Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಾಮೋತ್ತೇಜಕವಂತೆ ಕತ್ತೆ ಮಾಂಸ; ಜೀವ ಉಳಿಸಿಕೊಳ್ಳುವುದೇ ಕಷ್ಟವಾಗಿಬಿಟ್ಟಿದೆ ಈಗ ಈ ಮೂಕಪ್ರಾಣಿಗೆ

Donkey meat: ಇನ್ನು ಕತ್ತೆ ರಕ್ತ ಕುಡಿಯುವುದರಿಂದ ವೇಗವಾಗಿ ಓಡಬಹುದು ಎಂಬ ಒಂದು ಮಿಥ್ಯೆಯೂ ಇದೆ. ಟಾಲಿವುಡ್​ನ ಹಿಟ್​ ಸಿನಿಮಾ ಕ್ರಾಕ್​​ನಲ್ಲಿ ಕೂಡ ಹೀಗೊಂದು ಸನ್ನಿವೇಶವನ್ನು ತೋರಿಸಲಾಗಿದೆ.

ಕಾಮೋತ್ತೇಜಕವಂತೆ ಕತ್ತೆ ಮಾಂಸ; ಜೀವ ಉಳಿಸಿಕೊಳ್ಳುವುದೇ ಕಷ್ಟವಾಗಿಬಿಟ್ಟಿದೆ ಈಗ ಈ ಮೂಕಪ್ರಾಣಿಗೆ
ಕತ್ತೆಗಳು (ಸಂಗ್ರಹ ಚಿತ್ರ)
Follow us
Lakshmi Hegde
|

Updated on:Mar 02, 2021 | 3:53 PM

ತೆಲಂಗಾಣ: ಕತ್ತೆಯ ಹಾಲಿಗೆ ಡಿಮ್ಯಾಂಡ್​ ಬಂದು ತುಂಬ ಕಾಲವಾಗಿದ್ದು ಗೊತ್ತೇ ಇದೆ. ಆದರೀಗ ಆಂಧ್ರಪ್ರದೇಶದಲ್ಲಿ ಕತ್ತೆಯ ಮಾಂಸಕ್ಕೂ ಭರ್ಜರಿ ಬೇಡಿಕೆ ಇದೆ. ಕಾರಣ ಅಲ್ಲಿನ ಜನ, ಕತ್ತೆ ಮಾಂಸ ಬೆನ್ನು ನೋವು, ಅಸ್ತಮಾವನ್ನು ಗುಣಪಡಿಸುತ್ತದೆ, ಅಷ್ಟೇ ಅಲ್ಲ ಇದರಿಂದ ಲೈಂಗಿಕ ಶಕ್ತಿ ಹೆಚ್ಚುತ್ತದೆ ಎಂದು ನಂಬಿದ್ದಾರೆ. ಇದೇ ಕಾರಣಕ್ಕಾಗಿ ಆಂಧ್ರಪ್ರದೇಶದ ಪ್ರಕಾಶಂ, ಕೃಷ್ಣಾ, ಪಶ್ಚಿಮ ಗೋದಾವರಿ ಮತ್ತು ಗುಂಟೂರು ಜಿಲ್ಲೆಗಳಲ್ಲಿ ಕತ್ತೆ ಮಾಂಸ ತಿನ್ನುವವರ ಸಂಖ್ಯೆ ಹೆಚ್ಚಾಗಿದ್ದು, ಸಹಜವಾಗಿ ಮಾರಾಟವೂ ಅಧಿಕಗೊಂಡಿದೆ. ಇನ್ನೊಂದೆಡೆ ಸ್ಥಳೀಯ ಆಡಳಿತಗಳು ಕತ್ತೆ ಹತ್ಯೆಯನ್ನು ತಡೆಯಲು ನಿರಂತರವಾಗಿ ಪ್ರಯತ್ನ ಮಾಡುತ್ತಲೇ ಇವೆ.

ಕತ್ತೆ ಮಾಂಸಕ್ಕೆ ಬೇಡಿಕೆ ಹೆಚ್ಚಾಗಿದ್ದರಿಂದ ಕತ್ತೆಗಳ ಸಂಖ್ಯೆ ರಾಜ್ಯದಲ್ಲಿ ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗಿದೆ. ಅಷ್ಟೇ ಅಲ್ಲ ಪ್ರಾಣಿಪ್ರಿಯರೂ ಸಿಟ್ಟಾಗಿದ್ದಾರೆ. ಇನ್ನು 2001ರ ಕಸಾಯಿಖಾನೆ ನಿಯಮಗಳ ಅನ್ವಯ ಕತ್ತೆಗಳ ಹತ್ಯೆಯನ್ನು ನಿಷೇಧಿಸಲಾಗಿದೆ. ಆದರೆ ಈ ಕತ್ತೆಗಳ ಹತ್ಯೆ, ಮಾಂಸ ಮಾರಾಟದ ಅಕ್ರಮ ದಂಧೆ ಮಾಡುವವರ ಜಾಲ ಬೆಳೆಯುತ್ತಲೇ ಇದೆ. ಕರ್ನಾಟಕ, ತಮಿಳುನಾಡು, ಮಹಾರಾಷ್ಟ್ರಗಳಿಂದಲೂ ಮಾಂಸಕ್ಕಾಗಿ ಮೂಕ ಪ್ರಾಣಿಗಳನ್ನು ಮಾರಾಟ ಮಾಡಲಾಗುತ್ತಿದೆ.

ಉಸಿರಾಟದ ಸಮಸ್ಯೆ ನಿವಾರಣೆ? ಇನ್ನು ಆಂಧ್ರದ ಜನರು ಕತ್ತೆ ಮಾಂಸದ ಹಿಂದೆ ಬೀಳಲು ಮೂರ್ನಾಲ್ಕು ಕಾರಣಗಳಿವೆ. ಅದರಲ್ಲಿ ಮುಖ್ಯವಾಗಿ ಈ ಮಾಂಸ ಸೇವನೆ ಉಸಿರಾಟದ ಸಮಸ್ಯೆಯನ್ನು ನಿವಾರಣೆ ಮಾಡುತ್ತದೆ. ಅಂದರೆ ಅಸ್ತಮಾ ಸೇರಿ ಮತ್ತಿತರ ಕಾಯಿಲೆಗಳಿಗೆ ಮದ್ದು ಎಂಬುದು ಅವರ ಬಲವಾದ ನಂಬಿಕೆ. ಅಷ್ಟೇ ಅಲ್ಲ ಇದು ಕಾಮೋತ್ತೇಜಕವಾಗಿದ್ದು ಲೈಂಗಿಕ ಶಕ್ತಿಯನ್ನು ಹೆಚ್ಚಿಸುತ್ತದೆ. ಯಾರಲ್ಲಿ ಲೈಂಗಿಕ ನಿರಾಸಕ್ತಿ ಇರುತ್ತದೆಯೋ ಅವರು ಇದನ್ನು ತಿನ್ನಬೇಕು  ಎಂದೂ ಅವರು ಹೇಳುತ್ತಾರೆ. ಹೀಗೆ ಕತ್ತೆಯ ಮಾಂಸವನ್ನು ತಿನ್ನುವ ಅಭ್ಯಾಸ ಮೊದಲು ಶುರುವಾಗಿದ್ದು ಪ್ರಕಾಶಂ ಜಿಲ್ಲೆಯ ಸ್ಟುವರ್ಟ್​ಪುರಂ ಎಂಬಲ್ಲಿ ಎಂದು ಆಂಧ್ರದ ಪ್ರಾಣಿಹಕ್ಕು ಕಾರ್ಯಕರ್ತರೊಬ್ಬರು ತಿಳಿಸಿದ್ದಾರೆ. ಇದೀಗ ಕತ್ತೆ ಮಾಂಸಕ್ಕೆ ಕಿಲೋಗೆ 600 ರೂ.ಇದ್ದು, ತುಂಬ ಚೆನ್ನಾಗಿ ಬೆಳೆದ ಕತ್ತೆಯ ಮಾಂಸ 15 ಸಾವಿರದಿಂದ 20,000ರೂ.ವರೆಗೂ ಮಾರಾಟವಾಗುತ್ತಿದೆ.

ಕತ್ತೆ ರಕ್ತದ ಬಗ್ಗೆ ಮಿಥ್ಯೆ ಇನ್ನು ಕತ್ತೆ ರಕ್ತ ಕುಡಿಯುವುದರಿಂದ ವೇಗವಾಗಿ ಓಡಬಹುದು ಎಂಬ ಒಂದು ಮಿಥ್ಯೆಯೂ ಇದೆ. ಟಾಲಿವುಡ್​ನ ಹಿಟ್​ ಸಿನಿಮಾ ಕ್ರಾಕ್​​ನಲ್ಲಿ ಕೂಡ ಹೀಗೊಂದು ಸನ್ನಿವೇಶವನ್ನು ತೋರಿಸಲಾಗಿದೆ. ಸಿನಿಮಾ ಹೀರೋ-ಹೀರೋಯಿನ್​ಗಳಾದ ರವಿ ತೇಜ ಮತ್ತು ಶ್ರುತಿ ಹಾಸ್​ ಕತ್ತೆಯ ರಕ್ತ ಕುಡಿದು, ತುಂಬ ವೇಗವಾಗಿ ಓಡುವ ದೃಶ್ಯ ಸಿನಿಮಾದಲ್ಲಿದೆ. ಹಾಗೇ, ಪ್ರಕಾಶಂ ಜಿಲ್ಲೆಯ ವೆಟಪಾಲೆಂ ಗ್ರಾಮದ ಕೆಲವು ಮೀನುಗಾರರು ಬಂಗಾಳಕೊಲ್ಲಿ ಸಮುದ್ರಕ್ಕೆ ಮೀನು ಹಿಡಿಯಲು ಹೋಗುವ ಮೊದಲು ಕತ್ತೆ ರಕ್ತ ಕುಡಿದು ಹೋಗುತ್ತಾರೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: ಕತ್ತೆ ಹಾಲಿನಲ್ಲಿ ವಯಸ್ಸಾಗುವ ಲಕ್ಷಣವನ್ನು ತಡೆಯುವಂತಹ ಗುಣವನ್ನು ಹೊಂದಿದೆ

Sand Mining new rules | ಮರಳು ಗಣಿಗಾರಿಕೆ ನಿಯಮ ಸದ್ಯದಲ್ಲೇ ಸರಳವಾಗಲಿದೆ; ಎತ್ತಿನಗಾಡಿ, ಟ್ರ್ಯಾಕ್ಟರ್​​ನಲ್ಲಿಯೂ ಮರಳು ತರಬಹುದು – ಗಣಿ ಸಚಿವ ಮುರುಗೇಶ್ ನಿರಾಣಿ

Published On - 3:49 pm, Tue, 2 March 21

ಪುನೀತ್ ರಾಜ್​ಕುಮಾರ್ ಬಗ್ಗೆ ಅರ್ಧಗಂಟೆ ಮಾತನಾಡಿದ ರಶ್ಮಿಕಾ ಮಂದಣ್ಣ
ಪುನೀತ್ ರಾಜ್​ಕುಮಾರ್ ಬಗ್ಗೆ ಅರ್ಧಗಂಟೆ ಮಾತನಾಡಿದ ರಶ್ಮಿಕಾ ಮಂದಣ್ಣ
ಪತಿಯೊಂದಿಗೆ ಜಗಳವಾಡಿ ವಿದ್ಯುತ್ ಟವರ್ ಹತ್ತಿ ಆತ್ಮಹತ್ಯೆಗೆ ಯತ್ನಿಸಿದ ಪತ್ನಿ
ಪತಿಯೊಂದಿಗೆ ಜಗಳವಾಡಿ ವಿದ್ಯುತ್ ಟವರ್ ಹತ್ತಿ ಆತ್ಮಹತ್ಯೆಗೆ ಯತ್ನಿಸಿದ ಪತ್ನಿ
ಕೋರ್ಟ್​ ಆದೇಶ ಹಾಗೂ ವ್ಯಕ್ತಿ ಪ್ರಾಣಕ್ಕೂ ಬೆಲೆ ಕೊಡದ KSRTC, ಬಸ್ ಜಪ್ತಿ!
ಕೋರ್ಟ್​ ಆದೇಶ ಹಾಗೂ ವ್ಯಕ್ತಿ ಪ್ರಾಣಕ್ಕೂ ಬೆಲೆ ಕೊಡದ KSRTC, ಬಸ್ ಜಪ್ತಿ!
ಚಂದನ್ ಶೆಟ್ಟಿ ಜೊತೆ ಮದುವೆ ಗಾಸಿಪ್, ಸ್ಪಷ್ಟನೆ ಕೊಟ್ಟ ಸಂಜನಾ
ಚಂದನ್ ಶೆಟ್ಟಿ ಜೊತೆ ಮದುವೆ ಗಾಸಿಪ್, ಸ್ಪಷ್ಟನೆ ಕೊಟ್ಟ ಸಂಜನಾ
ಕುಮಾರಸ್ವಾಮಿ ನನ್ನನ್ನು ಬಯ್ಯದೆ ಬೇರೆ ಯಾರನ್ನು ಬಯ್ಯಲು ಸಾಧ್ಯ? ಶಿವಕುಮಾರ್
ಕುಮಾರಸ್ವಾಮಿ ನನ್ನನ್ನು ಬಯ್ಯದೆ ಬೇರೆ ಯಾರನ್ನು ಬಯ್ಯಲು ಸಾಧ್ಯ? ಶಿವಕುಮಾರ್
ಜಾರ್ಖಂಡ್‌ನ ದಿಯೋಘರ್‌ನಲ್ಲಿ ಇಂಡಿಯನ್ ಆಯಿಲ್ ಸ್ಥಾವರದಲ್ಲಿ ಬೆಂಕಿ ಅವಘಡ
ಜಾರ್ಖಂಡ್‌ನ ದಿಯೋಘರ್‌ನಲ್ಲಿ ಇಂಡಿಯನ್ ಆಯಿಲ್ ಸ್ಥಾವರದಲ್ಲಿ ಬೆಂಕಿ ಅವಘಡ
ಕರ್ನಾಟಕ ಮೊದಲು ತಮಿಳುನಾಡು ಚರ್ಚೆ ಮಾಡಬೇಕಾದ ಅವಶ್ಯಕತೆ ಸ್ಪಷ್ಟವಾಗುತ್ತಿದೆ
ಕರ್ನಾಟಕ ಮೊದಲು ತಮಿಳುನಾಡು ಚರ್ಚೆ ಮಾಡಬೇಕಾದ ಅವಶ್ಯಕತೆ ಸ್ಪಷ್ಟವಾಗುತ್ತಿದೆ
ಶಿವಲಿಂಗೇಗೌಡರು ಕೋಪದಿಂದ ಕುದಿಯುತ್ತಿದ್ದರೆ ಸಭಾಧ್ಯಕ್ಷರಿಗೆ ನಗು!
ಶಿವಲಿಂಗೇಗೌಡರು ಕೋಪದಿಂದ ಕುದಿಯುತ್ತಿದ್ದರೆ ಸಭಾಧ್ಯಕ್ಷರಿಗೆ ನಗು!
ಕಂದಾಯ ಮತ್ತು ಸರ್ವೇ ಇಲಾಖೆ ಅಧಿಕಾರಿಗಳಿಂದ ಮಾರ್ಕಿಂಗ್ ಕೆಲಸ ಶುರುವಾಗಿದೆ
ಕಂದಾಯ ಮತ್ತು ಸರ್ವೇ ಇಲಾಖೆ ಅಧಿಕಾರಿಗಳಿಂದ ಮಾರ್ಕಿಂಗ್ ಕೆಲಸ ಶುರುವಾಗಿದೆ
ತೆರವು ಕಾರ್ಯಾಚರಣೆ ಆರಂಭಿಸುವ ಮೊದಲು ನೋಟೀಸ್ ನೀಡಿಲ್ಲ: ಕುಮಾರಸ್ವಾಮಿ
ತೆರವು ಕಾರ್ಯಾಚರಣೆ ಆರಂಭಿಸುವ ಮೊದಲು ನೋಟೀಸ್ ನೀಡಿಲ್ಲ: ಕುಮಾರಸ್ವಾಮಿ