AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಲೈನ್​ನಿಂದ ಬಾಯಿ ಮುಕ್ಕಳಿಸಿ ಆರ್​ಟಿಪಿಸಿಆರ್ ಪರೀಕ್ಷೆ; ವಿಧಾನ ಯಾವುದು? ಹೇಗೆ?

Saline Gargle RT-PCR Testing: ಸಲೈನ್ ಬಾಯಿ ಮುಕ್ಕಳಿಸುವ ವಿಧಾನವು ಸುಲಭ ಮತ್ತು ಕಡಿಮೆ ವೆಚ್ಚದ್ದಾಗಿದೆ. ಇದು ಸರಳ, ವೇಗದ, ರೋಗಿ ಸ್ನೇಹಿ ಮತ್ತು ಆರಾಮದಾಯಕವಾಗಿದೆ. ಇದು ತ್ವರಿತ ಫಲಿತಾಂಶಗಳನ್ನು ನೀಡುತ್ತದೆ

ಸಲೈನ್​ನಿಂದ ಬಾಯಿ ಮುಕ್ಕಳಿಸಿ ಆರ್​ಟಿಪಿಸಿಆರ್ ಪರೀಕ್ಷೆ; ವಿಧಾನ ಯಾವುದು? ಹೇಗೆ?
ಪ್ರಾತಿನಿಧಿಕ ಚಿತ್ರ
ರಶ್ಮಿ ಕಲ್ಲಕಟ್ಟ
|

Updated on:May 28, 2021 | 6:04 PM

Share

ಕೌನ್ಸಿಲ್ ಆಫ್ ಸೈಂಟಿಫಿಕ್ ಅಂಡ್ ಇಂಡಸ್ಟ್ರಿಯಲ್ ರಿಸರ್ಚ್ (CSIR) ಅಡಿಯಲ್ಲಿ ನಾಗ್ಪುರ ಮೂಲದ ರಾಷ್ಟ್ರೀಯ ಪರಿಸರ ಎಂಜಿನಿಯರಿಂಗ್ ಸಂಶೋಧನಾ ಸಂಸ್ಥೆಯ (NEERI) ವಿಜ್ಞಾನಿಗಳು ಕೊವಿಡ್ -19 ಮಾದರಿಗಳನ್ನು ಪರೀಕ್ಷಿಸಲು ‘Saline Gargle RT-PCR Method’ ‘ ಪರಿಚಯಿಸಿದ್ದಾರೆ. ಮೂಗಿನ ಮತ್ತು ಗಂಟಲಿನ ಸ್ವ್ಯಾಬ್‌ಗಳನ್ನು ನೀಡಲು ಹೆದರುವವರಿಗೆ ಈ ಪರೀಕ್ಷೆಯು ಸಮಾಧಾನಕರವಾಗಿರುತ್ತದೆ.

ಏನಿದರ ವೈಶಿಷ್ಟ್ಯ? ಸಲೈನ್  (ಲವಣಯುತ್ತ ದ್ರಾವಕ) ಬಾಯಿ ಮುಕ್ಕಳಿಸುವ ವಿಧಾನವು ಸುಲಭ ಮತ್ತು ಕಡಿಮೆ ವೆಚ್ಚದ್ದಾಗಿದೆ. ಇದು ಸರಳ, ವೇಗದ, ರೋಗಿ ಸ್ನೇಹಿ ಮತ್ತು ಆರಾಮದಾಯಕವಾಗಿದೆ. ಇದು ತ್ವರಿತ ಫಲಿತಾಂಶಗಳನ್ನು ನೀಡುತ್ತದೆ ಮತ್ತು ಕನಿಷ್ಠ ಮೂಲಸೌಕರ್ಯ ಅಗತ್ಯತೆಗಳಿರುವ ಗ್ರಾಮೀಣ ಮತ್ತು ಬುಡಕಟ್ಟು ಪ್ರದೇಶಗಳಿಗೆ ಸೂಕ್ತವಾಗಿರುತ್ತದೆ. ಪಿಇಬಿಯೊಂದಿಗೆ ಮಾತನಾಡಿದ, ಎನ್ಇಇಆರ್ ಐ ಪರಿಸರ ವೈರಾಲಜಿ ವಿಭಾಗದ ಹಿರಿಯ ವಿಜ್ಞಾನಿ ಡಾ.ಕೃಷ್ಣ ಖೈರ್ನರ್ “ಸ್ವ್ಯಾಬ್ ಸಂಗ್ರಹ ವಿಧಾನಕ್ಕೆ ಸಮಯ ಬೇಕಾಗುತ್ತದೆ. ಇದಲ್ಲದೆ, ಇದು ಆಕ್ರಮಣಕಾರಿ ತಂತ್ರವಾದ್ದರಿಂದ, ಇದು ರೋಗಿಗಳಿಗೆ ಸ್ವಲ್ಪ ಅನಾನುಕೂಲವಾಗಿದೆ. ಸಂಗ್ರಹ ಕೇಂದ್ರಕ್ಕೆ ಮಾದರಿಯನ್ನು ಸಾಗಿಸುವಾಗಲೂ ಸ್ವಲ್ಪ ಸಮಯ ಕಳೆದುಹೋಗುತ್ತದೆ. ಮತ್ತೊಂದೆಡೆ, ಸಲೈನ್ ಗಾರ್ಗ್ಲ್ ಆರ್ ಟಿ-ಪಿಸಿಆರ್ ವಿಧಾನವು ತ್ವರಿತ, ಆರಾಮದಾಯಕ ಮತ್ತು ರೋಗಿಯ ಸ್ನೇಹಿಯಾಗಿದೆ. ಸ್ಯಾಂಪ್ಲಿಂಗ್ ಅನ್ನು ತ್ವರಿತವಾಗಿ ಮಾಡಲಾಗುತ್ತದೆ ಮತ್ತು 3 ಗಂಟೆಗಳಲ್ಲಿ ಫಲಿತಾಂಶಗಳು ಸಿಗುತ್ತದೆ.

ಇದು ಹೇಗೆ ಕಾರ್ಯವೆಸಗುತ್ತದೆ ? ಈ ವಿಧಾನವು ಸರಳವಾಗಿದ್ದು, ರೋಗಿಯು ಸ್ವತಃ ಮಾದರಿಯನ್ನು ಸಂಗ್ರಹಿಸಬಹುದು ಎಂದು ಡಾ ಖೈರ್ನರ್ ವಿವರಿಸುತ್ತಾರೆ. “ಸಂಗ್ರಹ ವಿಧಾನಗಳಿಗೆ ನಾಸೊಫಾರ್ಂಜಿಯಲ್ ಮತ್ತು ಒರೊಫಾರ್ಂಜಿಯಲ್ ಸ್ವ್ಯಾಬ್ ಸಂಗ್ರಹಕ್ಕೆ ತಾಂತ್ರಿಕ ಪರಿಣತಿಯ ಅಗತ್ಯವಿರುತ್ತದೆ; ಅವು ಸಮಯ ತೆಗೆದುಕೊಳ್ಳುವವು. ಆದರೆ ಸಲೈನ್ ಗಾರ್ಗ್ಲ್ ಆರ್​ಟಿ-ಪಿಸಿಆರ್ ವಿಧಾನವು ಲವಣಯುಕ್ತ ದ್ರಾವಣದಿಂದ ತುಂಬಿದ ಸರಳ ಸಂಗ್ರಹ ಟ್ಯೂಬ್ ಅನ್ನು ಬಳಸುತ್ತದೆ. ರೋಗಿಯು ದ್ರಾವಣವನ್ನು ಬಾಯಲ್ಲಿ ಮುಕ್ಕಳಿಸಿ ಅದನ್ನು ಕೊಳವೆಯೊಳಗೆ ಉಗುಳಬೇಕಿದೆ “ಎಂದು ಅವರು ಹೇಳಿದರು.

“ಸಂಗ್ರಹಣಾ ಟ್ಯೂಬ್‌ನಲ್ಲಿನ ಈ ಮಾದರಿಯನ್ನು ಪ್ರಯೋಗಾಲಯಕ್ಕೆ ಕೊಂಡೊಯ್ಯಲಾಗುತ್ತದೆ, ಅಲ್ಲಿ NEERI ಸಿದ್ಧಪಡಿಸಿದ ವಿಶೇಷ ಬಫರ್ ದ್ರಾವಣದಲ್ಲಿ ಕೋಣೆಯ ಉಷ್ಣಾಂಶದಲ್ಲಿಡಲಾಗುತ್ತದೆ. ಈ ದ್ರಾವಣವನ್ನು ಬಿಸಿ ಮಾಡಿದಾಗ ಆರ್‌ಎನ್‌ಎ ಟೆಂಪ್ಲೇಟ್ ಉತ್ಪತ್ತಿಯಾಗುತ್ತದೆ, ಇದನ್ನು ರಿವರ್ಸ್ ಟ್ರಾನ್ಸ್‌ಕ್ರಿಪ್ಷನ್ ಪಾಲಿಮರೇಸ್ ಚೈನ್ ರಿಯಾಕ್ಷನ್ ಗಾಗಿ ಮತ್ತಷ್ಟು ಸಂಸ್ಕರಿಸಲಾಗುತ್ತದೆ (ಆರ್​ಟಿ-ಪಿಸಿಆರ್). ಮಾದರಿಯನ್ನು ಸಂಗ್ರಹಿಸುವ ಮತ್ತು ಸಂಸ್ಕರಿಸುವ ಈ ನಿರ್ದಿಷ್ಟ ವಿಧಾನವು ಆರ್‌ಎನ್‌ಎ ಹೊರತೆಗೆಯುವಿಕೆಯ ದುಬಾರಿ ಮೂಲಸೌಕರ್ಯದ ಅಗತ್ಯವನ್ನು ಉಳಿಸಲು ನಮಗೆ ಅನುವು ಮಾಡಿಕೊಡುತ್ತದೆ. ಈ ವಿಧಾನವು ಸ್ವಯಂ-ಮಾದರಿಯನ್ನು ಅನುಮತಿಸುವುದರಿಂದ ಜನರು ತಮ್ಮನ್ನು ತಾವು ಪರೀಕ್ಷಿಸಿಕೊಳ್ಳಬಹುದು, ”ಎಂದು ಅವರು ಹೇಳಿದರು. ತ್ಯಾಜ್ಯ ಉತ್ಪಾದನೆಯನ್ನು ಕಡಿಮೆಗೊಳಿಸುವುದರಿಂದ ಈ ವಿಧಾನವು ಪರಿಸರ ಸ್ನೇಹಿಯಾಗಿದೆ.

ಇದನ್ನೂ ಓದಿ:  ಅಪೊಲೊ ಆಸ್ಪತ್ರೆಯಲ್ಲಿಯೂ ಕೊವಿಡ್​ಗೆ ಆ್ಯಂಟಿಬಾಡಿ ಕಾಕ್‌ಟೇಲ್ ಚಿಕಿತ್ಸೆ ಆರಂಭ

Published On - 6:02 pm, Fri, 28 May 21

Follow Us
Rashmi Kallakatta
Rashmi Kallakatta

ಊರು ಕಾಸರಗೋಡು. ಓದಿದ್ದು ಇಂಜಿನಿಯರಿಂಗ್, ಪಬ್ಲಿಕ್ ಅಡ್ಮಿನಿಸ್ಟ್ರೇಷನ್ ಮತ್ತು ಇಂಗ್ಲಿಷ್ ಸ್ನಾತಕೋತ್ತರ ಪದವಿ. ಕನ್ನಡಪ್ರಭ, ಪ್ರಜಾವಾಣಿ ಡಿಜಿಟಲ್ ಮತ್ತು ಪ್ರಿಂಟ್ ವಿಭಾಗದಲ್ಲಿ ಕೆಲಸದ ಅನುಭವ. ಬ್ಲಾಗರ್, ಸಾಹಿತ್ಯ ಪ್ರೇಮಿ. ಇಲ್ಲಿವರೆಗೆ 2 ಪುಸ್ತಕಗಳು ಪ್ರಕಟವಾಗಿವೆ. ಕಲೆ,ಸಾಹಿತ್ಯ,ತಂತ್ರಜ್ಞಾನ,ಸಂದರ್ಶನ, ಫ್ಯಾಕ್ಟ್ ಚೆಕಿಂಗ್ ಆಸಕ್ತಿಕರ ವಿಷಯಗಳು. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷ ಅನುಭವ

Read More
ರಜನಿ-ಕಮಲ್ ಸಿನಿಮಾದಲ್ಲಿ ನಟಿಸಲು ತ್ರಿಶಾಗೆ 12 ಕೋಟಿ ರೂಪಾಯಿ ಆಫರ್?
ರಜನಿ-ಕಮಲ್ ಸಿನಿಮಾದಲ್ಲಿ ನಟಿಸಲು ತ್ರಿಶಾಗೆ 12 ಕೋಟಿ ರೂಪಾಯಿ ಆಫರ್?
ಕಿಡ್ನಿ ಆರೋಗ್ಯವಾಗಿರಬೇಕು ಅಂದ್ರೆ ಈ ಸಲಹೆಗಳನ್ನು ತಪ್ಪದೆ ಪಾಲಿಸಬೇಕು
ಕಿಡ್ನಿ ಆರೋಗ್ಯವಾಗಿರಬೇಕು ಅಂದ್ರೆ ಈ ಸಲಹೆಗಳನ್ನು ತಪ್ಪದೆ ಪಾಲಿಸಬೇಕು
ಶೇ. 55 ಅಂಕ ಪಡೆದ ಮಗನಿಗೆ ಅಪ್ಪ-ಅಮ್ಮ ಮಾಡಿದ್ದೇನು?
ಶೇ. 55 ಅಂಕ ಪಡೆದ ಮಗನಿಗೆ ಅಪ್ಪ-ಅಮ್ಮ ಮಾಡಿದ್ದೇನು?
‘ಪೆದ್ದಿ’ ಚಿತ್ರದಲ್ಲಿ ಶಿವರಾಜ್​ಕುಮಾರ್ ಗತ್ತು ನೋಡಿ; ಮೇಕಿಂಗ್ ವಿಡಿಯೋ
‘ಪೆದ್ದಿ’ ಚಿತ್ರದಲ್ಲಿ ಶಿವರಾಜ್​ಕುಮಾರ್ ಗತ್ತು ನೋಡಿ; ಮೇಕಿಂಗ್ ವಿಡಿಯೋ
ಮಂಗಳೂರು: ವಿಮಾನಗಳನ್ನ ಆಕಾಶದಲ್ಲೇ ಅಲೆದಾಡಿಸುತ್ತಿರುವ ಮಳೆರಾಯ!
ಮಂಗಳೂರು: ವಿಮಾನಗಳನ್ನ ಆಕಾಶದಲ್ಲೇ ಅಲೆದಾಡಿಸುತ್ತಿರುವ ಮಳೆರಾಯ!
‘ಲವ್ ಮಾಕ್ಟೆಲ್’ ಸೆಟ್​ನಲ್ಲಿ ದಿಲೀಪ್: ವಿಡಿಯೋ ಹಂಚಿಕೊಂಡ ಡಾರ್ಲಿಂಗ್ ಕೃಷ್ಣ
‘ಲವ್ ಮಾಕ್ಟೆಲ್’ ಸೆಟ್​ನಲ್ಲಿ ದಿಲೀಪ್: ವಿಡಿಯೋ ಹಂಚಿಕೊಂಡ ಡಾರ್ಲಿಂಗ್ ಕೃಷ್ಣ
ಮಧ್ಯಪ್ರದೇಶದ ದೇವಾಸ್ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ; ಮೂವರು ಸಾವು
ಮಧ್ಯಪ್ರದೇಶದ ದೇವಾಸ್ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ; ಮೂವರು ಸಾವು
ಕೇಸರಿ ಶಾಲು ನಿಷೇಧಿಸುವ ಅಧಿಕಾರ ಕೊಟ್ಟಿದ್ಯಾರು? ಪ್ರಲ್ಹಾದ್​ ಜೋಶಿ ಕಿಡಿ
ಕೇಸರಿ ಶಾಲು ನಿಷೇಧಿಸುವ ಅಧಿಕಾರ ಕೊಟ್ಟಿದ್ಯಾರು? ಪ್ರಲ್ಹಾದ್​ ಜೋಶಿ ಕಿಡಿ
ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆ ಮೇಲೂ SIR ನೆರಳು!
ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆ ಮೇಲೂ SIR ನೆರಳು!
ಯುವಕರಿಂದ ಸಮುದ್ರದಲ್ಲಿ ಮುಳುಗುತ್ತಿದ್ದ ಇಬ್ಬರು ಪ್ರವಾಸಿಗರ ರಕ್ಷಣೆ
ಯುವಕರಿಂದ ಸಮುದ್ರದಲ್ಲಿ ಮುಳುಗುತ್ತಿದ್ದ ಇಬ್ಬರು ಪ್ರವಾಸಿಗರ ರಕ್ಷಣೆ