ಮುತ್ತಿನ ನಗರಿಯಲ್ಲಿ ವರುಣಾರ್ಭಟ: ಎರಡು ಮನೆ ಕುಸಿದು 11 ಜನರ ಸಾವು

ಹೈದರಾಬಾದ್: ಮುತ್ತಿನ ನಗರಿಯಲ್ಲಿ ಮಳೆಯ ಆರ್ಭಟ ಜೋರಾಗಿದೆ. ಸುರಿಯುತ್ತಿರುವ ಧಾರಾಕಾರ ಮಳೆ ಬಹಳಷ್ಟು ಅವಾಂತರಗಳನ್ನು ಸೃಷ್ಟಿಸಿದೆ. ವರ್ಷಧಾರೆ ನರ್ತನಕ್ಕೆ ಮನೆ ಕುಸಿದು ತಾಯಿ ಮಗಳು ಬಲಿಯಾಗಿದ್ದಾರೆ. ಹೈದರಾಬಾದ್‌ ಬಳಿಯ ರಂಗಾರೆಡ್ಡಿ ಜಿಲ್ಲೆ ಇಬ್ರಾಹಿಂ ಪಟ್ಟಣದ ಮಲ್ಲಶೆಟ್ಟಿ ಗೂಡಾದಲ್ಲಿ ಮಲಗಿದ್ದವರು ಮೇಲೆ ಮನೆ ಕುಸಿದು ತಾಯಿ ಶ್ಯಾಮ ಸುವರ್ಣ(47) ಮತ್ತು ಮಗಳು ಶ್ರವಂತಿ ಮೃತಪಟ್ಟಿದ್ದಾರೆ. ಇನ್ನು ಇದೇ ರೀತಿ ಹೈದರಾಬಾದ್‌ ಹಳೆಬಸ್ತಿ ಪ್ರದೇಶದಲ್ಲಿ ಮನೆ ಮೇಲೆ ಬಂಡೆ ಉರುಳಿಬಿದ್ದು 2 ಮನೆ ಕುಸಿದು 9 ಜನ ಸಾವನ್ನಪ್ಪಿದ್ದಾರೆ. ಮನೆಯಲ್ಲಿದ್ದ […]

ಮುತ್ತಿನ ನಗರಿಯಲ್ಲಿ ವರುಣಾರ್ಭಟ: ಎರಡು ಮನೆ ಕುಸಿದು 11 ಜನರ ಸಾವು
Edited By:

Updated on: Oct 14, 2020 | 10:36 AM

ಹೈದರಾಬಾದ್: ಮುತ್ತಿನ ನಗರಿಯಲ್ಲಿ ಮಳೆಯ ಆರ್ಭಟ ಜೋರಾಗಿದೆ. ಸುರಿಯುತ್ತಿರುವ ಧಾರಾಕಾರ ಮಳೆ ಬಹಳಷ್ಟು ಅವಾಂತರಗಳನ್ನು ಸೃಷ್ಟಿಸಿದೆ. ವರ್ಷಧಾರೆ ನರ್ತನಕ್ಕೆ ಮನೆ ಕುಸಿದು ತಾಯಿ ಮಗಳು ಬಲಿಯಾಗಿದ್ದಾರೆ. ಹೈದರಾಬಾದ್‌ ಬಳಿಯ ರಂಗಾರೆಡ್ಡಿ ಜಿಲ್ಲೆ ಇಬ್ರಾಹಿಂ ಪಟ್ಟಣದ ಮಲ್ಲಶೆಟ್ಟಿ ಗೂಡಾದಲ್ಲಿ ಮಲಗಿದ್ದವರು ಮೇಲೆ ಮನೆ ಕುಸಿದು ತಾಯಿ ಶ್ಯಾಮ ಸುವರ್ಣ(47) ಮತ್ತು ಮಗಳು ಶ್ರವಂತಿ ಮೃತಪಟ್ಟಿದ್ದಾರೆ.

ಇನ್ನು ಇದೇ ರೀತಿ ಹೈದರಾಬಾದ್‌ ಹಳೆಬಸ್ತಿ ಪ್ರದೇಶದಲ್ಲಿ ಮನೆ ಮೇಲೆ ಬಂಡೆ ಉರುಳಿಬಿದ್ದು 2 ಮನೆ ಕುಸಿದು 9 ಜನ ಸಾವನ್ನಪ್ಪಿದ್ದಾರೆ. ಮನೆಯಲ್ಲಿದ್ದ ಮೂರು ಮಕ್ಕಳು ಸೇರಿ 9 ಜನರು ಬಲಿಯಾಗಿದ್ದಾರೆ. ಸ್ಥಳಕ್ಕೆ ಬಂದ ಚಂದ್ರಾಯನ ಗುಟ್ಟಾ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ತೆಲಂಗಾಣದ ಅನೇಕ ಸ್ಥಳಗಳಲ್ಲಿ ಭಾರಿ ಮಳೆ ಸುರಿದು ತಗ್ಗು ಪ್ರದೇಶ ಜಲಾವೃತ್ತಗೊಂಡಿದೆ. ರಸ್ತೆ, ಹೆದ್ದಾರಿಯಲ್ಲಿ ಮೂರು‌ನಾಲ್ಕು ಅಡಿ ನೀರು ನಿಂತಿದೆ. ಕಳೆದ ಎರಡು ದಿನದಿಂದ ಜನಜೀವನ ಅಸ್ತವ್ಯಸ್ತಗೊಂಡಿದೆ.

Published On - 7:48 am, Wed, 14 October 20