AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಡಾಂಕಿ ಪ್ರಯಾಣ: ಅಮೆರಿಕ ಪ್ರವೇಶಿಸಲು ₹ 60 ಲಕ್ಷ ಪಾವತಿ ಮಾಡಿದ್ದ ಗುಜರಾತಿ ಪ್ರಯಾಣಿಕರು

260 ಭಾರತೀಯರು ಸೇರಿದಂತೆ 303 ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಏರ್‌ಬಸ್ A340 ಎಂಬ ನಿಕರಾಗುವಾ ವಿಮಾನವನ್ನು ಒಂದು ವಾರದ ಹಿಂದೆ ಶಂಕಿತ ಮಾನವ ಕಳ್ಳಸಾಗಣೆ ಆರೋಪದ ಮೇಲೆ ನಾಲ್ಕು ದಿನಗಳ ಕಾಲ ಫ್ರಾನ್ಸ್‌ನಲ್ಲಿ ನಿಲ್ಲಿಸಲಾಗಿತ್ತು. ಡಿಸೆಂಬರ್ 26ರ ಮುಂಜಾನೆ ಅದು ಮುಂಬೈಗೆ ವಾಪಸ್ ಆಗಿತ್ತು. ಈ ವಿಮಾನದಲ್ಲಿದ್ದ ಗುಜರಾತಿಗಳು ಅಕ್ರಮವಾಗಿ ಅಮೆರಿಕ ತಲುಪಲು ಏಜೆಂಟರಿಗೆ 60-80 ಲಕ್ಷ ರೂಪಾಯಿ ಪಾವತಿ ಮಾಡಿದ್ದರು.

ಡಾಂಕಿ ಪ್ರಯಾಣ: ಅಮೆರಿಕ ಪ್ರವೇಶಿಸಲು ₹ 60 ಲಕ್ಷ ಪಾವತಿ ಮಾಡಿದ್ದ ಗುಜರಾತಿ ಪ್ರಯಾಣಿಕರು
ವಿಮಾನ (ಪ್ರಾತಿನಿಧಿಕ ಚಿತ್ರ)
ರಶ್ಮಿ ಕಲ್ಲಕಟ್ಟ
|

Updated on: Jan 02, 2024 | 7:21 PM

Share

ಅಹಮದಾಬಾದ್ ಜನವರಿ 02: ಶಂಕಿತ ಮಾನವ ಕಳ್ಳಸಾಗಣೆ (human trafficking)ಆರೋಪದಡಿ ಫ್ರಾನ್ಸ್‌ನಿಂದ (France) ವಾಪಸ್ ಕಳುಹಿಸಲಾಗಿದ್ದ ನಿಕರಾಗುವಾ (Nicaragua) ವಿಮಾನದಲ್ಲಿದ್ದ ಗುಜರಾತ್‌ನ (Gujarat) 60ಕ್ಕೂ ಹೆಚ್ಚು ಮಂದಿ ಅಕ್ರಮವಾಗಿ ಲ್ಯಾಟಿನ್ ಅಮೆರಿಕ ತಲುಪಿದ ನಂತರ ಅಮೆರಿಕಕ್ಕೆ ತೆರಳುವುದಾಗಿ ಭರವಸೆ ನೀಡಿದ ವಲಸೆ ಏಜೆಂಟ್‌ಗಳಿಗೆ ₹ 60 ಲಕ್ಷದಿಂದ ₹ 80 ಲಕ್ಷ ಪಾವತಿಸಲು ಒಪ್ಪಿಕೊಂಡಿದ್ದರು ಎಂದು ತನಿಖಾ ಅಧಿಕಾರಿಗಳು ಹೇಳಿದ್ದಾರೆ.

260 ಭಾರತೀಯರು ಸೇರಿದಂತೆ 303 ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಏರ್‌ಬಸ್ A340 ಎಂಬ ನಿಕರಾಗುವಾ ವಿಮಾನವನ್ನು ಒಂದು ವಾರದ ಹಿಂದೆ ಶಂಕಿತ ಮಾನವ ಕಳ್ಳಸಾಗಣೆ ಆರೋಪದ ಮೇಲೆ ನಾಲ್ಕು ದಿನಗಳ ಕಾಲ ಫ್ರಾನ್ಸ್‌ನಲ್ಲಿ ನಿಲ್ಲಿಸಲಾಗಿತ್ತು. ಡಿಸೆಂಬರ್ 26ರ ಮುಂಜಾನೆ ಅದು ಮುಂಬೈಗೆ ವಾಪಸ್ ಆಗಿತ್ತು. ರಾಜ್ಯ ಅಪರಾಧ ತನಿಖಾ ಇಲಾಖೆ (ಸಿಐಡಿ) ಅಪರಾಧ ಮತ್ತು ರೈಲ್ವೆ ಅಧಿಕಾರಿಯ ಪ್ರಕಾರ, ಆ ಪ್ರಯಾಣಿಕರಲ್ಲಿ ಗುಜರಾತ್‌ನ 66 ಮಂದಿ ಇದ್ದು, ಅವರು ಈಗಾಗಲೇ ಊರು ಸೇರಿದ್ದಾರೆ.

ಪ್ರಕರಣದ ತನಿಖೆ ನಡೆಸುತ್ತಿರುವ ಸಿಐಡಿ ಪೊಲೀಸ್ ವರಿಷ್ಠಾಧಿಕಾರಿ ಸಂಜಯ್ ಖರತ್, ಕೆಲವು ಅಪ್ರಾಪ್ತ ವಯಸ್ಕರು ಸೇರಿದಂತೆ 66 ಗುಜರಾತ್ ಮೂಲದವರು ಮುಖ್ಯವಾಗಿ ಮೆಹ್ಸಾನಾ, ಅಹಮದಾಬಾದ್, ಗಾಂಧಿನಗರ ಮತ್ತು ಆನಂದ್ ಜಿಲ್ಲೆಗಳಿಂದ ಬಂದವರು ಎಂದಿದ್ದಾರೆ. ನಾವು ಈಗಾಗಲೇ ಅವರಲ್ಲಿ 55 ಮಂದಿಯನ್ನು ವಿಚಾರಣೆಗೊಳಪಡಿಸಿದ್ದು ಅವರ ಹೇಳಿಕೆಗಳನ್ನು ದಾಖಲಿಸಿದ್ದೇವೆ. ಅವರಲ್ಲಿ ಹೆಚ್ಚಿನವರು 8 ರಿಂದ 12 ನೇ ತರಗತಿಯವರೆಗೆ ಓದಿದ್ದಾರೆ. ಪ್ರತಿಯೊಬ್ಬರೂ  ದುಬೈ ಮೂಲಕ ನಿಕರಾಗುವಾ ತಲುಪಿದ ನಂತರ ಕಾನೂನುಬಾಹಿರವಾಗಿ ಯುಎಸ್‌ಗೆ ಪ್ರವೇಶಿಸಲುಸಹಾಯ ಮಾಡಿದ ಸ್ಥಳೀಯ ವಲಸೆ ಏಜೆಂಟರಿಗೆ ₹ 60 ಲಕ್ಷದಿಂದ ₹ 80 ಲಕ್ಷ ನೀಡಲು ಒಪ್ಪಿಕೊಂಡಿದ್ದಾರೆ ಎಂದು ಅಧಿಕಾರಿ ಹೇಳಿದ್ದಾರೆ.

ರಾಜ್ಯ ಸಿಐಡಿ ಇದುವರೆಗೆ ಸುಮಾರು 15 ಏಜೆಂಟ್‌ಗಳ ಹೆಸರು ಮತ್ತು ಸಂಪರ್ಕ ಸಂಖ್ಯೆಗಳನ್ನು ಪಡೆದುಕೊಂಡಿದೆ. ಈ ವ್ಯಕ್ತಿಗಳು ಯುಎಸ್-ಮೆಕ್ಸಿಕೊ ಗಡಿಯ ಮೂಲಕ ಅಕ್ರಮವಾಗಿ ಯುಎಸ್ ಪ್ರವೇಶಿಸಲು ಸಹಾಯ ಮಾಡುವ ಭರವಸೆ ನೀಡಿದ್ದಾರೆ. ಈ ಏಜೆಂಟರು ಈ 55 ವ್ಯಕ್ತಿಗಳನ್ನು ಯುಎಸ್ ತಲುಪಿದ ನಂತರ ಮಾತ್ರ ಹಣವನ್ನು ಪಾವತಿಸುವಂತೆ ಕೇಳಿದ್ದರು. ತಮ್ಮ ವ್ಯಕ್ತಿಗಳು ನಿಕರಾಗುವಾದಿಂದ ಯುಎಸ್ ಗಡಿಗೆ ಕರೆದೊಯ್ಯುತ್ತಾರೆ. ನಂತರ ಗಡಿ ದಾಟಲು ಸಹಾಯ ಮಾಡುತ್ತಾರೆ ಎಂದು ಏಜೆಂಟರು ಪ್ರಯಾಣಿಕರಿಗೆ ತಿಳಿಸಿದ್ದರು. ಏಜೆಂಟರು ಈ ಪ್ರಯಾಣಿಕರಿಗೆ ವಿಮಾನ ಟಿಕೆಟ್‌ಗಳನ್ನು ಕಾಯ್ದಿರಿಸಿದ್ದಾರೆ. ಯಾವುದೇ ತುರ್ತು ಪರಿಸ್ಥಿತಿಯನ್ನು ಎದುರಿಸಲು ಪ್ರತಿ ಪ್ರಯಾಣಿಕರಿಗೆ  1,000 ರಿಂದ 3,000 ಅಮೆರಿಕನ್ ಡಾಲರ್  ನೀಡಿದರು ಖರತ್ ಹೇಳಿದರು.

ಏಜೆಂಟರು ರೂಪಿಸಿದ ಯೋಜನೆಯ ಪ್ರಕಾರ, ಈ 66 ಪ್ರಯಾಣಿಕರು ಡಿಸೆಂಬರ್ 10 ಮತ್ತು 20 ರ ನಡುವೆ ಅಹಮದಾಬಾದ್, ಮುಂಬೈ ಮತ್ತು ದೆಹಲಿಯಿಂದ ದುಬೈ ತಲುಪಿದರು. ಏಜೆಂಟರ ನಿರ್ದೇಶನದಂತೆ, ಈ ಪ್ರಯಾಣಿಕರು ಡಿಸೆಂಬರ್ 21ರಂದು ಫುಜೈರಾ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಖಾಸಗಿ ವಿಮಾನಯಾನ ಸಂಸ್ಥೆಯ ನಿಕರಾಗುವಾ ವಿಮಾನವನ್ನು ಹತ್ತಿದರು ಎಂದು ಸಿಐಡಿ ಬಿಡುಗಡೆ ಮಾಡಿದ ಪ್ರಕಟಣೆ ಮಂಗಳವಾರ ತಿಳಿಸಿದೆ.

ಇದನ್ನೂ ಓದಿ: ಮುಂಬೈಗೆ ಬಂದಿಳಿದ ಫ್ರಾನ್ಸ್​ ವಶದಲ್ಲಿದ್ದ ಭಾರತೀಯ ಪ್ರಯಾಣಿಕರಿದ್ದ ವಿಮಾನ

ಈ 55 ಪ್ರಯಾಣಿಕರ ದುಬೈ ವೀಸಾ ಪಡೆದ ಏಜೆಂಟ್‌ಗಳು, ಅವರ ಖಾತೆಯಿಂದ ವೀಸಾ ಶುಲ್ಕ ಪಾವತಿಸಿದ ಏಜೆಂಟರ ಬ್ಯಾಂಕ್ ವಿವರಗಳ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಸಂಗ್ರಹಿಸಲು ಸಹಾಯ ಮಾಡಲು ಸಿಐಡಿ ಕೇಂದ್ರೀಯ ತನಿಖಾ ದಳಕ್ಕೆ (ಸಿಬಿಐ) ಪತ್ರ ಬರೆದಿದೆ ಎಂದು ಅದು ಹೇಳಿದೆ.ರೊಮೇನಿಯನ್ ಚಾರ್ಟರ್ ಕಂಪನಿ ಲೆಜೆಂಡ್ ಏರ್‌ಲೈನ್ಸ್ ನಿರ್ವಹಿಸುತ್ತಿದ್ದ ಮತ್ತು ನಿಕರಾಗುವಾಗೆ ಹೊರಟಿದ್ದ ಚಾರ್ಟರ್ಡ್ ಫ್ಲೈಟ್, ಫ್ರೆಂಚ್ ಪೋಲೀಸ್ ಮಧ್ಯಪ್ರವೇಶಿಸಿದಾಗ ದುಬೈನಿಂದ ಮಾರ್ಗದಲ್ಲಿ ತಾಂತ್ರಿಕ ನಿಲುಗಡೆಗಾಗಿ ಡಿಸೆಂಬರ್ 21 ರಂದು ಪ್ಯಾರಿಸ್ ಬಳಿಯ ವ್ಯಾಟ್ರಿಯಲ್ಲಿ ಇಳಿದಿತ್ತು. ಫ್ರೆಂಚ್ ಅಧಿಕಾರಿಗಳು ಪ್ರವಾಸದ ಪರಿಸ್ಥಿತಿಗಳು ಮತ್ತು ಉದ್ದೇಶದ ಬಗ್ಗೆ ನ್ಯಾಯಾಂಗ ತನಿಖೆಯನ್ನು ಪ್ರಾರಂಭಿಸಿದ್ದರು.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಕಳಪೆ ಕೊಟ್ಟ ರಾಶಿಕಾ ಮೇಲೆ ಉರಿದು ಬಿದ್ದ ರಕ್ಷಿತಾ, ನಕ್ಕ ಧ್ರುವಂತ್
ಕಳಪೆ ಕೊಟ್ಟ ರಾಶಿಕಾ ಮೇಲೆ ಉರಿದು ಬಿದ್ದ ರಕ್ಷಿತಾ, ನಕ್ಕ ಧ್ರುವಂತ್
ಡೆಂಟಲ್ ವಿದ್ಯಾರ್ಥಿನಿ ಆತ್ಮಹತ್ಯೆ: ಉಪನ್ಯಾಸಕನ ವಿರುದ್ಧ ತಾಯಿ ಗಂಭೀರ ಆರೋಪ
ಡೆಂಟಲ್ ವಿದ್ಯಾರ್ಥಿನಿ ಆತ್ಮಹತ್ಯೆ: ಉಪನ್ಯಾಸಕನ ವಿರುದ್ಧ ತಾಯಿ ಗಂಭೀರ ಆರೋಪ
ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಬಗ್ಗೆ ಸತೀಶ್ ಜಾರಕಿಹೊಳಿ ಸ್ಫೋಟಕ ಹೇಳಿಕೆ
ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಬಗ್ಗೆ ಸತೀಶ್ ಜಾರಕಿಹೊಳಿ ಸ್ಫೋಟಕ ಹೇಳಿಕೆ
ಬಿಳಿಗಿರಿರಂಗನ ಬೆಟ್ಟದಲ್ಲಿ ಅಗ್ನಿ ಅವಘಡ; ಅಂಗಡಿಗಳು ಭಸ್ಮ!
ಬಿಳಿಗಿರಿರಂಗನ ಬೆಟ್ಟದಲ್ಲಿ ಅಗ್ನಿ ಅವಘಡ; ಅಂಗಡಿಗಳು ಭಸ್ಮ!
KPCC ಅಧ್ಯಕ್ಷ ಸ್ಥಾನಕ್ಕೆ ಟವೆಲ್ ಹಾಕಿದ ರಾಜಣ್ಣ: ಮಾಜಿ ಸಚಿವರು ಏನಂದ್ರು?
KPCC ಅಧ್ಯಕ್ಷ ಸ್ಥಾನಕ್ಕೆ ಟವೆಲ್ ಹಾಕಿದ ರಾಜಣ್ಣ: ಮಾಜಿ ಸಚಿವರು ಏನಂದ್ರು?
ಕ್ಷುಲ್ಲಕ ಕಾರಣಕ್ಕೆ ನಡು ರಸ್ತೆಯಲ್ಲೇ ಮಾರಾಮಾರಿ: ಸ್ಥಳೀಯರಿಂದ ಬಿತ್ತು ಗೂಸಾ
ಕ್ಷುಲ್ಲಕ ಕಾರಣಕ್ಕೆ ನಡು ರಸ್ತೆಯಲ್ಲೇ ಮಾರಾಮಾರಿ: ಸ್ಥಳೀಯರಿಂದ ಬಿತ್ತು ಗೂಸಾ
ಸುಜಾತಾ ಹಂಡಿ ಕ್ರೂರತೆಯ ಮತ್ತಷ್ಟು ವಿಡಿಯೋ ವೈರಲ್
ಸುಜಾತಾ ಹಂಡಿ ಕ್ರೂರತೆಯ ಮತ್ತಷ್ಟು ವಿಡಿಯೋ ವೈರಲ್
ನಾನು ಸತ್ತು 47 ವರ್ಷವಾಗಿದೆ ಎಂದು ಕೂಗುತ್ತಾ ಪ್ರತಿಭಟಿಸಿದ ಇರಾನ್ ಮಹಿಳೆ
ನಾನು ಸತ್ತು 47 ವರ್ಷವಾಗಿದೆ ಎಂದು ಕೂಗುತ್ತಾ ಪ್ರತಿಭಟಿಸಿದ ಇರಾನ್ ಮಹಿಳೆ
ಬೆಂಗಳೂರು ಹೊಸೂರು ಹೆದ್ದಾರಿಯಲ್ಲಿ ಕಿಮೀಗಟ್ಟಲೆ ಟ್ರಾಫಿಕ್ ಜಾಮ್
ಬೆಂಗಳೂರು ಹೊಸೂರು ಹೆದ್ದಾರಿಯಲ್ಲಿ ಕಿಮೀಗಟ್ಟಲೆ ಟ್ರಾಫಿಕ್ ಜಾಮ್
ಪ್ಯಾರಾ-ಅಥ್ಲೀಟ್ ಪ್ರಸಾದ್​​​ಗೆ ವಸತಿ ಭಾಗ್ಯ ಇಲ್ಲ
ಪ್ಯಾರಾ-ಅಥ್ಲೀಟ್ ಪ್ರಸಾದ್​​​ಗೆ ವಸತಿ ಭಾಗ್ಯ ಇಲ್ಲ