AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಿರ್ಮಾಣವಾದ ಐದೇ ದಿನಗಳಲ್ಲಿ ಧ್ವಂಸವಾದ ಕೊರೊನಾ ಮಾತಾ ದೇವಾಲಯ; ಕೆಡವಿದ್ದು ಯಾರೆಂಬುದೇ ಪ್ರಶ್ನೆ

ಲೋಕೇಶ್​ ಕುಮಾರ್​ ಶ್ರೀವಾಸ್ತವ್​ ಎಂಬುವರು, ಹಳ್ಳಿಯವರಿಂದ ಡೊನೇಶನ್​ ಪಡೆದು ಈ ದೇವಸ್ಥಾನವನ್ನು ನಿರ್ಮಿಸಿದ್ದರು. ಜೂ.7ರಂದು ದೇಗುಲ ಕಟ್ಟಲ್ಪಟ್ಟಿತ್ತು. ಆದರೆ ಐದೇ ದಿನದಲ್ಲಿ ಕೆಡವಲಾಗಿದೆ. ಇದು ಪೊಲೀಸರ ಕೆಲಸ ಎಂದು ಗ್ರಾಮಸ್ಥರು ಆರೋಪ ಮಾಡಿದ್ದಾರೆ.

ನಿರ್ಮಾಣವಾದ ಐದೇ ದಿನಗಳಲ್ಲಿ ಧ್ವಂಸವಾದ ಕೊರೊನಾ ಮಾತಾ ದೇವಾಲಯ; ಕೆಡವಿದ್ದು ಯಾರೆಂಬುದೇ ಪ್ರಶ್ನೆ
ಕೊರೊನಾ ಮಾತಾ ದೇಗುಲ
TV9 Web
| Edited By: |

Updated on:Jun 13, 2021 | 3:48 PM

Share

ಪ್ರತಾಪ್​ಗಡ್​: ಕೊರೊನಾ ಸೋಂಕಿನ ನಿವಾರಣೆಯಾಗಲೆಂದು ಈಗಾಗಲೇ ಹಲವರು ಪೂಜೆ, ವ್ರತ, ದೇವರ ಸ್ಮರಣೆಯ ಮೊರೆ ಹೋಗಿದ್ದಾರೆ. ಹಾಗೇ ಉತ್ತರಪ್ರದೇಶದ ಪ್ರತಾಪ್​ಗಡ್​ ಜಿಲ್ಲೆಯ ಶುಕುಲ್​ಪುರ ಗ್ರಾಮದಲ್ಲಿ ಜನರು ಕೊರೊನಾ ಮಾತಾ ದೇವಸ್ಥಾನವನ್ನೂ ಕಟ್ಟಿಸಿ, ಪೂಜಿಸಿದ್ದಾರೆ. ಜೂ.7ರಂದು ಕಟ್ಟಲ್ಪಟ್ಟಿದ್ದ ಈ ದೇವಾಲಯವನ್ನು ಐದೇ ದಿನದಲ್ಲಿ ಕೆಡವಲಾಗಿದೆ. ಆದರೆ ಕೆಡವಿದ್ದು ನಾವಲ್ಲ, ಪೊಲೀಸರು ಎಂದು ಹಳ್ಳಿಗರು ಆರೋಪಿಸುತ್ತಿದ್ದಾರೆ.

ಲೋಕೇಶ್​ ಕುಮಾರ್​ ಶ್ರೀವಾಸ್ತವ್​ ಎಂಬುವರು, ಹಳ್ಳಿಯವರಿಂದ ಡೊನೇಶನ್​ ಪಡೆದು ಈ ದೇವಸ್ಥಾನವನ್ನು ನಿರ್ಮಿಸಿದ್ದರು. ಜೂ.7ರಂದು ದೇಗುಲ ಕಟ್ಟಲ್ಪಟ್ಟಿತ್ತು. ಆದರೆ ಐದೇ ದಿನದಲ್ಲಿ ಕೆಡವಲಾಗಿದೆ. ಇದು ಪೊಲೀಸರ ಕೆಲಸ ಎಂದು ಗ್ರಾಮಸ್ಥರು ಆರೋಪ ಮಾಡಿದ್ದಾರೆ. ಆದರೆ ಈ ಆರೋಪವನ್ನು ಪೊಲೀಸರು ನಿರಾಕರಿಸಿದ್ದಾರೆ. ವಿವಾದಿತ ಸ್ಥಳದಲ್ಲಿ ದೇಗುಲ ಕಟ್ಟಲಾಗಿತ್ತು. ಈ ವಿವಾದದಲ್ಲಿ ಒಳಗೊಂಡಿರುವ ಯಾರೋ ಒಬ್ಬರು ಕೊರೊನಾ ಮಾತಾ ದೇವಸ್ಥಾನ ಧ್ವಂಸಗೊಳಿಸಿದ್ದಾರೆ ಎಂದು ಹೇಳಿದ್ದಾರೆ.

ಪುಟ್ಟ ದೇವಾಲಯ ನಿರ್ಮಿಸಿ ಅದರಲ್ಲಿ ಕೊರೊನಾ ಮಾತಾ ಮೂರ್ತಿಯನ್ನು ಇಡಲಾಗಿತ್ತು. ಪೂಜೆಗಾಗಿ ರಾಧೆಶ್ಯಾಮ್​ ವರ್ಮಾ ಎಂಬ ಅರ್ಚಕರನ್ನು ನೇಮಕ ಮಾಡಲಾಗಿತ್ತು. ಅದಾಗಲೇ ಹಳ್ಳಿಯ ಜನರು ಇಲ್ಲಿ ಪೂಜೆ, ಪ್ರಾರ್ಥನೆ ಸಲ್ಲಿಸಲು ಪ್ರಾರಂಭಿಸಿದ್ದರು ಎಂದೂ ಸ್ಥಳೀಯರು ಹೇಳಿದ್ದಾರೆ.

ದೇಗುಲ ನಿರ್ಮಾಣ ಮಾಡಿದ ಲೋಕೇಶ್​ ನೊಯ್ಡಾ ನಿವಾಸಿಯಾಗಿದ್ದಾರೆ. ಈ ಸ್ಥಳದಲ್ಲಿ ದೇವಸ್ಥಾನ ನಿರ್ಮಿಸಿ, ಅವರು ನೊಯ್ಡಾಕ್ಕೆ ಹೋಗಿದ್ದರು. ದೇಗುಲ ನಿರ್ಮಾಣವಾದ ಭೂಮಿ ವಿಚಾರದಲ್ಲಿ ನಾಗೇಶ್​ ಕುಮಾರ್​ ಶ್ರೀವಾಸ್ತವ್​, ಜೈ ಪ್ರಕಾಶ್​ ಶ್ರೀವಾಸ್ತವ್​ ಮತ್ತು ಲೋಕೇಶ್ ನಡುವೆ ವಿವಾದವಿದೆ ಎನ್ನಲಾಗಿದ್ದು, ದೇವಸ್ಥಾನ ನಿರ್ಮಾಣವಾಗುತ್ತಿದ್ದಂತೆ ನಾಗೇಶ್​ ಪೊಲೀಸರಿಗೆ ದೂರು ನೀಡಿದ್ದಾರೆ. ಜಮೀನನ್ನು ಸಂಪೂರ್ಣವಾಗಿ ಒಳಪಡಿಸಿಕೊಳ್ಳಲು ಕೊರೊನಾ ಮಾತಾ ದೇವಸ್ಥಾನ ನಿರ್ಮಾಣ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ. ಸದ್ಯ ಪೊಲೀಸರು ಪ್ರಕರಣದ ತನಿಖೆ ಶುರು ಮಾಡಿದ್ದಾರೆ.

ಇದನ್ನೂ ಓದಿ: ‘ಮತ್ತೆ ಬದುಕುವುದಕ್ಕೆ ಇಷ್ಟವಿಲ್ಲ’; ಕೊವಿಡ್​ನಿಂದ ತಂದೆ-ತಾಯಿ ಇಬ್ಬರನ್ನೂ ಕಳೆದುಕೊಂಡ ಖ್ಯಾತ ಯೂಟ್ಯೂಬರ್ ಭುವನ್

(Coronamata Temple Built in Uttar Pradesh and aftet 5 days demolished)

Published On - 3:47 pm, Sun, 13 June 21

ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ
ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಬಿಗ್​​ಬಾಸ್ ಮನೆಯಲ್ಲಿ ತಮ್ಮ ಮೊದಲ ಪ್ರೀತಿಯ ಕತೆ ಹೇಳಿದ ರವಿಚಂದ್ರನ್
ಬಿಗ್​​ಬಾಸ್ ಮನೆಯಲ್ಲಿ ತಮ್ಮ ಮೊದಲ ಪ್ರೀತಿಯ ಕತೆ ಹೇಳಿದ ರವಿಚಂದ್ರನ್
ಸ್ಮಶಾನ, ಕೆರೆ ಜಮೀನು ಕೃಷ್ಣಭೈರೇಗೌಡರ ಪಿತ್ರಾರ್ಜಿತ ಆಸ್ತಿಯಾ?
ಸ್ಮಶಾನ, ಕೆರೆ ಜಮೀನು ಕೃಷ್ಣಭೈರೇಗೌಡರ ಪಿತ್ರಾರ್ಜಿತ ಆಸ್ತಿಯಾ?
ಶಕ್ತಿ ಯೋಜನೆಗೆ 4 ಸಾವಿರ ಕೋಟಿ ಬಾಕಿ ಒಪ್ಪಿಕೊಂಡ ಸಾರಿಗೆ ಸಚಿವ
ಶಕ್ತಿ ಯೋಜನೆಗೆ 4 ಸಾವಿರ ಕೋಟಿ ಬಾಕಿ ಒಪ್ಪಿಕೊಂಡ ಸಾರಿಗೆ ಸಚಿವ
ಕೆಪಿಸಿಸಿ ಅಧ್ಯಕ್ಷರ ಬದಲಾವಣೆಗೆ ಆ ಪತ್ರವೇ ಸಾಕ್ಷಿ! ರಾಜಣ್ಣ
ಕೆಪಿಸಿಸಿ ಅಧ್ಯಕ್ಷರ ಬದಲಾವಣೆಗೆ ಆ ಪತ್ರವೇ ಸಾಕ್ಷಿ! ರಾಜಣ್ಣ