Sign In

By signing in or creating an account, you agree with Associated Broadcasting Company's Terms & Conditions and Privacy Policy.

ಡಾಂಕಿ ಪ್ರಯಾಣ: ಅಮೆರಿಕ ಪ್ರವೇಶಿಸಲು ₹ 60 ಲಕ್ಷ ಪಾವತಿ ಮಾಡಿದ್ದ ಗುಜರಾತಿ ಪ್ರಯಾಣಿಕರು

260 ಭಾರತೀಯರು ಸೇರಿದಂತೆ 303 ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಏರ್‌ಬಸ್ A340 ಎಂಬ ನಿಕರಾಗುವಾ ವಿಮಾನವನ್ನು ಒಂದು ವಾರದ ಹಿಂದೆ ಶಂಕಿತ ಮಾನವ ಕಳ್ಳಸಾಗಣೆ ಆರೋಪದ ಮೇಲೆ ನಾಲ್ಕು ದಿನಗಳ ಕಾಲ ಫ್ರಾನ್ಸ್‌ನಲ್ಲಿ ನಿಲ್ಲಿಸಲಾಗಿತ್ತು. ಡಿಸೆಂಬರ್ 26ರ ಮುಂಜಾನೆ ಅದು ಮುಂಬೈಗೆ ವಾಪಸ್ ಆಗಿತ್ತು. ಈ ವಿಮಾನದಲ್ಲಿದ್ದ ಗುಜರಾತಿಗಳು ಅಕ್ರಮವಾಗಿ ಅಮೆರಿಕ ತಲುಪಲು ಏಜೆಂಟರಿಗೆ 60-80 ಲಕ್ಷ ರೂಪಾಯಿ ಪಾವತಿ ಮಾಡಿದ್ದರು.

ಡಾಂಕಿ ಪ್ರಯಾಣ: ಅಮೆರಿಕ ಪ್ರವೇಶಿಸಲು ₹ 60 ಲಕ್ಷ ಪಾವತಿ ಮಾಡಿದ್ದ ಗುಜರಾತಿ ಪ್ರಯಾಣಿಕರು
ವಿಮಾನ (ಪ್ರಾತಿನಿಧಿಕ ಚಿತ್ರ)
Follow us
ರಶ್ಮಿ ಕಲ್ಲಕಟ್ಟ
|

Updated on: Jan 02, 2024 | 7:21 PM

ಅಹಮದಾಬಾದ್ ಜನವರಿ 02: ಶಂಕಿತ ಮಾನವ ಕಳ್ಳಸಾಗಣೆ (human trafficking)ಆರೋಪದಡಿ ಫ್ರಾನ್ಸ್‌ನಿಂದ (France) ವಾಪಸ್ ಕಳುಹಿಸಲಾಗಿದ್ದ ನಿಕರಾಗುವಾ (Nicaragua) ವಿಮಾನದಲ್ಲಿದ್ದ ಗುಜರಾತ್‌ನ (Gujarat) 60ಕ್ಕೂ ಹೆಚ್ಚು ಮಂದಿ ಅಕ್ರಮವಾಗಿ ಲ್ಯಾಟಿನ್ ಅಮೆರಿಕ ತಲುಪಿದ ನಂತರ ಅಮೆರಿಕಕ್ಕೆ ತೆರಳುವುದಾಗಿ ಭರವಸೆ ನೀಡಿದ ವಲಸೆ ಏಜೆಂಟ್‌ಗಳಿಗೆ ₹ 60 ಲಕ್ಷದಿಂದ ₹ 80 ಲಕ್ಷ ಪಾವತಿಸಲು ಒಪ್ಪಿಕೊಂಡಿದ್ದರು ಎಂದು ತನಿಖಾ ಅಧಿಕಾರಿಗಳು ಹೇಳಿದ್ದಾರೆ.

260 ಭಾರತೀಯರು ಸೇರಿದಂತೆ 303 ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಏರ್‌ಬಸ್ A340 ಎಂಬ ನಿಕರಾಗುವಾ ವಿಮಾನವನ್ನು ಒಂದು ವಾರದ ಹಿಂದೆ ಶಂಕಿತ ಮಾನವ ಕಳ್ಳಸಾಗಣೆ ಆರೋಪದ ಮೇಲೆ ನಾಲ್ಕು ದಿನಗಳ ಕಾಲ ಫ್ರಾನ್ಸ್‌ನಲ್ಲಿ ನಿಲ್ಲಿಸಲಾಗಿತ್ತು. ಡಿಸೆಂಬರ್ 26ರ ಮುಂಜಾನೆ ಅದು ಮುಂಬೈಗೆ ವಾಪಸ್ ಆಗಿತ್ತು. ರಾಜ್ಯ ಅಪರಾಧ ತನಿಖಾ ಇಲಾಖೆ (ಸಿಐಡಿ) ಅಪರಾಧ ಮತ್ತು ರೈಲ್ವೆ ಅಧಿಕಾರಿಯ ಪ್ರಕಾರ, ಆ ಪ್ರಯಾಣಿಕರಲ್ಲಿ ಗುಜರಾತ್‌ನ 66 ಮಂದಿ ಇದ್ದು, ಅವರು ಈಗಾಗಲೇ ಊರು ಸೇರಿದ್ದಾರೆ.

ಪ್ರಕರಣದ ತನಿಖೆ ನಡೆಸುತ್ತಿರುವ ಸಿಐಡಿ ಪೊಲೀಸ್ ವರಿಷ್ಠಾಧಿಕಾರಿ ಸಂಜಯ್ ಖರತ್, ಕೆಲವು ಅಪ್ರಾಪ್ತ ವಯಸ್ಕರು ಸೇರಿದಂತೆ 66 ಗುಜರಾತ್ ಮೂಲದವರು ಮುಖ್ಯವಾಗಿ ಮೆಹ್ಸಾನಾ, ಅಹಮದಾಬಾದ್, ಗಾಂಧಿನಗರ ಮತ್ತು ಆನಂದ್ ಜಿಲ್ಲೆಗಳಿಂದ ಬಂದವರು ಎಂದಿದ್ದಾರೆ. ನಾವು ಈಗಾಗಲೇ ಅವರಲ್ಲಿ 55 ಮಂದಿಯನ್ನು ವಿಚಾರಣೆಗೊಳಪಡಿಸಿದ್ದು ಅವರ ಹೇಳಿಕೆಗಳನ್ನು ದಾಖಲಿಸಿದ್ದೇವೆ. ಅವರಲ್ಲಿ ಹೆಚ್ಚಿನವರು 8 ರಿಂದ 12 ನೇ ತರಗತಿಯವರೆಗೆ ಓದಿದ್ದಾರೆ. ಪ್ರತಿಯೊಬ್ಬರೂ  ದುಬೈ ಮೂಲಕ ನಿಕರಾಗುವಾ ತಲುಪಿದ ನಂತರ ಕಾನೂನುಬಾಹಿರವಾಗಿ ಯುಎಸ್‌ಗೆ ಪ್ರವೇಶಿಸಲುಸಹಾಯ ಮಾಡಿದ ಸ್ಥಳೀಯ ವಲಸೆ ಏಜೆಂಟರಿಗೆ ₹ 60 ಲಕ್ಷದಿಂದ ₹ 80 ಲಕ್ಷ ನೀಡಲು ಒಪ್ಪಿಕೊಂಡಿದ್ದಾರೆ ಎಂದು ಅಧಿಕಾರಿ ಹೇಳಿದ್ದಾರೆ.

ರಾಜ್ಯ ಸಿಐಡಿ ಇದುವರೆಗೆ ಸುಮಾರು 15 ಏಜೆಂಟ್‌ಗಳ ಹೆಸರು ಮತ್ತು ಸಂಪರ್ಕ ಸಂಖ್ಯೆಗಳನ್ನು ಪಡೆದುಕೊಂಡಿದೆ. ಈ ವ್ಯಕ್ತಿಗಳು ಯುಎಸ್-ಮೆಕ್ಸಿಕೊ ಗಡಿಯ ಮೂಲಕ ಅಕ್ರಮವಾಗಿ ಯುಎಸ್ ಪ್ರವೇಶಿಸಲು ಸಹಾಯ ಮಾಡುವ ಭರವಸೆ ನೀಡಿದ್ದಾರೆ. ಈ ಏಜೆಂಟರು ಈ 55 ವ್ಯಕ್ತಿಗಳನ್ನು ಯುಎಸ್ ತಲುಪಿದ ನಂತರ ಮಾತ್ರ ಹಣವನ್ನು ಪಾವತಿಸುವಂತೆ ಕೇಳಿದ್ದರು. ತಮ್ಮ ವ್ಯಕ್ತಿಗಳು ನಿಕರಾಗುವಾದಿಂದ ಯುಎಸ್ ಗಡಿಗೆ ಕರೆದೊಯ್ಯುತ್ತಾರೆ. ನಂತರ ಗಡಿ ದಾಟಲು ಸಹಾಯ ಮಾಡುತ್ತಾರೆ ಎಂದು ಏಜೆಂಟರು ಪ್ರಯಾಣಿಕರಿಗೆ ತಿಳಿಸಿದ್ದರು. ಏಜೆಂಟರು ಈ ಪ್ರಯಾಣಿಕರಿಗೆ ವಿಮಾನ ಟಿಕೆಟ್‌ಗಳನ್ನು ಕಾಯ್ದಿರಿಸಿದ್ದಾರೆ. ಯಾವುದೇ ತುರ್ತು ಪರಿಸ್ಥಿತಿಯನ್ನು ಎದುರಿಸಲು ಪ್ರತಿ ಪ್ರಯಾಣಿಕರಿಗೆ  1,000 ರಿಂದ 3,000 ಅಮೆರಿಕನ್ ಡಾಲರ್  ನೀಡಿದರು ಖರತ್ ಹೇಳಿದರು.

ಏಜೆಂಟರು ರೂಪಿಸಿದ ಯೋಜನೆಯ ಪ್ರಕಾರ, ಈ 66 ಪ್ರಯಾಣಿಕರು ಡಿಸೆಂಬರ್ 10 ಮತ್ತು 20 ರ ನಡುವೆ ಅಹಮದಾಬಾದ್, ಮುಂಬೈ ಮತ್ತು ದೆಹಲಿಯಿಂದ ದುಬೈ ತಲುಪಿದರು. ಏಜೆಂಟರ ನಿರ್ದೇಶನದಂತೆ, ಈ ಪ್ರಯಾಣಿಕರು ಡಿಸೆಂಬರ್ 21ರಂದು ಫುಜೈರಾ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಖಾಸಗಿ ವಿಮಾನಯಾನ ಸಂಸ್ಥೆಯ ನಿಕರಾಗುವಾ ವಿಮಾನವನ್ನು ಹತ್ತಿದರು ಎಂದು ಸಿಐಡಿ ಬಿಡುಗಡೆ ಮಾಡಿದ ಪ್ರಕಟಣೆ ಮಂಗಳವಾರ ತಿಳಿಸಿದೆ.

ಇದನ್ನೂ ಓದಿ: ಮುಂಬೈಗೆ ಬಂದಿಳಿದ ಫ್ರಾನ್ಸ್​ ವಶದಲ್ಲಿದ್ದ ಭಾರತೀಯ ಪ್ರಯಾಣಿಕರಿದ್ದ ವಿಮಾನ

ಈ 55 ಪ್ರಯಾಣಿಕರ ದುಬೈ ವೀಸಾ ಪಡೆದ ಏಜೆಂಟ್‌ಗಳು, ಅವರ ಖಾತೆಯಿಂದ ವೀಸಾ ಶುಲ್ಕ ಪಾವತಿಸಿದ ಏಜೆಂಟರ ಬ್ಯಾಂಕ್ ವಿವರಗಳ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಸಂಗ್ರಹಿಸಲು ಸಹಾಯ ಮಾಡಲು ಸಿಐಡಿ ಕೇಂದ್ರೀಯ ತನಿಖಾ ದಳಕ್ಕೆ (ಸಿಬಿಐ) ಪತ್ರ ಬರೆದಿದೆ ಎಂದು ಅದು ಹೇಳಿದೆ.ರೊಮೇನಿಯನ್ ಚಾರ್ಟರ್ ಕಂಪನಿ ಲೆಜೆಂಡ್ ಏರ್‌ಲೈನ್ಸ್ ನಿರ್ವಹಿಸುತ್ತಿದ್ದ ಮತ್ತು ನಿಕರಾಗುವಾಗೆ ಹೊರಟಿದ್ದ ಚಾರ್ಟರ್ಡ್ ಫ್ಲೈಟ್, ಫ್ರೆಂಚ್ ಪೋಲೀಸ್ ಮಧ್ಯಪ್ರವೇಶಿಸಿದಾಗ ದುಬೈನಿಂದ ಮಾರ್ಗದಲ್ಲಿ ತಾಂತ್ರಿಕ ನಿಲುಗಡೆಗಾಗಿ ಡಿಸೆಂಬರ್ 21 ರಂದು ಪ್ಯಾರಿಸ್ ಬಳಿಯ ವ್ಯಾಟ್ರಿಯಲ್ಲಿ ಇಳಿದಿತ್ತು. ಫ್ರೆಂಚ್ ಅಧಿಕಾರಿಗಳು ಪ್ರವಾಸದ ಪರಿಸ್ಥಿತಿಗಳು ಮತ್ತು ಉದ್ದೇಶದ ಬಗ್ಗೆ ನ್ಯಾಯಾಂಗ ತನಿಖೆಯನ್ನು ಪ್ರಾರಂಭಿಸಿದ್ದರು.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಕೆಮ್ಮು ಬಾಧಿಸಲಾರಂಭಿಸಿದಾಗ ಯಡಿಯೂರಪ್ಪ ಮಗನಿಗೆ ಮಾತಾಡುವಂತೆ ಹೇಳಿದರು
ಕೆಮ್ಮು ಬಾಧಿಸಲಾರಂಭಿಸಿದಾಗ ಯಡಿಯೂರಪ್ಪ ಮಗನಿಗೆ ಮಾತಾಡುವಂತೆ ಹೇಳಿದರು
ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಸಮಸ್ಯೆ ಯತ್ನಾಳ್ ಚರ್ಚಿಸಿಲ್ಲ: ನಡಹಳ್ಳಿ
ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಸಮಸ್ಯೆ ಯತ್ನಾಳ್ ಚರ್ಚಿಸಿಲ್ಲ: ನಡಹಳ್ಳಿ
ಧಾರವಾಡ: ಮದ್ಯ ಮಾರಾಟದ ಅಂಗಡಿಗಳಿಗೆ ಮಹಿಳೆಯರ ಮುತ್ತಿಗೆ
ಧಾರವಾಡ: ಮದ್ಯ ಮಾರಾಟದ ಅಂಗಡಿಗಳಿಗೆ ಮಹಿಳೆಯರ ಮುತ್ತಿಗೆ
ನನ್ನ ವರ್ತನೆ ಮತ್ತು ವರಸೆ ಯಾವ ಕಾರಣಕ್ಕೂ ಬದಲಾಗದು: ಯತ್ನಾಳ್
ನನ್ನ ವರ್ತನೆ ಮತ್ತು ವರಸೆ ಯಾವ ಕಾರಣಕ್ಕೂ ಬದಲಾಗದು: ಯತ್ನಾಳ್
ಬಿವಿ ಕಾರಂತರು ನಾಯಿ ತಿಥಿಗೆ ಹೋದ ಕತೆ, ರಂಗಾಯಣ ರಘು ಅನುಕರಣೆ ನೋಡಿ
ಬಿವಿ ಕಾರಂತರು ನಾಯಿ ತಿಥಿಗೆ ಹೋದ ಕತೆ, ರಂಗಾಯಣ ರಘು ಅನುಕರಣೆ ನೋಡಿ
ಹಿಂದೂ ಕಾರ್ಯಕರ್ತರು ಯಾವ ಕಾರಣಕ್ಕೂ ಎದೆಗುಂದಬಾರದು: ಯತ್ನಾಳ್
ಹಿಂದೂ ಕಾರ್ಯಕರ್ತರು ಯಾವ ಕಾರಣಕ್ಕೂ ಎದೆಗುಂದಬಾರದು: ಯತ್ನಾಳ್
ವಿಜಯೇಂದ್ರ ಬಗ್ಗೆ ಹಿಂದೆ ನೀಡಿದ ಹೇಳಿಕೆಗೆ ಈಗಲೂ ಬದ್ಧ: ರಮೇಶ್ ಜಾರಕಿಹೊಳಿ
ವಿಜಯೇಂದ್ರ ಬಗ್ಗೆ ಹಿಂದೆ ನೀಡಿದ ಹೇಳಿಕೆಗೆ ಈಗಲೂ ಬದ್ಧ: ರಮೇಶ್ ಜಾರಕಿಹೊಳಿ
ಜಾಮ್ನಗರದಿಂದ ದ್ವಾರಕಾಗೆ 140 ಕಿ.ಮೀ ದೂರ ಅನಂತ್ ಅಂಬಾನಿ ಪಾದಯಾತ್ರೆ
ಜಾಮ್ನಗರದಿಂದ ದ್ವಾರಕಾಗೆ 140 ಕಿ.ಮೀ ದೂರ ಅನಂತ್ ಅಂಬಾನಿ ಪಾದಯಾತ್ರೆ
ಮಠದಲ್ಲಿ ಸಿದ್ಧಲಿಂಗ ಸ್ವಾಮೀಜಿಯವರ ಪಾದಕ್ಕೆ ನಮಸ್ಕರಿಸಿದ ರಾಜನಾಥ್ ಸಿಂಗ್
ಮಠದಲ್ಲಿ ಸಿದ್ಧಲಿಂಗ ಸ್ವಾಮೀಜಿಯವರ ಪಾದಕ್ಕೆ ನಮಸ್ಕರಿಸಿದ ರಾಜನಾಥ್ ಸಿಂಗ್
ಕರ್ನಾಟಕ ಕಾಂಗ್ರೆಸ್ ಸರ್ಕಾರವೇ ದೇಶದ ಪಾಲಿಗೆ ಗಾರ್ಬೇಜ್: ಪ್ರಲ್ಹಾದ್ ಜೋಶಿ
ಕರ್ನಾಟಕ ಕಾಂಗ್ರೆಸ್ ಸರ್ಕಾರವೇ ದೇಶದ ಪಾಲಿಗೆ ಗಾರ್ಬೇಜ್: ಪ್ರಲ್ಹಾದ್ ಜೋಶಿ