿಕೆಯಾಗಿದೆ.

ಇದನ್ನೂ ಓದಿ: ಪುನೀತ್​ ಮನೆಗೆ ಭೇಟಿ, ಸಮಾಧಿಗೆ ನಮನ; ಇಲ್ಲಿವೆ ಅಲ್ಲು ಅರ್ಜುನ್ ಭೇಟಿಯ ಫೋಟೋ ಚಿತ್ರಣ

Published On - 4:10 pm, Thu, 3 February 22

ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?