AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊವಿಡ್​-19 ಕಾರಣಕ್ಕೆ ಸಿಗದ ರಜಾ; ಠಾಣೆಯಲ್ಲೇ ನಡೆಯಿತು ಮಹಿಳಾ ಪೊಲೀಸ್ ಅರಿಶಿಣ ಶಾಸ್ತ್ರ

ಈ ಮಹಿಳಾ ಕಾನ್​ಸ್ಟೆಬಲ್ ಡುಂಗುರ್​ಪುರ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಕೊರೊನಾ ಪರಿಸ್ಥಿತಿ ಹದಗೆಟ್ಟಿರುವ ಕಾರಣ ಇವರಿಗೆ ಅರಿಶಿಣ ಶಾಸ್ತ್ರ ಕಾರ್ಯಕ್ರಮಕ್ಕೆ ರಜಾ ಸಿಕ್ಕಿರಲಿಲ್ಲ.

ಕೊವಿಡ್​-19 ಕಾರಣಕ್ಕೆ ಸಿಗದ ರಜಾ; ಠಾಣೆಯಲ್ಲೇ ನಡೆಯಿತು ಮಹಿಳಾ ಪೊಲೀಸ್ ಅರಿಶಿಣ ಶಾಸ್ತ್ರ
ಮಹಿಳಾ ಪೊಲೀಸ್​ ಕಾನ್​ಸ್ಟೆಬಲ್​ ಅರಿಶಿಣ ಶಾಸ್ತ್ರ
Lakshmi Hegde
|

Updated on:Apr 24, 2021 | 5:22 PM

Share

ಕೊರೊನಾ ಸಾಂಕ್ರಾಮಿಕ ಭೂಮಿಗೆ ಕಾಲಿಟ್ಟಾಗಿನಿಂದ ಪೊಲೀಸ್, ಆರೋಗ್ಯ ಸಿಬ್ಬಂದಿ ಸೇರಿ ಹಲವು ಕ್ಷೇತ್ರದ ಸಿಬ್ಬಂದಿ ಮುಂಚೂಣಿಯಲ್ಲಿದ್ದುಕೊಂಡು, ದಣಿವರಿಯದೆ ಕೆಲಸ ಮಾಡುತ್ತಿದ್ದಾರೆ. ನಾಗರಿಕರ ರಕ್ಷಣೆಗಾಗಿ ತಮ್ಮ ಜೀವವನ್ನೇ ಪಣಕ್ಕಿಟ್ಟಿದ್ದಾರೆ. ಅದರಲ್ಲೂ ಈಗ ಶುರುವಾಗಿರುವ ಕೊರೊನಾ ಎರಡನೇ ಅಲೆಯಲ್ಲಿ ಕೊವಿಡ್​ ವಾರಿಯರ್ಸ್​ ಮೇಲೆ ಇನ್ನೂ ಜಾಸ್ತಿ ಒತ್ತಡವೇ ಇದೆ. ರಜೆ, ವಿಶ್ರಾಂತಿ ಸಿಗುತ್ತಿಲ್ಲ. ಹೀಗಿರುವಾಗ ರಾಜಸ್ಥಾನದ ಮಹಿಳಾ ಕಾನ್​ಸ್ಟೆಬಲ್​ ಒಬ್ಬರು ಮದುವೆಯ ಅರಿಶಿಣ ಶಾಸ್ತ್ರಕ್ಕೆ ರಜೆ ಸಿಗದೆ, ಪೊಲೀಸ್​ ಠಾಣೆಯಲ್ಲೇ ಈ ಕಾರ್ಯಕ್ರಮ ಮಾಡಿಸಿಕೊಂಡಿದ್ದಾರೆ.

ಈ ಮಹಿಳಾ ಕಾನ್​ಸ್ಟೆಬಲ್ ಡುಂಗುರ್​ಪುರ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಕೊರೊನಾ ಪರಿಸ್ಥಿತಿ ಹದಗೆಟ್ಟಿರುವ ಕಾರಣ ಇವರಿಗೆ ಅರಿಶಿಣ ಶಾಸ್ತ್ರ ಕಾರ್ಯಕ್ರಮಕ್ಕೆ ರಜಾ ಸಿಕ್ಕಿರಲಿಲ್ಲ. ಹಾಗಾಗಿ ತಾವು ಕೆಲಸ ಮಾಡುವ ಠಾಣೆಯಲ್ಲೇ ಈ ಶಾಸ್ತ್ರ ಮಾಡಿಕೊಂಡಿದ್ದಾರೆ. ಇದರ ವಿಡಿಯೋ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟೆ ವೈರಲ್​ ಆಗುತ್ತಿದೆ.

ವಾಗಾದ್ ದರ್ಶನ್​ ಎಂಬ ಫೇಸ್​​ಬುಕ್​ ಪೇಜ್​ನಲ್ಲಿ ವಿಡಿಯೋ ಶೇರ್ ಆಗಿದ್ದು, ಅದರಲ್ಲಿ ಉಳಿದ ಮಹಿಳಾ ಕಾನ್​ಸ್ಟೆಬಲ್​​ಗಳೆಲ್ಲ ಸೇರಿ, ಇವರಿಗೆ ಅರಿಶಿಣ ಶಾಸ್ತ್ರ ನೆರವೇರಿಸುವುದನ್ನು ನೋಡಬಹುದು. ಸಾಂಪ್ರದಾಯಿಕ ಹಾಡುಗಳನ್ನು ಹಾಡುತ್ತ, ಕಾನ್​ಸ್ಟೆಬಲ್ ಮುಖ, ಕೈಕಾಲುಗಳಿಗೆ ಅರಿಶಿಣ ಹಚ್ಚಿದ್ದಾರೆ. ಹಾಗೇ ಮದುಮಗಳು ಹಳದಿ ಬಣ್ಣದ ಚೂಡಿದಾರ್ ಧರಿಸಿ, ಕೆಂಪು ದುಪ್ಪಟ್ಟಾ ಹೊದ್ದಿದ್ದಾರೆ.

ವಿಶೇಷವೆಂದರೆ ಈ ಆಚರಣೆಯಲ್ಲಿ ಪುರುಷ ಪೊಲೀಸರೂ ಕೂಡ ಖುಷಿಯಿಂದ ಭಾಗವಹಿಸಿದ್ದಾರೆ. ಮಧುಮಗಳು ಕುಳಿತ ಕುರ್ಚಿಯನ್ನು ಎತ್ತಿ, ಮೇಲೆ-ಕೆಳಗೆ ಮಾಡುತ್ತ ಸಾಂಪ್ರದಾಯಿಕ ಹಾಡನ್ನೂ ಹಾಡಿದ್ದಾರೆ. ಅದೇನೇ ಇರಲಿ ವಿಡಿಯೋ ನೋಡಿದ ನೆಟ್ಟಿಗರು ತುಂಬ ಖುಷಿ ವ್ಯಕ್ತಪಡಿಸಿದ್ದಾರೆ. ಸದ್ಯ ದೇಶದಲ್ಲಿ ಎಲ್ಲ ರಾಜ್ಯಗಳೂ ಕೊರೊನಾ ಎರಡನೇ ಅಲೆಗೆ ತತ್ತರಿಸಿವೆ. ಇಂದು ಒಂದೇ ದಿನ 3.46 ಲಕ್ಷಕ್ಕೂ ಅಧಿಕ ಕೇಸ್​ಗಳು ದಾಖಲಾಗಿವೆ. ಮೊದಲನೇ ಬಾರಿಗೆ ಕಾಲಿಟ್ಟ ವೈರಸ್​​ಗಿಂತಲೂ, ಈ ಬಾರಿ ಇನ್ನೂ ವೇಗವಾಗಿ, ಮಾರಣಾಂತಿಕವಾಗಿ ಕೊರೊನಾ ವೈರಸ್ ಹರಡುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.

ಇದನ್ನೂ ಓದಿ: ಇತರ ಲಸಿಕೆಗೆಳಿಗೆ ಹೋಲಿಸಿದರೆ ಕೊವಿಶೀಲ್ಡ್ ಲಸಿಕೆ ಬೆಲೆ ಕಡಿಮೆಯಿದೆ; ಅದಾರ್ ಪೂನಾವಲಾ

ನಾವು ತುಂಬಾ ಕೆಟ್ಟ ಪರಿಸ್ಥಿತಿಯಲ್ಲಿದ್ದೇವೆ; ಕೊವಿಡ್​ನಿಂದ ಆಪ್ತನನ್ನು ಕಳೆದುಕೊಂಡು ಕಣ್ಣೀರಿಟ್ಟ ನಟ ಅನಿರುದ್ಧ್​​

Published On - 5:20 pm, Sat, 24 April 21

Follow Us
Lakshmi Hegde
Lakshmi Hegde
ಹೊಸ ಶಾಪಿಂಗ್ ಸಂಕೀರ್ಣಕ್ಕಾಗಿ ನೂರಾರು ಮರಗಳ ಮಾರಣಹೋಮ
ಹೊಸ ಶಾಪಿಂಗ್ ಸಂಕೀರ್ಣಕ್ಕಾಗಿ ನೂರಾರು ಮರಗಳ ಮಾರಣಹೋಮ
ನೀಟ್ ಹಗರಣದ ವಿರುದ್ಧ ಬೀದಿಗಿಳಿದ ಸಾವಿರಾರು ಹಸ್ತ ಪಡೆ
ನೀಟ್ ಹಗರಣದ ವಿರುದ್ಧ ಬೀದಿಗಿಳಿದ ಸಾವಿರಾರು ಹಸ್ತ ಪಡೆ
ಭಕ್ತರು ಮತ್ತು ಭಗವಂತನ ನಡುವೆ ವ್ಯವಹಾರದ ಸ್ಥಳ ದೇವಾಲಯ: ಡಿಕೆಶಿ
ಭಕ್ತರು ಮತ್ತು ಭಗವಂತನ ನಡುವೆ ವ್ಯವಹಾರದ ಸ್ಥಳ ದೇವಾಲಯ: ಡಿಕೆಶಿ
ರಾತ್ರಿ ಹೊತ್ತು ಮನೆಯಲ್ಲಿರಲಾಗದೆ ಗೋಳು ತೋಡಿಕೊಂಡ ನಿವಾಸಿಗಳು
ರಾತ್ರಿ ಹೊತ್ತು ಮನೆಯಲ್ಲಿರಲಾಗದೆ ಗೋಳು ತೋಡಿಕೊಂಡ ನಿವಾಸಿಗಳು
ನಟಿ ಶ್ರುತಿ ಪ್ರಕಾಶ್‌ಗೆ ಡೈಮಂಡ್ ಉಂಗುರ ತೊಡಿಸಿ ಪ್ರಪೋಸ್ ಮಾಡಿದ ಕರಣ್
ನಟಿ ಶ್ರುತಿ ಪ್ರಕಾಶ್‌ಗೆ ಡೈಮಂಡ್ ಉಂಗುರ ತೊಡಿಸಿ ಪ್ರಪೋಸ್ ಮಾಡಿದ ಕರಣ್
ಕಾಣೆಯಾದ ಹುಡುಗಿಯನ್ನು ಹುಡುಕಲು ಗಾಡಿಯಲ್ಲಿ ಡೀಸೆಲ್ ಇಲ್ಲ ಎಂದ ಪೊಲೀಸ್
ಕಾಣೆಯಾದ ಹುಡುಗಿಯನ್ನು ಹುಡುಕಲು ಗಾಡಿಯಲ್ಲಿ ಡೀಸೆಲ್ ಇಲ್ಲ ಎಂದ ಪೊಲೀಸ್
ಕೈದಿಗಳಿಗೆ ಅಲೋಕ್ ಕುಮಾರ್ ಬಿಗ್ ಶಾಕ್: ಜೈಲುಗಳಲ್ಲಿ ಭಾರಿ ಬದಲಾವಣೆ
ಕೈದಿಗಳಿಗೆ ಅಲೋಕ್ ಕುಮಾರ್ ಬಿಗ್ ಶಾಕ್: ಜೈಲುಗಳಲ್ಲಿ ಭಾರಿ ಬದಲಾವಣೆ
3 ದಿನಗಳಿಂದ ವಿದ್ಯುತ್​​ ಕಡಿತ: ಹೆಸ್ಕಾಂ ವಿರುದ್ಧ ಸಾರ್ವಜನಿಕರ ಪ್ರತಿಭಟನೆ
3 ದಿನಗಳಿಂದ ವಿದ್ಯುತ್​​ ಕಡಿತ: ಹೆಸ್ಕಾಂ ವಿರುದ್ಧ ಸಾರ್ವಜನಿಕರ ಪ್ರತಿಭಟನೆ
ಹಿರಿಯೂರು ಉಪಚುನಾವಣೆ ಮೇಲೆ ಜೆಡಿಎಸ್​​ ಕಣ್ಣು: ದಳಪತಿಗಳ ಲೆಕ್ಕಾಚಾರವೇನು?
ಹಿರಿಯೂರು ಉಪಚುನಾವಣೆ ಮೇಲೆ ಜೆಡಿಎಸ್​​ ಕಣ್ಣು: ದಳಪತಿಗಳ ಲೆಕ್ಕಾಚಾರವೇನು?
ಗುರು ಸಂಚಾರದಿಂದ ಮಿಥುನ ರಾಶಿಯವರಿಗೆ ಆರ್ಥಿಕ ವೃದ್ಧಿ ಮತ್ತು ಶುಭ ಯೋಗ ಶುರು
ಗುರು ಸಂಚಾರದಿಂದ ಮಿಥುನ ರಾಶಿಯವರಿಗೆ ಆರ್ಥಿಕ ವೃದ್ಧಿ ಮತ್ತು ಶುಭ ಯೋಗ ಶುರು