AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹೌರಾದಲ್ಲಿ ರಾಮನವಮಿಯಂದು ನಡೆದದ್ದು ಬಿಜೆಪಿ ಪ್ರಾಯೋಜಿತ ಹಿಂಸಾಚಾರ: ಮಮತಾ ಬ್ಯಾನರ್ಜಿ

ಬಿಜೆಪಿ ಕೋಮು ಗಲಭೆಗಳನ್ನುಂಟು ಮಾಡಲು ಗೂಂಡಾಗಳನ್ನು ನೇಮಿಸಿಕೊಂಡಿದೆ ಎಂದು ಆರೋಪಿಸಿದ ಮಮತಾ ಬ್ಯಾನರ್ಜಿ, ಹಿಂಸಾಚಾರವನ್ನು ಪ್ರಚೋದಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು

ಹೌರಾದಲ್ಲಿ ರಾಮನವಮಿಯಂದು ನಡೆದದ್ದು ಬಿಜೆಪಿ ಪ್ರಾಯೋಜಿತ ಹಿಂಸಾಚಾರ: ಮಮತಾ ಬ್ಯಾನರ್ಜಿ
ಮಮತಾ ಬ್ಯಾನರ್ಜಿ
ರಶ್ಮಿ ಕಲ್ಲಕಟ್ಟ
|

Updated on:Mar 31, 2023 | 6:55 PM

Share

ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ (Mamata Banerjee) ಅವರು ಶುಕ್ರವಾರ ಹೌರಾದಲ್ಲಿ (Howrah) ನಡೆದ ಘರ್ಷಣೆ ಬಿಜೆಪಿ (BJP) ಪ್ರಾಯೋಜಿತ ಮತ್ತು ಬಿಜೆಪಿಯಿಂದ ಮೊದಲೇ ಯೋಜಿಸಲಾಗಿದೆ ಎಂದು ಹೇಳಿದ್ದಾರೆ.ಯಾರೂ ರಾಮ ನವಮಿಯಂದು ಮೆರವಣಿಗೆಯನ್ನು ತಡೆಯಲು ಪ್ರಯತ್ನಿಸಲಿಲ್ಲ ಆದರೆ ಕತ್ತಿ ಮತ್ತು ಬುಲ್ಡೋಜರ್‌ಗಳೊಂದಿಗೆ ಮೆರವಣಿಗೆ ಮಾಡುವ ಹಕ್ಕು ಅವರಿಗಿಲ್ಲ ಎಂದಿದ್ದಾರೆ. ಬಿಜೆಪಿ ಕೋಮು ಗಲಭೆಗಳನ್ನುಂಟು ಮಾಡಲು ಗೂಂಡಾಗಳನ್ನು ನೇಮಿಸಿಕೊಂಡಿದೆ ಎಂದು ಆರೋಪಿಸಿದ ಅವರು, ಹಿಂಸಾಚಾರವನ್ನು ಪ್ರಚೋದಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು. ಯಾರೂ ಅವರ ಮೆರವಣಿಗೆಗಳನ್ನು ನಿಲ್ಲಿಸಿಲ್ಲ ಆದರೆ ಅವರಿಗೆ ಕತ್ತಿ ಮತ್ತು ಬುಲ್ಡೋಜರ್‌ಗಳೊಂದಿಗೆ ಮೆರವಣಿಗೆ ಮಾಡುವ ಹಕ್ಕಿಲ್ಲ. ಹೌರಾದಲ್ಲಿ ಇದನ್ನು ಮಾಡಲು ಅವರಿಗೆ ಹೇಗೆ ಧೈರ್ಯ ಬಂತು? ಎಂದು ಬ್ಯಾನರ್ಜಿ ಪ್ರಶ್ನಿಸಿದ್ದಾರೆ.

ರಂಜಾನ್ ಸಮಯದಲ್ಲಿ ಉಪವಾಸ ಮಾಡುವ ಮುಸ್ಲಿಂ ಸಮುದಾಯವು ಯಾವುದೇ ಹಿಂಸಾಚಾರವನ್ನು ಪ್ರಾರಂಭಿಸಲು ಸಾಧ್ಯವಿಲ್ಲ ಎಂದು ಹೇಳಿದ ಮಮತಾ, ಇದರಲ್ಲಿ ಭಾಗಿಯಾದವರು ಸ್ಥಳೀಯರಲ್ಲ ಆದರೆ ಹೊರಗಿನಿಂದ ಬಂದವರು ಎಂದು ಹೇಳಿದರು. ಒಂದು ಸಮುದಾಯವನ್ನು ಗುರಿಯಾಗಿಸಲು ಮತ್ತು ಆಕ್ರಮಣ ಮಾಡಲುಮಾರ್ಗವನ್ನು ಬದಲಾಯಿಸಿದ್ದೇಕೆ? ಅವರೇಕೆ ಅನಧಿಕೃತ ಮಾರ್ಗವನ್ನು ತೆಗೆದುಕೊಂಡರು? ಎಂದು ಪ್ರಶ್ನಿಸಿದ್ದಾರೆ.

ಗುರುವಾರ, ಹೌರಾದ ಕಾಜಿಪಾರಾದಲ್ಲಿ ರಾಮನವಮಿ ಹಬ್ಬದ ಸಂದರ್ಭದಲ್ಲಿ ಎರಡು ಸಮುದಾಯಗಳ ನಡುವೆ ಘರ್ಷಣೆಗಳು ನಡೆದಿದ್ದರಿಂದ ಹಲವಾರು ವಾಹನಗಳಿಗೆ ಬೆಂಕಿ ಹಚ್ಚಿದ್ದು, ಅಂಗಡಿಗಳನ್ನು ಧ್ವಂಸವಾಗಿತ್ತು. ಘಟನೆಯ ನಂತರ, ಪ್ರದೇಶದಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ ಮತ್ತು ಪೊಲೀಸ್ ತಂಡಗಳನ್ನು ನಿಯೋಜಿಸಲಾಗಿದೆ. ವಿವಿಧ ಸ್ಥಳಗಳಲ್ಲಿ ಹಲವಾರು ದಾಳಿಗಳನ್ನು ನಡೆಸಿದ್ದು ಹಿಂಸಾಚಾರಕ್ಕೆ ಸಂಬಂಧಿಸಿದಂತೆ 35 ಜನರನ್ನು ಬಂಧಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಈ ಘಟನೆಯು ಬಿಜೆಪಿ ಮತ್ತು ಆಡಳಿತಾರೂಢ ಟಿಎಂಸಿ ನಡುವೆ ರಾಜಕೀಯ ಗದ್ದಲಕ್ಕೆ ಕಾರಣವಾಗಿದ್ದು, ಅವರು ಪರಸ್ಪರ ಆರೋಪಗಳನ್ನು ಮುಂದುವರೆಸಿದ್ದಾರೆ. ಹಿಂಸಾಚಾರಕ್ಕೆ ಮಮತಾ ಬ್ಯಾನರ್ಜಿ ನೇರ ಹೊಣೆ ಎಂದು ಬಿಜೆಪಿ ನಾಯಕ ಅಮಿತ್ ಮಾಳವೀಯ ಹೇಳಿದ್ದಾರೆ. “10,000 ಕ್ಕೂ ಹೆಚ್ಚು ಮಂದಿ ಮೆರವಣಿಗೆಯಲ್ಲಿ ಭಾಗವಹಿಸಿದ್ದಾಗ ಮಮತಾ ಧರಣಿ ಕೂತಿದ್ದರು. ಆಕೆ ಪೊಲೀಸ್ ಎಂಜಿಎಂಟಿಯನ್ನು ನೋಡಿಕೊಳ್ಳಬೇಕಾದಾಗ ರಾಜಕೀಯ ಮಾಡುತ್ತಿದ್ದರು ಎಂದು ಮಾಳವೀಯ ಆರೋಪಿಸಿದ್ದಾರೆ.

ತೃಣಮೂಲ ಕಾಂಗ್ರೆಸ್ ವರಿಷ್ಠರು ಹಿಂದೂ ಭಾವನೆಗಳಿಗೆ ಯಾವುದೇ ಗೌರವವನ್ನು ತೋರಿಸುತ್ತಿಲ್ಲ ಎಂದು ಮಾಳವಿಯಾ ಆರೋಪಿಸಿದರು. ರಾಮನವಮಿಯಂದು ಆಕೆ ಧರಣಿ ಕೂತು ಹಿಂದೂಗಳು ನವರಾತ್ರಿಗಾಗಿ ಉಪವಾಸ ಮಾಡುತ್ತಿದ್ದಾರೆ ಎಂಬುದನ್ನೂ ಮರೆತು ಮುಸ್ಲಿಂ ಪ್ರದೇಶಗಳನ್ನು ತಪ್ಪಿಸುವ ಬಗ್ಗೆ ಹಿಂದೂಗಳೆ ಎಚ್ಚರಿಕೆ ನೀಡಿದರು ಎಂದಿದ್ದಾರೆ.

ಇದನ್ನೂ ಓದಿ:ವಯನಾಡಿನಿಂದ ಸ್ಪರ್ಧಿಸಿದ್ದ ಇನ್ನೊಬ್ಬ ರಾಹುಲ್ ಗಾಂಧಿ ಕೂಡ ಅನರ್ಹ; ಯಾರು ಇವರು?

ಪಶ್ಚಿಮ ಬಂಗಾಳದ ಹಿಂಸಾಚಾರದ ಬಗ್ಗೆ ಪ್ರತಿಕ್ರಿಯಿಸಿದ ಅನುರಾಗ್ ಠಾಕೂರ್ ಮಮತಾ ಬ್ಯಾನರ್ಜಿ ಆಳ್ವಿಕೆಯಲ್ಲಿ ಪತ್ರಕರ್ತರ ಮೇಲೆ ಹಲ್ಲೆ ನಡೆಸಲಾಯಿತು, ರಾಮನವಮಿ ಮೆರವಣಿಗೆಯಲ್ಲಿ ಕಲ್ಲು ತೂರಾಟ ನಡೆಸಲಾಯಿತು. ಪತ್ರಕರ್ತರು ಹಿಂಸಾಚಾರಕ್ಕೆ ಬಲಿಯಾಗುತ್ತಿದ್ದರೆ ಮತ್ತು ರಾಜ್ಯ ಸರ್ಕಾರ ಮೂಕಪ್ರೇಕ್ಷಕರಾಗಿ ಉಳಿದಿದ್ದರೆ, ಇದಕ್ಕಿಂತ ನಾಚಿಕೆಗೇಡಿನ ಸಂಗತಿ ಏನಿದೆ? ಅದನ್ನು ಖಂಡಿಸಿದಷ್ಟೂ ಕಡಿಮೆ ಎಂದಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 5:15 pm, Fri, 31 March 23