AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೇಂದ್ರ ಸಚಿವ ಹರ್ದೀಪ್ ಸಿಂಗ್​​ ಪುರಿ ಪತ್ನಿ ಲಕ್ಷ್ಮೀಪುರಿ ವಿರುದ್ಧ ಮಾಡಿರುವ ಟ್ವೀಟ್​ ಡಿಲೀಟ್ ಮಾಡಲು ಸಾಕೇತ್​ ಗೋಖಲೆಗೆ ಹೈಕೋರ್ಟ್ ಖಡಕ್​ ಸೂಚನೆ..

ಕಳೆದ ತಿಂಗಳು ಸಾಕೇತ್​ ಗೋಖಲೆ ಲಕ್ಷ್ಮೀ ಪುರಿ ವಿರುದ್ಧ ಗಂಭೀರ ಆರೋಪ ಮಾಡಿ ಟ್ವೀಟ್ ಮಾಡಿದ್ದರು. ಲಕ್ಷ್ಮೀಪುರಿ ಸ್ವಿಜರ್​ರ್ಲ್ಯಾಂಡ್​​ನಲ್ಲಿ ಆದಾಯಕ್ಕೂ ಮೀರಿ ಆಸ್ತಿ ಖರೀದಿ ಮಾಡಿದ್ದಾರೆ ಎಂದು ಹೇಳಿದ್ದ ಅವರು ಲಕ್ಷ್ಮೀಪುರ ಮತ್ತು ಹರ್ದೀಪ್​ ಸಿಂಗ್​ ಪುರಿ ಆಸ್ತಿ ಬಗ್ಗೆ ಪ್ರಶ್ನೆಗಳನ್ನು ಎತ್ತಿದ್ದರು.

ಕೇಂದ್ರ ಸಚಿವ ಹರ್ದೀಪ್ ಸಿಂಗ್​​ ಪುರಿ ಪತ್ನಿ ಲಕ್ಷ್ಮೀಪುರಿ ವಿರುದ್ಧ ಮಾಡಿರುವ ಟ್ವೀಟ್​ ಡಿಲೀಟ್ ಮಾಡಲು ಸಾಕೇತ್​ ಗೋಖಲೆಗೆ ಹೈಕೋರ್ಟ್ ಖಡಕ್​ ಸೂಚನೆ..
ಸಾಕೇತ್ ಗೋಖಲೆ
TV9 Web
| Updated By: Lakshmi Hegde|

Updated on:Jul 13, 2021 | 12:37 PM

Share

ಕೇಂದ್ರ ಸಚಿವ ಹರ್ದೀಪ್​ ಸಿಂಗ್​ ಪುರಿ ಪತ್ನಿ, ವಿಶ್ವಸಂಸ್ಥೆಯ ಮಾಜಿ ಸಹಾಯಕ ಪ್ರಧಾನ ಕಾರ್ಯದರ್ಶಿ ಲಕ್ಷ್ಮೀ ಪುರಿ ವಿರುದ್ಧ ಮಾಡಿದ್ದ ಅಕ್ರಮ ಆಸ್ತಿ ಗಳಿಕೆ ಆರೋಪದ ಟ್ವೀಟ್​​ನ್ನು ಕೂಡಲೇ ಡಿಲೀಟ್​ ಮಾಡಬೇಕು ಎಂದು ದೆಹಲಿ ಹೈಕೋರ್ಟ್​ ಆರ್​ಟಿಐ ಕಾರ್ಯಕರ್ತ ಸಾಕೇತ್​​ ಗೋಖಲೆ ಅವರಿಗೆ ಸೂಚಿಸಿದೆ. ಅಲ್ಲದೆ, ಇನ್ನು ಮುಂದೆ ಲಕ್ಷ್ಮೀಪುರಿ ಮತ್ತು ಅವರ ಪತಿ ಹರ್ದೀಪ್​ ಸಿಂಗ್​ ಪುರಿ ವಿರುದ್ಧ ಮಾನಹಾನಿ, ಹಗರಣ ಅಥವಾ ವಾಸ್ತವದಲ್ಲಿ ತಪ್ಪಾಗಿರುವ ಯಾವುದೇ ಟ್ವೀಟ್​​ಗಳನ್ನು ಮಾಡದಂತೆ ಸಾಕೇತ್​ಗೆ ನಿರ್ಬಂಧ ಹೇರಿದೆ. ಲಕ್ಷ್ಮೀಪುರಿ ವಿರುದ್ಧ ಮಾಡಿರುವ ಟ್ವೀಟ್​​ನ್ನು 24ಗಂಟೆಯಲ್ಲಿ ಸಾಕೇತ್ ಗೋಖಲೆ ಡಿಲೀಟ್ ಮಾಡದಿದ್ದರೆ ಟ್ವಿಟರ್​ ಮುಂದಾಗಿ ಅದನ್ನು ಡಿಲೀಟ್​ ಮಾಡಬೇಕು ಮತ್ತು ಮುಂದಿನ ವಿಚಾರಣೆಯ ದಿನಾಂಕದೊಳಗೆ ಒಂದು ಅನುಸರಣಾ ದೂರನ್ನು ಕೋರ್ಟ್​ಗೆ ನೀಡಬೇಕು ಎಂದು ಪ್ರಕರಣದ ವಿಚಾರಣೆ ನಡೆಸಿದ್ದ ನ್ಯಾಯಮೂರ್ತಿ ಸಿ.ಹರಿಶಂಕರ್ ಟ್ವಿಟರ್​ಗೆ ಸೂಚಿಸಿದ್ದಾರೆ.​

ಸಾಕೇತ್ ಗೋಖಲೆ ಆರ್​ಟಿಐ ಕಾರ್ಯಕರ್ತ ಮತ್ತು ಕಾಂಗ್ರೆಸ್​ನಲ್ಲಿ ಗುರುತಿಸಿಕೊಂಡವರಾಗಿದ್ದಾರೆ. ಲಕ್ಷ್ಮೀಪುರಿ ತಮ್ಮ ಆದಾಯಕ್ಕೂ ಮೀರಿ ಆಸ್ತಿ ಮಾಡಿದ್ದಾರೆ. ಸ್ವಿಜರ್​ಲ್ಯಾಂಡ್​ನಲ್ಲಿ ಬಹುಮೊತ್ತದ ಆಸ್ತಿ ಖರೀದಿಸಿದ್ದಾರೆ ಎಂದು ಟ್ವೀಟ್ ಮಾಡಿದ್ದರು. ನಂತರ ತಮ್ಮ ವಿರುದ್ಧ ಗಂಭೀರ ಆರೋಪ ಮಾಡಿದ ಸಾಕೇತ್ ಗೋಖಲೆ ವಿರುದ್ಧ ಲಕ್ಷ್ಮೀ ಪುರಿ ದೆಹಲಿ ಹೈಕೋರ್ಟ್​ನಲ್ಲಿ 5 ಕೋಟಿ ರೂ.ನ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ. ಅದರ ವಿಚಾರಣೆ ನಡೆಸಿದ್ದ ನ್ಯಾ.ಸಿ.ಹರಿಶಂಕರ್​ ತೀರ್ಪು ಕಾಯ್ದಿರಿಸಿದ್ದರು. ಹಿಂದಿನ ವಾರವೇ ಟ್ವೀಟ್​ ಡಿಲೀಟ್ ಮಾಡುವಂತೆ ಗೋಖಲೆಗೆ ಕೋರ್ಟ್ ಸೂಚಿಸಿತ್ತು. ಆದರೆ ಅದನ್ನು ನಿರಾಕರಿಸಿದ್ದರು. ಈ ಬಾರಿ ಮತ್ತೆ ಟ್ವೀಟ್​ ತೆಗೆದು ಹಾಕಲು ನ್ಯಾಯಾಧೀಶರು ಹೇಳಿದ್ದಾರೆ. ಒಂದೊಮ್ಮೆ ಸಾಕೇತ್​ ಗೋಖಲೆ 24 ಗಂಟೆಯೊಳಗೆ ಅದನ್ನು ಡಿಲೀಟ್​ ಮಾಡದೆ ಇದ್ದರೆ, ಟ್ವಿಟರ್​ ಅದನ್ನು ಡಿಲೀಟ್ ಮಾಡಿ, ಮತ್ತೆ ನ್ಯಾಯಾಲಯಕ್ಕೆ ದೂರು ಸಲ್ಲಿಸಲಿದೆ.

ಕಳೆದ ತಿಂಗಳು ಸಾಕೇತ್​ ಗೋಖಲೆ ಲಕ್ಷ್ಮೀ ಪುರಿ ವಿರುದ್ಧ ಗಂಭೀರ ಆರೋಪ ಮಾಡಿ ಟ್ವೀಟ್ ಮಾಡಿದ್ದರು. ಲಕ್ಷ್ಮೀಪುರಿ ಸ್ವಿಜರ್​ರ್ಲ್ಯಾಂಡ್​​ನಲ್ಲಿ ಆದಾಯಕ್ಕೂ ಮೀರಿ ಆಸ್ತಿ ಖರೀದಿ ಮಾಡಿದ್ದಾರೆ ಎಂದು ಹೇಳಿದ್ದ ಅವರು ಲಕ್ಷ್ಮೀಪುರ ಮತ್ತು ಹರ್ದೀಪ್​ ಸಿಂಗ್​ ಪುರಿ ಆಸ್ತಿ ಬಗ್ಗೆ ಪ್ರಶ್ನೆಗಳನ್ನು ಎತ್ತಿದ್ದರು. ಜಾರಿ ನಿರ್ದೇಶನಾಲಯ (ED) ತನಿಖೆ ನಡೆಸಬೇಕು ಎಂದು ಆಗ್ರಹಿಸಿದ್ದಲ್ಲದೆ, ಹಣಕಾಸು ಮಂತ್ರಿ ನಿರ್ಮಲಾ ಸೀತಾರಾಮನ್​ ಅವರನ್ನೂ ಟ್ಯಾಗ್​ ಮಾಡಿದ್ದರು. ಅದಕ್ಕೆ ಪ್ರತಿಯಾಗಿ ಲಕ್ಷ್ಮೀ ಪುರಿ ಹೈಕೋರ್ಟ್ ಮೆಟ್ಟಿಲೇರಿ, ಗೋಖಲೆ ವಿರುದ್ಧ 5 ಕೋಟಿ ರೂಪಾಯಿಯ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ. ನನ್ನ ವಿರುದ್ಧ ಮಾಡಲಾದ ಆರೋಪಗಳು ದುರುದ್ದೇಶದಿಂದ ಕೂಡಿದ್ದು, ಸತ್ಯವನ್ನು ತಿರುಚಲ್ಪಟ್ಟಿವೆ ಎಂದು ಹೇಳಿದ್ದರು. ಲಕ್ಷ್ಮೀ ಪುರಿ ಪರ ಹಿರಿಯ ನ್ಯಾಯವಾದಿ ಮನೀಂದರ್ ಸಿಂಗ್​ ಮತ್ತು ಸಾಕೇತ್​ ಗೋಖಲೆ ಪರ ಸರೀಮ್ ನವೇದ್​ ವಾದ ಮಂಡಿಸಿದ್ದರು.

ಇದನ್ನೂ ಓದಿ: ಕೇಂದ್ರ ಸಚಿವ ಹರ್ದೀಪ್​ ಸಿಂಗ್​ ಪುರಿ ಪತ್ನಿಯ ವಿರುದ್ಧ ಅಕ್ರಮ ಆಸ್ತಿ ಗಳಿಕೆ ಆರೋಪ ಮಾಡಿದ ವ್ಯಕ್ತಿಗೆ ದೆಹಲಿ ಹೈಕೋರ್ಟ್​ನಿಂದ ತರಾಟೆ

Delhi Highcourt directs RTI Activist Saket Gokhale to delete tweets against Lakshmi Puri

Published On - 12:36 pm, Tue, 13 July 21

ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಕಾಡಾನೆಗಳ ಹಿಂಡು ಡ್ರೋನ್ ಕ್ಯಾಮರಾದಲ್ಲಿ ಸೆರೆ
ಕಾಡಾನೆಗಳ ಹಿಂಡು ಡ್ರೋನ್ ಕ್ಯಾಮರಾದಲ್ಲಿ ಸೆರೆ
ಕೆಟ್ಟ ಪ್ರಪಂಚದಲ್ಲಿ ಸ್ವರ್ಗ ತೋರಿಸ್ತೀನಿ; ಉಪ್ಪಿ ಡೈಲಾಗ್​ ಹೇಳಿದ ಗಿಲ್ಲಿ
ಕೆಟ್ಟ ಪ್ರಪಂಚದಲ್ಲಿ ಸ್ವರ್ಗ ತೋರಿಸ್ತೀನಿ; ಉಪ್ಪಿ ಡೈಲಾಗ್​ ಹೇಳಿದ ಗಿಲ್ಲಿ
ಬಿಗ್ ಬಾಸ್ ಅಲ್ಲಿ ರಕ್ಷಿತಾ ಶೆಟ್ಟಿ ವಿರುದ್ಧ ತಿರುಗಿಬಿದ್ದ ಮನೆ ಮಂದಿ
ಬಿಗ್ ಬಾಸ್ ಅಲ್ಲಿ ರಕ್ಷಿತಾ ಶೆಟ್ಟಿ ವಿರುದ್ಧ ತಿರುಗಿಬಿದ್ದ ಮನೆ ಮಂದಿ
'ಕಣ್ಣೀರು ಸುರಿಸಬೇಡ, ನಿನ್ನ ಹಿಂದೆ ನಾನಿದ್ದೇನೆ'; ರಿಷಬ್​ಗೆ ದೈವದ ಅಭಯ
'ಕಣ್ಣೀರು ಸುರಿಸಬೇಡ, ನಿನ್ನ ಹಿಂದೆ ನಾನಿದ್ದೇನೆ'; ರಿಷಬ್​ಗೆ ದೈವದ ಅಭಯ
ದೆಹಲಿ ವಿಮಾನ ನಿಲ್ದಾಣದಿಂದ ಒಂದೇ ಕಾರಿನಲ್ಲಿ ಪ್ರಯಾಣಿಸಿದ ಮೋದಿ-ಪುಟಿನ್
ದೆಹಲಿ ವಿಮಾನ ನಿಲ್ದಾಣದಿಂದ ಒಂದೇ ಕಾರಿನಲ್ಲಿ ಪ್ರಯಾಣಿಸಿದ ಮೋದಿ-ಪುಟಿನ್
ಜಾತಕ ಇಲ್ಲದವರು ಏನು ಮಾಡಬೇಕು? ಏನೆಲ್ಲಾ ಪರಿಹಾರಗಳಿವೆ ಗೊತ್ತಾ?
ಜಾತಕ ಇಲ್ಲದವರು ಏನು ಮಾಡಬೇಕು? ಏನೆಲ್ಲಾ ಪರಿಹಾರಗಳಿವೆ ಗೊತ್ತಾ?