AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜಗತ್ತಿನ ಶ್ರೀಮಂತರ ಪಟ್ಟಿಯಲ್ಲಿ ರಿಲಯನ್ಸ್​ ಇಂಡಸ್ಟ್ರೀಸ್ ಮಾಲೀಕ ಮುಕೇಶ್ ಅಂಬಾನಿಗೆ 8ನೇ ಸ್ಥಾನ !..ನಂ.1 ಪಟ್ಟ ಯಾರಿಗೆ?

ಭಾರತದ ಇತರ ಕೆಲವು ಬಿಲಿಯನೇರ್​ಗಳೂ ಕೂಡ ಈ ಬಾರಿಯ ಹುರುನ್​ ರಿಚ್​ ಲಿಸ್ಟ್​​ನಲ್ಲಿ ಸ್ಥಾನ ಪಡೆದಿದ್ದಾರೆ. ಅವರಲ್ಲಿ ಗೌತಮ್​ ಅದಾನಿ ಮತ್ತು ಕುಟುಂಬದ ಬಳಿ 2.34 ಲಕ್ಷ ಕೋಟಿ ರೂ.ಸಂಪತ್ತು ಇದ್ದು, 48ನೇ ರ‍್ಯಾಂಕ್​​ನಲ್ಲಿದ್ದಾರೆ.

ಜಗತ್ತಿನ ಶ್ರೀಮಂತರ ಪಟ್ಟಿಯಲ್ಲಿ ರಿಲಯನ್ಸ್​ ಇಂಡಸ್ಟ್ರೀಸ್ ಮಾಲೀಕ ಮುಕೇಶ್ ಅಂಬಾನಿಗೆ 8ನೇ ಸ್ಥಾನ !..ನಂ.1 ಪಟ್ಟ ಯಾರಿಗೆ?
ಮುಕೇಶ್​ ಅಂಬಾನಿ (ಸಂಗ್ರಹ ಚಿತ್ರ)
Follow us
Lakshmi Hegde
|

Updated on:Mar 02, 2021 | 2:44 PM

ನವದೆಹಲಿ: ಭಾರತದ ಶ್ರೀಮಂತರ ಪಟ್ಟಿಯಲ್ಲಿ ನಂ.1ಸ್ಥಾನದಲ್ಲಿರುವ ರಿಲಯನ್ಸ್​ ಇಂಡಸ್ಟ್ರೀಸ್​ ಅಧ್ಯಕ್ಷ ಮತ್ತು ಎಂಡಿ ಮುಕೇಶ್​ ಅಂಬಾನಿ, ಜಗತ್ತಿನ ಶ್ರೀಮಂತರ ಪಟ್ಟಿಯಲ್ಲಿ 8ನೇ ಸ್ಥಾನದಲ್ಲಿದ್ದಾರೆಂದು ಹುರುನ್​ ಗ್ಲೋಬಲ್ ರಿಚ್ ಲಿಸ್ಟ್​ 2021ರಲ್ಲಿ ಉಲ್ಲೇಖವಾಗಿದೆ. ಹುರುನ್​ ಗ್ಲೋಬಲ್​ ರಿಚ್​ ಲಿಸ್ಟ್ ಇಂದು ಬಿಡುಗಡೆಯಾಗಿದ್ದು, ಅದರಲ್ಲಿ ಮುಕೇಶ್​ ಅಂಬಾನಿಯವರ ಸಂಪತ್ತಿನ ಮೌಲ್ಯ ಕಳೆದ ಒಂದು ವರ್ಷದಲ್ಲಿ ಶೇ.24ರಷ್ಟು ಏರಿಕೆಯಾಗಿ, ಸುಮಾರು 83 ಬಿಲಿಯನ್​ ಡಾಲರ್​ ಅಂದರೆ 6.09 ಲಕ್ಷ ಕೋಟಿ ರೂಪಾಯಿಗಳಷ್ಟಾಗಿದೆ ಎಂದು ಹೇಳಲಾಗಿದೆ.

ಇನ್ನು ಭಾರತದ ಇತರ ಕೆಲವು ಬಿಲಿಯನೇರ್​ಗಳೂ ಕೂಡ ಈ ಬಾರಿಯ ಹುರುನ್​ ರಿಚ್​ ಲಿಸ್ಟ್​​ನಲ್ಲಿ ಸ್ಥಾನ ಪಡೆದಿದ್ದಾರೆ. ಅವರಲ್ಲಿ ಗೌತಮ್​ ಅದಾನಿ ಮತ್ತು ಕುಟುಂಬದ ಬಳಿ 2.34 ಲಕ್ಷ ಕೋಟಿ ರೂ.ಸಂಪತ್ತು ಇದ್ದು, 48ನೇ ರ‍್ಯಾಂಕ್​​ನಲ್ಲಿದ್ದಾರೆ. ಹಾಗೇ, ಶಿವ್​ ನಾದರ್​ ಮತ್ತು ಕುಟುಂಬ (58 ನೇ ರ‍್ಯಾಂಕ್​, 1.94 ಲಕ್ಷ ಕೋಟಿ ರೂ. ಮೌಲ್ಯದ ಸಂಪತ್ತು), ಲಕ್ಷ್ಮಿ ಎನ್​ ಮಿತ್ತಲ್​ (104ನೇ ರ‍್ಯಾಂಕ್​, 1.40 ಲಕ್ಷ ಕೋಟಿ ರೂ.), ಸೀರಮ್ ಸಂಸ್ಥೆಯ ಸೈರಸ್ ಪೂನವಾಲ್ಲಾ (113ನೇ ರ‍್ಯಾಂಕ್, 1.35 ಲಕ್ಷ ಕೋಟಿ ರೂ.) ಕೂಡ ಶ್ರೀಮಂತರ ಪಟ್ಟಿಯಲ್ಲಿದ್ದಾರೆ.

ನಂ.1 ಶ್ರೀಮಂತ ಯಾರು? ಹುರುನ್​ ಗ್ಲೋಬಲ್​ ರಿಚ್​ ಲಿಸ್ಟ್​ 2021ರ ಪ್ರಕಾರ ಜಗತ್ತಿನ ನಂಬರ್​ 1 ಶ್ರೀಮಂತ ತೆಸ್ಲಾ ಕಂಪನಿ ಸಿಇಒ ಎಲಾನ್​ ಮಸ್ಕ್​. ಇವರ ಸಂಪತ್ತು ಶೇ.328ರಷ್ಟು ಏರಿಕೆಯಾಗಿದ್ದು, ಒಟ್ಟಾರೆ 197 ಬಿಲಿಯನ್​ ಡಾಲರ್​​ನಷ್ಟಾಗಿದೆ. ಅಂದರೆ ಒಂದೇ ವರ್ಷದಲ್ಲಿ 151 ಬಿಲಿಯನ್ ಡಾಲರ್​ ಏರಿಕೆಯಾಗಿದೆ.

ಬ್ಲೂಮ್​​ಬರ್ಗ್​ ಪಟ್ಟಿಯಲ್ಲಿ ಮುಕೇಶ್​ ಅಂಬಾನಿಗೆ 6ನೇ ಸ್ಥಾನ ಇನ್ನು ಕಳೆದ ವರ್ಷ ಜುಲೈನಲ್ಲಿ ಬ್ಲೂಬ್​ಬರ್ಗ್​ ಬಿಡುಗಡೆ ಮಾಡಿದ್ದ ಜಗತ್ತಿನ ಅತ್ಯಂತ ಶ್ರೀಮಂತರ ಪಟ್ಟಿಯಲ್ಲಿ ಮುಕೇಶ್​ ಅಂಬಾನಿ 6ನೇ ಸ್ಥಾನದಲ್ಲಿ ಇದ್ದರು. ಕೊರೊನಾ ಸಂಕಷ್ಟ ಕಾಲದಲ್ಲೂ ಮುಕೇಶ್​ ಅಂಬಾನಿ ಆಸ್ತಿಯ ನಿವ್ವಳ ಮೌಲ್ಯ ಬರೋಬ್ಬರಿ 72.4 ಬಿಲಿಯನ್​ ಡಾಲರ್​ (5.44 ಲಕ್ಷ ಕೋಟಿ) ಇತ್ತು.

ಇದನ್ನೂ ಓದಿ: ಮುಕೇಶ್ ಅಂಬಾನಿ ಮನೆ ಬಳಿ ಪತ್ತೆಯಾದ ಕಾರಿನಲ್ಲಿ ಸ್ಫೋಟಕದ ಜತೆಗಿತ್ತು ಬೆದರಿಕೆ ಪತ್ರ

ಮುಕೇಶ್ ಅಂಬಾನಿ ಮನೆ ಬಳಿ ಸ್ಫೋಟಕ ಇರಿಸಿದ ಹೊಣೆ ಹೊತ್ತ ಜೈಶ್-ಉಲ್-ಹಿಂದ್ ಸಂಘಟನೆ

Published On - 2:44 pm, Tue, 2 March 21

ಪಂಜಾಬ್ ವಿರುದ್ಧ RCBಗೆ ಗೆಲವು: ರಾಜ್ಯಾದ್ಯಂತ ಅಭಿಮಾನಿಗಳ ಸಂಭ್ರಮಾಚರಣೆ
ಪಂಜಾಬ್ ವಿರುದ್ಧ RCBಗೆ ಗೆಲವು: ರಾಜ್ಯಾದ್ಯಂತ ಅಭಿಮಾನಿಗಳ ಸಂಭ್ರಮಾಚರಣೆ
ಪಂಜಾಬ್ ವಿರುದ್ಧ RCBಗೆ ಗೆಲವು: ಈ ಸಲ ಕಪ್​ ನಮ್ದೇ...
ಪಂಜಾಬ್ ವಿರುದ್ಧ RCBಗೆ ಗೆಲವು: ಈ ಸಲ ಕಪ್​ ನಮ್ದೇ...
ಕೆಂಪೇಗೌಡ ಪ್ರಾಧಿಕಾರಕ್ಕೆ ಸರ್ಕಾರದಿಂದ ಸುಮನಹಳ್ಳಿ ಬಳಿ 5 ಎಕರೆ ಜಾಗ: DCM
ಕೆಂಪೇಗೌಡ ಪ್ರಾಧಿಕಾರಕ್ಕೆ ಸರ್ಕಾರದಿಂದ ಸುಮನಹಳ್ಳಿ ಬಳಿ 5 ಎಕರೆ ಜಾಗ: DCM
ಕರ್ನಾಟಕದ ಜನರೇ ಕಮಲ್ ಹಾಸನ್​ಗೆ ಪಾಠ ಕಲಿಸಬೇಕು: ಯದುವೀರ್ ಒಡೆಯರ್
ಕರ್ನಾಟಕದ ಜನರೇ ಕಮಲ್ ಹಾಸನ್​ಗೆ ಪಾಠ ಕಲಿಸಬೇಕು: ಯದುವೀರ್ ಒಡೆಯರ್
ರಷ್ಯಾಗೆ ಮತ್ತೊಂದು ಹೊಡೆತ; ಕ್ರಿಮಿಯನ್ ಸೇತುವೆ ಸ್ಫೋಟಗೊಳಿಸಿದ ಉಕ್ರೇನ್​
ರಷ್ಯಾಗೆ ಮತ್ತೊಂದು ಹೊಡೆತ; ಕ್ರಿಮಿಯನ್ ಸೇತುವೆ ಸ್ಫೋಟಗೊಳಿಸಿದ ಉಕ್ರೇನ್​
ಆರ್​ಸಿಬಿ ಗೆಲ್ಲುತ್ತೆ, ಬೈಕ್​ಗಳಲ್ಲಿ ಬೆಂಗಳೂರು ಸುತ್ತುತ್ತೇವೆ: ಯುವಕರು
ಆರ್​ಸಿಬಿ ಗೆಲ್ಲುತ್ತೆ, ಬೈಕ್​ಗಳಲ್ಲಿ ಬೆಂಗಳೂರು ಸುತ್ತುತ್ತೇವೆ: ಯುವಕರು
ಕಮಲ್ ಹಾಸನ್ ವಿವಾದ: ಕನ್ನಡಿಗರು ಕಾನೂನು ಕೈಗೆ ತೆಗೆದುಕೊಳ್ಳಬೇಡಿ: ಡಿಕೆಶಿ
ಕಮಲ್ ಹಾಸನ್ ವಿವಾದ: ಕನ್ನಡಿಗರು ಕಾನೂನು ಕೈಗೆ ತೆಗೆದುಕೊಳ್ಳಬೇಡಿ: ಡಿಕೆಶಿ
ಇವತ್ತಿನ ಪಂದ್ಯ ನೋಡಲು ವಿದೇಶಗಳಿಂದಲೂ ಆಗಮಿಸಿರುವ ಭಾರತೀಯರು!
ಇವತ್ತಿನ ಪಂದ್ಯ ನೋಡಲು ವಿದೇಶಗಳಿಂದಲೂ ಆಗಮಿಸಿರುವ ಭಾರತೀಯರು!
ಶೂಟೌಟ್​​ನಲ್ಲಿ ಬಚಾವ್​ ಆಗಿದ್ದೇಗೆ? ರಿಕ್ಕಿ ರೈ ಬಿಚ್ಚಿಟ್ಟ ಸ್ಫೋಟಕ ಸತ್ಯ
ಶೂಟೌಟ್​​ನಲ್ಲಿ ಬಚಾವ್​ ಆಗಿದ್ದೇಗೆ? ರಿಕ್ಕಿ ರೈ ಬಿಚ್ಚಿಟ್ಟ ಸ್ಫೋಟಕ ಸತ್ಯ
ಐಪಿಎಲ್ ಫೈನಲ್ಸ್​ಗೆ ಮೇ 4 ಮೀಸಲಿಟ್ಟ ದಿನ, ಆಟ ನಾಳೆ ನಡೆಯುತ್ತದೆ!
ಐಪಿಎಲ್ ಫೈನಲ್ಸ್​ಗೆ ಮೇ 4 ಮೀಸಲಿಟ್ಟ ದಿನ, ಆಟ ನಾಳೆ ನಡೆಯುತ್ತದೆ!