AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಾಲದ ಹೊರೆಯಿಂದಾಗಿ ಮನೆ ಮಾರಲು ಮುಂದಾಗಿದ್ದ ಕಾಸರಗೋಡಿನ ವ್ಯಕ್ತಿಗೆ ಒಲಿಯಿತು ₹1ಕೋಟಿ ಲಾಟರಿ ಬಹುಮಾನ

ಮನೆ ಮಾರಾಟಕ್ಕೆ ಟೋಕನ್ ಮುಂಗಡ ಹಣ ಸ್ವೀಕರಿಸುವುದಕ್ಕಿಂತ ಮುನ್ನ ಅದೃಷ್ಟ ಬಂದು ಅವರ ಬಾಗಿಲು ತಟ್ಟಿದೆ. ಬಾವಾ ಅವರಿಗೆ ಒಲಿದದ್ದು ₹ 1 ಕೋಟಿ!. ಕೇರಳ ಲಾಟರಿ ಬಹುಮಾನವಾಗಿತ್ತು ಅದು.

ಸಾಲದ ಹೊರೆಯಿಂದಾಗಿ ಮನೆ ಮಾರಲು ಮುಂದಾಗಿದ್ದ ಕಾಸರಗೋಡಿನ ವ್ಯಕ್ತಿಗೆ ಒಲಿಯಿತು ₹1ಕೋಟಿ ಲಾಟರಿ ಬಹುಮಾನ
ಸಾಂದರ್ಭಿಕ ಚಿತ್ರ
TV9 Web
| Edited By: |

Updated on: Jul 27, 2022 | 8:56 PM

Share

ಕಾಸರಗೋಡು: ಆರ್ಥಿಕ ಬಿಕ್ಕಟ್ಟಿನಿಂದ ಬಳಲುತ್ತಿದ್ದ ಮೊಹಮ್ಮದ್ ಬಾವಾ(50) ಈ ಹೊತ್ತಲ್ಲಿ ಏನಾದರೂ ಪವಾಡ ಸಂಭವಿಸಲಿ ಎಂದು ಪ್ರಾರ್ಥಿಸಿದ್ದರು. ಅವರ ಪ್ರಾರ್ಥನೆಗೆ ಫಲವೂ ಸಿಕ್ಕಿತು. ಸಾಲದ ಹೊರೆಯಿಂದಾಗಿ ಅವರು ಇತ್ತೀಚೆಗೆ ನಿರ್ಮಿಸಿದ ಮನೆಯನ್ನು ಮಾರಾಟಕ್ಕಿಟ್ಟಿದ್ದರು. ಮನೆ ಮಾರಾಟಕ್ಕೆ ಟೋಕನ್ ಮುಂಗಡ ಹಣ ಸ್ವೀಕರಿಸುವುದಕ್ಕಿಂತ ಮುನ್ನ ಅದೃಷ್ಟ ಬಂದು ಅವರ ಬಾಗಿಲು ತಟ್ಟಿದೆ. ಬಾವಾ ಅವರಿಗೆ ಒಲಿದದ್ದು ₹ 1 ಕೋಟಿ!. ಕೇರಳ ಲಾಟರಿ (Kerala Lottery) ಬಹುಮಾನವಾಗಿತ್ತು ಅದು. ಕೇರಳದ ಕಾಸರಗೋಡು (Kasaragod) ಜಿಲ್ಲೆಯ ಮಂಜೇಶ್ವರದವರಾದ ಬಾವಾ ಅವರಿಗೆ ಸಂಬಂಧಿಕರಿಂದ ಪಡೆದ ಸುಮಾರು ₹ 50 ಲಕ್ಷ ಸಾಲ ಮತ್ತು ಬ್ಯಾಂಕ್‌ನಿಂದ ಪಡೆದ ಸಾಲವನ್ನು ಮರುಪಾವತಿಸಲು ಹಣದ ಅವಶ್ಯಕತೆ ಇತ್ತು. ತನ್ನ ಇಬ್ಬರು ಹೆಣ್ಣು ಮಕ್ಕಳ ಮದುವೆಗೆ ಹಾಗೂ ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ಅನುಭವಿಸಿದ ನಷ್ಟವನ್ನು ಸರಿದೂಗಿಸಲು ಅವರು ಅಪಾರ ಪ್ರಮಾಣದ ಸಾಲ ಮಾಡಿದ್ದು ಬೇರೆ ದಾರಿಯಿಲ್ಲದೆ ಮನೆ ಮಾರಲು ನಿರ್ಧರಿಸಿದ್ದರು. ಈಗ, ಅವರ ಮನೆ ಸಂತೋಷ ಮತ್ತು ಅದೃಷ್ಟದಿಂದ ತುಂಬಿದೆ. “ನಾನು ಲಾಟರಿ ಗೆದ್ದಿದ್ದೇನೆ, ಆದ್ದರಿಂದ ಈ ಮನೆಯನ್ನು ಮಾರಾಟ ಮಾಡುವ ಅಗತ್ಯವಿಲ್ಲ ಈ ಹಣದಿಂದ ನಮ್ಮ ಎಲ್ಲಾ ಸಮಸ್ಯೆಗಳು ಬಗೆಹರಿಯುತ್ತವೆ ಎಂದು ಶ ಬಾವಾ ಸುದ್ದಿಗಾರರಿಗೆ ತಿಳಿಸಿದರು.

ವ್ಯಾಪಾರದಲ್ಲಿ ನಷ್ಟ ಅನುಭವಿಸಿದ್ದರಿಂದ ಆತಂಕದಲ್ಲಿದ್ದೆ. ಆದರೆ ಸರ್ವಶಕ್ತನು ಅಂತಿಮವಾಗಿ ನನಗೆ ಒಂದು ಮಾರ್ಗವನ್ನು ತೋರಿಸಿದ ಅಂತಾರೆ ಬಾವಾ. ಭಾನುವಾರ ಮಧ್ಯಾಹ್ನ 3.30 ರ ಹೊತ್ತಿಗೆ ಕೇರಳ ಸರ್ಕಾರದ ಫಿಫ್ಟಿ-ಫಿಫ್ಟಿ ಲಾಟರಿ ಲಾಟರಿ ಫಲಿತಾಂಶ ಪ್ರಕಟವಾಯಿತು. ಅದೃಷ್ಟವಶಾತ್ ನನಗೆ ಬಹುಮಾನ ಸಿಕ್ಕಿತು. ಹಿಂದಿನ ದಿನ, ಖರೀದಿದಾರರು ನಮ್ಮ ಮನೆಗೆ ಟೋಕನ್ ಮುಂಗಡವನ್ನು ನೀಡಲು ಸಂಜೆ 5.30 ಕ್ಕೆ ಬರುವುದಾಗಿ ನಮಗೆ ತಿಳಿಸಿದ್ದರು. ಆದರೆ ಅವರು ಬಂದಾಗ, ಈ ಮನೆಯಲ್ಲಿ ಜಾಕ್‌ಪಾಟ್ ಬಗ್ಗೆ ತಿಳಿದ ಜನರು ತುಂಬಿದ್ದರು. ಖರೀದಿದಾರರು ಕೂಡಾ ನಮ್ಮ ಅದೃಷ್ಟದ ಗೆಲುವಿನ ಬಗ್ಗೆ ತುಂಬಾ ಸಂತೋಷಪಟ್ಟಿದ್ದಾರೆ ಎಂದ ಬಾವಾ  ಲಾಟರಿ ಟಿಕೆಟ್‌ಗಳನ್ನು ನಿಯಮಿತವಾಗಿ ನಾನು ಖರೀದಿಸುತ್ತಿಲ್ಲ ಎಂದಿದ್ದಾರೆ.

“ನಾನು ಆ ಲಾಟರಿ ಏಜೆಂಟ್ ಅನ್ನು ವೈಯಕ್ತಿಕವಾಗಿ ತಿಳಿದಿದ್ದೇನೆ ಆದ್ದರಿಂದ ಅವರು ನನ್ನ ಮನೆಯ ಮೂಲಕ ಹಾದುಹೋದಾಗ, ಅವರು ನನಗೆ ಕೆಲವು ಟಿಕೆಟ್ ನೀಡುತ್ತಿದ್ದರು. ನಾನು ಏನು ಮಾಡಬೇಕೆಂದು ತಿಳಿಯದೆ ಈ ಟಿಕೆಟ್ ಖರೀದಿಸಿದೆ. ಋಣ ತೀರಿಸಿದ ಬಳಿಕ ಉಳಿದ ಮೊತ್ತವನ್ನು ಬಡವರು ಹಾಗೂ ನಿರ್ಗತಿಕರಿಗೆ ವಿನಿಯೋಗಿಸಲು ಮುಂದಾಗುವುದಾಗಿ ತಿಳಿಸಿದರು. ತೆರಿಗೆ ಕಡಿತದ ನಂತರ  ಬಾವಾ  ಅವರಿಗೆ ₹ 63 ಲಕ್ಷ ಕೈಗೆ ಸಿಗಲಿದೆ.

ವಿಪಕ್ಷ ಶಾಸಕರ ಮಾತಿಗೆ ಸಿಎಂ ಸಿದ್ದರಾಮಯ್ಯ ಖಡಕ್ ಉತ್ತರ, ಸದನ ಫುಲ್ ಸೈಲೆಂಟ್
ವಿಪಕ್ಷ ಶಾಸಕರ ಮಾತಿಗೆ ಸಿಎಂ ಸಿದ್ದರಾಮಯ್ಯ ಖಡಕ್ ಉತ್ತರ, ಸದನ ಫುಲ್ ಸೈಲೆಂಟ್
ಟೀ, ಸಿಗರೇಟ್​​ ನೆಪದಲ್ಲಿ ಅಂಗಡಿಗೆ ಬಂದು ಮಾಂಗಲ್ಯ ಸರ ಕದ್ದು ಎಸ್ಕೇಪ್​!
ಟೀ, ಸಿಗರೇಟ್​​ ನೆಪದಲ್ಲಿ ಅಂಗಡಿಗೆ ಬಂದು ಮಾಂಗಲ್ಯ ಸರ ಕದ್ದು ಎಸ್ಕೇಪ್​!
ಕನಕೋತ್ಸವ ವೇದಿಕೆಯಲ್ಲಿ ಗಿಲ್ಲಿ, ಮಂಗ್ಲಿ ಮಸ್ತ್ ಮನರಂಜನೆ; ವಿಡಿಯೋ ನೋಡಿ
ಕನಕೋತ್ಸವ ವೇದಿಕೆಯಲ್ಲಿ ಗಿಲ್ಲಿ, ಮಂಗ್ಲಿ ಮಸ್ತ್ ಮನರಂಜನೆ; ವಿಡಿಯೋ ನೋಡಿ
ರಾಯಲ್ ಸ್ಟ್ರಾಂಗ್ ಅಂತ ಬಿಯರ್ ಇದೆ ಕಣ್ಣಯ್ಯ:ಸದನದಲ್ಲಿ ಅಶೋಕ್‌-ಸಿಎಂ ಕಾಮಿಡಿ
ರಾಯಲ್ ಸ್ಟ್ರಾಂಗ್ ಅಂತ ಬಿಯರ್ ಇದೆ ಕಣ್ಣಯ್ಯ:ಸದನದಲ್ಲಿ ಅಶೋಕ್‌-ಸಿಎಂ ಕಾಮಿಡಿ
ವಿದ್ಯಾರ್ಥಿಗಳಿಗೆ ಶಾಕ್​​: ಸಾಂಬಾರಿನಲ್ಲಿ ನುಸಿ ಹುಳ ಪತ್ತೆ
ವಿದ್ಯಾರ್ಥಿಗಳಿಗೆ ಶಾಕ್​​: ಸಾಂಬಾರಿನಲ್ಲಿ ನುಸಿ ಹುಳ ಪತ್ತೆ
ಮಕ್ಕಳನ್ನು ರಸ್ತೆಗೆ ಬಿಡುವ ಮುನ್ನ ಎಚ್ಚರ!
ಮಕ್ಕಳನ್ನು ರಸ್ತೆಗೆ ಬಿಡುವ ಮುನ್ನ ಎಚ್ಚರ!
ದೇವಸ್ಥಾನದ ಸುಪ್ರಭಾತ ಹಾಡು ಹಾಕಿದಕ್ಕೆ ಮುಸ್ಲಿಂ ಯವಕನಿಂದ ಕಿರಿಕ್
ದೇವಸ್ಥಾನದ ಸುಪ್ರಭಾತ ಹಾಡು ಹಾಕಿದಕ್ಕೆ ಮುಸ್ಲಿಂ ಯವಕನಿಂದ ಕಿರಿಕ್
ನಟ ಯಶ್​ ತಾಯಿ ಜಾಗ ವಿವಾದಕ್ಕೆ ಟ್ವಿಸ್ಟ್​​: ಒಂದೇ ಸೈಟ್​​ಗೆ ಎರಡು ದಾಖಲೆ?
ನಟ ಯಶ್​ ತಾಯಿ ಜಾಗ ವಿವಾದಕ್ಕೆ ಟ್ವಿಸ್ಟ್​​: ಒಂದೇ ಸೈಟ್​​ಗೆ ಎರಡು ದಾಖಲೆ?
ಬಾಯಿಯ ಆರೋಗ್ಯ ಚೆನ್ನಾಗಿಲ್ಲದಿದ್ದರೆ ಹೃದಯದ ಆಯಸ್ಸು ಕಡಿಮೆಯಾಗುತ್ತಾ?
ಬಾಯಿಯ ಆರೋಗ್ಯ ಚೆನ್ನಾಗಿಲ್ಲದಿದ್ದರೆ ಹೃದಯದ ಆಯಸ್ಸು ಕಡಿಮೆಯಾಗುತ್ತಾ?
ಕೊಡಗಿನಲ್ಲಿ ರೆಸಾರ್ಟ್, ವಿಲ್ಲಾಗಳಿಗಾಗಿ ಬೆಟ್ಟ ಬಗೆದ ಮಾಫಿಯಾ ಗ್ಯಾಂಗ್
ಕೊಡಗಿನಲ್ಲಿ ರೆಸಾರ್ಟ್, ವಿಲ್ಲಾಗಳಿಗಾಗಿ ಬೆಟ್ಟ ಬಗೆದ ಮಾಫಿಯಾ ಗ್ಯಾಂಗ್