AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಿರ್ಮಾಣವಾದ ಐದೇ ದಿನಗಳಲ್ಲಿ ಧ್ವಂಸವಾದ ಕೊರೊನಾ ಮಾತಾ ದೇವಾಲಯ; ಕೆಡವಿದ್ದು ಯಾರೆಂಬುದೇ ಪ್ರಶ್ನೆ

ಲೋಕೇಶ್​ ಕುಮಾರ್​ ಶ್ರೀವಾಸ್ತವ್​ ಎಂಬುವರು, ಹಳ್ಳಿಯವರಿಂದ ಡೊನೇಶನ್​ ಪಡೆದು ಈ ದೇವಸ್ಥಾನವನ್ನು ನಿರ್ಮಿಸಿದ್ದರು. ಜೂ.7ರಂದು ದೇಗುಲ ಕಟ್ಟಲ್ಪಟ್ಟಿತ್ತು. ಆದರೆ ಐದೇ ದಿನದಲ್ಲಿ ಕೆಡವಲಾಗಿದೆ. ಇದು ಪೊಲೀಸರ ಕೆಲಸ ಎಂದು ಗ್ರಾಮಸ್ಥರು ಆರೋಪ ಮಾಡಿದ್ದಾರೆ.

ನಿರ್ಮಾಣವಾದ ಐದೇ ದಿನಗಳಲ್ಲಿ ಧ್ವಂಸವಾದ ಕೊರೊನಾ ಮಾತಾ ದೇವಾಲಯ; ಕೆಡವಿದ್ದು ಯಾರೆಂಬುದೇ ಪ್ರಶ್ನೆ
ಕೊರೊನಾ ಮಾತಾ ದೇಗುಲ
TV9 Web
| Edited By: |

Updated on:Jun 13, 2021 | 3:48 PM

Share

ಪ್ರತಾಪ್​ಗಡ್​: ಕೊರೊನಾ ಸೋಂಕಿನ ನಿವಾರಣೆಯಾಗಲೆಂದು ಈಗಾಗಲೇ ಹಲವರು ಪೂಜೆ, ವ್ರತ, ದೇವರ ಸ್ಮರಣೆಯ ಮೊರೆ ಹೋಗಿದ್ದಾರೆ. ಹಾಗೇ ಉತ್ತರಪ್ರದೇಶದ ಪ್ರತಾಪ್​ಗಡ್​ ಜಿಲ್ಲೆಯ ಶುಕುಲ್​ಪುರ ಗ್ರಾಮದಲ್ಲಿ ಜನರು ಕೊರೊನಾ ಮಾತಾ ದೇವಸ್ಥಾನವನ್ನೂ ಕಟ್ಟಿಸಿ, ಪೂಜಿಸಿದ್ದಾರೆ. ಜೂ.7ರಂದು ಕಟ್ಟಲ್ಪಟ್ಟಿದ್ದ ಈ ದೇವಾಲಯವನ್ನು ಐದೇ ದಿನದಲ್ಲಿ ಕೆಡವಲಾಗಿದೆ. ಆದರೆ ಕೆಡವಿದ್ದು ನಾವಲ್ಲ, ಪೊಲೀಸರು ಎಂದು ಹಳ್ಳಿಗರು ಆರೋಪಿಸುತ್ತಿದ್ದಾರೆ.

ಲೋಕೇಶ್​ ಕುಮಾರ್​ ಶ್ರೀವಾಸ್ತವ್​ ಎಂಬುವರು, ಹಳ್ಳಿಯವರಿಂದ ಡೊನೇಶನ್​ ಪಡೆದು ಈ ದೇವಸ್ಥಾನವನ್ನು ನಿರ್ಮಿಸಿದ್ದರು. ಜೂ.7ರಂದು ದೇಗುಲ ಕಟ್ಟಲ್ಪಟ್ಟಿತ್ತು. ಆದರೆ ಐದೇ ದಿನದಲ್ಲಿ ಕೆಡವಲಾಗಿದೆ. ಇದು ಪೊಲೀಸರ ಕೆಲಸ ಎಂದು ಗ್ರಾಮಸ್ಥರು ಆರೋಪ ಮಾಡಿದ್ದಾರೆ. ಆದರೆ ಈ ಆರೋಪವನ್ನು ಪೊಲೀಸರು ನಿರಾಕರಿಸಿದ್ದಾರೆ. ವಿವಾದಿತ ಸ್ಥಳದಲ್ಲಿ ದೇಗುಲ ಕಟ್ಟಲಾಗಿತ್ತು. ಈ ವಿವಾದದಲ್ಲಿ ಒಳಗೊಂಡಿರುವ ಯಾರೋ ಒಬ್ಬರು ಕೊರೊನಾ ಮಾತಾ ದೇವಸ್ಥಾನ ಧ್ವಂಸಗೊಳಿಸಿದ್ದಾರೆ ಎಂದು ಹೇಳಿದ್ದಾರೆ.

ಪುಟ್ಟ ದೇವಾಲಯ ನಿರ್ಮಿಸಿ ಅದರಲ್ಲಿ ಕೊರೊನಾ ಮಾತಾ ಮೂರ್ತಿಯನ್ನು ಇಡಲಾಗಿತ್ತು. ಪೂಜೆಗಾಗಿ ರಾಧೆಶ್ಯಾಮ್​ ವರ್ಮಾ ಎಂಬ ಅರ್ಚಕರನ್ನು ನೇಮಕ ಮಾಡಲಾಗಿತ್ತು. ಅದಾಗಲೇ ಹಳ್ಳಿಯ ಜನರು ಇಲ್ಲಿ ಪೂಜೆ, ಪ್ರಾರ್ಥನೆ ಸಲ್ಲಿಸಲು ಪ್ರಾರಂಭಿಸಿದ್ದರು ಎಂದೂ ಸ್ಥಳೀಯರು ಹೇಳಿದ್ದಾರೆ.

ದೇಗುಲ ನಿರ್ಮಾಣ ಮಾಡಿದ ಲೋಕೇಶ್​ ನೊಯ್ಡಾ ನಿವಾಸಿಯಾಗಿದ್ದಾರೆ. ಈ ಸ್ಥಳದಲ್ಲಿ ದೇವಸ್ಥಾನ ನಿರ್ಮಿಸಿ, ಅವರು ನೊಯ್ಡಾಕ್ಕೆ ಹೋಗಿದ್ದರು. ದೇಗುಲ ನಿರ್ಮಾಣವಾದ ಭೂಮಿ ವಿಚಾರದಲ್ಲಿ ನಾಗೇಶ್​ ಕುಮಾರ್​ ಶ್ರೀವಾಸ್ತವ್​, ಜೈ ಪ್ರಕಾಶ್​ ಶ್ರೀವಾಸ್ತವ್​ ಮತ್ತು ಲೋಕೇಶ್ ನಡುವೆ ವಿವಾದವಿದೆ ಎನ್ನಲಾಗಿದ್ದು, ದೇವಸ್ಥಾನ ನಿರ್ಮಾಣವಾಗುತ್ತಿದ್ದಂತೆ ನಾಗೇಶ್​ ಪೊಲೀಸರಿಗೆ ದೂರು ನೀಡಿದ್ದಾರೆ. ಜಮೀನನ್ನು ಸಂಪೂರ್ಣವಾಗಿ ಒಳಪಡಿಸಿಕೊಳ್ಳಲು ಕೊರೊನಾ ಮಾತಾ ದೇವಸ್ಥಾನ ನಿರ್ಮಾಣ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ. ಸದ್ಯ ಪೊಲೀಸರು ಪ್ರಕರಣದ ತನಿಖೆ ಶುರು ಮಾಡಿದ್ದಾರೆ.

ಇದನ್ನೂ ಓದಿ: ‘ಮತ್ತೆ ಬದುಕುವುದಕ್ಕೆ ಇಷ್ಟವಿಲ್ಲ’; ಕೊವಿಡ್​ನಿಂದ ತಂದೆ-ತಾಯಿ ಇಬ್ಬರನ್ನೂ ಕಳೆದುಕೊಂಡ ಖ್ಯಾತ ಯೂಟ್ಯೂಬರ್ ಭುವನ್

(Coronamata Temple Built in Uttar Pradesh and aftet 5 days demolished)

Published On - 3:47 pm, Sun, 13 June 21

ಬಿಜೆಪಿ ಕಾರ್ಯಕರ್ತೆಯ ಬಟ್ಟೆಬಿಚ್ಚಿ ಹಲ್ಲೆ: ಗೃಹ ಸಚಿವರು ಹೇಳಿದ್ದೇನು?
ಬಿಜೆಪಿ ಕಾರ್ಯಕರ್ತೆಯ ಬಟ್ಟೆಬಿಚ್ಚಿ ಹಲ್ಲೆ: ಗೃಹ ಸಚಿವರು ಹೇಳಿದ್ದೇನು?
30 ಕಾಂಗ್ರೆಸ್​​​ ಕಾರ್ಯಕರ್ತರಿಗೆ ಶಾಕ್​​ ಕೊಟ್ಟ ಪೊಲೀಸರು
30 ಕಾಂಗ್ರೆಸ್​​​ ಕಾರ್ಯಕರ್ತರಿಗೆ ಶಾಕ್​​ ಕೊಟ್ಟ ಪೊಲೀಸರು
ಥ್ರಿಲ್ಲರ್ ಸೂಪರ್ ಥ್ರಿಲ್ಲರ್... ಕೊನೆಯ ಎಸೆತದಲ್ಲಿ ಸಿಕ್ಸ್, ಮ್ಯಾಚ್ ವಿನ್
ಥ್ರಿಲ್ಲರ್ ಸೂಪರ್ ಥ್ರಿಲ್ಲರ್... ಕೊನೆಯ ಎಸೆತದಲ್ಲಿ ಸಿಕ್ಸ್, ಮ್ಯಾಚ್ ವಿನ್
ಗವಿಸಿದ್ದೇಶ್ವರ ಜಾತ್ರೆ: ದಾಸೋಹದಲ್ಲಿ ಹೊಸ ದಾಖಲೆ, ಲಕ್ಷ ರೊಟ್ಟಿ ಸಂಗ್ರಹ!
ಗವಿಸಿದ್ದೇಶ್ವರ ಜಾತ್ರೆ: ದಾಸೋಹದಲ್ಲಿ ಹೊಸ ದಾಖಲೆ, ಲಕ್ಷ ರೊಟ್ಟಿ ಸಂಗ್ರಹ!
ಎಷ್ಟು ಅದ್ದೂರಿಯಾಗಿದೆ ನೋಡಿ ಅಲ್ಲು ಅರ್ಜುನ್ ಹೊಸ ಥಿಯೇಟರ್
ಎಷ್ಟು ಅದ್ದೂರಿಯಾಗಿದೆ ನೋಡಿ ಅಲ್ಲು ಅರ್ಜುನ್ ಹೊಸ ಥಿಯೇಟರ್
ಗಿಲ್ಲಿ ಬಿಗ್ ಬಾಸ್ ಮನೆ ಒಳಗೆ ಇಟ್ಟ ಬೇಡಿಕೆಯನ್ನು ಹೊರಗೆ ಈಡೇರಿಸಿದ ಫ್ಯಾನ್ಸ
ಗಿಲ್ಲಿ ಬಿಗ್ ಬಾಸ್ ಮನೆ ಒಳಗೆ ಇಟ್ಟ ಬೇಡಿಕೆಯನ್ನು ಹೊರಗೆ ಈಡೇರಿಸಿದ ಫ್ಯಾನ್ಸ
ಬಾಲ್ಕನಿಯಲ್ಲಿ ಸಿಲುಕಿದ್ದವರನ್ನು ರಕ್ಷಿಸಿದ ಬ್ಲಿಂಕಿಟ್ ಡೆಲಿವರಿ ಏಜೆಂಟ್
ಬಾಲ್ಕನಿಯಲ್ಲಿ ಸಿಲುಕಿದ್ದವರನ್ನು ರಕ್ಷಿಸಿದ ಬ್ಲಿಂಕಿಟ್ ಡೆಲಿವರಿ ಏಜೆಂಟ್
ಧ್ರುವಂತ್-ಅಶ್ವಿನಿ ಮಧ್ಯೆ ಕಿತ್ತಾಟ; ಉರಿಯೋ ಬೆಂಕಿಗೆ ತುಪ್ಪ ಸುರಿದ ಗಿಲ್ಲಿ
ಧ್ರುವಂತ್-ಅಶ್ವಿನಿ ಮಧ್ಯೆ ಕಿತ್ತಾಟ; ಉರಿಯೋ ಬೆಂಕಿಗೆ ತುಪ್ಪ ಸುರಿದ ಗಿಲ್ಲಿ
ಮರಣಿಸಿದವರ ಬಗ್ಗೆ ಕೆಟ್ಟದಾಗಿ ಮಾತನಾಡಬಾರದು ಯಾಕೆ?
ಮರಣಿಸಿದವರ ಬಗ್ಗೆ ಕೆಟ್ಟದಾಗಿ ಮಾತನಾಡಬಾರದು ಯಾಕೆ?
ಓಲಾ, ಊಬರ್, ರ್ಯಾಪಿಡೋ, ನಮ್ಮ ಯಾತ್ರಿ ಬಗ್ಗೆ ಸರ್ಕಾರ ಬಿಗ್ ಅಪ್​ಡೇಟ್!
ಓಲಾ, ಊಬರ್, ರ್ಯಾಪಿಡೋ, ನಮ್ಮ ಯಾತ್ರಿ ಬಗ್ಗೆ ಸರ್ಕಾರ ಬಿಗ್ ಅಪ್​ಡೇಟ್!