ರಾಜಪ್ರಭುತ್ವ ಪರ ಘರ್ಷಣೆಗಳ ನಂತರ ನೇಪಾಳದ ಕಠ್ಮಂಡುವಿನಲ್ಲಿ ಕರ್ಫ್ಯೂ ರದ್ದು; 100ಕ್ಕೂ ಹೆಚ್ಚು ಜನರ ಬಂಧನ

|

Updated on: Mar 29, 2025 | 2:47 PM

ನೇಪಾಳದ ರಾಜಧಾನಿಯ ಟಿಂಕುನೆ ಪ್ರದೇಶದಲ್ಲಿ ರಾಜಪ್ರಭುತ್ವ ಪರ ಪ್ರತಿಭಟನಾಕಾರರು ಕಲ್ಲು ತೂರಾಟ ಮಾಡಿ, ರಾಜಕೀಯ ಪಕ್ಷದ ಕಚೇರಿಯ ಮೇಲೆ ದಾಳಿ ನಡೆಸಿ, ವಾಹನಗಳಿಗೆ ಬೆಂಕಿ ಹಚ್ಚಿ ಅಂಗಡಿಗಳನ್ನು ಲೂಟಿ ಮಾಡಿದ ನಂತರ ಶುಕ್ರವಾರ ಕಠ್ಮಂಡುವಿನ ಕೆಲವು ಭಾಗಗಳಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು. ಈ ಹಿನ್ನೆಲೆಯಲ್ಲಿ ಕರ್ಫ್ಯೂ ಜಾರಿ ಮಾಡಲಾಗಿತ್ತು. ಈ ಪ್ರತಿಭಟನೆಗಳ ಸಮಯದಲ್ಲಿ 14 ಕಟ್ಟಡಗಳಿಗೆ ಬೆಂಕಿ ಹಚ್ಚಲಾಯಿತು ಮತ್ತು ಇತರ 9 ಕಟ್ಟಡಗಳನ್ನು ಧ್ವಂಸಗೊಳಿಸಲಾಯಿತು. ಹಾಗೇ, ಪ್ರತಿಭಟನಾಕಾರರು 9 ಸರ್ಕಾರಿ ವಾಹನಗಳನ್ನು ಸುಟ್ಟುಹಾಕಿದರು ಮತ್ತು 6 ಖಾಸಗಿ ವಾಹನಗಳಿಗೆ ಹಾನಿ ಮಾಡಿದರು.

ರಾಜಪ್ರಭುತ್ವ ಪರ ಘರ್ಷಣೆಗಳ ನಂತರ ನೇಪಾಳದ ಕಠ್ಮಂಡುವಿನಲ್ಲಿ ಕರ್ಫ್ಯೂ ರದ್ದು; 100ಕ್ಕೂ ಹೆಚ್ಚು ಜನರ ಬಂಧನ
Kathmandu
Follow us on

ಕಠ್ಮಂಡು, ಮಾರ್ಚ್ 29: ನೇಪಾಳದ ಕಠ್ಮಂಡುವಿನ ಪೂರ್ವ ಪ್ರದೇಶಗಳಲ್ಲಿ ಭದ್ರತಾ ಪಡೆಗಳು ಮತ್ತು ರಾಜಪ್ರಭುತ್ವ ಪರ ಪ್ರತಿಭಟನಾಕಾರರ ನಡುವಿನ ಹಿಂಸಾತ್ಮಕ ಘರ್ಷಣೆಗಳ ನಂತರ ವಿಧಿಸಲಾಗಿದ್ದ ಕರ್ಫ್ಯೂ ಅನ್ನು ನೇಪಾಳದಲ್ಲಿ ಅಧಿಕಾರಿಗಳು ಇಂದು ತೆಗೆದುಕೊಂಡಿದ್ದಾರೆ. ಟಿಂಕುನೆ ಪ್ರದೇಶದಲ್ಲಿ ಶುಕ್ರವಾರ ಪ್ರಾರಂಭವಾದ ಅಶಾಂತಿ ವ್ಯಾಪಕ ಸಾವುನೋವುಗಳಿಗೆ ಕಾರಣವಾಯಿತು. ಕಠ್ಮಂಡು ವಿಮಾನ ನಿಲ್ದಾಣದ ಬಳಿಯ ಟಿಂಕುನೆ ಪಾರ್ಕ್ ಪ್ರದೇಶದಲ್ಲಿ ಪ್ರತಿಭಟನೆಗಳು ಪ್ರಾರಂಭವಾದವು. ಅಲ್ಲಿ ರಾಜಪ್ರಭುತ್ವ ಪರ ಬೆಂಬಲಿಗರು ಒಟ್ಟುಗೂಡಿದರು. ರಾಜಪ್ರಭುತ್ವದ ಪುನಃಸ್ಥಾಪನೆ ಮತ್ತು ಹಿಂದೂ ಸಾಮ್ರಾಜ್ಯದ ಸ್ಥಾಪನೆಗಾಗಿ ಘೋಷಣೆಗಳನ್ನು ಕೂಗಿದರು. ಪ್ರಜಾಪ್ರಭುತ್ವ ದಿನದಂದು ರಾಜಪ್ರಭುತ್ವವಾದಿಗಳಲ್ಲಿ ಏಕತೆಗಾಗಿ ಮನವಿ ಮಾಡಿದ್ದ ಮಾಜಿ ರಾಜ ಜ್ಞಾನೇಂದ್ರ ಶಾ ಮರಳಬೇಕೆಂದು ಪ್ರತಿಭಟನಾಕಾರರು ಕರೆ ನೀಡಿದರು.

ಶುಕ್ರವಾರ ಮಧ್ಯಾಹ್ನ 3 ಗಂಟೆ ಸುಮಾರಿಗೆ ಪ್ರತಿಭಟನಾಕಾರರು ಗೊತ್ತುಪಡಿಸಿದ ಪ್ರತಿಭಟನಾ ಪ್ರದೇಶವನ್ನು ಮೀರಿ ಚಲಿಸಲು ಪ್ರಯತ್ನಿಸಿದಾಗ ಉದ್ವಿಗ್ನತೆ ಹೆಚ್ಚಾಯಿತು. ಭದ್ರತಾ ಪಡೆಗಳು ಮಧ್ಯಪ್ರವೇಶಿಸಿ ಹಿಂಸಾತ್ಮಕ ಘರ್ಷಣೆಗೆ ಕಾರಣವಾಯಿತು. ಪೊಲೀಸರು ಗುಂಡು ಹಾರಿಸಿದ್ದರಿಂದ ಪ್ರತಿಭಟನಾಕಾರರು ಗಾಯಗೊಂಡರು. ಇದಕ್ಕೆ ಪ್ರತಿಯಾಗಿ, ಪ್ರತಿಭಟನಾಕಾರರು ಬ್ಯಾರಿಕೇಡ್‌ಗಳನ್ನು ಭೇದಿಸಿ ಬೀದಿಗಿಳಿದು, ಕಟ್ಟಡಗಳನ್ನು ಧ್ವಂಸಗೊಳಿಸಿದರು. ವಾಣಿಜ್ಯ ಸಂಕೀರ್ಣ ಮತ್ತು ಖಾಸಗಿ ಸುದ್ದಿ ವಾಹಿನಿ ಕಚೇರಿಗೆ ಬೆಂಕಿ ಹಚ್ಚಿದರು.

ಇದನ್ನೂ ಓದಿ: Bangladesh Crisis: ಮೇಘಾಲಯದ ಭಾರತ-ಬಾಂಗ್ಲಾದೇಶ ಗಡಿಯಲ್ಲಿ ಕರ್ಫ್ಯೂ ಜಾರಿ; ಬಿಎಸ್ಎಫ್ ಹೈ ಅಲರ್ಟ್

ಇದನ್ನೂ ಓದಿ
ರಾಜ್ಯಸಭೆಯಲ್ಲಿ ಅಸಂಸದೀಯ ಹೇಳಿಕೆಗೆ ಮಲ್ಲಿಕಾರ್ಜುನ ಖರ್ಗೆ ಕ್ಷಮೆಯಾಚನೆ
ಬಸ್‌ ತಡೆದು ನಡು ರಸ್ತೆಯಲ್ಲಿ ಪಾನಮತ್ತ ಮಹಿಳೆಯ ಕಿರಿಕ್; ವಿಡಿಯೋ ವೈರಲ್‌
ಛತ್ತೀಸ್​ಗಢ ಮಾಜಿ ಸಿಎಂ ಭೂಪೇಶ್ ಬಘೇಲ್ ಮನೆ ಸೇರಿ ಹಲವೆಡೆ ಇಡಿ ದಾಳಿ
ಮೊಬೈಲ್​ನಲ್ಲಿ ಮಾತನಾಡುತ್ತಾ ಬಾವಿಗೆ ಬಿದ್ದು ವಿದ್ಯಾರ್ಥಿ ಸಾವು

ಈ ಘರ್ಷಣೆಯ ಪರಿಣಾಮವಾಗಿ ಮೂವರು ವ್ಯಕ್ತಿಗಳು ಸಾವನ್ನಪ್ಪಿದರು, ಇದರಲ್ಲಿ ಒಬ್ಬ ಪತ್ರಕರ್ತ ಜೀವಂತವಾಗಿ ಸುಟ್ಟುಹೋದರು. ಹಿಂಸಾಚಾರದಲ್ಲಿ ಕನಿಷ್ಠ 53 ಪೊಲೀಸ್ ಅಧಿಕಾರಿಗಳು, 22 ಸಶಸ್ತ್ರ ಪೊಲೀಸ್ ಪಡೆ ಸಿಬ್ಬಂದಿ ಮತ್ತು 35 ಪ್ರತಿಭಟನಾಕಾರರು ಗಾಯಗೊಂಡರು. ಈ ವೇಳೆ 14 ಕಟ್ಟಡಗಳಿಗೆ ಬೆಂಕಿ ಹಚ್ಚಲಾಯಿತು. 9 ಕಟ್ಟಡಗಳು ತೀವ್ರವಾಗಿ ಧ್ವಂಸಗೊಂಡವು. ಪ್ರತಿಭಟನಾಕಾರರು 9 ಸರ್ಕಾರಿ ವಾಹನಗಳನ್ನು ಸುಟ್ಟುಹಾಕಿದರು ಮತ್ತು 6 ಖಾಸಗಿ ವಾಹನಗಳನ್ನು ಹಾನಿಗೊಳಿಸಿದರು. ಕಾಂತಿಪುರ ಟೆಲಿವಿಷನ್ ಮತ್ತು ಅನ್ನಪೂರ್ಣ ಮೀಡಿಯಾ ಹೌಸ್ ಸೇರಿದಂತೆ ಮಾಧ್ಯಮ ಸಂಸ್ಥೆಗಳ ಮೇಲೆ ದಾಳಿ ಮಾಡಲಾಯಿತು.

ಇದನ್ನೂ ಓದಿ: ಮಣಿಪುರದಲ್ಲಿ ಹೆಚ್ಚಿದ ಹಿಂಸಾಚಾರ; 7 ಜಿಲ್ಲೆಗಳಲ್ಲಿ ಕರ್ಫ್ಯೂ ಜಾರಿ, ಇಂಟರ್ನೆಟ್ ಸ್ಥಗಿತ

ನೇಪಾಳದ ಕಮ್ಯುನಿಸ್ಟ್ ಪಕ್ಷವು ರಾಜಪ್ರಭುತ್ವವನ್ನು ಬಲವಾಗಿ ವಿರೋಧಿಸುತ್ತದೆ, ರಾಷ್ಟ್ರೀಯ ಪ್ರಜಾತಂತ್ರ ಪಕ್ಷವು ಹಿಂದೂ ರಾಜ್ಯಕ್ಕಾಗಿ ಒತ್ತಾಯಿಸುತ್ತಲೇ ಇದೆ. ಮಾಜಿ ರಾಜ ಜ್ಞಾನೇಂದ್ರ ಶಾ ಧಾರ್ಮಿಕ ತೀರ್ಥಯಾತ್ರೆಯ ನಂತರ ಕಠ್ಮಂಡುವಿಗೆ ಹಿಂದಿರುಗಿದ ನಂತರ ಪ್ರತಿಭಟನೆಗಳು ವೇಗ ಪಡೆದುಕೊಂಡವು. ಶುಕ್ರವಾರದ ಹಿಂಸಾಚಾರದ ನಂತರ, ನೇಪಾಳ ಸರ್ಕಾರವು ಮತ್ತಷ್ಟು ಅಶಾಂತಿಯನ್ನು ತಡೆಗಟ್ಟಲು ಕರ್ಫ್ಯೂ ಆದೇಶವನ್ನು ಹೊರಡಿಸಿತು. ಇದೀಗ ಆ ಕರ್ಫ್ಯೂ ಹಿಂಪಡೆಯಲಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ