Digital Health Mission 2021: ಆರೋಗ್ಯ ಕ್ಷೇತ್ರ ಸುಧಾರಣೆಯ ಅತ್ಯಂತ ಮಹತ್ವದ ಘಟ್ಟ ಈ ಡಿಜಿಟಲ್​ ಹೆಲ್ತ್​ ಮಿಷನ್​: ಪ್ರಧಾನಿ ಮೋದಿ

ಆಯುಷ್ಮಾನ್​ ಭಾರತ್​ ಪ್ರಧಾನಮಂತ್ರಿ ಜನ ಆರೋಗ್ಯ ಯೋಜನೆಯ ಮೂಲಕ ಬಡವರ ಆರೋಗ್ಯದ ಕಾಳಜಿ ವಹಿಸಲಾಗಿದೆ. ಇದುವರೆಗೆ ಸುಮಾರು 2 ಕೋಟಿ ಜನರು ಆಯುಷ್ಮಾನ್​ ಭಾರತ್​ ಪ್ರಧಾನಮಂತ್ರಿ ಜನ ಆರೋಗ್ಯ ಯೋಜನೆಯಡಿ ವೈದ್ಯಕೀಯ ವ್ಯವಸ್ಥೆ ಪಡೆದಿದ್ದಾರೆ ಎಂದು ಪಿಎಂ ಮೋದಿ ತಿಳಿಸಿದರು.

Digital Health Mission 2021: ಆರೋಗ್ಯ ಕ್ಷೇತ್ರ ಸುಧಾರಣೆಯ ಅತ್ಯಂತ ಮಹತ್ವದ ಘಟ್ಟ ಈ ಡಿಜಿಟಲ್​ ಹೆಲ್ತ್​ ಮಿಷನ್​: ಪ್ರಧಾನಿ ಮೋದಿ
ನರೇಂದ್ರ ಮೋದಿ
Follow us
| Updated By: Lakshmi Hegde

Updated on:Sep 27, 2021 | 12:35 PM

ದೆಹಲಿ: ಭಾರತದ ಆರೋಗ್ಯ ಕ್ಷೇತ್ರದಲ್ಲಿ ಕ್ರಾಂತಿಕಾರಿ ಬದಲಾವಣೆ ತರಬಲ್ಲ ಶಕ್ತಿ ಆಯುಷ್ಮಾನ್​ ಡಿಜಿಟಲ್ ಆರೋಗ್ಯ ಮಿಷನ್​ ಗೆ ನಿಶ್ಚಿತವಾಗಿಯೂ ಇದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದರು. ಇಂದು ವಿಡಿಯೋ ಕಾನ್ಫರೆನ್ಸ್ ಮೂಲಕ ಡಿಜಿಟಲ್​ ಆರೋಗ್ಯ ಮಿಷನ್​ ಉದ್ಘಾಟಿಸಿ ಮಾತನಾಡಿದ ಅವರು, ಕಳೆದ ಮೂರುವರ್ಷಗಳ ಹಿಂದೆ ಸೆಪ್ಟೆಂಬರ್​ 27ರಂದು, ಪಂಡಿತ್​ ದೀನ್ ದಯಾಳ್​ ಉಪಾಧ್ಯಾಯರ ಜನ್ಮ ವಾರ್ಷಿಕೋತ್ಸವದಂದು ಆಯುಷ್ಮಾನ್​ ಭಾರತ್​ ಯೋಜನೆಯನ್ನು ಅನುಷ್ಠಾನಕ್ಕೆ ತರಲಾಯಿತು. ಅದರ ಭಾಗವಾದ ಆಯುಷ್ಮಾನ್​ ಡಿಜಿಟಲ್​ ಮಿಷನ್​ ಇಂದಿನಿಂದ ರಾಷ್ಟ್ರಾದ್ಯಂತ ಅನ್ವಯ ಆಗುತ್ತಿದೆ. ಕಳೆದ ಏಳುವರ್ಷಗಳಿಂದ ದೇಶದ ಆರೋಗ್ಯ ಕ್ಷೇತ್ರ ಸುಧಾರಿಸಲು ಹಲವು ಕ್ರಮಗಳನ್ನು ಕೈಗೊಳ್ಳಲಾಗುತ್ತಿದ್ದು, ಆ ಪ್ರಯತ್ನ ಇಂದು ಒಂದು ಮಹತ್ವದ ಘಟ್ಟ ತಲುಪಿದೆ ಎಂದು ಹೇಳಿದರು. 

ಆರೋಗ್ಯ ಸೇತು ಮತ್ತು ಕೊವಿನ್​ ಆ್ಯಪ್​ಗಳ ಬಗ್ಗೆ ಉಲ್ಲೇಖ ಮಾಡಿದ ಅವರು, ಕೊವಿಡ್ 19 ಸಾಂಕ್ರಾಮಿಕ ಬಂದ ಹೊತ್ತಲ್ಲಿ ಹೊರಬಂದ ಆರೋಗ್ಯ ಸೇತು ಆ್ಯಪ್​ ಕೊರೊನಾ ಪ್ರಸರಣವನ್ನು ತಡೆಯಲು ಸಹಾಯ ಮಾಡಿದೆ. ಹಾಗೇ, ಇಂದು ಕೊರೊನಾ ಲಸಿಕಾ ಅಭಿಯಾನ ದೊಡ್ಡ ಮಟ್ಟದಲ್ಲಿ ಆಗುತ್ತಿದ್ದು, ಇದುವರೆಗೆ 90 ಕೋಟಿ ಡೋಸ್​ಗಳಷ್ಟು ಲಸಿಕೆ ಹಾಕಲಾಗಿದೆ. ಈ ಲಸಿಕಾ ಅಭಿಯಾನದಲ್ಲಿ ಕೊವಿನ್​ ಆ್ಯಪ್ ಬಹುಮುಖ್ಯ ಪಾತ್ರ ವಹಿಸಿದೆ ಎಂದು ಹೇಳಿದರು.

ಇ-ಸಂಜೀವಿನಿ ಬಗ್ಗೆ ಪ್ರಸ್ತಾಪಿಸಿದ ಪ್ರಧಾನಿ ಮೋದಿ, ದೇಶದ ದುರ್ಗಮ ಪ್ರದೇಶಗಳ ನಿವಾಸಿಗಳಿಗೆ ಸಹಾಯ ಮಾಡುವ ಇ-ಸಂಜೀವಿನಿಯಡಿ ಇದುವರೆಗೆ 125 ಕೋಟಿಗಳಷ್ಟು ಸಮಾಲೋಚನೆ ನಡೆಸಲಾಗಿದೆ. ಅಂದರೆ ದುರ್ಗಮ, ದೂರದ ಪ್ರದೇಶದ ಜನರು ಮನೆಯಲ್ಲೇ ಕುಳಿತು ಇ-ಸಂಜೀವಿನಿ ವ್ಯವಸ್ಥೆ ಮೂಲಕ ದೊಡ್ಡದೊಡ್ಡ ಆಸ್ಪತ್ರೆಗಳ ತಜ್ಞರ ಜತೆ ತಮ್ಮ ಆರೋಗ್ಯದ ಬಗ್ಗೆ ಸಮಾಲೋಚನೆ ನಡೆಸಬಹುದು. ವೈದ್ಯಕೀಯ ವ್ಯವಸ್ಥೆ ಪಡೆಯಬಹುದಾಗಿದೆ ಎಂದು ತಿಳಿಸಿದರು.

ಆಯುಷ್ಮಾನ್​ ಭಾರತ್​ ಪ್ರಧಾನಮಂತ್ರಿ ಜನ ಆರೋಗ್ಯ ಯೋಜನೆಯ ಮೂಲಕ ಬಡವರ ಆರೋಗ್ಯದ ಕಾಳಜಿ ವಹಿಸಲಾಗಿದೆ. ಇದುವರೆಗೆ ಸುಮಾರು 2 ಕೋಟಿ ಜನರು ಆಯುಷ್ಮಾನ್​ ಭಾರತ್​ ಪ್ರಧಾನಮಂತ್ರಿ ಜನ ಆರೋಗ್ಯ ಯೋಜನೆಯಡಿ ವೈದ್ಯಕೀಯ ವ್ಯವಸ್ಥೆ ಪಡೆದಿದ್ದಾರೆ. ಉಚಿತ ಚಿಕಿತ್ಸೆ ಪಡೆದಿದ್ದಾರೆ. ಈ ಯೋಜನೆಯ ಅರ್ಧದಷ್ಟು ಫಲಾನುಭವಿಗಳು ಮಹಿಳೆಯರಾಗಿದ್ದಾರೆ. ಇನ್ನು ನಮ್ಮಲ್ಲಿ 130 ಕೋಟಿ ಆಧಾರ್​ ನಂಬರ್​ಗಳು, 118 ಕೋಟಿ ಮೊಬೈಲ್​ ಚಂದಾದಾರರು, 80 ಕೋಟಿ ಇಂಟರ್​ನೆಟ್​ ಬಳಕೆದಾರರು, 43 ಕೋಟಿ ಜನ್​ಧನ್​ ಬ್ಯಾಂಕ್​ ಅಕೌಂಟ್​ ಹೊಂದಿರುವ ಜನರು ಇದ್ದಾರೆ. ಇಡೀ ಜಗತ್ತಿನಲ್ಲಿ ಎಲ್ಲಿಯೂ ಸಂಪರ್ಕ ಕ್ಷೇತ್ರದಲ್ಲಿ ಇಷ್ಟು ದೊಡ್ಡ ಮಟ್ಟದ ಮೂಲಸೌಕರ್ಯ ವ್ಯವಸ್ಥೆಯಿಲ್ಲ. ಈ ಡಿಜಿಟಲ್​ ಮೂಲಸೌಕರ್ಯಗಳು ಪಡಿತರ, ಅಗತ್ಯ ಸೇವೆಗಳನ್ನು ಸರ್ಕಾರದಿಂದ ಅತ್ಯಂತ ವೇಗವಾಗಿ ಮತ್ತು ಪಾರದರ್ಶಕವಾಗಿ ಸಾಮಾನ್ಯ ಜನರಿಗೆ ಸಾಗಿಸುತ್ತಿವೆ ಎಂದೂ ಪ್ರಧಾನಿ ಹೇಳಿದರು. ಹಾಗೇ, ಡಿಜಿಟಲ್ ಆರೋಗ್ಯ ಮಿಷನ್​​ನಡಿ ಪ್ರತಿಯೊಬ್ಬ ಭಾರತೀಯನೂ ಒಂದು ಆರೋಗ್ಯ ಐಡಿ ಪಡೆಯುತ್ತಾರೆ. ಆ ನಾಗರಿಕ ಆರೋಗ್ಯ ದಾಖಲೆಗಳು ಡಿಜಿಟಲೀಕರಣಗೊಂಡು, ಸುರಕ್ಷಿತವಾಗಿರುತ್ತವೆ ಎಂದೂ ಹೇಳಿದರು.

ಇದನ್ನೂ ಓದಿ: Digital Health Mission Launch: ಆಯುಷ್ಮಾನ್​ ಆರೋಗ್ಯ ಡಿಜಿಟಲ್​ ಮಿಷನ್​ಗೆ ಚಾಲನೆ ನೀಡಿದ ಪ್ರಧಾನಿ ಮೋದಿ

National Digital Health Mission: ಆರೋಗ್ಯ ಕಾರ್ಡ್​ ಹೇಗೆ ಕಾರ್ಯ ನಿರ್ವಹಿಸುತ್ತೆ? ಜನರು ತಿಳಿದುಕೊಳ್ಳಲೇಬೇಕಾದ ಅಂಶಗಳೇನು?

(Digital Health Mission will bring revolutionary change in healthcare facilities Of India Says PM Modi)

Published On - 12:26 pm, Mon, 27 September 21

ತಾಜಾ ಸುದ್ದಿ
ವ್ಯಾಪ್ತಿ ಮತ್ತು ಜವಾಬ್ದಾರಿಯ ಬಗ್ಗೆ ಕುಮಾರಸ್ವಾಮಿಗೆ ಮಾಹಿತಿ ಇಲ್ಲ: ಸಚಿವ
ವ್ಯಾಪ್ತಿ ಮತ್ತು ಜವಾಬ್ದಾರಿಯ ಬಗ್ಗೆ ಕುಮಾರಸ್ವಾಮಿಗೆ ಮಾಹಿತಿ ಇಲ್ಲ: ಸಚಿವ
ದರ್ಶನ್ ಪ್ರಕರಣ: ವಿಚಾರಣೆ ಬಳಿಕ ಕಾರ್ತಿಕ್ ಪುರೋಹಿತ್ ಮಾತು
ದರ್ಶನ್ ಪ್ರಕರಣ: ವಿಚಾರಣೆ ಬಳಿಕ ಕಾರ್ತಿಕ್ ಪುರೋಹಿತ್ ಮಾತು
ರೇಣುಕಾಸ್ವಾಮಿ ಕೊಲೆ ಪ್ರಕರಣ; ಆರೋಪಿ ಪ್ರದೋಶ್ ಸ್ನೇಹಿತನ ವಿಚಾರಣೆ ಅಂತ್ಯ
ರೇಣುಕಾಸ್ವಾಮಿ ಕೊಲೆ ಪ್ರಕರಣ; ಆರೋಪಿ ಪ್ರದೋಶ್ ಸ್ನೇಹಿತನ ವಿಚಾರಣೆ ಅಂತ್ಯ
ಚಲುವರಾಯಸ್ವಾಮಿಯ ಲೂಟಿ ಹೊಡೆಯುವ ಕೆಲಸಕ್ಕೆ ನಾನು ಅಡ್ಡಿ? ಕುಮಾರಸ್ವಾಮಿ
ಚಲುವರಾಯಸ್ವಾಮಿಯ ಲೂಟಿ ಹೊಡೆಯುವ ಕೆಲಸಕ್ಕೆ ನಾನು ಅಡ್ಡಿ? ಕುಮಾರಸ್ವಾಮಿ
ಮೈದುಂಬಿ ಹರಿಯುತ್ತಿರುವ ಶರಾವತಿ, ಜೋಗದ ಜಲಪಾತವೀಗ ರುದ್ರ ರಮಣೀಯ!
ಮೈದುಂಬಿ ಹರಿಯುತ್ತಿರುವ ಶರಾವತಿ, ಜೋಗದ ಜಲಪಾತವೀಗ ರುದ್ರ ರಮಣೀಯ!
ಭೈರತಿ ಸುರೇಶ್ ಮುಡಾದ ಯಾವ ದಾಖಲಾತಿಗಳನ್ನು ಚಾಪರ್​ನಲ್ಲಿ ಒಯ್ದರು?ಹೆಚ್​ಡಿಕೆ
ಭೈರತಿ ಸುರೇಶ್ ಮುಡಾದ ಯಾವ ದಾಖಲಾತಿಗಳನ್ನು ಚಾಪರ್​ನಲ್ಲಿ ಒಯ್ದರು?ಹೆಚ್​ಡಿಕೆ
ಕೀರ್ತಿ ಚಕ್ರ ಸ್ವೀಕರಿಸಿದ ಅಂಶುಮಾನ್ ಸಿಂಗ್ ಪತ್ನಿ ನೋಡಿ ಭಾವುಕರಾದ ಮುರ್ಮು
ಕೀರ್ತಿ ಚಕ್ರ ಸ್ವೀಕರಿಸಿದ ಅಂಶುಮಾನ್ ಸಿಂಗ್ ಪತ್ನಿ ನೋಡಿ ಭಾವುಕರಾದ ಮುರ್ಮು
ನಗರದಲ್ಲಿ ಶಿವಕುಮಾರ್​ರನ್ನು ಭೇಟಿಯಾದ ಬಿಕೆಯು ವಕ್ತಾರ ರಾಕೇಶ್ ಟಿಕಾಯತ್
ನಗರದಲ್ಲಿ ಶಿವಕುಮಾರ್​ರನ್ನು ಭೇಟಿಯಾದ ಬಿಕೆಯು ವಕ್ತಾರ ರಾಕೇಶ್ ಟಿಕಾಯತ್
ಪೊಲೀಸರು ರಿಯಲ್ ಎಸ್ಟೇಟ್​ ವ್ಯವಹಾರದಲ್ಲಿ ಶಾಮೀಲಾಗಕೂಡದು: ಸಿದ್ದರಾಮಯ್ಯ 
ಪೊಲೀಸರು ರಿಯಲ್ ಎಸ್ಟೇಟ್​ ವ್ಯವಹಾರದಲ್ಲಿ ಶಾಮೀಲಾಗಕೂಡದು: ಸಿದ್ದರಾಮಯ್ಯ 
ರಾಜಕೀಯ ಪಿತೂರಿಗೆ ಅರವಿಂದ್ ಕೇಜ್ರಿವಾಲ್ ಬಲಿ; ಸುನೀತಾ ಕೇಜ್ರಿವಾಲ್ ಆರೋಪ
ರಾಜಕೀಯ ಪಿತೂರಿಗೆ ಅರವಿಂದ್ ಕೇಜ್ರಿವಾಲ್ ಬಲಿ; ಸುನೀತಾ ಕೇಜ್ರಿವಾಲ್ ಆರೋಪ