AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

14 ಸಾವಿರ ಗಡಿಯತ್ತ ಸೋಂಕಿನ ಸುಳಿಗಾಳಿ, ಕೊರೊನಾ ಹೊಡೆತಕ್ಕೆ ಪತರಗುಟ್ಟಿದ ಭಾರತ!

ದೆಹಲಿ: ಭಾರತದಲ್ಲಿ ಬೆನ್ನು ಬಿದ್ದ ಬೇತಾಳದಂತೆ ಕಾಡ್ತಿರೋ ಕೊರೊನಾ ಹೆಮ್ಮಾರಿ ಕಂಡ ಕಂಡವರನ್ನ ಕೊಂದು ಕೆಡವ್ತಿದೆ. ಸೋಂಕಿತರು ಸುಳಿದಾಡಿದ ಕಡೆ ಎಲ್ಲಾ ನಂಜು ದೇಹಕ್ಕೆ ವಕ್ಕರಿಸಿಕೊಳ್ತಿದೆ. ದೇಶದಲ್ಲಿ ಒಂದಲ್ಲ ಕೊರೊನಾ 14 ಸಾವಿರದ ಗಡಿಯತ್ತ ಮುನ್ನುಗ್ತಿದ್ರೆ, 452 ಬಲಿ ಬಿದ್ದಿದೆ. ಕೊರೊನಾ ಹೊಡೆತಕ್ಕೆ ಸಿಲುಕಿ ದೊಡ್ಡ ದೊಡ್ಡ ರಾಜ್ಯಗಳೇ ಪತರಗುಟ್ಟಿ ಹೋಗಿವೆ. ಕಂಡ ಕಂಡ ಕಡೆ ಎಲ್ಲಾ ವೈರಸ್ ಬಾಂಗ್​ ವಿಸ್ಫೋಟಗೊಳ್ತಿದೆ. ಸೋಂಕಿನ ಕ್ಷಿಪಣಿಗಳನ್ನೇ ಸಿಕ್ಕ ಸಿಕ್ಕ ಕಡೆಗೆಲ್ಲಾ ಎಸೆದು ಹೋಗ್ತಿದೆ. ಮಾರಿಯ ವಿಷಜಾಲ ಬಳ್ಳಿಯಂತೆ ಬಲವಾಗ್ತಿದೆ. […]

14 ಸಾವಿರ ಗಡಿಯತ್ತ ಸೋಂಕಿನ ಸುಳಿಗಾಳಿ, ಕೊರೊನಾ ಹೊಡೆತಕ್ಕೆ ಪತರಗುಟ್ಟಿದ ಭಾರತ!
ಸಾಧು ಶ್ರೀನಾಥ್​
|

Updated on: Apr 18, 2020 | 6:50 AM

Share

ದೆಹಲಿ: ಭಾರತದಲ್ಲಿ ಬೆನ್ನು ಬಿದ್ದ ಬೇತಾಳದಂತೆ ಕಾಡ್ತಿರೋ ಕೊರೊನಾ ಹೆಮ್ಮಾರಿ ಕಂಡ ಕಂಡವರನ್ನ ಕೊಂದು ಕೆಡವ್ತಿದೆ. ಸೋಂಕಿತರು ಸುಳಿದಾಡಿದ ಕಡೆ ಎಲ್ಲಾ ನಂಜು ದೇಹಕ್ಕೆ ವಕ್ಕರಿಸಿಕೊಳ್ತಿದೆ. ದೇಶದಲ್ಲಿ ಒಂದಲ್ಲ ಕೊರೊನಾ 14 ಸಾವಿರದ ಗಡಿಯತ್ತ ಮುನ್ನುಗ್ತಿದ್ರೆ, 452 ಬಲಿ ಬಿದ್ದಿದೆ. ಕೊರೊನಾ ಹೊಡೆತಕ್ಕೆ ಸಿಲುಕಿ ದೊಡ್ಡ ದೊಡ್ಡ ರಾಜ್ಯಗಳೇ ಪತರಗುಟ್ಟಿ ಹೋಗಿವೆ.

ಕಂಡ ಕಂಡ ಕಡೆ ಎಲ್ಲಾ ವೈರಸ್ ಬಾಂಗ್​ ವಿಸ್ಫೋಟಗೊಳ್ತಿದೆ. ಸೋಂಕಿನ ಕ್ಷಿಪಣಿಗಳನ್ನೇ ಸಿಕ್ಕ ಸಿಕ್ಕ ಕಡೆಗೆಲ್ಲಾ ಎಸೆದು ಹೋಗ್ತಿದೆ. ಮಾರಿಯ ವಿಷಜಾಲ ಬಳ್ಳಿಯಂತೆ ಬಲವಾಗ್ತಿದೆ. ಕೊಲೆಪಾತಕ ಕೊರೊನಾ ಸಾವಿನ ನಗಾರಿಗೆ ಊರೇ ದಂಗೆದ್ದು ಕೂತಿದೆ. ದೇಶದೆಲ್ಲೆಡೆ ಕ್ರೂರಿ ಸದ್ದಿಲ್ಲದೇ ಬೇರುಬಿಡ್ತಿದೆ. ಕಡು ಕಠೋರ ನಂಜಿನ ನಂಟು ದಿಲ್ಲಿಯಿಂದ ಹಳ್ಳಿಯವರೆಗೂ ಕತ್ತಿಗೆ ಸುತ್ತಿಕೊಳ್ತಿದೆ. ಕೊರೊನಾ ಕಣಗಳು ವಕ್ಕರಿಸಿಕೊಳ್ತಿರೋ ಏಟಿಗೆ ದೇಶವೇ ಕಂಪಿಸಿಬಿಟ್ಟಿದೆ.

ಯೆಸ್.. ಕಾಶ್ಮೀರದಿಂದ ಕನ್ಯಾಕುಮಾರವರೆಗೂ.. ಪೂರ್ವದಿಂದ ಪಶ್ಚಿಮದವರೆಗೂ.. ಊರಿನೆದುರಿಗಿರೊ ಹೆಬ್ಬಾಗಿಲು.. ಮನೆ ಮುಂದಿರೊ ಹೊಸ್ತಿಲನ್ನೇ ದಾಟಿ ಕೊರೊನಾ ವಕ್ಕರಿಸಿಕೊಳ್ತಿದೆ. ದೇಶದದಲ್ಲಿ ನಿಮಿಷಕೊಬ್ಬರ ಉಸಿರು ನಿಲ್ಲಿಸ್ತಿರೋ ಯಮದೂತ ಸಾವಿನ ಡೋಲು ಬಾರಿಸ್ತಿದೆ. ಲಾಕ್​ಡೌನ್ ಜಾರಿಯಾಗಿದ್ರೂ.. ರೆಡ್​ಜೋನ್ ಘೋಷಿಸಿದ್ರು ಜನರು ಡೋಂಟ್​ಕೇರ್ ಅಂತಿದ್ದಾರೆ. ಭಾರತದಲ್ಲಿ ಒಂದಲ್ಲ.. ಎರಡಲ್ಲ ಸೋಂಕಿತರ ಸಂಖ್ಯೆ 14 ಸಾವಿರದ ಗಡಿಯತ್ತ ಮುನ್ನುಗ್ತಿದೆ.

ದೇಶದಲ್ಲಿ ಒಟ್ಟು 452 ಮಂದಿ ಕೊರೊನಾಗೆ ಬಲಿ..! ಒಂದು ಎರಡಾಗ್ತಿದೆ.. ಎರಡು ಇಪ್ಪಾತ್ತಾಗಿದೆ.. ಇಪ್ಪತ್ತು ಇನ್ನೂರ ಗಡಿದಾಟಿ ಸಾವಿರ ಸಾವಿರ ಸುಳಿಯಾಗಿ ಎಲ್ಲೆಲ್ಲೂ ಹಬ್ಬಿದೆ. ಕರ್ನಾಟಕದಲ್ಲಿ ಕ್ರೌರ್ಯ ಮೆರೆದು.. ಮಹಾರಾಷ್ಟ್ರಕ್ಕೆ ಮರ್ಮಾಘಾತ ನೀಡಿ.. ಕೇರಳದಲ್ಲಿ ಕಠೋರ ರೂಪ ತೋರಿ.. ರಾಜಸ್ಥಾನದಲ್ಲಿ ರಾಜ್ಯಾಭಾರ ಮಾಡಿ.. ಮಧ್ಯಪ್ರದೇಶದಲ್ಲಿ ಮರಣಮೃದಂಗ ಬಾರಿಸ್ತಾ.. ಆಂಧ್ರದಲ್ಲಿ ಅಟ್ಟಹಾಸ ಮೆರೆಯುತ್ತಾ.. ತೆಲಂಗಾಣದಲ್ಲಿ ಸಾವಿನ ತಂಬೂರಿ ಬಾರಿಸ್ತಿರೊ ಕೊರೊನಾ ಎಲ್ಲೆ ಮೀರಿ ಸಾಗ್ತಿದೆ. ಇದೀಗ ದೇಶಲದಲ್ಲಿ ಒಟ್ಟು 13,835 ಜನರಿಗೆ ಕೊರೊನಾ ದಾಳಿ ಇಟ್ಟಿದೆ. ಅದ್ರಲ್ಲೂ 452 ಮಂದಿ ಕ್ರೂರಿ ವೈರಸ್ ದಾಳಿಗೆ ಪ್ರಾಣ ಕಳೆದ್ಕೊಂಡಿದ್ದಾರೆ. ದೇಶದಲ್ಲಿ 14 ಸಾವಿರದ ಗಡಿಯತ್ತ ಸೋಂಕಿನ ಸುನಾಮಿ ಮುನ್ನುಗ್ತಿದೆ. 500ರ ಗಡಿಯತ್ತ ಸಾವಿನ ಅಟ್ಟಹಾಸ ಮೆರೆಯೋಕೆ ಕೊರೊನಾ ಕಾದು ಕುಳಿತಿದೆ.

ಮಹಾರಾಷ್ಟ್ರದಲ್ಲಿ 3 ಸಾವಿರದ ಗಡಿದಾಟಿದ ವಿಷಜಾಲ..! ಇನ್ನು ಮಹಾರಾಷ್ಟ್ರದಲ್ಲಿ ಕೊರೊನಾ ವೈರಸ್ ಅಟ್ಟಹಾಸ ಮೆರೀತಿದೆ. ಕ್ರೂರಿ ಕೂಪಕ್ಕೆ ಸಿಲುಕಿರೋ ಶಿವಾಜಿ ನಾಡಲ್ಲಿ 3 ಸಾವಿರಕ್ಕೂ ಹೆಚ್ಚು ಜನರಿಗೆ ಕೊರೊನಾ ದಾಳಿ ಇಟ್ಟಿದೆ. ನಿನ್ನೆ ಒಂದೇ ದಿನ 118 ಹೊಸ ಸೋಂಕಿತರು ಹುಟ್ಟಿಕೊಂಡಿರೋದು ಎಲ್ಲರ ನಿದ್ದೆಗೆಡಿಸಿದೆ. ಅದ್ರಲ್ಲೂ ಮುಂಬೈನ ಸ್ಲಂ ಪ್ರದೇಶ ಧಾರಾವಿಯಲ್ಲಿ ಸೋಂಕಿತರ ಸಂಖ್ಯೆ 100ರ ಗಡಿದಾಟಿದ್ರೆ, ಈವರೆಗೆ 10 ಬಲಿ ಬಿದ್ದಿದೆ. 8 ಲಕ್ಷ ಮಂದಿ ತಂಗಿರೋ ಕೊಳಗೇರಿ ಪ್ರದೇಶದಲ್ಲಿ ವೈರಸ್ ಬಾಂಬ್ ಬಿದ್ದಿರೋದು ಎಲ್ರೂ ಅದುರಿ ಹೋಗಿದ್ದಾರೆ.

ಕೊರೊನಾ ವಿಷವ್ಯೂಹ..! ದೆಹಲಿ- 1640 ಮಧ್ಯಪ್ರದೇಶ- 1308 ತಮಿಳುನಾಡು- 1267 ರಾಜಸ್ಥಾನ- 1131 ಗುಜರಾತ್‌- 1021 ಉತ್ತರಪ್ರದೇಶ- 846 ತೆಲಂಗಾಣ- 743 ಆಂಧ್ರಪ್ರದೇಶ- 572 ಕೇರಳ- 395 ಜಮ್ಮು-ಕಾಶ್ಮೀರ- 314

ಮೇ ತಿಂಗಳಲ್ಲಿ ಗರಿಷ್ಟ ಮಟ್ಟಕ್ಕೆ ತಲುಪಲಿದೆ ಸೋಂಕು..!? ಇನ್ನು ದೇಶದಲ್ಲಿ ಲಾಕ್​​ಡೌನ್ ಜಾರಿಯಲ್ಲಿದ್ರೂ ಒಟ್ಟು 6 ರಾಜ್ಯಗಳಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 1 ಸಾವಿರದ ಗಡಿ ದಾಟಿದೆ. ಇನ್ನೊಂದು ಆತಂಕಕಾರಿ ವಿಷ್ಯ ಅಂದ್ರೆ, ಭಾರತದಲ್ಲಿ ಮೇ ತಿಂಗಳಲ್ಲಿ ಸೋಂಕಿತ ಸಂಖ್ಯೆ ಗರಿಷ್ಠ ಮಟ್ಟಕ್ಕೆ ತಲುಪಬೋದು ಅಂತ ಕೇಂದ್ರ ಆರೋಗ್ಯ ಇಲಾಖೆ ಮೂಲಗಳು ಹೇಳ್ತಿವೆ. ಅದ್ರಲ್ಲೂ ಒಮ್ಮೆ ಗರಿಷ್ಠ ಮಟ್ಟಕ್ಕೆ ತಲುಪಿದ ಬಳಿಕ ಸೋಂಕಿತರ ಸಂಖ್ಯೆ ಇಳಿಕೆಯಾಗಲಿದೆ ಅಂತ ಕೇಂದ್ರ ಸರ್ಕಾರದ ಕೆಲ ತಜ್ಞರು ಅಂದಾಜಿಸಿದ್ದಾರಂತೆ.

ಕೊರೊನಾ ಪತ್ತೆಗೆ ಕೇರಳದಲ್ಲಿ ಕಡಿಮೆ ವೆಚ್ಚದ ಕಿಟ್ ರೆಡಿ..! ಕೊರೊನಾ ವಿರುದ್ಧ ಸಮರಕ್ಕೆ ಕೇರಳ ಮತ್ತೆ ಸಜ್ಜಾಗಿದೆ. ತಿರುವನಂತಪುರಂನಲ್ಲಿ ಕಡಿಮೆ ವೆಚ್ಚದ ಟೆಸ್ಟಿಂಗ್ ಕಿಟ್ ಅಭಿವೃದ್ಧಿಪಡಿಸಿದೆ. ಕೇವಲ 2 ಗಂಟೆಗಳಲ್ಲಿ ಕೊರೊನಾ ಸೋಂಕನ್ನು ಪತ್ತೆ ಹಚ್ಚಬೋದಾಗಿದೆ. ಒಂದು ಮಷಿನ್​​ನಲ್ಲಿ ಒಂದೇ ಬ್ಯಾಚ್‌ನಲ್ಲಿ ಒಟ್ಟು 30 ಮಾದರಿ ಪರೀಕ್ಷಿಸೋ ಸೌಲಭ್ಯವಿದೆಯಂತೆ. ಈ ಬಗ್ಗೆ ಕೇಂದ್ರ ಆರೋಗ್ಯ ಸಚಿವ ಹರ್ಷ ವರ್ಧನ್ ಟ್ವೀಟ್ ಮಾಡಿದ್ದಾರೆ.

ಕೊರೊನಾ ಪರೀಕ್ಷೆ ಮಾಡಿಸಿಕೊಳ್ಳದ ಪತಿಗೆ ಮನೆಗಿಲ್ಲ ಪ್ರವೇಶ..! ಇನ್ನು ಆಂಧ್ರಪ್ರದೇಶದಲ್ಲಿ ಕೊರೊನಾ ಭೀತಿ ದಿಗಿಲು ಬಡಿಸಿದೆ. ನೆಲ್ಲೂರಿ ಜಿಲ್ಲೆಯ ವೆಂಕಟಗಿರಿಯಲ್ಲಿ ಕೊರೊನಾ ಪರೀಕ್ಷೆಗೆ ಮಾಡಿಸಿಕೊಳ್ಳದ ಪತಿಗೆ ಮನೆಯೊಳಕ್ಕೆ ಹೆಜ್ಜೆಯೂರಲು ಪತ್ನಿ ನಿರಾಸಿಕರಿಸಿದ ಘಟನೆ ನಡೆದಿದೆ.

ಕೈಗಳಿಲ್ಲದ ಕೋತಿಗೆ ಬಾಳೆಹಣ್ಣು ತಿನ್ನಿಸಿದ ಪೊಲೀಸ್..! ಇನ್ನು, ದೇಶದಲ್ಲಿ ಲಾಕ್​ಡೌನ್ ಜಾರಿಯಿಂದಾಗಿ ಪ್ರಾಣಿ, ಪಕ್ಷಿಗಳು ಸಂಕಷ್ಟಕ್ಕೆ ಸಿಲುಕಿವೆ. ಪ್ರಾಣಿಗಳು ಆಹಾರಕ್ಕಾಗಿ ಪಡಿಪಾಠಲು ಅನುಭವಿಸ್ತಿವೆ. ಆದ್ರೆ, ದೆಹಲಿಯಲ್ಲಿ ಪೊಲೀಸ್ ಪೇದೆಯೊಬ್ಬರು ಕೈಗಳಿಲ್ಲದ ಮಂಗಕ್ಕೆ ಬಾಳೆಹಣ್ಣು ತಿನ್ನಿಸೋ ಮೂಲಕ ಮಾನವೀಯತೆ ಮೆರೆದಿದ್ದಾರೆ. ಈ ವಿಡಿಯೋ ಹೃದಯಸ್ಪರ್ಶಿಯಾಗಿದೆ.

ಒಟ್ನಲ್ಲಿ ಕೊರೊನಾ ಅನ್ನೋ ಕಪಿಮುಷ್ಟಿಗೆ ಸಿಲುಕಿರೋ ಭಾರತ ಪತ್ರುಗುಟ್ಟಿ ಹೋಗಿದೆ. ದಶದಿಕ್ಕುಗಳಲ್ಲೂ ಕೊರೊನಾ ವೈರಸ್ ಅಟ್ಯಾಕ್ ಮಾಡ್ತಿದ್ದು ಎಲ್ಲರನ್ನೂ ಕಕ್ಕಾಬಿಕ್ಕಿಯಾಗಿಸಿದೆ. ಲಾಕ್​ಡೌನ್ ಬ್ರಹ್ಮಾಸ್ತ್ರ ಪ್ರಯೋಗಿಸಿದ್ರು ಕೆಲ ರಾಜ್ಯಗಳಲ್ಲಂತೂ ಕೊರೊನಾ ಕಂಟ್ರೋಲ್​ಗೆ ಸಿಗ್ತಿಲ್ಲ. ಊರಿಂದ ಊರಿಗೆ ವಿಷವ್ಯೂಹ ಸುತ್ತಿಕೊಳ್ತಿರೋದು ದೇಶಕ್ಕೆ ದೇಶವನ್ನೇ ಕಂಗೆಡಿಸಿದೆ.

Follow Us
sadhu srinath
sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Read More
ಶೇ. 55 ಅಂಕ ಪಡೆದ ಮಗನಿಗೆ ಅಪ್ಪ-ಅಮ್ಮ ಮಾಡಿದ್ದೇನು?
ಶೇ. 55 ಅಂಕ ಪಡೆದ ಮಗನಿಗೆ ಅಪ್ಪ-ಅಮ್ಮ ಮಾಡಿದ್ದೇನು?
‘ಪೆದ್ದಿ’ ಚಿತ್ರದಲ್ಲಿ ಶಿವರಾಜ್​ಕುಮಾರ್ ಗತ್ತು ನೋಡಿ; ಮೇಕಿಂಗ್ ವಿಡಿಯೋ
‘ಪೆದ್ದಿ’ ಚಿತ್ರದಲ್ಲಿ ಶಿವರಾಜ್​ಕುಮಾರ್ ಗತ್ತು ನೋಡಿ; ಮೇಕಿಂಗ್ ವಿಡಿಯೋ
ಮಂಗಳೂರು: ವಿಮಾನಗಳನ್ನ ಆಕಾಶದಲ್ಲೇ ಅಲೆದಾಡಿಸುತ್ತಿರುವ ಮಳೆರಾಯ!
ಮಂಗಳೂರು: ವಿಮಾನಗಳನ್ನ ಆಕಾಶದಲ್ಲೇ ಅಲೆದಾಡಿಸುತ್ತಿರುವ ಮಳೆರಾಯ!
‘ಲವ್ ಮಾಕ್ಟೆಲ್’ ಸೆಟ್​ನಲ್ಲಿ ದಿಲೀಪ್: ವಿಡಿಯೋ ಹಂಚಿಕೊಂಡ ಡಾರ್ಲಿಂಗ್ ಕೃಷ್ಣ
‘ಲವ್ ಮಾಕ್ಟೆಲ್’ ಸೆಟ್​ನಲ್ಲಿ ದಿಲೀಪ್: ವಿಡಿಯೋ ಹಂಚಿಕೊಂಡ ಡಾರ್ಲಿಂಗ್ ಕೃಷ್ಣ
ಮಧ್ಯಪ್ರದೇಶದ ದೇವಾಸ್ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ; ಮೂವರು ಸಾವು
ಮಧ್ಯಪ್ರದೇಶದ ದೇವಾಸ್ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ; ಮೂವರು ಸಾವು
ಕೇಸರಿ ಶಾಲು ನಿಷೇಧಿಸುವ ಅಧಿಕಾರ ಕೊಟ್ಟಿದ್ಯಾರು? ಪ್ರಲ್ಹಾದ್​ ಜೋಶಿ ಕಿಡಿ
ಕೇಸರಿ ಶಾಲು ನಿಷೇಧಿಸುವ ಅಧಿಕಾರ ಕೊಟ್ಟಿದ್ಯಾರು? ಪ್ರಲ್ಹಾದ್​ ಜೋಶಿ ಕಿಡಿ
ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆ ಮೇಲೂ SIR ನೆರಳು!
ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆ ಮೇಲೂ SIR ನೆರಳು!
ಯುವಕರಿಂದ ಸಮುದ್ರದಲ್ಲಿ ಮುಳುಗುತ್ತಿದ್ದ ಇಬ್ಬರು ಪ್ರವಾಸಿಗರ ರಕ್ಷಣೆ
ಯುವಕರಿಂದ ಸಮುದ್ರದಲ್ಲಿ ಮುಳುಗುತ್ತಿದ್ದ ಇಬ್ಬರು ಪ್ರವಾಸಿಗರ ರಕ್ಷಣೆ
ವಚನಾನಂದಶ್ರೀಗಳ ವೈದ್ಯಕೀಯ ಪರೀಕ್ಷೆ ಬಗ್ಗೆ ಡಾಕ್ಟರ್ ಸ್ಫೋಟಕ ಹೇಳಿಕೆ
ವಚನಾನಂದಶ್ರೀಗಳ ವೈದ್ಯಕೀಯ ಪರೀಕ್ಷೆ ಬಗ್ಗೆ ಡಾಕ್ಟರ್ ಸ್ಫೋಟಕ ಹೇಳಿಕೆ
ಭೀಕರ ಬಿರುಗಾಳಿಗೆ ಶೀಟ್​ ಸಮೇತ ಗಾಳಿಯಲ್ಲಿ ಹಾರಿದ ವ್ಯಕ್ತಿ
ಭೀಕರ ಬಿರುಗಾಳಿಗೆ ಶೀಟ್​ ಸಮೇತ ಗಾಳಿಯಲ್ಲಿ ಹಾರಿದ ವ್ಯಕ್ತಿ