Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಿರ್ಮಾಣವಾದ ಐದೇ ದಿನಗಳಲ್ಲಿ ಧ್ವಂಸವಾದ ಕೊರೊನಾ ಮಾತಾ ದೇವಾಲಯ; ಕೆಡವಿದ್ದು ಯಾರೆಂಬುದೇ ಪ್ರಶ್ನೆ

ಲೋಕೇಶ್​ ಕುಮಾರ್​ ಶ್ರೀವಾಸ್ತವ್​ ಎಂಬುವರು, ಹಳ್ಳಿಯವರಿಂದ ಡೊನೇಶನ್​ ಪಡೆದು ಈ ದೇವಸ್ಥಾನವನ್ನು ನಿರ್ಮಿಸಿದ್ದರು. ಜೂ.7ರಂದು ದೇಗುಲ ಕಟ್ಟಲ್ಪಟ್ಟಿತ್ತು. ಆದರೆ ಐದೇ ದಿನದಲ್ಲಿ ಕೆಡವಲಾಗಿದೆ. ಇದು ಪೊಲೀಸರ ಕೆಲಸ ಎಂದು ಗ್ರಾಮಸ್ಥರು ಆರೋಪ ಮಾಡಿದ್ದಾರೆ.

ನಿರ್ಮಾಣವಾದ ಐದೇ ದಿನಗಳಲ್ಲಿ ಧ್ವಂಸವಾದ ಕೊರೊನಾ ಮಾತಾ ದೇವಾಲಯ; ಕೆಡವಿದ್ದು ಯಾರೆಂಬುದೇ ಪ್ರಶ್ನೆ
ಕೊರೊನಾ ಮಾತಾ ದೇಗುಲ
Follow us
TV9 Web
| Updated By: Lakshmi Hegde

Updated on:Jun 13, 2021 | 3:48 PM

ಪ್ರತಾಪ್​ಗಡ್​: ಕೊರೊನಾ ಸೋಂಕಿನ ನಿವಾರಣೆಯಾಗಲೆಂದು ಈಗಾಗಲೇ ಹಲವರು ಪೂಜೆ, ವ್ರತ, ದೇವರ ಸ್ಮರಣೆಯ ಮೊರೆ ಹೋಗಿದ್ದಾರೆ. ಹಾಗೇ ಉತ್ತರಪ್ರದೇಶದ ಪ್ರತಾಪ್​ಗಡ್​ ಜಿಲ್ಲೆಯ ಶುಕುಲ್​ಪುರ ಗ್ರಾಮದಲ್ಲಿ ಜನರು ಕೊರೊನಾ ಮಾತಾ ದೇವಸ್ಥಾನವನ್ನೂ ಕಟ್ಟಿಸಿ, ಪೂಜಿಸಿದ್ದಾರೆ. ಜೂ.7ರಂದು ಕಟ್ಟಲ್ಪಟ್ಟಿದ್ದ ಈ ದೇವಾಲಯವನ್ನು ಐದೇ ದಿನದಲ್ಲಿ ಕೆಡವಲಾಗಿದೆ. ಆದರೆ ಕೆಡವಿದ್ದು ನಾವಲ್ಲ, ಪೊಲೀಸರು ಎಂದು ಹಳ್ಳಿಗರು ಆರೋಪಿಸುತ್ತಿದ್ದಾರೆ.

ಲೋಕೇಶ್​ ಕುಮಾರ್​ ಶ್ರೀವಾಸ್ತವ್​ ಎಂಬುವರು, ಹಳ್ಳಿಯವರಿಂದ ಡೊನೇಶನ್​ ಪಡೆದು ಈ ದೇವಸ್ಥಾನವನ್ನು ನಿರ್ಮಿಸಿದ್ದರು. ಜೂ.7ರಂದು ದೇಗುಲ ಕಟ್ಟಲ್ಪಟ್ಟಿತ್ತು. ಆದರೆ ಐದೇ ದಿನದಲ್ಲಿ ಕೆಡವಲಾಗಿದೆ. ಇದು ಪೊಲೀಸರ ಕೆಲಸ ಎಂದು ಗ್ರಾಮಸ್ಥರು ಆರೋಪ ಮಾಡಿದ್ದಾರೆ. ಆದರೆ ಈ ಆರೋಪವನ್ನು ಪೊಲೀಸರು ನಿರಾಕರಿಸಿದ್ದಾರೆ. ವಿವಾದಿತ ಸ್ಥಳದಲ್ಲಿ ದೇಗುಲ ಕಟ್ಟಲಾಗಿತ್ತು. ಈ ವಿವಾದದಲ್ಲಿ ಒಳಗೊಂಡಿರುವ ಯಾರೋ ಒಬ್ಬರು ಕೊರೊನಾ ಮಾತಾ ದೇವಸ್ಥಾನ ಧ್ವಂಸಗೊಳಿಸಿದ್ದಾರೆ ಎಂದು ಹೇಳಿದ್ದಾರೆ.

ಪುಟ್ಟ ದೇವಾಲಯ ನಿರ್ಮಿಸಿ ಅದರಲ್ಲಿ ಕೊರೊನಾ ಮಾತಾ ಮೂರ್ತಿಯನ್ನು ಇಡಲಾಗಿತ್ತು. ಪೂಜೆಗಾಗಿ ರಾಧೆಶ್ಯಾಮ್​ ವರ್ಮಾ ಎಂಬ ಅರ್ಚಕರನ್ನು ನೇಮಕ ಮಾಡಲಾಗಿತ್ತು. ಅದಾಗಲೇ ಹಳ್ಳಿಯ ಜನರು ಇಲ್ಲಿ ಪೂಜೆ, ಪ್ರಾರ್ಥನೆ ಸಲ್ಲಿಸಲು ಪ್ರಾರಂಭಿಸಿದ್ದರು ಎಂದೂ ಸ್ಥಳೀಯರು ಹೇಳಿದ್ದಾರೆ.

ದೇಗುಲ ನಿರ್ಮಾಣ ಮಾಡಿದ ಲೋಕೇಶ್​ ನೊಯ್ಡಾ ನಿವಾಸಿಯಾಗಿದ್ದಾರೆ. ಈ ಸ್ಥಳದಲ್ಲಿ ದೇವಸ್ಥಾನ ನಿರ್ಮಿಸಿ, ಅವರು ನೊಯ್ಡಾಕ್ಕೆ ಹೋಗಿದ್ದರು. ದೇಗುಲ ನಿರ್ಮಾಣವಾದ ಭೂಮಿ ವಿಚಾರದಲ್ಲಿ ನಾಗೇಶ್​ ಕುಮಾರ್​ ಶ್ರೀವಾಸ್ತವ್​, ಜೈ ಪ್ರಕಾಶ್​ ಶ್ರೀವಾಸ್ತವ್​ ಮತ್ತು ಲೋಕೇಶ್ ನಡುವೆ ವಿವಾದವಿದೆ ಎನ್ನಲಾಗಿದ್ದು, ದೇವಸ್ಥಾನ ನಿರ್ಮಾಣವಾಗುತ್ತಿದ್ದಂತೆ ನಾಗೇಶ್​ ಪೊಲೀಸರಿಗೆ ದೂರು ನೀಡಿದ್ದಾರೆ. ಜಮೀನನ್ನು ಸಂಪೂರ್ಣವಾಗಿ ಒಳಪಡಿಸಿಕೊಳ್ಳಲು ಕೊರೊನಾ ಮಾತಾ ದೇವಸ್ಥಾನ ನಿರ್ಮಾಣ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ. ಸದ್ಯ ಪೊಲೀಸರು ಪ್ರಕರಣದ ತನಿಖೆ ಶುರು ಮಾಡಿದ್ದಾರೆ.

ಇದನ್ನೂ ಓದಿ: ‘ಮತ್ತೆ ಬದುಕುವುದಕ್ಕೆ ಇಷ್ಟವಿಲ್ಲ’; ಕೊವಿಡ್​ನಿಂದ ತಂದೆ-ತಾಯಿ ಇಬ್ಬರನ್ನೂ ಕಳೆದುಕೊಂಡ ಖ್ಯಾತ ಯೂಟ್ಯೂಬರ್ ಭುವನ್

(Coronamata Temple Built in Uttar Pradesh and aftet 5 days demolished)

Published On - 3:47 pm, Sun, 13 June 21

ಕಾಶ್ಮೀರಕ್ಕೆ ಉಗ್ರರು ಹೇಗೆ ಬಂದ್ರು? ಅಲ್ಲಿನ ಜನರಿಗೆ ಅನಿರುದ್ಧ್ ಪ್ರಶ್ನೆ
ಕಾಶ್ಮೀರಕ್ಕೆ ಉಗ್ರರು ಹೇಗೆ ಬಂದ್ರು? ಅಲ್ಲಿನ ಜನರಿಗೆ ಅನಿರುದ್ಧ್ ಪ್ರಶ್ನೆ
ಪಹಲ್ಗಾಮ್​ ಭೂಲೋಕದ ಸ್ವರ್ಗ ಎನ್ನುವುದ್ಹೇಕೆ? ಈ ವಿಡಿಯೋ ನೋಡಿ
ಪಹಲ್ಗಾಮ್​ ಭೂಲೋಕದ ಸ್ವರ್ಗ ಎನ್ನುವುದ್ಹೇಕೆ? ಈ ವಿಡಿಯೋ ನೋಡಿ
ಮಂಜುನಾಥ್ ಪಾರ್ಥೀವ ಶರೀರ ಬೆಳಗಿನ ಜಾವ 3 ಗಂಟೆಗೆ ಬೆಂಗಳೂರು ಬರುವ ನಿರೀಕ್ಷೆ
ಮಂಜುನಾಥ್ ಪಾರ್ಥೀವ ಶರೀರ ಬೆಳಗಿನ ಜಾವ 3 ಗಂಟೆಗೆ ಬೆಂಗಳೂರು ಬರುವ ನಿರೀಕ್ಷೆ
ಉಗ್ರರ ಅಟ್ಟಹಾಸದಿಂದ ರಕ್ತಪಾತವಾದ ಪಹಲ್ಗಾಮ್ ಈಗ ಹೇಗಿದೆ ನೋಡಿ...
ಉಗ್ರರ ಅಟ್ಟಹಾಸದಿಂದ ರಕ್ತಪಾತವಾದ ಪಹಲ್ಗಾಮ್ ಈಗ ಹೇಗಿದೆ ನೋಡಿ...
ಕಾಶ್ಮೀರದ ಉಗ್ರರ ದಾಳಿ ಬಗ್ಗೆ ಅಮೆರಿಕ ಉಪಾಧ್ಯಕ್ಷ ವ್ಯಾನ್ಸ್ ಹೇಳಿದ್ದೇನು?
ಕಾಶ್ಮೀರದ ಉಗ್ರರ ದಾಳಿ ಬಗ್ಗೆ ಅಮೆರಿಕ ಉಪಾಧ್ಯಕ್ಷ ವ್ಯಾನ್ಸ್ ಹೇಳಿದ್ದೇನು?
ಬಿಜೆಪಿಯಿಂದ ಹೊರಬಿದ್ದ ಬಳಿಕ ಜನಪ್ರಿಯತೆ ಹೆಚ್ಚುತ್ತಾ ಸಾಗಿದೆ: ಯತ್ನಾಳ್
ಬಿಜೆಪಿಯಿಂದ ಹೊರಬಿದ್ದ ಬಳಿಕ ಜನಪ್ರಿಯತೆ ಹೆಚ್ಚುತ್ತಾ ಸಾಗಿದೆ: ಯತ್ನಾಳ್
ಉಗ್ರರಿಗೆ ಪಾಕಿಸ್ತಾನ ತರಬೇತಿ ನೀಡುತ್ತಿರೋದನ್ನು ಖಂಡಿಸಬೇಕು: ಹರಿಪ್ರಸಾದ್​​
ಉಗ್ರರಿಗೆ ಪಾಕಿಸ್ತಾನ ತರಬೇತಿ ನೀಡುತ್ತಿರೋದನ್ನು ಖಂಡಿಸಬೇಕು: ಹರಿಪ್ರಸಾದ್​​
ಪಹಲ್ಗಾಮ್ ದಾಳಿ: ಹುಟ್ಟುಹಬ್ಬ ಆಚರಣೆ ರದ್ದು ಮಾಡಿದ ಯುವ
ಪಹಲ್ಗಾಮ್ ದಾಳಿ: ಹುಟ್ಟುಹಬ್ಬ ಆಚರಣೆ ರದ್ದು ಮಾಡಿದ ಯುವ
ಪಹಲ್ಗಾಮ್‌ ಉಗ್ರರ ದಾಳಿಯಿಂದ ಗ್ರೇಟ್​ ಎಸ್ಕೆಪ್​ ಆದ ಬಾಗಲಕೋಟೆಯ 13 ಮಂದಿ
ಪಹಲ್ಗಾಮ್‌ ಉಗ್ರರ ದಾಳಿಯಿಂದ ಗ್ರೇಟ್​ ಎಸ್ಕೆಪ್​ ಆದ ಬಾಗಲಕೋಟೆಯ 13 ಮಂದಿ
ಉಗ್ರರ ದಾಳಿಗೆ ಬಲಿಯಾದ ಲೆ. ವಿನಯ್ ನರ್ವಾಲ್​ಗೆ ಪತ್ನಿಯಿಂದ ಭಾವುಕ ವಿದಾಯ
ಉಗ್ರರ ದಾಳಿಗೆ ಬಲಿಯಾದ ಲೆ. ವಿನಯ್ ನರ್ವಾಲ್​ಗೆ ಪತ್ನಿಯಿಂದ ಭಾವುಕ ವಿದಾಯ