ಒಳ್ಳೇ ಸುದ್ದಿ | ಓದುವ ಕನಸಿಗೆ ಆಸರೆ; ಎತ್ತಿನಗಾಡಿ ಏರಿ ಚೆನ್ನೈಗೆ ಬಂದವಳ ವಿಮಾನ ಹತ್ತಿಸಿದರು

ಚೆನ್ನೈ ಸಮೀಪದಲ್ಲಿರುವ ಹಳ್ಳಿಯಿಂದ ಬಾಲಕಿಯೊಬ್ಬಳು ಬಿ.ಎಸ್​​ಸಿ ಅಗ್ರಿಕಲ್ಚರ್​ ಕೋರ್ಸ್​​ ಕೌನ್ಸೆಲಿಂಗ್​ನಲ್ಲಿ ಪಾಲ್ಗೊಳ್ಳುವವರಿದ್ದರು. ಚೆನ್ನೈನಲ್ಲೇ ಕೌನ್ಸಲಿಂಗ್​ ನಡೆಯುತ್ತಿತ್ತು. ಹೀಗಾಗಿ ಅನಕ್ಷರಸ್ಥೆ ತಾಯಿ ಜೊತೆ ಮಗಳು ಚೆನ್ನೈನ ಅಣ್ಣಾ ಕೃಷಿ ವಿಶ್ವವಿದ್ಯಾಲಯಕ್ಕೆ ಎತ್ತಿನ ಗಾಡಿಯಲ್ಲಿ ಬಂದಿದ್ದರು. ಅಲ್ಲಿಗೆ ಬಂದಾಗ ಆಕೆಗೆ ಶಾಕಿಂಗ್​ ಸುದ್ದಿ ಒಂದು ಕಾದಿತ್ತು.

ಒಳ್ಳೇ ಸುದ್ದಿ | ಓದುವ ಕನಸಿಗೆ ಆಸರೆ; ಎತ್ತಿನಗಾಡಿ ಏರಿ ಚೆನ್ನೈಗೆ ಬಂದವಳ ವಿಮಾನ ಹತ್ತಿಸಿದರು
Edited By: ಆಯೇಷಾ ಬಾನು

Updated on: Dec 23, 2020 | 6:32 AM

ಚೆನ್ನೈ: ನಾವು ನಿಜವಾಗಲೂ ಏನನ್ನಾದರೂ ಬಯಸಿದರೆ ಜಗತ್ತೇ ಅದಕ್ಕೆ ಸಂಚು ರೂಪಿಸುತ್ತೆದೆಯಂತೆ. ಹೀಗೊಂದು ಮಾತು ಚಾಲ್ತಿಯಲ್ಲಿದೆ. ಚೆನ್ನೈ ವಿದ್ಯಾರ್ಥಿನಿಯೊಬ್ಬಳ ಬಾಳಿನಲ್ಲಿ ಇದು ಅಕ್ಷರಶಃ ನಿಜವಾಗಿದೆ. ಆಕೆ ಪಟ್ಟ ಶ್ರಮಕ್ಕೆ ತಕ್ಕ ಪ್ರತಿಫಲ ದೊರೆತಿದೆ. ಈ ವಿಶೇಷ ಕಥೆಯ ಬಗ್ಗೆ ಇಲ್ಲಿದೆ ಮಾಹಿತಿ.

ಚೆನ್ನೈ ಸಮೀಪದಲ್ಲಿರುವ ಹಳ್ಳಿಯಿಂದ ಬಾಲಕಿಯೊಬ್ಬಳು ಬಿ.ಎಸ್​​ಸಿ ಅಗ್ರಿಕಲ್ಚರ್​ ಕೋರ್ಸ್​​ ಕೌನ್ಸೆಲಿಂಗ್​ನಲ್ಲಿ ಪಾಲ್ಗೊಳ್ಳುವವರಿದ್ದರು. ಚೆನ್ನೈನಲ್ಲೇ ಕೌನ್ಸಲಿಂಗ್​ ನಡೆಯುತ್ತಿತ್ತು. ಹೀಗಾಗಿ ಅನಕ್ಷರಸ್ಥೆ ತಾಯಿ ಜೊತೆ ಮಗಳು ಚೆನ್ನೈನ ಅಣ್ಣಾ ಕೃಷಿ ವಿಶ್ವವಿದ್ಯಾಲಯಕ್ಕೆ ಎತ್ತಿನ ಗಾಡಿಯಲ್ಲಿ ಬಂದಿದ್ದರು. ಅಲ್ಲಿಗೆ ಬಂದಾಗ ಆಕೆಗೆ ಶಾಕಿಂಗ್​ ಸುದ್ದಿ ಒಂದು ಕಾದಿತ್ತು. ಕೌನ್ಸೆಲಿಂಗ್ ಇರುವುದು ಚನ್ನೈನಲ್ಲಿ ಅಲ್ಲ- ಕೊಯಮತ್ತೂರಿನಲ್ಲಿ ಎನ್ನುವ ವಿಚಾರ ಅಲ್ಲಿಗೆ ಬಂದ ಮೇಲೆ ತಿಳಿದಿತ್ತು. ಯಾರೋ ನೀಡಿದ ತಪ್ಪು ಮಾಹಿತಿಯಿಂದ ವಿದ್ಯಾರ್ಥಿನಿ ಸಂಕಷ್ಟಕ್ಕೆ ಈಡಾಗಿದ್ದರು.

ಅಲ್ಲಿಗೆ ಮುಂಜಾನೆ ವಾಕಿಂಗ್​ಗೆ ಬರುತ್ತಿದ್ದ ಕೆಲವರು ಆತಂಕದಲ್ಲಿರುವ ತಾಯಿ ಮಗಳನ್ನು ಗಮನಿಸಿದ್ದಾರೆ. ಸಮಸ್ಯೆ ಏನು ಎಂದು ಕೇಳಿದ್ದಾರೆ. ಆಗ ನಡೆದ ಘಟನೆ ಬಗ್ಗೆ ಅವರು ಅಲ್ಲಿಯವರಿಗೆ ವಿವರಿಸಿದ್ದಾರೆ. ಚೆನ್ನೈನಿಂದ ಕೊಯಮತ್ತೂರಿಗೆ ಪ್ರಯಾಣಿಸಲು 9 ಗಂಟೆ ಬೇಕು. ಮುಂಜಾನೆ ಹೊರಟರೂ ಕೌನ್ಸಲಿಂಗ್​ ತಲುಪೋದು ಅಸಾಧ್ಯ. ತಾಯಿ-ಮಗಳ ಸ್ಥಿತಿ ನೋಡಿ ಅಲ್ಲಿಯವರು ಮರುಕ ವ್ಯಕ್ತಪಡಿಸಿದ್ದರು.

ಆಗ ನಡೆಯಿತು ಪವಾಡ

ನಿತ್ಯ ಆ ಭಾಗಕ್ಕೆ ವಾಕಿಂಗ್​ ಬರುವವರು ಒಂದು ತಂಡ ಮಾಡಿಕೊಂಡಿದ್ದಾರೆ. ವಿದ್ಯಾರ್ಥಿನ ಅದೃಷ್ಟ ಎಂಬಂತೆ ಕೊಯಮತ್ತೂರು ಸೆಂಟರ್​​ನ ಮುಖ್ಯಸ್ಥರ ಪರಿಚಯವಿದ್ದ ಒಬ್ಬರು ಆ ತಂಡದಲ್ಲಿದ್ದರು. ಕೊಯಮತ್ತೂರು ಸೆಂಟರ್​​ನ ಮುಖ್ಯಸ್ಥರರಿಗೆ ಫೋನ್ ಮಾಡಿ ಹುಡುಗಿ ಬರುವುದು ತಡವಾಗುತ್ತದೆ ಎಂದು ತಿಳಿಸಲಾಗಿತ್ತು. ಅವರಿಗೆ ಪ್ರತ್ಯೇಕ ಸಮಯ ಕೊಡಿ ಎಂದು ಕೋರಲಾಗಿತ್ತು. ಕೌನ್ಸಿಲರ್ ಕೂಡ ಇದಕ್ಕೆ ಒಪ್ಪಿದ್ದರು.

ವಾಕಿಂಗ್​ ಬಂದವರಲ್ಲೇ ಒಬ್ಬರು ವಿಮಾನ ನಿಲ್ದಾಣಕ್ಕೆ ತೆರಳಲು ಕಾರ್​ ಕಳುಹಿಸಿದ್ದರು. ಮತ್ತೊಬ್ಬರು ವಿಮಾನ ಟಿಕೆಟ್​ ಬುಕ್​ ಮಾಡಿಕೊಟ್ಟರು. ವಿಮಾನ ನಿಲ್ದಾಣದಿಂದ ಕ್ಯಾಂಪಸ್ಸಿಗೆ ಹೋಗಲು ಕಾರನ್ನು ಮತ್ತೊಬ್ಬರು ವ್ಯವಸ್ಥೆ ಮಾಡಿದ್ದರು. ಅಂತೂ ಆ ವಿದ್ಯಾರ್ಥಿನಿ ಕೌನ್ಸಿಲಿಂಗ್​ಗೆ ಹಾಜರಾಗಿದ್ದಾರೆ. ಎಲ್ಲವೂ ಅಂದುಕೊಂಡಂತೆ ಆಗಿ ಆ ಹುಡುಗಿಗೆ BSC ಅಗ್ರಿಕಲ್ಚರ್​ ಸೀಟು ಸಿಕ್ಕಿದೆ.

 

Delhi Chalo ರೈತರಿಗೆ ದಿಲ್ಜಿತ್ ದೊಸಾಂಜ್ ಸಹಾಯ: 1 ಕೋಟಿ ದಾನ ನೀಡಿದ್ರೂ ಪ್ರಚಾರ ಬಯಸದ ನಟ

Rajesh Duggumane

ಪತ್ರಿಕೋದ್ಯಮಕ್ಕೆ ಕಾಲಿಟ್ಟು 9 ವರ್ಷ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದೇನೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ನನ್ನ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದೇನೆ.

Read More
Follow Us