AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಟ ಡಿನೋ ಮೊರಿಯಾ, ಅಹ್ಮದ್ ಪಟೇಲ್​ ಅಳಿಯ ಸೇರಿ ನಾಲ್ವರ ಆಸ್ತಿ ವಶಪಡಿಸಿಕೊಂಡ ಜಾರಿ ನಿರ್ದೇಶನಾಲಯ

ಬಯೋಟೆಕ್​ ಕಂಪನಿಗೆ ಸಂಬಂಧಿಸಿದಂತೆ ನಾಲ್ವರ ಆಸ್ತಿ ವಶಪಡಿಸಿಕೊಳ್ಳಲು ನಾಲ್ಕು ಪ್ರತ್ಯೇಕ ಪ್ರಾಥಮಿಕ ಆದೇಶವನ್ನೇ ನೀಡಲಾಗಿದೆ. ಒಟ್ಟಾರೆ 8.70 ಕೋಟಿ ರೂ.ಮೌಲ್ಯದ ಆಸ್ತಿ ವಶವಾಗಿದೆ.

ನಟ ಡಿನೋ ಮೊರಿಯಾ, ಅಹ್ಮದ್ ಪಟೇಲ್​ ಅಳಿಯ ಸೇರಿ ನಾಲ್ವರ ಆಸ್ತಿ ವಶಪಡಿಸಿಕೊಂಡ ಜಾರಿ ನಿರ್ದೇಶನಾಲಯ
ಡಿನೋ ಮೊರಿಯಾ
TV9 Web
| Updated By: Lakshmi Hegde|

Updated on:Jul 03, 2021 | 11:15 AM

Share

ಈ ಪ್ರಕರಣ ಗುಜರಾತ್ ಮೂಲದ ಔಷಧೀಯ ಕಂಪನಿ ಸ್ಟರ್ಲಿಂಗ್ ಬಯೋಟೆಕ್​​ ಮತ್ತು ಅದರ ಪ್ರವರ್ತಕ ಸಹೋದರರಾದ ನಿತಿನ್​ ಸಂದೇಸರ್​ ಮತ್ತು ಚೇತನ್ ಸಂದೇಸರ್​ ಅವರಿಗೆ ಸಂಬಂಧಪಟ್ಟದ್ದಾಗಿದೆ. ಈ ಸಹೋದರರು ಬ್ಯಾಂಕ್​​ನಿಂದ 14,500 ಕೋಟಿ ರೂಪಾಯಿಯಷ್ಟು ಸಾಲ ಪಡೆದು ವಂಚಿಸಿದ್ದಾರೆ. ಕಾಂಗ್ರೆಸ್​ ನಾಯಕ ದಿವಂಗತ ಅಹ್ಮದ್​ ಪಟೇಲ್​ ಅವರ ಅಳಿಯ, ನಟರಾದ ಡಿನೋ ಮೊರಿಯಾ, ಸಂಜಯ್​ ಖಾನ್​, ಡಿಜೆ ಅಕ್ವೀಲ್​​ ಅವರ ಆಸ್ತಿಯನ್ನು ಶುಕ್ರವಾರ ಜಾರಿ ನಿರ್ದೇಶನಾಲಯ (ಇಡಿ) ಶುಕ್ರವಾರ ಮುಟ್ಟುಗೋಲು ಹಾಕಿಕೊಂಡಿದೆ. ಹಣ ಅಕ್ರಮ ವರ್ಗಾವಣೆ ಮೂಲಕ ಬ್ಯಾಂಕ್​ಗೆ ವಂಚನೆ ಮಾಡಿದ ಪ್ರಕರಣದಡಿ ಇವರ ಆಸ್ತಿಯನ್ನು ಇಡಿ ವಶಪಡಿಸಿಕೊಂಡಿದ್ದು, ತನಿಖಾ ದಳ ವಶಪಡಿಸಿಕೊಂಡಿರುವ ನಾಲ್ಕೂ ಜನರ ಒಟ್ಟು ಆಸ್ತಿ ಮೊಟ್ಟ 8.79 ಕೋಟಿ ರೂಪಾಯಿ ಆಗಿದೆ.

ಈ ಪ್ರಕರಣ ಗುಜರಾತ್ ಮೂಲದ ಔಷಧೀಯ ಕಂಪನಿ ಸ್ಟರ್ಲಿಂಗ್ ಬಯೋಟೆಕ್​​ ಮತ್ತು ಅದರ ಪ್ರವರ್ತಕ ಸಹೋದರರಾದ ನಿತಿನ್​ ಸಂದೇಸರ್​ ಮತ್ತು ಚೇತನ್ ಸಂದೇಸರ್​ ಅವರಿಗೆ ಸಂಬಂಧಪಟ್ಟದ್ದಾಗಿದೆ. ಈ ಸಹೋದರರು ಬ್ಯಾಂಕ್​​ನಿಂದ 14,500 ಕೋಟಿ ರೂಪಾಯಿಯಷ್ಟು ಸಾಲ ಪಡೆದು ವಂಚಿಸಿದ್ದಾರೆ. ಇದು ದೇಶಭ್ರಷ್ಟ ವ್ಯಾಪಾರಿ ನೀರವ್​ ಮೋದಿ ಪಂಜಾಬ್​ ನ್ಯಾಶನಲ್​ ಬ್ಯಾಂಕ್​ಗೆ ವಂಚಿಸಿದ ಮೊತ್ತ (11,400 ರೂ.)ಕ್ಕಿಂತಲೂ ಹೆಚ್ಚು.

ಈ ಬಯೋಟೆಕ್​ ಕಂಪನಿಗೆ ಸಂಬಂಧಿಸಿದಂತೆ ನಾಲ್ವರ ಆಸ್ತಿ ವಶಪಡಿಸಿಕೊಳ್ಳಲು ನಾಲ್ಕು ಪ್ರತ್ಯೇಕ ಪ್ರಾಥಮಿಕ ಆದೇಶವನ್ನೇ ನೀಡಲಾಗಿದೆ. ಒಟ್ಟಾರೆ 8.70 ಕೋಟಿ ರೂ.ಮೌಲ್ಯದ ಆಸ್ತಿ ವಶವಾಗಿದ್ದು, ಅದರಲ್ಲಿ ಸಂಜಯ್ ಖಾನ್​ರದ್ದು 3 ಕೋಟಿ ರೂ.ಮೌಲ್ಯದ ಆಸ್ತಿ, ಡಿನೋ ಮೊರಿಯಾರ 1.4 ಕೋಟಿ ರೂ., ಡಿಜಿ ಅಕ್ವೀಲ್​ರ 1.98 ಕೋಟಿ ರೂ. ಮೌಲ್ಯದ ಆಸ್ತಿ ವಶಪಡಿಸಿಕೊಳ್ಳಲಾಗಿದೆ. ಹಾಗೂ ಮೃತ ಕಾಂಗ್ರೆಸ್ ನಾಯಕ ಅಹ್ಮದ್ ಪಟೇಲ್​ ಅಳಿಯ ಇರ್ಫಾನ್​ ಅಹ್ಮದ್ ಸಿದ್ಧಕಿ ಅವರ​ 2.41 ಕೋಟಿ ರೂ.ಮೌಲ್ಯದ ಆಸ್ತಿ ಮುಟ್ಟುಗೋಲು ಹಾಕಲಾಗಿದೆ ಎಂದು ಇಡಿ ತಿಳಿಸಿದೆ. ಮುಟ್ಟುಗೋಲು ಹಾಕಿದ ಆಸ್ತಿಯಲ್ಲಿ ಮೂರು ವಾಹನಗಳು, ಬ್ಯಾಂಕ್​ ಅಕೌಂಟ್​​ಗಳು, ಶೇರ್​​ಗಳು, ಮ್ಯುಚ್ಯುವಲ್​ ಫಂಡ್​ಗಳೂ ಇವೆ ಎಂದೂ ಇಡಿ ಹೇಳಿದೆ.

ಸಂದೇಸರ್​ ಸಹೋದರರ ವಂಚನೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸಿದ್ಧಕಿ, ಮೊರಿಯೊ, ಅಕ್ವೀಲ್​ ಅವರನ್ನು ಇಡಿ ವಿಚಾರಣೆಗೆ ಒಳಪಡಿಸಿತ್ತು. ಇವರೆಲ್ಲರೂ ಸಂದೇಸರ್​ ಕುಟುಂಬದೊಂದಿಗೆ ಆಪ್ತರಾಗಿದ್ದರು ಎಂಬ ಮಾಹಿತಿಯನ್ನು, ಅವರ ಮನೆಯ ಉದ್ಯೋಗ ಸುನೀಲ್ ಯಾದವ್​ ಎಂಬಾತ ಹೇಳಿಕೆ ನೀಡಿದ್ದ. ಅದನ್ನು ದಾಖಲಿಸಿದ್ದ ಇಡಿ ಕೂಡಲೇ ವಿಚಾರಣೆ ಶುರು ಮಾಡಿತ್ತು.

ಇದನ್ನೂ ಓದಿ: ದಾಬಸ್‌ಪೇಟೆಯ 3 ಅಂಗಡಿಗಳಲ್ಲಿ ಸರಣಿ ಕಳ್ಳತನ; ಅಂಗಡಿಗಳ ಶೆಟರ್ ಮುರಿದು ನಗದು ದೋಚಿರುವ ಕಳ್ಳರು

Published On - 11:13 am, Sat, 3 July 21

ಸಂಸತ್ತಿನಲ್ಲಿ ವಿರೋಧಪಕ್ಷ ವಿನಾಕಾರಣ ಗದ್ದಲವೆಬ್ಬಿಸುತ್ತಿದೆ: ಸೋಮಣ್ಣ
ಸಂಸತ್ತಿನಲ್ಲಿ ವಿರೋಧಪಕ್ಷ ವಿನಾಕಾರಣ ಗದ್ದಲವೆಬ್ಬಿಸುತ್ತಿದೆ: ಸೋಮಣ್ಣ
ಜೈಲಿನಲ್ಲಿ ಇರುವ ಕೈದಿಗೆ ಹಾಡುವ ಅವಕಾಶ ನೀಡಿದ ಕೆ. ಕಲ್ಯಾಣ್
ಜೈಲಿನಲ್ಲಿ ಇರುವ ಕೈದಿಗೆ ಹಾಡುವ ಅವಕಾಶ ನೀಡಿದ ಕೆ. ಕಲ್ಯಾಣ್
ಮಚ್ಚಿನೊಂದಿಗೆ ಆರೋಪಿ ನ್ಯಾಯಾಲಯ ಪ್ರವೇಶಿಸಿದ್ದು ಪೊಲೀಸರ ಕರ್ತವ್ಯಲೋಪ
ಮಚ್ಚಿನೊಂದಿಗೆ ಆರೋಪಿ ನ್ಯಾಯಾಲಯ ಪ್ರವೇಶಿಸಿದ್ದು ಪೊಲೀಸರ ಕರ್ತವ್ಯಲೋಪ
‘ಜೂನಿಯರ್’ ಸಿನಿಮಾದ ಯಶಸ್ಸು, ನಿರ್ದೇಶಕ ರಾಧಾಕೃಷ್ಣ ಹೇಳಿದ್ದೇನು?
‘ಜೂನಿಯರ್’ ಸಿನಿಮಾದ ಯಶಸ್ಸು, ನಿರ್ದೇಶಕ ರಾಧಾಕೃಷ್ಣ ಹೇಳಿದ್ದೇನು?
ಏನೂ ಅರಿಯದ ಮಗುವನ್ನು ಸಾಯಿಸುವ ಮಾನಸಿಕತೆಗೆ ಏನೆನ್ನಬೇಕು?
ಏನೂ ಅರಿಯದ ಮಗುವನ್ನು ಸಾಯಿಸುವ ಮಾನಸಿಕತೆಗೆ ಏನೆನ್ನಬೇಕು?
ಸ್ಟಂಟ್ ದೃಶ್ಯಕ್ಕೆ ಎಷ್ಟು ಶ್ರಮ ಪಟ್ಟಿದ್ದಾರೆ ಕಿರೀಟಿ: ವಿಡಿಯೋ ನೋಡಿ
ಸ್ಟಂಟ್ ದೃಶ್ಯಕ್ಕೆ ಎಷ್ಟು ಶ್ರಮ ಪಟ್ಟಿದ್ದಾರೆ ಕಿರೀಟಿ: ವಿಡಿಯೋ ನೋಡಿ
ರೌಡಿಶೀಟರ್ ಬಿಕ್ಲು ಶಿವ ಬರ್ಬರ ಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್
ರೌಡಿಶೀಟರ್ ಬಿಕ್ಲು ಶಿವ ಬರ್ಬರ ಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್
ಸ್ವಜನ ಪಕ್ಷಪಾತ, ಭ್ರಷ್ಟಾಚಾರದಿಂದ ಸಿದ್ದರಾಮಯ್ಯ ಗಾವುದ ದೂರ: ಮಹದೇವಪ್ಪ
ಸ್ವಜನ ಪಕ್ಷಪಾತ, ಭ್ರಷ್ಟಾಚಾರದಿಂದ ಸಿದ್ದರಾಮಯ್ಯ ಗಾವುದ ದೂರ: ಮಹದೇವಪ್ಪ
ಖಜಾನೆ ತುಂಬಿಸಿಕೊಳ್ಳಲು ರಾಜ್ಯ ಸರ್ಕಾರ ವಾಮಮಾರ್ಗ ಅನುಸರಿಸಿದೆ: ಸಿಟಿ ರವಿ
ಖಜಾನೆ ತುಂಬಿಸಿಕೊಳ್ಳಲು ರಾಜ್ಯ ಸರ್ಕಾರ ವಾಮಮಾರ್ಗ ಅನುಸರಿಸಿದೆ: ಸಿಟಿ ರವಿ
ನಾಲ್ಕು ದಿನಗಳ ಅಂತರದಲ್ಲಿ ಇಬ್ಬರು ಮಹಿಳೆಯರನ್ನು ಬಲಿಪಡೆದ ಬಿಎಂಟಿಸಿ ಬಸ್
ನಾಲ್ಕು ದಿನಗಳ ಅಂತರದಲ್ಲಿ ಇಬ್ಬರು ಮಹಿಳೆಯರನ್ನು ಬಲಿಪಡೆದ ಬಿಎಂಟಿಸಿ ಬಸ್