ಭಾರತದಲ್ಲಿ ನಿರುದ್ಯೋಗದ ದರ ಎಷ್ಟು? CMIE ಬಿಚ್ಚಿಟ್ಟ ವರದಿ ಇಲ್ಲಿದೆ

ದೆಹಲಿ: ಮಹಾಮಾರಿ ಕೊರೊನಾ ಹೊಡೆತಕ್ಕೆ ಕಾರ್ಮಿಕರ ಬದುಕು ಛಿದ್ರ ಛಿದ್ರವಾಗಿದೆ. ಕೊರೊನಾ ಬಿಕ್ಕಟ್ಟಿನಿಂದ ಭಾರತದಲ್ಲಿ ಭಾರಿ ಉದ್ಯೋಗ ನಷ್ಟವಾಗಿದೆ. ಮೇ 3ಕ್ಕೆ ನಿರುದ್ಯೋಗದ ದರ ಶೇಕಡಾ 27.11ಕ್ಕೆ ಏರಿಕೆಯಾಗಿದೆ ಎಂದು ಸೆಂಟ್ರಲ್ ಮಾನಿಟರಿಂಗ್ ಇಂಡಿಯನ್ ಎಕಾನಮಿ(CMIE) ವರದಿ ಮಾಡಿದೆ. ಏಪ್ರಿಲ್ 26ರಂದು ನಿರುದ್ಯೋಗದ ದರ ಶೇ. 26.19ರಷ್ಟಿತ್ತು. ರಾಜ್ಯವಾರು ಅಂಕಿಅಂಶದ ಪ್ರಕಾರ ಏಪ್ರಿಲ್ ಅಂತ್ಯದ ವೇಳೆಗೆ ಪುದುಚೆರಿಯಲ್ಲಿ ಅತಿ ಹೆಚ್ಚು ನಿರುದ್ಯೋಗ ಅಂದ್ರೆ ಶೇ. 75.8ರಷ್ಟಿದೆ. ತಮಿಳುನಾಡು ಶೇಕಡಾ 49.8, ಜಾರ್ಖಂಡ್ ಶೇಕಡಾ 47.1, ಬಿಹಾರ ಶೇಕಡಾ […]

ಭಾರತದಲ್ಲಿ  ನಿರುದ್ಯೋಗದ ದರ ಎಷ್ಟು? CMIE ಬಿಚ್ಚಿಟ್ಟ ವರದಿ ಇಲ್ಲಿದೆ
ಸಾಧು ಶ್ರೀನಾಥ್​

Updated on: May 06, 2020 | 10:48 AM

ದೆಹಲಿ: ಮಹಾಮಾರಿ ಕೊರೊನಾ ಹೊಡೆತಕ್ಕೆ ಕಾರ್ಮಿಕರ ಬದುಕು ಛಿದ್ರ ಛಿದ್ರವಾಗಿದೆ. ಕೊರೊನಾ ಬಿಕ್ಕಟ್ಟಿನಿಂದ ಭಾರತದಲ್ಲಿ ಭಾರಿ ಉದ್ಯೋಗ ನಷ್ಟವಾಗಿದೆ. ಮೇ 3ಕ್ಕೆ ನಿರುದ್ಯೋಗದ ದರ ಶೇಕಡಾ 27.11ಕ್ಕೆ ಏರಿಕೆಯಾಗಿದೆ ಎಂದು ಸೆಂಟ್ರಲ್ ಮಾನಿಟರಿಂಗ್ ಇಂಡಿಯನ್ ಎಕಾನಮಿ(CMIE) ವರದಿ ಮಾಡಿದೆ.

ಏಪ್ರಿಲ್ 26ರಂದು ನಿರುದ್ಯೋಗದ ದರ ಶೇ. 26.19ರಷ್ಟಿತ್ತು. ರಾಜ್ಯವಾರು ಅಂಕಿಅಂಶದ ಪ್ರಕಾರ ಏಪ್ರಿಲ್ ಅಂತ್ಯದ ವೇಳೆಗೆ ಪುದುಚೆರಿಯಲ್ಲಿ ಅತಿ ಹೆಚ್ಚು ನಿರುದ್ಯೋಗ ಅಂದ್ರೆ ಶೇ. 75.8ರಷ್ಟಿದೆ. ತಮಿಳುನಾಡು ಶೇಕಡಾ 49.8, ಜಾರ್ಖಂಡ್ ಶೇಕಡಾ 47.1, ಬಿಹಾರ ಶೇಕಡಾ 46.6, ಮಹಾರಾಷ್ಟ್ರ ಶೇಕಡಾ 20.9, ಹರಿಯಾಣ ಶೇಕಡಾ 43.2, ಉತ್ತರಪ್ರದೇಶ ಶೇಕಡಾ 21.5, ಕರ್ನಾಟಕದಲ್ಲಿ ನಿರುದ್ಯೋಗದ ದರ ಶೇಕಡಾ 29.8ರಷ್ಟಿದೆ.

ಹಾಗೂ ಗುಡ್ಡಗಾಡು ರಾಜ್ಯಗಳಲ್ಲಿ ನಿರುದ್ಯೋಗ ಪ್ರಮಾಣ ಕಡಿಮೆ ಇದೆ. ಹಿಮಾಚಲಪ್ರದೇಶ ಶೇಕಡಾ 2.2, ಸಿಕ್ಕಿಂ ಶೇಕಡಾ 2.3, ಉತ್ತರಾಖಂಡ್‌ನಲ್ಲಿ ಶೇಕಡಾ 6.5ರಷ್ಟಿದೆ ಎಂದು CMIE ವರದಿ ಮಾಡಿದೆ.

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us