AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಡಿಗ್ರಿ ಪ್ರಯೋಜನಕ್ಕೆ ಬರಲ್ಲ, ಪಂಕ್ಚರ್ ಶಾಪ್ ತೆರೆಯಿರಿ: ವಿದ್ಯಾರ್ಥಿಗಳಿಗೆ ಬಿಜೆಪಿ ಶಾಸಕರ ಸಲಹೆ

ನಾವು ಇಂದು ಪಿಎಂ ಕಾಲೇಜ್ ಆಫ್ ಎಕ್ಸಲೆನ್ಸ್ ಅನ್ನು ತೆರೆಯುತ್ತಿದ್ದೇವೆ. ಈ ಕಾಲೇಜು ಪದವಿಗಳಿಂದ ಏನೂ ಆಗುವುದಿಲ್ಲ ಎಂಬ ಒಂದು ವಾಕ್ಯವನ್ನು ಮನಸ್ಸಿನಲ್ಲಿಟ್ಟುಕೊಳ್ಳಲು ನಾನು ಎಲ್ಲರಿಗೂ ಮನವಿ ಮಾಡುತ್ತೇನೆ. ಬದಲಿಗೆ ಕನಿಷ್ಠ ಜೀವನೋಪಾಯಕ್ಕಾಗಿ ಮೋಟಾರ್ ಸೈಕಲ್ ಪಂಕ್ಚರ್ ರಿಪೇರಿ ಅಂಗಡಿಯನ್ನು ತೆರೆಯಿರಿ ಎಂದು ಬಿಜೆಪಿ ಶಾಸಕ ಪನ್ನಾಲಾಲ್ ಶಾಕ್ಯ ಹೇಳಿದ್ದಾರೆ.

ಡಿಗ್ರಿ ಪ್ರಯೋಜನಕ್ಕೆ ಬರಲ್ಲ, ಪಂಕ್ಚರ್ ಶಾಪ್ ತೆರೆಯಿರಿ: ವಿದ್ಯಾರ್ಥಿಗಳಿಗೆ ಬಿಜೆಪಿ ಶಾಸಕರ ಸಲಹೆ
ಪನ್ನಾಲಾಲ್ ಶಾಕ್ಯ
ರಶ್ಮಿ ಕಲ್ಲಕಟ್ಟ
|

Updated on: Jul 15, 2024 | 7:17 PM

Share

ದೆಹಲಿ ಜುಲೈ 15: ಮಧ್ಯಪ್ರದೇಶದ (Madhya Pradesh) ಬಿಜೆಪಿ (BJP) ಶಾಸಕರೊಬ್ಬರು ವಿದ್ಯಾರ್ಥಿಗಳಿಗೆ ‘ಭಯಂಕರ’ ಸಲಹೆ ನೀಡಿದ್ದಾರೆ. ಗುನಾ ವಿಧಾನಸಭಾ ಕ್ಷೇತ್ರದಲ್ಲಿ ‘ಪಿಎಂ ಕಾಲೇಜ್ ಆಫ್ ಎಕ್ಸಲೆನ್ಸ್’ (PM College of Excellence) ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಬಿಜೆಪಿ ಶಾಸಕ ಪನ್ನಾಲಾಲ್ ಶಾಕ್ಯ (Pannalal Shakya) ಅವರು ಪದವಿಪಡೆಯುವುದರಿಂದ ಏನೂ ಪ್ರಯೋಜನವಿಲ್ಲ, ವಿದ್ಯಾರ್ಥಿಗಳು ಜೀವನೋಪಾಯಕ್ಕಾಗಿ ಮೋಟಾರ್ ಸೈಕಲ್ ಪಂಕ್ಚರ್ ರಿಪೇರಿ ಅಂಗಡಿಯನ್ನು ತೆರೆಯಬೇಕು ಎಂದು ಹೇಳಿದ್ದಾರೆ.

“ನಾವು ಇಂದು ಪಿಎಂ ಕಾಲೇಜ್ ಆಫ್ ಎಕ್ಸಲೆನ್ಸ್ ಅನ್ನು ತೆರೆಯುತ್ತಿದ್ದೇವೆ. ಈ ಕಾಲೇಜು ಪದವಿಗಳಿಂದ ಏನೂ ಆಗುವುದಿಲ್ಲ ಎಂಬ ಒಂದು ವಾಕ್ಯವನ್ನು ಮನಸ್ಸಿನಲ್ಲಿಟ್ಟುಕೊಳ್ಳಲು ನಾನು ಎಲ್ಲರಿಗೂ ಮನವಿ ಮಾಡುತ್ತೇನೆ. ಬದಲಿಗೆ ಕನಿಷ್ಠ ಜೀವನೋಪಾಯಕ್ಕಾಗಿ ಮೋಟಾರ್ ಸೈಕಲ್ ಪಂಕ್ಚರ್ ರಿಪೇರಿ ಅಂಗಡಿಯನ್ನು ತೆರೆಯಿರಿ ಎಂದು ಬಿಜೆಪಿ ಶಾಸಕರು ಕಾರ್ಯಕ್ರಮದಲ್ಲಿ ಹೇಳಿದ್ದಾರೆ ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ.

ಭಾನುವಾರ, ಇಂದೋರ್‌ನ ಅಟಲ್ ಬಿಹಾರಿ ವಾಜಪೇಯಿ ಸರ್ಕಾರಿ ಕಲಾ ಮತ್ತು ವಾಣಿಜ್ಯ ಕಾಲೇಜಿನಲ್ಲಿ ನಡೆದ ಸಮಾರಂಭದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಮಧ್ಯಪ್ರದೇಶದ 55 ಜಿಲ್ಲೆಗಳಲ್ಲಿ ಪಿಎಂ ಕಾಲೇಜ್ ಆಫ್ ಎಕ್ಸಲೆನ್ಸ್ ಅನ್ನು ವಾಸ್ತವಿಕವಾಗಿ ಉದ್ಘಾಟಿಸಿದರು. ಗುನಾ ಸೇರಿದಂತೆ ಮಧ್ಯಪ್ರದೇಶದ ಆಯಾ ಜಿಲ್ಲೆಗಳಲ್ಲಿ ಪ್ರತ್ಯೇಕ ಕಾರ್ಯಕ್ರಮಗಳು ನಡೆದವು. ಇಂದೋರ್‌ನಲ್ಲಿ ನಡೆದ ಮುಖ್ಯ ಸಮಾರಂಭದಲ್ಲಿ ಶಾ ಅವರು ದೇಶದಲ್ಲಿ ಹೊಸ ಶಿಕ್ಷಣ ನೀತಿಯನ್ನು ತರಲು ಪ್ರಧಾನಿ ಮೋದಿಯವರ ದೂರದೃಷ್ಟಿಯನ್ನು ಎತ್ತಿ ತೋರಿಸಿದರು.

2047ರ ವೇಳೆಗೆ ದೇಶವು 100 ವರ್ಷಗಳ ಸ್ವಾತಂತ್ರ್ಯವನ್ನು ಆಚರಿಸುವ ವೇಳೆಗೆ ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ಮಾಡುವ ಗುರಿಯನ್ನು ಪ್ರಧಾನಿ ನರೇಂದ್ರ ಮೋದಿ ಹೊಂದಿದ್ದಾರೆ. ಎನ್‌ಇಪಿ ಅದರಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಲು ಶಿಕ್ಷಣದ ಅಡಿಪಾಯ ಬಲಪಡಿಸಿ ಮತ್ತು ಮುಂದಿನ 25 ವರ್ಷಗಳ ಅಗತ್ಯಗಳನ್ನು ಪೂರೈಸುವ ಎನ್‌ಇಪಿಯನ್ನು ತರುವ ಮೂಲಕ ಪ್ರಧಾನಿ ಮೋದಿ ದೂರದೃಷ್ಟಿಯನ್ನು ತೋರಿಸಿದ್ದಾರೆ ಎಂದು ಶಾ ಹೇಳಿದರು.

ಇದನ್ನೂ ಓದಿ: ಜಿ20 ಡಿಜಿಟಲ್ ಪಬ್ಲಿಕ್ ಇನ್​ಫ್ರಾಸ್ಟ್ರಕ್ಚರ್ ಟ್ಯಾಸ್ಕ್ ಫೋರ್ಸ್​ನ ಅಂತಿಮ ವರದಿ ಬಿಡುಗಡೆ; ಭಾರತದ ಅದ್ವಿತೀಯ ಯಶಸ್ಸು ಈ ವರದಿಯಲ್ಲಿ ಹೈಲೈಟ್

ಎನ್‌ಇಪಿ ವಿದ್ಯಾರ್ಥಿಗಳನ್ನು ಅವರ ಸಂಸ್ಕೃತಿಯೊಂದಿಗೆ ಅಖಂಡವಾಗಿರಿಸುವುದರೊಂದಿಗೆ ಅಂತರರಾಷ್ಟ್ರೀಯ ಗುಣಮಟ್ಟಕ್ಕೆ ಸಮನಾಗಿ ತರುತ್ತದೆ ಎಂದು ಶಾ ಹೇಳಿದರು. ಇದು ಗುಣಮಟ್ಟದ ಮೇಲೆ ಕೇಂದ್ರೀಕರಿಸುತ್ತದೆ ಪ್ರಮಾಣದ ಮೇಲೆ ಅಲ್ಲ. ವಿದ್ಯಾರ್ಥಿಗಳಿಗೆ ಮುಕ್ತವಾಗಿ ಯೋಚಿಸಲು ಅವಕಾಶವನ್ನು ನೀಡುತ್ತದೆ, ಹೀಗಾಗಿ ಅವರ 360 ಡಿಗ್ರಿ ಅಭಿವೃದ್ಧಿಯನ್ನು ಖಚಿತಪಡಿಸುತ್ತದೆ ಎಂದು ಅವರು ಹೇಳಿದರು.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ