AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜರ್ಮನಿ, ಬ್ರಿಟನ್​ನಿಂದ ಆಕ್ಸಿಜನ್ ಕಂಟೇನರ್ ಹೊತ್ತು ತಂದ ಭಾರತೀಯ ವಾಯುಪಡೆ

India Air Force: ಭಾರತೀಯ ವಾಯುಪಡೆಯ ಸಿ-17 ವಿಮಾನ ಭಾನುವಾರ ನಾಲ್ಕು ಕ್ರಯೋಜನಿಕ್ ಆಕ್ಸಿಜನ್  ಕಂಟೇನರ್​ಗಳನ್ನು ಜರ್ಮನಿಯ ಫ್ರಾಂಕ್ ಫರ್ಟ್ ನಿಂದ  ದೆಹಲಿ ಸಮೀಪದ  ಹಿಂಡನ್ ವಾಯುನೆಲೆಗೆ ಹೊತ್ತು ತಂದಿದೆ.

ಜರ್ಮನಿ, ಬ್ರಿಟನ್​ನಿಂದ ಆಕ್ಸಿಜನ್ ಕಂಟೇನರ್ ಹೊತ್ತು ತಂದ ಭಾರತೀಯ ವಾಯುಪಡೆ
ಆಕ್ಸಿಜನ್ ಕಂಟೇನರ್
ರಶ್ಮಿ ಕಲ್ಲಕಟ್ಟ
|

Updated on:May 03, 2021 | 3:35 PM

Share

ದೆಹಲಿ: ದೇಶದಲ್ಲಿ ಕೊವಿಡ್ ಪ್ರಕರಣಗಳು ಹೆಚ್ಚಾಗುತ್ತಿರುವಂತೆ ಆಕ್ಸಿಜನ್ ಕೊರತೆಯೂ ತೀರ್ವವಾಗಿ ಕಾಡಿದೆ. ಈ ಸಂದಿಗ್ಧ ಪರಿಸ್ಥಿತಿಯಲ್ಲಿ ಭಾರತೀಯ ವಾಯುಪಡೆಯ ಸಿ-17 ವಿಮಾನ ಭಾನುವಾರ ನಾಲ್ಕು ಕ್ರಯೋಜನಿಕ್ ಆಕ್ಸಿಜನ್  ಕಂಟೇನರ್​ಗಳನ್ನು ಜರ್ಮನಿಯ ಫ್ರಾಂಕ್​ಫರ್ಟ್​ನಿಂದ  ದೆಹಲಿ ಸಮೀಪದ  ಹಿಂಡನ್ ವಾಯುನೆಲೆಗೆ ಹೊತ್ತು ತಂದಿದೆ. ಅದೇ ವೇಳೆ ಬ್ರಿಟನ್​ನ ಬ್ರೈಜ್  ನಾರ್ಟನ್​ ನಿಂದ  450 ಆಕ್ಸಿಜನ್ ಸಿಲಿಂಡರ್​ಗಳನ್ನು ತಮಿಳುನಾಡಿನ ಚೆನ್ನೈ ವಾಯುನೆಲೆಗೆ ತಂದಿದೆ.

 ಇದರ ಜತೆಗೆ ಸಿ-17 ಎರಡು ಕ್ರಯೋಜನಿಕ್ ಆಕ್ಸಿಜನ್ ಕಂಟೇನರ್​ಗಳನ್ನು ಚಂಢೀಗಡದಿಂದ ಭುವನೇಶ್ವರಕ್ಕೆ, ಎರಡು ಕಂಟೇನರ್​ಗಳನ್ನು ಜೋಧಾಪುರ್​ನಿಂದ ಜಾಮ್​ನಗರ್​ಗೆ, ಎರಡು ಸಿಲಿಂಡರ್​ಗಳನ್ನು ಹಿಂಡನ್​ನಿಂದ ರಾಂಚಿಗೆ,  ಇಂದೋರ್​ನಿಂದ ಜಾಮ್​ನಗರಕ್ಕೆ,  ಹಿಂಡನ್​ನಿಂದ ಭುವನೇಶ್ವರಕ್ಕೆ  ತಲಾ ಎರಡು ಕಂಟೇನರ್​  ಗಳನ್ನು ಸಾಗಿಸಲಾಗದೆ ಎಂದು ಭಾರತೀಯ ವಾಯುಪಡೆ  ಹೇಳಿದೆ.

ಸಿ-17 ಸಾಗಾಣಿಕೆ ವಿಮಾನವು ಸಿಂಗಾಪೂರ್​ನಿಂದ ಹೆಚ್ಚು ಆಕ್ಸಿಜನ್ ಸಿಲಿಂಡರ್ ಗಳನ್ನು ತರಲು ಸಿದ್ಧತೆ ನಡೆಸಿದೆ ಎಂದು ಗೃಹ ಸಚಿವಾಲಯ ಹೇಳಿದೆ.

ಐಎಎಫ್ ಸಿ 17 ಸಾಗಾಣಿಕೆ ವಿಮಾನವು  ಸಿಂಗಾಪುರ್​ನಿಂದ ಖಾಲಿ ಆಕ್ಸಿಜನ್ ಕಂಟೇನರ್ ಗಳನ್ನು ಏರ್​ ಲಿಫ್ಟ್ ಮಾಡಲಿದೆ. ಆಕ್ಸಿಜನ್  ಪೂರೈಕೆ ಮಾಡಲು  ವಾಯುಪಡೆ ವಿಮಾನ ಬಳಸಲಾಗುತ್ತಿದೆ. ಗೃಹ ಸಚಿವಾಲಯವು ಇದರ ಉಸ್ತುವಾರಿ ವಹಿಸಿದೆ ಎಂದು ಗೃಹ ಇಲಾಖೆಯ ವಕ್ತಾರರು ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ: ಚಾಮರಾಜನಗರ ದುರಂತ: ಎಚ್ಚೆತ್ತ ಸರ್ಕಾರದಿಂದ ಆಕ್ಸಿಜನ್ ಪೂರೈಕೆ ಬಗ್ಗೆ ಮಹತ್ವದ ಆದೇಶ

ತೆಲಂಗಾಣ: ಹೈದರಾಬಾದ್‌ನಿಂದ ಒಡಿಶಾಗೆ ಆಕ್ಸಿಜನ್ ಟ್ಯಾಂಕ್ ಏರ್​ಲಿಫ್ಟ್ ಮಾಡಿದ ಭಾರತೀಯ ವಾಯುಪಡೆ

(COVID 19 crisis in the country India Air Force C-17 aircraft Airlifts Oxygen Containers From Germany UK)

Published On - 3:19 pm, Mon, 3 May 21

Follow Us
Rashmi Kallakatta
Rashmi Kallakatta

ಊರು ಕಾಸರಗೋಡು. ಓದಿದ್ದು ಇಂಜಿನಿಯರಿಂಗ್, ಪಬ್ಲಿಕ್ ಅಡ್ಮಿನಿಸ್ಟ್ರೇಷನ್ ಮತ್ತು ಇಂಗ್ಲಿಷ್ ಸ್ನಾತಕೋತ್ತರ ಪದವಿ. ಕನ್ನಡಪ್ರಭ, ಪ್ರಜಾವಾಣಿ ಡಿಜಿಟಲ್ ಮತ್ತು ಪ್ರಿಂಟ್ ವಿಭಾಗದಲ್ಲಿ ಕೆಲಸದ ಅನುಭವ. ಬ್ಲಾಗರ್, ಸಾಹಿತ್ಯ ಪ್ರೇಮಿ. ಇಲ್ಲಿವರೆಗೆ 2 ಪುಸ್ತಕಗಳು ಪ್ರಕಟವಾಗಿವೆ. ಕಲೆ,ಸಾಹಿತ್ಯ,ತಂತ್ರಜ್ಞಾನ,ಸಂದರ್ಶನ, ಫ್ಯಾಕ್ಟ್ ಚೆಕಿಂಗ್ ಆಸಕ್ತಿಕರ ವಿಷಯಗಳು. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷ ಅನುಭವ

Read More
ಐಪಿಎಲ್‌ನಲ್ಲಿ ಇತಿಹಾಸ ನಿರ್ಮಿಸಿದ ಸಾಯಿ ಸುದರ್ಶನ್
ಐಪಿಎಲ್‌ನಲ್ಲಿ ಇತಿಹಾಸ ನಿರ್ಮಿಸಿದ ಸಾಯಿ ಸುದರ್ಶನ್
ಓಡಿಹೋಗುತ್ತಾಳೆಂದು ಹೆಂಡತಿಯನ್ನು ಕಟ್ಟಿಹಾಕಿದ ಗಂಡ!
ಓಡಿಹೋಗುತ್ತಾಳೆಂದು ಹೆಂಡತಿಯನ್ನು ಕಟ್ಟಿಹಾಕಿದ ಗಂಡ!
ಬುಡಸಮೇತ ರಸ್ತೆ ಮೇಲೆ ಉರುಳಿಬಿದ್ದ ಬೃಹತ್​ ಮರ: ಶಂಕರಮಠ ರಸ್ತೆ ಬಂದ್!
ಬುಡಸಮೇತ ರಸ್ತೆ ಮೇಲೆ ಉರುಳಿಬಿದ್ದ ಬೃಹತ್​ ಮರ: ಶಂಕರಮಠ ರಸ್ತೆ ಬಂದ್!
ಶುಭ್​ಮನ್ ಗಿಲ್ ಸುನಾಮಿಗೆ ಸೃಷ್ಟಿಯಾದ ದಾಖಲೆಗಳಿವು
ಶುಭ್​ಮನ್ ಗಿಲ್ ಸುನಾಮಿಗೆ ಸೃಷ್ಟಿಯಾದ ದಾಖಲೆಗಳಿವು
ಬೆಂಗಳೂರಿನಲ್ಲಿ ಆಲಿಕಲ್ಲು ಮಳೆ ಆರ್ಭಟ: ಹತ್ತಾರು ಅವಾಂತರ; ಮರಗಳು ಧರೆಗೆ!
ಬೆಂಗಳೂರಿನಲ್ಲಿ ಆಲಿಕಲ್ಲು ಮಳೆ ಆರ್ಭಟ: ಹತ್ತಾರು ಅವಾಂತರ; ಮರಗಳು ಧರೆಗೆ!
‘ಡ್ರ್ಯಾಗನ್’ ಟೀಸರ್: ಚಿತ್ರಮಂದಿರದಲ್ಲಿ ಸಂಭ್ರಮಿಸಿದ ಪ್ರಶಾಂತ್ ನೀಲ್ ಪತ್ನಿ
‘ಡ್ರ್ಯಾಗನ್’ ಟೀಸರ್: ಚಿತ್ರಮಂದಿರದಲ್ಲಿ ಸಂಭ್ರಮಿಸಿದ ಪ್ರಶಾಂತ್ ನೀಲ್ ಪತ್ನಿ
‘ಧುರಂಧರ್’ ಸಿನಿಮಾಕ್ಕೆ ಎದುರಾಗಿರುವ ಕಾನೂನು ಸಂಕಷ್ಟ ಏನು: ವಿಡಿಯೋ
‘ಧುರಂಧರ್’ ಸಿನಿಮಾಕ್ಕೆ ಎದುರಾಗಿರುವ ಕಾನೂನು ಸಂಕಷ್ಟ ಏನು: ವಿಡಿಯೋ
ಮೆಡಿಕಲ್ ಸೀಟ್ ಪರೀಕ್ಷೆ ನಡೆಸಲು ರಾಜ್ಯ ಸರ್ಕಾರಗಳಿಗೆ ಕೊಡಿ: ಸಿಎಂ ಆಗ್ರಹ
ಮೆಡಿಕಲ್ ಸೀಟ್ ಪರೀಕ್ಷೆ ನಡೆಸಲು ರಾಜ್ಯ ಸರ್ಕಾರಗಳಿಗೆ ಕೊಡಿ: ಸಿಎಂ ಆಗ್ರಹ
ಕಾಂಗ್ರೆಸ್ ಯುವ ಕಾರ್ಯಕರ್ತರು ಪೊಲೀಸ್ ವಶಕ್ಕೆ, ನಾಯಕರು ಹೋಟೆಲ್​​ಗೆ​
ಕಾಂಗ್ರೆಸ್ ಯುವ ಕಾರ್ಯಕರ್ತರು ಪೊಲೀಸ್ ವಶಕ್ಕೆ, ನಾಯಕರು ಹೋಟೆಲ್​​ಗೆ​
ಕಾಂಗ್ರೆಸ್ ನಾಯಕರಿಂದ ಐ ಆ್ಯಮ್ ಕೊಕ್ರೋಚ್ ಟೀ ಶರ್ಟ್ ಬಿಡುಗಡೆ
ಕಾಂಗ್ರೆಸ್ ನಾಯಕರಿಂದ ಐ ಆ್ಯಮ್ ಕೊಕ್ರೋಚ್ ಟೀ ಶರ್ಟ್ ಬಿಡುಗಡೆ