AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜಗತ್ತಿನ ಶ್ರೀಮಂತರ ಪಟ್ಟಿಯಲ್ಲಿ ರಿಲಯನ್ಸ್​ ಇಂಡಸ್ಟ್ರೀಸ್ ಮಾಲೀಕ ಮುಕೇಶ್ ಅಂಬಾನಿಗೆ 8ನೇ ಸ್ಥಾನ !..ನಂ.1 ಪಟ್ಟ ಯಾರಿಗೆ?

ಭಾರತದ ಇತರ ಕೆಲವು ಬಿಲಿಯನೇರ್​ಗಳೂ ಕೂಡ ಈ ಬಾರಿಯ ಹುರುನ್​ ರಿಚ್​ ಲಿಸ್ಟ್​​ನಲ್ಲಿ ಸ್ಥಾನ ಪಡೆದಿದ್ದಾರೆ. ಅವರಲ್ಲಿ ಗೌತಮ್​ ಅದಾನಿ ಮತ್ತು ಕುಟುಂಬದ ಬಳಿ 2.34 ಲಕ್ಷ ಕೋಟಿ ರೂ.ಸಂಪತ್ತು ಇದ್ದು, 48ನೇ ರ‍್ಯಾಂಕ್​​ನಲ್ಲಿದ್ದಾರೆ.

ಜಗತ್ತಿನ ಶ್ರೀಮಂತರ ಪಟ್ಟಿಯಲ್ಲಿ ರಿಲಯನ್ಸ್​ ಇಂಡಸ್ಟ್ರೀಸ್ ಮಾಲೀಕ ಮುಕೇಶ್ ಅಂಬಾನಿಗೆ 8ನೇ ಸ್ಥಾನ !..ನಂ.1 ಪಟ್ಟ ಯಾರಿಗೆ?
ಮುಕೇಶ್​ ಅಂಬಾನಿ (ಸಂಗ್ರಹ ಚಿತ್ರ)
Lakshmi Hegde
|

Updated on:Mar 02, 2021 | 2:44 PM

Share

ನವದೆಹಲಿ: ಭಾರತದ ಶ್ರೀಮಂತರ ಪಟ್ಟಿಯಲ್ಲಿ ನಂ.1ಸ್ಥಾನದಲ್ಲಿರುವ ರಿಲಯನ್ಸ್​ ಇಂಡಸ್ಟ್ರೀಸ್​ ಅಧ್ಯಕ್ಷ ಮತ್ತು ಎಂಡಿ ಮುಕೇಶ್​ ಅಂಬಾನಿ, ಜಗತ್ತಿನ ಶ್ರೀಮಂತರ ಪಟ್ಟಿಯಲ್ಲಿ 8ನೇ ಸ್ಥಾನದಲ್ಲಿದ್ದಾರೆಂದು ಹುರುನ್​ ಗ್ಲೋಬಲ್ ರಿಚ್ ಲಿಸ್ಟ್​ 2021ರಲ್ಲಿ ಉಲ್ಲೇಖವಾಗಿದೆ. ಹುರುನ್​ ಗ್ಲೋಬಲ್​ ರಿಚ್​ ಲಿಸ್ಟ್ ಇಂದು ಬಿಡುಗಡೆಯಾಗಿದ್ದು, ಅದರಲ್ಲಿ ಮುಕೇಶ್​ ಅಂಬಾನಿಯವರ ಸಂಪತ್ತಿನ ಮೌಲ್ಯ ಕಳೆದ ಒಂದು ವರ್ಷದಲ್ಲಿ ಶೇ.24ರಷ್ಟು ಏರಿಕೆಯಾಗಿ, ಸುಮಾರು 83 ಬಿಲಿಯನ್​ ಡಾಲರ್​ ಅಂದರೆ 6.09 ಲಕ್ಷ ಕೋಟಿ ರೂಪಾಯಿಗಳಷ್ಟಾಗಿದೆ ಎಂದು ಹೇಳಲಾಗಿದೆ.

ಇನ್ನು ಭಾರತದ ಇತರ ಕೆಲವು ಬಿಲಿಯನೇರ್​ಗಳೂ ಕೂಡ ಈ ಬಾರಿಯ ಹುರುನ್​ ರಿಚ್​ ಲಿಸ್ಟ್​​ನಲ್ಲಿ ಸ್ಥಾನ ಪಡೆದಿದ್ದಾರೆ. ಅವರಲ್ಲಿ ಗೌತಮ್​ ಅದಾನಿ ಮತ್ತು ಕುಟುಂಬದ ಬಳಿ 2.34 ಲಕ್ಷ ಕೋಟಿ ರೂ.ಸಂಪತ್ತು ಇದ್ದು, 48ನೇ ರ‍್ಯಾಂಕ್​​ನಲ್ಲಿದ್ದಾರೆ. ಹಾಗೇ, ಶಿವ್​ ನಾದರ್​ ಮತ್ತು ಕುಟುಂಬ (58 ನೇ ರ‍್ಯಾಂಕ್​, 1.94 ಲಕ್ಷ ಕೋಟಿ ರೂ. ಮೌಲ್ಯದ ಸಂಪತ್ತು), ಲಕ್ಷ್ಮಿ ಎನ್​ ಮಿತ್ತಲ್​ (104ನೇ ರ‍್ಯಾಂಕ್​, 1.40 ಲಕ್ಷ ಕೋಟಿ ರೂ.), ಸೀರಮ್ ಸಂಸ್ಥೆಯ ಸೈರಸ್ ಪೂನವಾಲ್ಲಾ (113ನೇ ರ‍್ಯಾಂಕ್, 1.35 ಲಕ್ಷ ಕೋಟಿ ರೂ.) ಕೂಡ ಶ್ರೀಮಂತರ ಪಟ್ಟಿಯಲ್ಲಿದ್ದಾರೆ.

ನಂ.1 ಶ್ರೀಮಂತ ಯಾರು? ಹುರುನ್​ ಗ್ಲೋಬಲ್​ ರಿಚ್​ ಲಿಸ್ಟ್​ 2021ರ ಪ್ರಕಾರ ಜಗತ್ತಿನ ನಂಬರ್​ 1 ಶ್ರೀಮಂತ ತೆಸ್ಲಾ ಕಂಪನಿ ಸಿಇಒ ಎಲಾನ್​ ಮಸ್ಕ್​. ಇವರ ಸಂಪತ್ತು ಶೇ.328ರಷ್ಟು ಏರಿಕೆಯಾಗಿದ್ದು, ಒಟ್ಟಾರೆ 197 ಬಿಲಿಯನ್​ ಡಾಲರ್​​ನಷ್ಟಾಗಿದೆ. ಅಂದರೆ ಒಂದೇ ವರ್ಷದಲ್ಲಿ 151 ಬಿಲಿಯನ್ ಡಾಲರ್​ ಏರಿಕೆಯಾಗಿದೆ.

ಬ್ಲೂಮ್​​ಬರ್ಗ್​ ಪಟ್ಟಿಯಲ್ಲಿ ಮುಕೇಶ್​ ಅಂಬಾನಿಗೆ 6ನೇ ಸ್ಥಾನ ಇನ್ನು ಕಳೆದ ವರ್ಷ ಜುಲೈನಲ್ಲಿ ಬ್ಲೂಬ್​ಬರ್ಗ್​ ಬಿಡುಗಡೆ ಮಾಡಿದ್ದ ಜಗತ್ತಿನ ಅತ್ಯಂತ ಶ್ರೀಮಂತರ ಪಟ್ಟಿಯಲ್ಲಿ ಮುಕೇಶ್​ ಅಂಬಾನಿ 6ನೇ ಸ್ಥಾನದಲ್ಲಿ ಇದ್ದರು. ಕೊರೊನಾ ಸಂಕಷ್ಟ ಕಾಲದಲ್ಲೂ ಮುಕೇಶ್​ ಅಂಬಾನಿ ಆಸ್ತಿಯ ನಿವ್ವಳ ಮೌಲ್ಯ ಬರೋಬ್ಬರಿ 72.4 ಬಿಲಿಯನ್​ ಡಾಲರ್​ (5.44 ಲಕ್ಷ ಕೋಟಿ) ಇತ್ತು.

ಇದನ್ನೂ ಓದಿ: ಮುಕೇಶ್ ಅಂಬಾನಿ ಮನೆ ಬಳಿ ಪತ್ತೆಯಾದ ಕಾರಿನಲ್ಲಿ ಸ್ಫೋಟಕದ ಜತೆಗಿತ್ತು ಬೆದರಿಕೆ ಪತ್ರ

ಮುಕೇಶ್ ಅಂಬಾನಿ ಮನೆ ಬಳಿ ಸ್ಫೋಟಕ ಇರಿಸಿದ ಹೊಣೆ ಹೊತ್ತ ಜೈಶ್-ಉಲ್-ಹಿಂದ್ ಸಂಘಟನೆ

Published On - 2:44 pm, Tue, 2 March 21

ಬಿಜೆಪಿ ಕಾರ್ಯಕರ್ತೆಯ ಬಟ್ಟೆಬಿಚ್ಚಿ ಹಲ್ಲೆ: ಗೃಹ ಸಚಿವರು ಹೇಳಿದ್ದೇನು?
ಬಿಜೆಪಿ ಕಾರ್ಯಕರ್ತೆಯ ಬಟ್ಟೆಬಿಚ್ಚಿ ಹಲ್ಲೆ: ಗೃಹ ಸಚಿವರು ಹೇಳಿದ್ದೇನು?
30 ಕಾಂಗ್ರೆಸ್​​​ ಕಾರ್ಯಕರ್ತರಿಗೆ ಶಾಕ್​​ ಕೊಟ್ಟ ಪೊಲೀಸರು
30 ಕಾಂಗ್ರೆಸ್​​​ ಕಾರ್ಯಕರ್ತರಿಗೆ ಶಾಕ್​​ ಕೊಟ್ಟ ಪೊಲೀಸರು
ಥ್ರಿಲ್ಲರ್ ಸೂಪರ್ ಥ್ರಿಲ್ಲರ್... ಕೊನೆಯ ಎಸೆತದಲ್ಲಿ ಸಿಕ್ಸ್, ಮ್ಯಾಚ್ ವಿನ್
ಥ್ರಿಲ್ಲರ್ ಸೂಪರ್ ಥ್ರಿಲ್ಲರ್... ಕೊನೆಯ ಎಸೆತದಲ್ಲಿ ಸಿಕ್ಸ್, ಮ್ಯಾಚ್ ವಿನ್
ಗವಿಸಿದ್ದೇಶ್ವರ ಜಾತ್ರೆ: ದಾಸೋಹದಲ್ಲಿ ಹೊಸ ದಾಖಲೆ, ಲಕ್ಷ ರೊಟ್ಟಿ ಸಂಗ್ರಹ!
ಗವಿಸಿದ್ದೇಶ್ವರ ಜಾತ್ರೆ: ದಾಸೋಹದಲ್ಲಿ ಹೊಸ ದಾಖಲೆ, ಲಕ್ಷ ರೊಟ್ಟಿ ಸಂಗ್ರಹ!
ಎಷ್ಟು ಅದ್ದೂರಿಯಾಗಿದೆ ನೋಡಿ ಅಲ್ಲು ಅರ್ಜುನ್ ಹೊಸ ಥಿಯೇಟರ್
ಎಷ್ಟು ಅದ್ದೂರಿಯಾಗಿದೆ ನೋಡಿ ಅಲ್ಲು ಅರ್ಜುನ್ ಹೊಸ ಥಿಯೇಟರ್
ಗಿಲ್ಲಿ ಬಿಗ್ ಬಾಸ್ ಮನೆ ಒಳಗೆ ಇಟ್ಟ ಬೇಡಿಕೆಯನ್ನು ಹೊರಗೆ ಈಡೇರಿಸಿದ ಫ್ಯಾನ್ಸ
ಗಿಲ್ಲಿ ಬಿಗ್ ಬಾಸ್ ಮನೆ ಒಳಗೆ ಇಟ್ಟ ಬೇಡಿಕೆಯನ್ನು ಹೊರಗೆ ಈಡೇರಿಸಿದ ಫ್ಯಾನ್ಸ
ಬಾಲ್ಕನಿಯಲ್ಲಿ ಸಿಲುಕಿದ್ದವರನ್ನು ರಕ್ಷಿಸಿದ ಬ್ಲಿಂಕಿಟ್ ಡೆಲಿವರಿ ಏಜೆಂಟ್
ಬಾಲ್ಕನಿಯಲ್ಲಿ ಸಿಲುಕಿದ್ದವರನ್ನು ರಕ್ಷಿಸಿದ ಬ್ಲಿಂಕಿಟ್ ಡೆಲಿವರಿ ಏಜೆಂಟ್
ಧ್ರುವಂತ್-ಅಶ್ವಿನಿ ಮಧ್ಯೆ ಕಿತ್ತಾಟ; ಉರಿಯೋ ಬೆಂಕಿಗೆ ತುಪ್ಪ ಸುರಿದ ಗಿಲ್ಲಿ
ಧ್ರುವಂತ್-ಅಶ್ವಿನಿ ಮಧ್ಯೆ ಕಿತ್ತಾಟ; ಉರಿಯೋ ಬೆಂಕಿಗೆ ತುಪ್ಪ ಸುರಿದ ಗಿಲ್ಲಿ
ಮರಣಿಸಿದವರ ಬಗ್ಗೆ ಕೆಟ್ಟದಾಗಿ ಮಾತನಾಡಬಾರದು ಯಾಕೆ?
ಮರಣಿಸಿದವರ ಬಗ್ಗೆ ಕೆಟ್ಟದಾಗಿ ಮಾತನಾಡಬಾರದು ಯಾಕೆ?
ಓಲಾ, ಊಬರ್, ರ್ಯಾಪಿಡೋ, ನಮ್ಮ ಯಾತ್ರಿ ಬಗ್ಗೆ ಸರ್ಕಾರ ಬಿಗ್ ಅಪ್​ಡೇಟ್!
ಓಲಾ, ಊಬರ್, ರ್ಯಾಪಿಡೋ, ನಮ್ಮ ಯಾತ್ರಿ ಬಗ್ಗೆ ಸರ್ಕಾರ ಬಿಗ್ ಅಪ್​ಡೇಟ್!