ದೆಹಲಿ: ಪಂಜಾಬ್ ರೈತರ ಟ್ರ್ಯಾಕ್ಟರ್ಗಳು ರಾಷ್ಟ್ರ ರಾಜಧಾನಿಯ ಗಡಿ ಭಾಗಗಳಿಗೆ ಮುತ್ತಿಗೆ ಹಾಕಲು ಸಜ್ಜಾಗಿವೆ. ಘಾಜಿಪುರ ಗಡಿಯಲ್ಲಿ ರೈತರ ಸುಮಾರು 500 ಟ್ರ್ಯಾಕ್ಟರ್ಗಳು ಪಲ್ವಾಲ್ನತ್ತ ತೆರಳಲಿದ್ದು, ಪಲ್ವಾಲ್ನಿಂದ ಘಾಜಿಪುರದತ್ತಲೂ ರೈತರು ಮೆರವಣಿಗೆ ಹೊರಡಲಿದ್ದಾರೆ. ಸಿಂಘು ಗಡಿಯಿಂದ ಸೋನಾಪತ್-ಘಾಜಿಯಾಬಾದ್-ನೋಯ್ಡಾಗಳಿಂದಲೂ ಘಾಜಿಪುರ್ ಗಡಿಯತ್ತ ರೈತರು ಟ್ರ್ಯಾಕ್ಟರ್ಗಳಲ್ಲಿ ಧಾವಿಸಲಿದ್ದಾರೆ. 11 ಘಂಟೆಗೆ ಟಿಕ್ರಿ ಗಡಿಯಿಂದ ಸಿಂಘು ಗಡಿ ಭಾಗದತ್ತ ರೈತರು ಸಾಗಲಿದ್ದಾರೆ.
ನಾಳೆ ಕೇಂದ್ರ ಸರ್ಕಾರದ ಜೊತೆ 8ನೇ ಸುತ್ತಿನ ಸಭೆ ನಡೆಯಲಿದೆ. ಅದಕ್ಕೂ ಒಂದು ದಿನ ಮೊದಲೇ ನಡೆಸುತ್ತಿರುವ ಟ್ರ್ಯಾಕ್ಟರ್ ಮೆರವಣಿಗೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರುವ ಪ್ರಯತ್ನವಾಗಿದೆ. ಜೊತೆಗೆ, ಜನವರಿ 26ರಂದು ದೆಹಲಿ ನಗರದಲ್ಲಿ ಟ್ರ್ಯಾಕ್ಟರ್ ಮೆರವಣಿಗೆ ನಡೆಸುವುದಾಗಿ ರೈತ ಒಕ್ಕೂಟಗಳು ಘೋಷಿಸಿವೆ. ಇಂದಿನ ಟ್ರ್ಯಾಕ್ಟರ್ ಮೆರವಣಿಗೆ ಗಣರಾಜ್ಯೋತ್ಸವದ ದಿನದ ಟ್ರ್ಯಾಕ್ಟರ್ ಪರೇಡ್ಗೆ ತಾಲೀಮು ಎಂದೇ ರೈತ ಒಕ್ಕೂಟಗಳು ಘೋಷಿಸಿವೆ.
Today, our tractor rally will go till Dasna, Aligarh road & then return to Ghazipur. This is a rehearsal for a similar rally on 26th Jan. Next round of talks with the Union Government will be held tomorrow: Rakesh Tikait, Spokesperson of Bharatiya Kisan Union, at Ghazipur border pic.twitter.com/TBU6BlzdDb
— ANI (@ANI) January 7, 2021
Delhi Chalo | ಸರ್ಕಾರ-ರೈತರ ನಡುವಿನ 7ನೇ ಸುತ್ತಿನ ಸಭೆಯಲ್ಲಿ ನಡೆದ 5 ಮುಖ್ಯ ಬೆಳವಣಿಗೆಗಳು
Published On - 10:43 am, Thu, 7 January 21