ಆಲ್ಕೋಹಾಲ್ ಬಿಡಿ, ಹಸುವಿನ ಹಾಲು ಕುಡಿಯಿರಿ: ಮಧ್ಯಪ್ರದೇಶದಲ್ಲಿ ಜನರಿಗೆ ಕರೆ ನೀಡಿದ ಉಮಾ ಭಾರತಿ
ಸರಣಿ ಟ್ವೀಟ್ಗಳಲ್ಲಿ, ಬಿಜೆಪಿ ನಾಯಕಿ ಘಟನೆಯನ್ನು ಹಂಚಿಕೊಂಡಿದ್ದು ಅವರ ನೇತೃತ್ವದಲ್ಲಿ ರಾಜ್ಯದಲ್ಲಿ ಮದ್ಯ ಸೇವನೆಯ ವಿರುದ್ಧದ ಅಭಿಯಾನದ ಬಗ್ಗೆ ವಿವರಿಸಿದ್ದಾರೆ. ಜನರ ಕುಡಿತದ ಚಟವನ್ನು ತನ್ನ ಅನುಕೂಲಕ್ಕೆ ಬಳಸಿಕೊಳ್ಳದಂತೆ ಉಮಾ ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.

ಮದ್ಯ ಸೇವನೆ ಬಿಡಿ ಅದರ ಬದಲಿಗೆ ಹಸುವಿನ ಹಾಲನ್ನು(Milk) ಕುಡಿಯಲು ಪ್ರಾರಂಭಿಸಿ ಎಂದು ಬಿಜೆಪಿ ನಾಯಕಿ ಉಮಾ ಭಾರತಿ (Uma Bharti) ಜನರಿಗೆ ಕರೆ ನೀಡಿದ್ದಾರೆ. ಮಧ್ಯಪ್ರದೇಶದ (Madhya Pradesh) ಓರ್ಚಾಗೆ ಭೇಟಿ ನೀಡಿದ ಅವರು ಸ್ಥಳೀಯ ಮದ್ಯದ ಅಂಗಡಿಯೊಂದರ ಸುತ್ತಲೂ ಮೇಯುತ್ತಿದ್ದ ಬೀದಿ ಹಸುಗಳನ್ನು ಕಟ್ಟಿ ಅವುಗಳಿಗೆ ಆಹಾರ ನೀಡಿದ್ದಾರೆ.. ಆ ಮದ್ಯದಂಗಡಿ ಮುಂದೆ ನಿಂತ ಉಮಾ ಭಾರತಿ,”ಶರಾಬ್ ನಹಿ, ದೂಧ್ ಪಿಯೋ’ (ಹಾಲು ಕುಡಿಯಿರಿ, ಮದ್ಯ ಅಲ್ಲ) ಎಂದಿದ್ದಾರೆ.
ಸರಣಿ ಟ್ವೀಟ್ಗಳಲ್ಲಿ, ಬಿಜೆಪಿ ನಾಯಕಿ ಘಟನೆಯನ್ನು ಹಂಚಿಕೊಂಡಿದ್ದು ಅವರ ನೇತೃತ್ವದಲ್ಲಿ ರಾಜ್ಯದಲ್ಲಿ ಮದ್ಯ ಸೇವನೆಯ ವಿರುದ್ಧದ ಅಭಿಯಾನದ ಬಗ್ಗೆ ವಿವರಿಸಿದ್ದಾರೆ. ಜನರ ಕುಡಿತದ ಚಟವನ್ನು ತನ್ನ ಅನುಕೂಲಕ್ಕೆ ಬಳಸಿಕೊಳ್ಳದಂತೆ ಉಮಾ ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.
7. शराब वितरण पर नियंत्रण सरकार की जिम्मेवारी है लेकिन गौ पालन, गौ संरक्षण एवं गौ संवर्धन, यह पूर्णतया समाज की जिम्मेवारी है। 8. आज भगवान राम राजा सरकार के दरबार में शराब की दुकान के सामने गाय खड़ी करके यही मेरी अपील है।
— Uma Bharti (@umasribharti) February 2, 2023
ಇದನ್ನೂ ಓದಿ: ಸುಪ್ರೀಂಕೋರ್ಟ್ಗೆ ಶೀಘ್ರದಲ್ಲೇ ಐವರು ನೂತನ ನ್ಯಾಯಾಧೀಶರ ನೇಮಕ: ಕೇಂದ್ರ ಸರ್ಕಾರ
ಭಾರತಿ ಕಳೆದ ವರ್ಷದಿಂದ ಮದ್ಯ ಸೇವನೆ ವಿರುದ್ಧ ಪ್ರತಿಭಟನೆ ನಡೆಸಿ ಸುದ್ದಿಯಾಗುತ್ತಿದ್ದಾರೆ. ಜೂನ್ 2022 ರಲ್ಲಿ, ಅವರು ಮದ್ಯದ ಅಂಗಡಿಗೆ ಸಗಣಿ ಎಸೆದಿದ್ದರು. ಮಾರ್ಚ್ 2022 ರಲ್ಲಿ ಅವರು ಭೋಪಾಲ್ನ ಮತ್ತೊಂದು ಮದ್ಯದ ಅಂಗಡಿಗೆ ಕಲ್ಲು ಎಸೆದರು. ಕಳೆದೆರಡು ತಿಂಗಳಿನಿಂದ ಅವರು ಸಂಪೂರ್ಣ ಮದ್ಯಪಾನ ನಿಷೇಧ ಹಾಗೂ ರಾಜ್ಯದಲ್ಲಿ ಮದ್ಯ ಮಾರಾಟವನ್ನು ನಿಯಂತ್ರಿಸುವಂತೆ ಒತ್ತಾಯಿಸುತ್ತಿದ್ದಾರೆ.
ಮದ್ಯದಂಗಡಿಯನ್ನು ಗೋಶಾಲೆ ಮಾಡಿ ಎಂದು ಒತ್ತಾಯಿಸಿದ ಬಿಜೆಪಿ ನಾಯಕಿ
ಉಮಾಭಾರತಿ ಅವರು ಮಂಗಳವಾರ ಮಧ್ಯಪ್ರದೇಶದಲ್ಲಿ ಮಹಿಳೆಯರ ಮೇಲಿನ ಅಪರಾಧ ಪ್ರಕರಣಗಳ ಹೆಚ್ಚಳಕ್ಕೆ ಮದ್ಯವೇ ಕಾರಣ ಎಂದಿದ್ದಾರೆ. ಅದೇ ವೇಳೆ ನಿಯಮಗಳನ್ನು ಉಲ್ಲಂಘಿಸಿ ನಡೆಸುತ್ತಿರುವ ಮದ್ಯದ ಅಂಗಡಿಗಳನ್ನು ಗೋಶಾಲೆಗಳಾಗಿ ಪರಿವರ್ತಿಸಲು ಒತ್ತಾಯಿಸಿದ್ದಾರೆ. ಭೋಪಾಲ್ನ ದೇವಸ್ಥಾನದಲ್ಲಿ ನಾಲ್ಕು ದಿನ ಕಳೆದ ಉಮಾ ಭಾರತಿ, ರಾಜ್ಯದಲ್ಲಿ “ನಿಯಂತ್ರಿತ” ಮದ್ಯ ನೀತಿಯ ಬೇಡಿಕೆಯನ್ನು ಬೆಂಬಲಿಸಲು “ಮಧುಶಾಲಾ ಮೇ ಗೌಶಾಲಾ” (ಮದ್ಯ ಮಾರಾಟ ಕೇಂದ್ರಗಳ ಸ್ಥಳದಲ್ಲಿ ಗೋಶಾಲೆಗಳು) ಕಾರ್ಯಕ್ರಮವನ್ನು ಪ್ರಾರಂಭಿಸುವುದಾಗಿ ಘೋಷಿಸಿದ್ದಾರೆ.
ಮದ್ಯದ ನೀತಿಗೆ ಕಾಯದೆ, ನಿಯಮಗಳನ್ನು ಉಲ್ಲಂಘಿಸಿ ನಡೆಸುತ್ತಿರುವ ಮದ್ಯದಂಗಡಿಗಳನ್ನು ಗೋಶಾಲೆಯನ್ನಾಗಿ ಪರಿವರ್ತಿಸಲು ನಾನು ಪ್ರಾರಂಭಿಸುತ್ತೇನೆ. ಓರ್ಚಾದಲ್ಲಿರುವ “ಅಕ್ರಮ” ಮದ್ಯದ ಅಂಗಡಿಯ ಹೊರಗೆ 11 ಹಸುಗಳನ್ನು ಕಟ್ಟಿ ಹಾಕಲಿರುವ ವ್ಯವಸ್ಥೆ ಮಾಡಲು ಜನರಿಗೆ ತಿಳಿಸಿದ್ದೇನೆ. “ನನ್ನನ್ನು ತಡೆಯಲು ಯಾರು ಧೈರ್ಯ ಮಾಡುತ್ತಾರೆ ಎಂಬುದನ್ನು ನೋಡುತ್ತೇವೆ .ಈ ಹಸುಗಳಿಗೆ ಆಹಾರ , ನೀರುನ್ನು ನಾನು ಕೊಡುತ್ತೇನೆ ಎಂದು ಮಾಧ್ಯಮದವರೊಂದಿಗೆ ಮಾತನಾಡಿದ ಬಿಜೆಪಿ ನಾಯಕಿ ಹೇಳಿದ್ದಾರೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 2:05 pm, Fri, 3 February 23



