AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಡ್ರ್ಯಾಗನ್​ಫ್ಲೈ ಕ್ಲಬ್ ಮೇಲೆ ಖಾಕಿ ದಾಳಿ: ಕ್ರಿಕೆಟಿಗ​ ಸುರೇಶ್​ ರೈನಾ ಸೇರಿ ಅನೇಕ ಸೆಲೆಬ್ರಿಟಿಗಳು ಅರೆಸ್ಟ್​!

ಅಂಧೇರಿ ಸಮೀಪ ಇರುವ ಜೆಡಬ್ಲ್ಯೂ ಮ್ಯಾರಿಯಟ್ ಬಳಿ ಈ ಕ್ಲಬ್​ ಇದೆ. ಮುಂಜಾನೆ 2:30ರ ಸುಮಾರಿಗೆ ಈ ಬಂಧನ ನಡೆದಿದೆ. ಸುರೇಶ್​ ರೈನಾ ಮಾತ್ರವಲ್ಲದೇ ಇನ್ನೂ ಕೆಲಸ ಸೆಲಬ್ರೆಟಿಗಳು ಈ ಕ್ಲಬ್​ನಲ್ಲಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಡ್ರ್ಯಾಗನ್​ಫ್ಲೈ ಕ್ಲಬ್ ಮೇಲೆ ಖಾಕಿ ದಾಳಿ: ಕ್ರಿಕೆಟಿಗ​ ಸುರೇಶ್​ ರೈನಾ ಸೇರಿ ಅನೇಕ ಸೆಲೆಬ್ರಿಟಿಗಳು ಅರೆಸ್ಟ್​!
ಸುರೇಶ್​ ರೈನಾ
ರಾಜೇಶ್ ದುಗ್ಗುಮನೆ
|

Updated on:Dec 22, 2020 | 3:04 PM

Share

ಮುಂಬೈ: ಕೊರೊನಾವೈರಸ್​ ನಿಯಮ ಪಾಲನೆ ಮಾಡದ ಟೀಂ ಇಂಡಿಯಾ ಕ್ರಿಕೆಟಿಗ​ ಸುರೇಶ್​ ರೈನಾ ಸೇರಿ ಅನೇಕರನ್ನು ಪೊಲೀಸರು ಇಂದು ಮುಂಜಾನೆ ಬಂಧಿಸಿದ್ದಾರೆ.  ಅರೆಸ್ಟ್​ ನಂತರ ಸುರೇಶ್​ ರೈನಾನ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ.

ಮುಂಬೈ ವಿಮಾನ ನಿಲ್ದಾಣ ಸಮೀಪ ಇರುವ ಡ್ರ್ಯಾಗನ್​ಫ್ಲೈ ಕ್ಲಬ್​ನಲ್ಲಿ ಸುರೇಶ್​ ರೈನಾ ಸೇರಿ ಬಹಳಷ್ಟು ಮಂದಿ ತಡರಾತ್ರಿ ಪಾರ್ಟಿ ಮಾಡುತ್ತಿದ್ದರು. ಅಂಧೇರಿ ಸಮೀಪ ಇರುವ JW ಮ್ಯಾರಿಯಟ್ ಹೋಟೆಲ್​ ಬಳಿ ಈ ಕ್ಲಬ್​ ಇದೆ. ಸರ್ಕಾರ ನಿಗದಿಪಡಿಸಿರುವ ಅವಧಿಗೂ ಮೀರಿ ಇವರು ಪಾರ್ಟಿ ಮಾಡುತ್ತಿದ್ದು ಜೊತೆಗೆ ಕೊರೊನಾ ನಿಯಮಗಳನ್ನು ಗಾಳಿಗೆ ತೂರಿದ್ದರು ಎನ್ನಲಾಗಿದೆ.  ಹೀಗಾಗಿ, ರೈನಾ ಸೇರಿದಂತೆ ಎಲ್ಲರ ಬಂಧನವಾಗಿದೆ.

ಬಂಧಿತರಲ್ಲಿ ಗಾಯಕ ಗುರು ರಾಂಧವಾ ಮತ್ತು ಬಾಲಿವುಡ್​ ನಟ ಹೃತಿಕ್​ ರೋಷನ್​ ಮಾಜಿ ಪತ್ನಿ ಸುಸೇನ್ ಖಾನ್ ಕೂಡ ಇದ್ದಾರೆ. ಹೋಟೆಲ್​ನ 7 ಸಿಬ್ಬಂದಿ ಸೇರಿ ಒಟ್ಟು 34 ಜನರು ಅರೆಸ್ಟ್​ ಆಗಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.

ಮುಂಜಾನೆ 2:30ರ ಸುಮಾರಿಗೆ ಎಲ್ಲರ ಬಂಧನವಾಗಿದ್ದು ಈ ಬಗ್ಗೆ ಮಾಹಿತಿ ನೀಡಿರುವ ಪೊಲೀಸರು, ಬೆಳಗ್ಗೆ  2:30ರವರೆಗೆ ಕ್ಲಬ್​ ನಡೆಸಲು ಅನುಮತಿ ಇಲ್ಲ. ಆದರೂ, ಕ್ಲಬ್​ ಓಪನ್​ ಇತ್ತು. ಜೊತೆಗೆ, ಸಾಮಾಜಿಕ ಅಂತರ ಕೂಡ ಕಾಪಾಡಿಕೊಳ್ಳಲಾಗಿರಲಿಲ್ಲ, ಮಾಸ್ಕ್​ ಧರಿಸಿರಲಿಲ್ಲ. ಹೀಗಾಗಿ, ಕ್ಲಬ್​ನಲ್ಲಿ ಇದ್ದವರನ್ನು ಬಂಧಿಸಲಾಗಿದೆ, ಎಂದು ಮಾಹಿತಿ ನೀಡಿದ್ದಾರೆ.

ಆಗಸ್ಟ್ ತಿಂಗಳಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್​ನಿಂದ ರೈನಾ ನಿವೃತ್ತಿ ಘೋಷಣೆ ಮಾಡಿದ್ದರು. ಈ ಬಾರಿಯ IPL​ನಲ್ಲಿ ಚೆನ್ನೈ ತಂಡವನ್ನು ಅವರು ಪ್ರತಿನಿಧಿಸಬೇಕಿತ್ತು. ಆದರೆ, ವೈಯಕ್ತಿಕ ಕಾರಣ ನೀಡಿ ಭಾರತಕ್ಕೆ ಹಿಂದುರಿಗಿದ್ದರು. ಜನವರಿ 10ರಿಂದ ಆರಂಭಗೊಳ್ಳಲಿರುವ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಉತ್ತರ ಪ್ರದೇಶವನ್ನು ರೈನಾ ಪ್ರತಿನಿಧಿಸಲಿದ್ದಾರೆ.

ಸಿಎಸ್​ಕೆ ತಂಡಕ್ಕೆ ಟ್ವೀಟ್ ಮೂಲಕ ಶುಭ ಕೋರಿದ ಸುರೇಶ್ ರೈನಾ

Published On - 1:49 pm, Tue, 22 December 20

Follow Us
‘ನನಗೆ 2 ಸೆಕೆಂಡ್ ಸಾಕು ಕಾಂಗ್ರೆಸ್ಸನ್ನು ಸೋಲಿಸಲು’: ಇಕ್ಬಾಲ್ ಅನ್ಸಾರಿ
‘ನನಗೆ 2 ಸೆಕೆಂಡ್ ಸಾಕು ಕಾಂಗ್ರೆಸ್ಸನ್ನು ಸೋಲಿಸಲು’: ಇಕ್ಬಾಲ್ ಅನ್ಸಾರಿ
ಅಂಬರೀಷ್ ಊರಲ್ಲಿ ಶೂಟ್ ಆಗಿದೆ ‘ಸರ್ಕಾರಿ ನ್ಯಾಯಬೆಲೆ ಅಂಗಡಿ’ ಚಿತ್ರ
ಅಂಬರೀಷ್ ಊರಲ್ಲಿ ಶೂಟ್ ಆಗಿದೆ ‘ಸರ್ಕಾರಿ ನ್ಯಾಯಬೆಲೆ ಅಂಗಡಿ’ ಚಿತ್ರ
ಜೋಳ ತಿಂದು ಅಡ್ಡಾದಿಡ್ಡಿ ಓಡಿದ ಆನೆ ಮರಿ
ಜೋಳ ತಿಂದು ಅಡ್ಡಾದಿಡ್ಡಿ ಓಡಿದ ಆನೆ ಮರಿ
ದಕ್ಷಿಣ ಕನ್ನಡದಲ್ಲಿ ಭಾರಿ ಮಳೆ: ಶಾಲೆ, ಕಾಲೇಜುಗಳಿಗೆ ರಜೆ
ದಕ್ಷಿಣ ಕನ್ನಡದಲ್ಲಿ ಭಾರಿ ಮಳೆ: ಶಾಲೆ, ಕಾಲೇಜುಗಳಿಗೆ ರಜೆ
ಮೇಷಕ್ಕೆ ಹೂಡಿಕೆಯಲ್ಲಿ ಲಾಭ, ವೃಷಭಕ್ಕೆ ಉದ್ಯೋಗದಲ್ಲಿ ಸ್ಥಾನ ಪಲ್ಲಟದ ಯೋಗ
ಮೇಷಕ್ಕೆ ಹೂಡಿಕೆಯಲ್ಲಿ ಲಾಭ, ವೃಷಭಕ್ಕೆ ಉದ್ಯೋಗದಲ್ಲಿ ಸ್ಥಾನ ಪಲ್ಲಟದ ಯೋಗ
ಕುಮಾರ್ ಬಂಗಾರಪ್ಪ ಹೊಗಳಿಕೆ ಮಾತು ಕೇಳಿ ತಬ್ಬಿಕೊಂಡ ರಾಗಿಣಿ ದ್ವಿವೇದಿ
ಕುಮಾರ್ ಬಂಗಾರಪ್ಪ ಹೊಗಳಿಕೆ ಮಾತು ಕೇಳಿ ತಬ್ಬಿಕೊಂಡ ರಾಗಿಣಿ ದ್ವಿವೇದಿ
ಕೊಲೆ ಆರೋಪಿಗಳ ಪರೇಡ್; ಪೊಲೀಸರೆದುರೇ ಹಂತಕರಿಗೆ ಚಪ್ಪಲಿಯಲ್ಲಿ ಹೊಡೆದ ಮಹಿಳೆ
ಕೊಲೆ ಆರೋಪಿಗಳ ಪರೇಡ್; ಪೊಲೀಸರೆದುರೇ ಹಂತಕರಿಗೆ ಚಪ್ಪಲಿಯಲ್ಲಿ ಹೊಡೆದ ಮಹಿಳೆ
ನಟಿ ಪ್ರಿಯಾಂಕಾ ಉಪೇಂದ್ರ 50ನೇ ಸಿನಿಮಾ ‘ಡಿಟೆಕ್ಟಿವ್ ತೀಷ್ಣ’; ಏನಿದರ ಕಥೆ?
ನಟಿ ಪ್ರಿಯಾಂಕಾ ಉಪೇಂದ್ರ 50ನೇ ಸಿನಿಮಾ ‘ಡಿಟೆಕ್ಟಿವ್ ತೀಷ್ಣ’; ಏನಿದರ ಕಥೆ?
ಬಸ್ ಮೇಲೆ ಬಿದ್ದ ಬೃಹತ್ ಮರ; ಯುಕೆಜಿ ಬಾಲಕಿ ಚಿರನ್ವಿ ಸಾವು
ಬಸ್ ಮೇಲೆ ಬಿದ್ದ ಬೃಹತ್ ಮರ; ಯುಕೆಜಿ ಬಾಲಕಿ ಚಿರನ್ವಿ ಸಾವು
'ಮೊಟ್ಟೆ ಹೊಡೆಯುವ ಸಂಸ್ಕೃತಿ ಶುರು ಮಾಡಿದ್ದೇ ಬಿಜೆಪಿಯವರು': ಹರಿಪ್ರಸಾದ್
'ಮೊಟ್ಟೆ ಹೊಡೆಯುವ ಸಂಸ್ಕೃತಿ ಶುರು ಮಾಡಿದ್ದೇ ಬಿಜೆಪಿಯವರು': ಹರಿಪ್ರಸಾದ್