AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜರ್ಮನಿ, ಬ್ರಿಟನ್​ನಿಂದ ಆಕ್ಸಿಜನ್ ಕಂಟೇನರ್ ಹೊತ್ತು ತಂದ ಭಾರತೀಯ ವಾಯುಪಡೆ

India Air Force: ಭಾರತೀಯ ವಾಯುಪಡೆಯ ಸಿ-17 ವಿಮಾನ ಭಾನುವಾರ ನಾಲ್ಕು ಕ್ರಯೋಜನಿಕ್ ಆಕ್ಸಿಜನ್  ಕಂಟೇನರ್​ಗಳನ್ನು ಜರ್ಮನಿಯ ಫ್ರಾಂಕ್ ಫರ್ಟ್ ನಿಂದ  ದೆಹಲಿ ಸಮೀಪದ  ಹಿಂಡನ್ ವಾಯುನೆಲೆಗೆ ಹೊತ್ತು ತಂದಿದೆ.

ಜರ್ಮನಿ, ಬ್ರಿಟನ್​ನಿಂದ ಆಕ್ಸಿಜನ್ ಕಂಟೇನರ್ ಹೊತ್ತು ತಂದ ಭಾರತೀಯ ವಾಯುಪಡೆ
ಆಕ್ಸಿಜನ್ ಕಂಟೇನರ್
ರಶ್ಮಿ ಕಲ್ಲಕಟ್ಟ
ರಶ್ಮಿ ಕಲ್ಲಕಟ್ಟ|

Updated on:May 03, 2021 | 3:35 PM

Share

ದೆಹಲಿ: ದೇಶದಲ್ಲಿ ಕೊವಿಡ್ ಪ್ರಕರಣಗಳು ಹೆಚ್ಚಾಗುತ್ತಿರುವಂತೆ ಆಕ್ಸಿಜನ್ ಕೊರತೆಯೂ ತೀರ್ವವಾಗಿ ಕಾಡಿದೆ. ಈ ಸಂದಿಗ್ಧ ಪರಿಸ್ಥಿತಿಯಲ್ಲಿ ಭಾರತೀಯ ವಾಯುಪಡೆಯ ಸಿ-17 ವಿಮಾನ ಭಾನುವಾರ ನಾಲ್ಕು ಕ್ರಯೋಜನಿಕ್ ಆಕ್ಸಿಜನ್  ಕಂಟೇನರ್​ಗಳನ್ನು ಜರ್ಮನಿಯ ಫ್ರಾಂಕ್​ಫರ್ಟ್​ನಿಂದ  ದೆಹಲಿ ಸಮೀಪದ  ಹಿಂಡನ್ ವಾಯುನೆಲೆಗೆ ಹೊತ್ತು ತಂದಿದೆ. ಅದೇ ವೇಳೆ ಬ್ರಿಟನ್​ನ ಬ್ರೈಜ್  ನಾರ್ಟನ್​ ನಿಂದ  450 ಆಕ್ಸಿಜನ್ ಸಿಲಿಂಡರ್​ಗಳನ್ನು ತಮಿಳುನಾಡಿನ ಚೆನ್ನೈ ವಾಯುನೆಲೆಗೆ ತಂದಿದೆ.

 ಇದರ ಜತೆಗೆ ಸಿ-17 ಎರಡು ಕ್ರಯೋಜನಿಕ್ ಆಕ್ಸಿಜನ್ ಕಂಟೇನರ್​ಗಳನ್ನು ಚಂಢೀಗಡದಿಂದ ಭುವನೇಶ್ವರಕ್ಕೆ, ಎರಡು ಕಂಟೇನರ್​ಗಳನ್ನು ಜೋಧಾಪುರ್​ನಿಂದ ಜಾಮ್​ನಗರ್​ಗೆ, ಎರಡು ಸಿಲಿಂಡರ್​ಗಳನ್ನು ಹಿಂಡನ್​ನಿಂದ ರಾಂಚಿಗೆ,  ಇಂದೋರ್​ನಿಂದ ಜಾಮ್​ನಗರಕ್ಕೆ,  ಹಿಂಡನ್​ನಿಂದ ಭುವನೇಶ್ವರಕ್ಕೆ  ತಲಾ ಎರಡು ಕಂಟೇನರ್​  ಗಳನ್ನು ಸಾಗಿಸಲಾಗದೆ ಎಂದು ಭಾರತೀಯ ವಾಯುಪಡೆ  ಹೇಳಿದೆ.

ಸಿ-17 ಸಾಗಾಣಿಕೆ ವಿಮಾನವು ಸಿಂಗಾಪೂರ್​ನಿಂದ ಹೆಚ್ಚು ಆಕ್ಸಿಜನ್ ಸಿಲಿಂಡರ್ ಗಳನ್ನು ತರಲು ಸಿದ್ಧತೆ ನಡೆಸಿದೆ ಎಂದು ಗೃಹ ಸಚಿವಾಲಯ ಹೇಳಿದೆ.

ಐಎಎಫ್ ಸಿ 17 ಸಾಗಾಣಿಕೆ ವಿಮಾನವು  ಸಿಂಗಾಪುರ್​ನಿಂದ ಖಾಲಿ ಆಕ್ಸಿಜನ್ ಕಂಟೇನರ್ ಗಳನ್ನು ಏರ್​ ಲಿಫ್ಟ್ ಮಾಡಲಿದೆ. ಆಕ್ಸಿಜನ್  ಪೂರೈಕೆ ಮಾಡಲು  ವಾಯುಪಡೆ ವಿಮಾನ ಬಳಸಲಾಗುತ್ತಿದೆ. ಗೃಹ ಸಚಿವಾಲಯವು ಇದರ ಉಸ್ತುವಾರಿ ವಹಿಸಿದೆ ಎಂದು ಗೃಹ ಇಲಾಖೆಯ ವಕ್ತಾರರು ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ: ಚಾಮರಾಜನಗರ ದುರಂತ: ಎಚ್ಚೆತ್ತ ಸರ್ಕಾರದಿಂದ ಆಕ್ಸಿಜನ್ ಪೂರೈಕೆ ಬಗ್ಗೆ ಮಹತ್ವದ ಆದೇಶ

ತೆಲಂಗಾಣ: ಹೈದರಾಬಾದ್‌ನಿಂದ ಒಡಿಶಾಗೆ ಆಕ್ಸಿಜನ್ ಟ್ಯಾಂಕ್ ಏರ್​ಲಿಫ್ಟ್ ಮಾಡಿದ ಭಾರತೀಯ ವಾಯುಪಡೆ

(COVID 19 crisis in the country India Air Force C-17 aircraft Airlifts Oxygen Containers From Germany UK)

Published On - 3:19 pm, Mon, 3 May 21

Follow Us
ದೇವರಾಜ ಅರಸು ಅವರ ವಿಂಟೇಜ್ ಕಾರಿನಲ್ಲಿ ಡಿಸಿಎಂ, ಸಚಿವರ ಸವಾರಿ
ದೇವರಾಜ ಅರಸು ಅವರ ವಿಂಟೇಜ್ ಕಾರಿನಲ್ಲಿ ಡಿಸಿಎಂ, ಸಚಿವರ ಸವಾರಿ
‘ಜೈಲಿನಲ್ಲಿ ಅಧಿಕಾರಿಗಳಿಂದಲೇ ವೇಶ್ಯಾವಾಟಿಕೆ’: ಮಾಜಿ ಕೈದಿ ಗಂಭೀರ ಆರೋಪ
‘ಜೈಲಿನಲ್ಲಿ ಅಧಿಕಾರಿಗಳಿಂದಲೇ ವೇಶ್ಯಾವಾಟಿಕೆ’: ಮಾಜಿ ಕೈದಿ ಗಂಭೀರ ಆರೋಪ
RSS ಶಾಖೆಯಲ್ಲಿ ಸಂಘದ ಗೀತೆ ಬಿಟ್ಟು ರಾಷ್ಟ್ರಗೀತೆ ಹಾಡಲಿ: ಹರಿಪ್ರಸಾದ್
RSS ಶಾಖೆಯಲ್ಲಿ ಸಂಘದ ಗೀತೆ ಬಿಟ್ಟು ರಾಷ್ಟ್ರಗೀತೆ ಹಾಡಲಿ: ಹರಿಪ್ರಸಾದ್
ಸಚಿವ ಮಧು ಬಂಗಾರಪ್ಪ ಕ್ಷೇತ್ರದಲ್ಲೇ ತಪ್ಪದ ಬಸ್ ಗೋಳು
ಸಚಿವ ಮಧು ಬಂಗಾರಪ್ಪ ಕ್ಷೇತ್ರದಲ್ಲೇ ತಪ್ಪದ ಬಸ್ ಗೋಳು
ಹೈದರಾಬಾದ್ ಮೆಟ್ರೋದಲ್ಲಿ 'ಟಾಕ್ಸಿಕ್' ಹವಾ; ಯಶ್ ಸಿನಿಮಾಗೆ ಭರ್ಜರಿ ಪ್ರಚಾರ
ಹೈದರಾಬಾದ್ ಮೆಟ್ರೋದಲ್ಲಿ 'ಟಾಕ್ಸಿಕ್' ಹವಾ; ಯಶ್ ಸಿನಿಮಾಗೆ ಭರ್ಜರಿ ಪ್ರಚಾರ
ಕೆಎಂಎಫ್ ಪಶು ಆಹಾರ ಕಲಬೆರಕೆ ಹಗರಣ: ನಾಲ್ವರು ಅಧಿಕಾರಿಗಳ ಅಮಾನತು
ಕೆಎಂಎಫ್ ಪಶು ಆಹಾರ ಕಲಬೆರಕೆ ಹಗರಣ: ನಾಲ್ವರು ಅಧಿಕಾರಿಗಳ ಅಮಾನತು
440 ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಪೈಕಿ 428 ರಲ್ಲಿ ಪ್ರಾಂಶುಪಾಲರೇ ಇಲ್ಲ
440 ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಪೈಕಿ 428 ರಲ್ಲಿ ಪ್ರಾಂಶುಪಾಲರೇ ಇಲ್ಲ
ದೆಹಲಿಯಲ್ಲಿರುವ ಪಾಕ್ ಹೈಕಮಿಷನ್ ಹೊರಗಿನ ಬ್ಯಾರಿಕೇಡ್‌ಗಳ ತೆರವು
ದೆಹಲಿಯಲ್ಲಿರುವ ಪಾಕ್ ಹೈಕಮಿಷನ್ ಹೊರಗಿನ ಬ್ಯಾರಿಕೇಡ್‌ಗಳ ತೆರವು
ಚಿಕ್ಕಮಗಳೂರು: 3000 ಅಡಿ ಪ್ರಪಾತದ ಅಂಚಿನಲ್ಲಿ ಥಾರ್ ಜೀಪ್ ಓಡಿಸಿ ಹುಚ್ಚಾಟ
ಚಿಕ್ಕಮಗಳೂರು: 3000 ಅಡಿ ಪ್ರಪಾತದ ಅಂಚಿನಲ್ಲಿ ಥಾರ್ ಜೀಪ್ ಓಡಿಸಿ ಹುಚ್ಚಾಟ
ರಾಜ್ಯಾದ್ಯಂತ ಮೆಡಿಕಲ್ ಸ್ಟೋರ್‌ಗಳ ಪರಿಶೀಲನೆಗೆ ಮಹತ್ವದ ಆದೇಶ
ರಾಜ್ಯಾದ್ಯಂತ ಮೆಡಿಕಲ್ ಸ್ಟೋರ್‌ಗಳ ಪರಿಶೀಲನೆಗೆ ಮಹತ್ವದ ಆದೇಶ