Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚೆನ್ನೈನ ಮುತ್ತುಕಾಡುನಲ್ಲಿ ಬರಲಿದೆ ತೇಲುವ ರೆಸ್ಟೋರೆಂಟ್, ಏನಿದರ ವಿಶೇಷತೆ?

ಚೆನ್ನೈನಿಂದ ಸುಮಾರು 36 ಕಿಮೀ ದೂರದಲ್ಲಿರುವ ಮುತ್ತುಕಾಡು ಬೋಟ್ ಹೌಸ್ ಈಗಾಗಲೇ ಪ್ರಮುಖ ಆಕರ್ಷಕ ಪ್ರವಾಸಿ ತಾಣಗಳಲ್ಲಿ ಒಂದಾಗಿದೆ.

ಚೆನ್ನೈನ ಮುತ್ತುಕಾಡುನಲ್ಲಿ ಬರಲಿದೆ ತೇಲುವ ರೆಸ್ಟೋರೆಂಟ್, ಏನಿದರ ವಿಶೇಷತೆ?
ಮುತ್ತುಕಾಡುನಲ್ಲಿ ಬರಲಿದೆ ತೇಲುವ ರೆಸ್ಟೋರೆಂಟ್
Follow us
ರಶ್ಮಿ ಕಲ್ಲಕಟ್ಟ
|

Updated on: Mar 25, 2023 | 8:21 PM

ಚೆನ್ನೈ ನಗರದ ನಿವಾಸಿಗಳು ತೇಲುವ ರೆಸ್ಟೋರೆಂಟ್‌ನಲ್ಲಿ(floating restaurant) ಊಟದ ಅನುಭವವನ್ನು ಶೀಘ್ರದಲ್ಲೇ ಅನುಭವಿಸಬಹುದು. ಚೆನ್ನೈ ಪೂರ್ವ ಕರಾವಳಿ ರಸ್ತೆಯಲ್ಲಿರುವ ಮುತ್ತುಕಾಡು (Muttukadu)ಬೋಟ್ ಹೌಸ್‌ನಲ್ಲಿ ಹಿನ್ನೀರಿನ ನೌಕಾಯಾನ ನಡೆಸುವಾಗ  ಈ ರೆಸ್ಟೋರೆಂಟ್​ನ ಅನುಭವವನ್ನು ಸವಿಯಲಿದ್ದಾರೆ. ರಾಜ್ಯ ಪ್ರವಾಸೋದ್ಯಮ ಸಚಿವ ಕೆ.ರಾಮಚಂದ್ರನ್ ಶುಕ್ರವಾರ ದೋಣಿ ನಿರ್ಮಿಸಲು ಅಡಿಮರ ಹಾಕಿ ಚಾಲನೆ ನೀಡಿದ್ದಾರೆ. 125 ಅಡಿ ಉದ್ದ ಮತ್ತು 25 ಅಡಿ ಅಗಲದ ಬೋಟ್‌ನಲ್ಲಿ ಡಬಲ್ ಡೆಕ್ ರೆಸ್ಟೋರೆಂಟ್ ನಿರ್ಮಿಸುವ ಕೆಲಸ ಮೂರು ತಿಂಗಳಲ್ಲಿ ಪೂರ್ಣಗೊಳ್ಳಲಿದೆ ಎಂದು ಸಚಿವರು ಹೇಳಿದರು, ಇದು ರಾಜ್ಯದ ಮೊದಲ ತೇಲುವ ರೆಸ್ಟೋರೆಂಟ್ ಆಗಲಿದೆ. ದೋಣಿಯ ಮೊದಲ ಮಹಡಿಯು ತೆರೆದ ಸ್ಥಳವನ್ನು ಹೊಂದಿರುತ್ತದೆ . ಹೊರಗಿನ ದೃಶ್ಯ ಆನಂದಿಸಲು ಮತ್ತು ಊಟ ಮಾಡಲು 100 ಜನರಿಗೆ ಆಸನವನ್ನು ವ್ಯವಸ್ಥೆ ಇದೆ. ದೋಣಿಯ ಕೆಳಗಿನ ಡೆಕ್ ನಲ್ಲಿ ಕೊಠಡಿಗಳು, ಅಡುಗೆಮನೆ ಮತ್ತು ಊಟದ ಪ್ರದೇಶವಿದ್ದು ಇದು ಹವಾನಿಯಂತ್ರಿತವಾಗಿರುತ್ತದೆ.

ತಮಿಳುನಾಡು ಪ್ರವಾಸೋದ್ಯಮ ಅಭಿವೃದ್ಧಿ ನಿಗಮ ಮತ್ತು ಕೊಚ್ಚಿನ್‌ನ ಗ್ರ್ಯಾಂಡ್ನೂರ್ ಮೆರೈನ್ ಇಂಟರ್‌ನ್ಯಾಷನಲ್‌ನಿಂದ ಖಾಸಗಿ ಮತ್ತು ಸಾರ್ವಜನಿಕ ಕೊಡುಗೆ ಯೋಜನೆಯಡಿ ಈ ಯೋಜನೆಯನ್ನು 5 ಕೋಟಿ ರೂ.ಗಳ ಅಂದಾಜು ವೆಚ್ಚದಲ್ಲಿ ಅನುಷ್ಠಾನಗೊಳಿಸಲಾಗುತ್ತದೆ. ಇದು ನೆರೆಯ ಕೇರಳದ ಹಿನ್ನೀರಿನಲ್ಲಿ ಸಾಕಷ್ಟು ಪ್ರಸಿದ್ಧವಾಗಿರುವ ತೇಲುವ ರೆಸ್ಟೋರೆಂಟ್‌ಗಳಂತೆಯೇ ಇರುತ್ತದೆ. ಇದು ಮುತ್ತುಕಾಡುಗೆ ಭೇಟಿ ನೀಡಲು ಮತ್ತು ಹಿನ್ನೀರಿನಲ್ಲಿ ಸವಾರಿ ಮಾಡಲು ಹೆಚ್ಚಿನ ಪ್ರವಾಸಿಗರನ್ನು ಆಕರ್ಷಿಸುತ್ತದೆ ಎಂದು ಸಚಿವರು ಭರವಸೆ ವ್ಯಕ್ತಪಡಿಸಿದರು.

ಇದನ್ನೂ ಓದಿ: ನನ್ನ ಹೆಸರು ಸಾವರ್ಕರ್ ಅಲ್ಲ; ನಾನು ಗಾಂಧಿ, ಕ್ಷಮೆ ಕೇಳಲ್ಲ: ರಾಹುಲ್ ಗಾಂಧಿ

ಚೆನ್ನೈನಿಂದ ಸುಮಾರು 36 ಕಿಮೀ ದೂರದಲ್ಲಿರುವ ಮುತ್ತುಕಾಡು ಬೋಟ್ ಹೌಸ್ ಈಗಾಗಲೇ ಪ್ರಮುಖ ಆಕರ್ಷಕ ಪ್ರವಾಸಿ ತಾಣಗಳಲ್ಲಿ ಒಂದಾಗಿದೆ. ರೋಯಿಂಗ್, ವಿಂಡ್‌ಸರ್ಫಿಂಗ್, ವಾಟರ್ ಸ್ಕೀಯಿಂಗ್ ಮತ್ತು ಸ್ಪೀಡ್‌ಬೋಟ್ ರೈಡಿಂಗ್ ಅನ್ನು ನೀಡುವ ಜಲಕ್ರೀಡೆ ಸೌಲಭ್ಯವನ್ನು ಹೊಂದಿದೆ. ಇದು ತಮಿಳುನಾಡು ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಒಡೆತನದಲ್ಲಿದ್ದು, ನಿಗಮವೇ ನಿರ್ವಹಿಸುತ್ತದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಕಾರಿಗೆ ಲಾರಿ ಡಿಕ್ಕಿ, ವಿಡಿಯೋ ನೋಡಿ
ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಕಾರಿಗೆ ಲಾರಿ ಡಿಕ್ಕಿ, ವಿಡಿಯೋ ನೋಡಿ
ಉತ್ತರ ಕರ್ನಾಟಕದ ಹುಲಿಗೆ ಜೈ: ಹಂಪಿ ಉತ್ಸವದಲ್ಲಿ ಹನುಮಂತನಿಗೆ ಜೈಕಾರ
ಉತ್ತರ ಕರ್ನಾಟಕದ ಹುಲಿಗೆ ಜೈ: ಹಂಪಿ ಉತ್ಸವದಲ್ಲಿ ಹನುಮಂತನಿಗೆ ಜೈಕಾರ
ಶಿವಕುಮಾರ್ ಖಾಸಗಿ ಕಾರ್ಯಕ್ರಮದಲ್ಲಿ ಭಾಗಿಯಾದರೇನು ತಪ್ಪು? ಜಾರಕಿಹೊಳಿ
ಶಿವಕುಮಾರ್ ಖಾಸಗಿ ಕಾರ್ಯಕ್ರಮದಲ್ಲಿ ಭಾಗಿಯಾದರೇನು ತಪ್ಪು? ಜಾರಕಿಹೊಳಿ
ಜಮೀರ್ ಅಹ್ಮದ್ ಆಡುವ ಮಾತಿಗೆ ಯಾವುದೇ ಬೆಲೆ ಇಲ್ಲ: ಜಗದೀಶ್ ಶೆಟ್ಟರ್
ಜಮೀರ್ ಅಹ್ಮದ್ ಆಡುವ ಮಾತಿಗೆ ಯಾವುದೇ ಬೆಲೆ ಇಲ್ಲ: ಜಗದೀಶ್ ಶೆಟ್ಟರ್
ಪಕ್ಷದಲ್ಲಿ ವಾತಾವರಣ ತಿಳಿಯಾಗುತ್ತಿದೆ ಎಂದು ವಿಜಯೇಂದ್ರ ಹೇಳುವುದು ನಿಜವೇ?
ಪಕ್ಷದಲ್ಲಿ ವಾತಾವರಣ ತಿಳಿಯಾಗುತ್ತಿದೆ ಎಂದು ವಿಜಯೇಂದ್ರ ಹೇಳುವುದು ನಿಜವೇ?
ಚಾಮುಂಡೇಶ್ವರಿ ದೇವಾಲಯದ ಒಳಗೂ ಸುದೀಪ್ ಜತೆ ಸೆಲ್ಫಿಗೆ ಮುಗಿಬಿದ್ದ ಫ್ಯಾನ್ಸ್
ಚಾಮುಂಡೇಶ್ವರಿ ದೇವಾಲಯದ ಒಳಗೂ ಸುದೀಪ್ ಜತೆ ಸೆಲ್ಫಿಗೆ ಮುಗಿಬಿದ್ದ ಫ್ಯಾನ್ಸ್
ಸರ್ಕಾರಕ್ಕೆ ಹಿನ್ನಡೆಯಾಗಲಿ ಅಂತ ನಾವು ಯಾವತ್ತೂ ಬಯಸಲ್ಲ: ಯದುವೀರ್
ಸರ್ಕಾರಕ್ಕೆ ಹಿನ್ನಡೆಯಾಗಲಿ ಅಂತ ನಾವು ಯಾವತ್ತೂ ಬಯಸಲ್ಲ: ಯದುವೀರ್
ಕಡುಗೆಂಪಗಿರುವುದೆಲ್ಲ ತಿನ್ನಲು-ಯೋಗ್ಯ ಕಲ್ಲಂಗಡಿ ಹಣ್ಣಲ್ಲ!
ಕಡುಗೆಂಪಗಿರುವುದೆಲ್ಲ ತಿನ್ನಲು-ಯೋಗ್ಯ ಕಲ್ಲಂಗಡಿ ಹಣ್ಣಲ್ಲ!
ಮಾರ್ಚ್​ 22ರಂದು ಅಖಂಡ ಕರ್ನಾಟಕ ಬಂದ್​ಗೆ ಕರೆ: ಯಾರೆಲ್ಲಾ ಬೆಂಬಲ?
ಮಾರ್ಚ್​ 22ರಂದು ಅಖಂಡ ಕರ್ನಾಟಕ ಬಂದ್​ಗೆ ಕರೆ: ಯಾರೆಲ್ಲಾ ಬೆಂಬಲ?
ವಿಶ್ವವಿಖ್ಯಾತ ಹಂಪಿ ಉತ್ಸವ ಕಳೆದ ಸಲಕ್ಕಿಂತ ಅದ್ದೂರಿಯಾಗಿದೆ: ಜಮೀರ್ ಅಹ್ಮದ್
ವಿಶ್ವವಿಖ್ಯಾತ ಹಂಪಿ ಉತ್ಸವ ಕಳೆದ ಸಲಕ್ಕಿಂತ ಅದ್ದೂರಿಯಾಗಿದೆ: ಜಮೀರ್ ಅಹ್ಮದ್