AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕ್ವಾಡ್ ರಾಷ್ಟ್ರಗಳಿಗೆ ಸಂಬಂಧಿಸಿದ ಬೆಳವಣಿಗೆ, ಕೊವಿಡ್ ಲಸಿಕೆಗೆ ಸಹಕಾರ: ಅಮೆರಿಕದ ಸಂಸದರೊಂದಿಗೆ ಎಸ್.ಜೈಶಂಕರ್ ಮಾತುಕತೆ

S Jaishankar: ಕ್ವಾಡ್ ಗೆ ಸಂಬಂಧಿಸಿದ ಬೆಳವಣಿಗೆಗಳು ಮತ್ತು ಲಸಿಕೆಗಳ ಬಗ್ಗೆ ನಮ್ಮ ಸಹಕಾರವನ್ನು ಚರ್ಚಿಸಲಾಗಿದೆ. ಬಲವಾದ ಸಂಬಂಧಗಳನ್ನು ಬೆಳೆಸಲು ಅವರ ನಾಯಕತ್ವವನ್ನು ಗುರುತಿಸಿ" ಎಂದು ಜೈಶಂಕರ್ ಅವರು ಗೃಹ ವಿದೇಶಾಂಗ ವ್ಯವಹಾರಗಳ ಸಮಿತಿಯ ಅಧ್ಯಕ್ಷರಾಗಿರುವ ಕಾಂಗ್ರೆಸ್ ಮೆನ್ ಗ್ರೆಗೊರಿ ಮೀಕ್ಸ್ ಮತ್ತು ಕಾಂಗ್ರೆಸ್ ಮೆನ್ ಮೈಕೆಲ್ ಮೆಕಾಲ್ ಭೇಟಿಯ ನಂತರ ಹೇಳಿದರು.

ಕ್ವಾಡ್ ರಾಷ್ಟ್ರಗಳಿಗೆ ಸಂಬಂಧಿಸಿದ ಬೆಳವಣಿಗೆ, ಕೊವಿಡ್ ಲಸಿಕೆಗೆ ಸಹಕಾರ: ಅಮೆರಿಕದ ಸಂಸದರೊಂದಿಗೆ ಎಸ್.ಜೈಶಂಕರ್ ಮಾತುಕತೆ
ಎಸ್.ಜೈಶಂಕರ್
ರಶ್ಮಿ ಕಲ್ಲಕಟ್ಟ
ರಶ್ಮಿ ಕಲ್ಲಕಟ್ಟ|

Updated on: May 28, 2021 | 12:31 PM

Share

ವಾಷಿಂಗ್ಟನ್: ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್ ಅವರು ಗುರುವಾರ ಡೆಮಾಕ್ರಟಿಕ್ ಮತ್ತು ರಿಪಬ್ಲಿಕನ್ ಪಕ್ಷಗಳ ಪ್ರಭಾವಿ ಪ್ರತಿನಿಧಿಗಳನ್ನು ಭೇಟಿಯಾಗಿ ಕ್ವಾಡ್‌ ರಾಷ್ಟ್ರಗಳಿಗೆ ಸಂಬಂಧಿಸಿದ ಬೆಳವಣಿಗೆಗಳು ಮತ್ತು ಕೊವಿಡ್ ಲಸಿಕೆಗಳ ಸಹಕಾರದ ಬಗ್ಗೆ ಚರ್ಚಿಸಿದರು. “ಕ್ವಾಡ್ ಗೆ ಸಂಬಂಧಿಸಿದ ಬೆಳವಣಿಗೆಗಳು ಮತ್ತು ಲಸಿಕೆಗಳ ಬಗ್ಗೆ ನಮ್ಮ ಸಹಕಾರವನ್ನು ಚರ್ಚಿಸಲಾಗಿದೆ. ಬಲವಾದ ಸಂಬಂಧಗಳನ್ನು ಬೆಳೆಸಲು ಅವರ ನಾಯಕತ್ವವನ್ನು ಗುರುತಿಸಿ” ಎಂದು ಜೈಶಂಕರ್ ಅವರು ಗೃಹ ವಿದೇಶಾಂಗ ವ್ಯವಹಾರಗಳ ಸಮಿತಿಯ ಅಧ್ಯಕ್ಷರಾಗಿರುವ ಕಾಂಗ್ರೆಸ್ ಮೆನ್ ಗ್ರೆಗೊರಿ ಮೀಕ್ಸ್ ಮತ್ತು ಕಾಂಗ್ರೆಸ್ ಮೆನ್ ಮೈಕೆಲ್ ಮೆಕಾಲ್ ಭೇಟಿಯ ನಂತರ ಹೇಳಿದರು.

ಹೌಸ್ ಇಂಡಿಯಾ ಕಾಕಸ್‌ನ ಸಹ-ಅಧ್ಯಕ್ಷರು, ಡೆಮಾಕ್ರಟಿಕ್ ಪಕ್ಷದ ಕಾಂಗ್ರೆಸ್ ಮೆನ್ ಬ್ರಾಡ್ ಶೆರ್ಮನ್ ಮತ್ತು ರಿಪಬ್ಲಿಕನ್ ಪಕ್ಷದ ಕಾಂಗ್ರೆಸ್ ಮೆನ್ ಸ್ಟೀವ್ ಚಬೊಟ್ ಅವರೊಂದಿಗೆ ಸಚಿವರು “ಉತ್ತಮ ಸಂಭಾಷಣೆ” ನಡೆಸಿದರು. ಅಮೆರಿಕದ ನಾಲ್ವರು ಪ್ರತಿನಿಧಿಗಳು ಭಾರತ-ಅಮೆರಿಕ ಸಂಬಂಧದ ಬಲವಾದ ಬೆಂಬಲ ನೀಡಿದ್ದಾರೆ.

ಭಾರತವು ಕೊವಿಡ್ ವಿರುದ್ಧ ಹೇಗೆ ಹೋರಾಡುತ್ತಿದೆ ಮತ್ತು ಚೀನಾದಿಂದ ತನ್ನ ಆರ್ಥಿಕತೆಯನ್ನು ಬೇರ್ಪಡಿಸಲು ಹೇಗೆ ಕೆಲಸ ಮಾಡುತ್ತಿದೆ ಎಂಬುದನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ’ಎಂದು ಶೆರ್ಮನ್ ಟ್ವೀಟ್ ಮಾಡಿದ್ದಾರೆ. ಎನ್ ಶೂರಿಂಗ್ ಅಮೇರಿಕನ್ ಗ್ಲೋಬಲ್ ಲೀಡರ್‌ಶಿಪ್ ಮತ್ತು ಎಂಗೇಜ್‌ಮೆಂಟ್ (EAGLE) ಕಾಯ್ದೆಯನ್ನು ಪರಿಚಯಿಸಿದ ನಂತರ, ಕಾಂಗ್ರೆಸ್ ಮೆನ್ ಮೀಕ್ಸ್ ಅವರು ಭಾರತದ ಕಡೆಗೆ ಬಿಡೆನ್ ಆಡಳಿತದ ಉಪಕ್ರಮವನ್ನು ಶ್ಲಾಘಿಸಿದರು.

ಕಾರ್ಯದರ್ಶಿ ಬ್ಲಿಂಕೆನ್ ಮತ್ತು ಆಸ್ಟಿನ್ ಅವರ ಜಪಾನ್ ಮತ್ತು ಕೊರಿಯಾ ಪ್ರವಾಸಗಳು ಮತ್ತು ಕಾರ್ಯದರ್ಶಿ ಆಸ್ಟಿನ್ ಅವರ ಭಾರತಕ್ಕೆ ಪ್ರತ್ಯೇಕ ಪ್ರವಾಸ, ಹೊಸ ಆಡಳಿತದ ಆರಂಭದಲ್ಲಿಯೇ ಪೆಸಿಫಿಕ್ ಶಕ್ತಿಯಾಗಿ ಅಮೆರಿಕದ ಪಾತ್ರವನ್ನು ಬಲಪಡಿಸಿತು. ಅಮೆರಿಕ ತಮ್ಮ ಮಿತ್ರರು ಮತ್ತು ಪಾಲುದಾರರೊಂದಿಗೆ ಕಣದಲ್ಲಿದೆ ಎಂದು ಚೀನಾ ಮತ್ತು ಜಗತ್ತಿಗೆ ಸಂಕೇತ ನೀಡಿತು ಎಂದು ಅವರು ಹೇಳಿದರು.

ಡೆಮಾಕ್ರಟಿಕ್ ಪಕ್ಷದ ಸಂಸದ ಬ್ರಾಡ್ ಶೆರ್ಮನ್ ಮತ್ತು ರಿಪಬ್ಲಿಕನ್ ಪಕ್ಷದ ಸಂಸದ ಸ್ಟೀವ್‌ ಚಬೊಟ್‌ ಅವರೊಂದಿಗೂ ಜೈಶಂಕರ್‌ ಮಾತುಕತೆ ನಡೆಸಿದ್ದಾರೆ.

ಡಿಎನ್‌ಐ ಅವ್ರಿಲ್ ಹೈನ್ಸ್ ಅವರನ್ನು ಭೇಟಿಯಾಗಲು ಸಂತೋಷವಾಗಿದೆ. ಸಮಕಾಲೀನ ಭದ್ರತಾ ಸವಾಲುಗಳನ್ನು ಎದುರಿಸಲು ಮತ್ತು ನಮ್ಮ ಕಾರ್ಯತಂತ್ರದ ಸಹಭಾಗಿತ್ವವನ್ನು ಹೆಚ್ಚಿಸಲು ಒಟ್ಟಾಗಿ ಕೆಲಸ ಮಾಡಲು ಎದುರುನೋಡಬಹುದು ಎಂದು ಜೈಶಂಕರ್ ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ: ಕೊರೊನಾ ಕಾಟದ ಮಧ್ಯೆ, ವೈರಸ್​ ಕಟ್ಟಿಹಾಕಲು ನ್ಯೂಯಾರ್ಕ್​ನಲ್ಲಿ ಬಂದಿಳಿದ ವಿದೇಶಾಂಗ ಸಚಿವ ಜೈಶಂಕರ್; ಭೇಟಿಯ ಮಹತ್ವ ಏನು?

ಭಾರತದಲ್ಲಿ ಕೊವಿಡ್ ನಿಯಂತ್ರಣ ಬಗ್ಗೆ ಅಂತರರಾಷ್ಟ್ರೀಯ ಮಾಧ್ಯಮಗಳ ಏಕಪಕ್ಷೀಯ ನಿರೂಪಣೆಯನ್ನು ಎದುರಿಸಲು ರಾಯಭಾರಿಗಳಿಗೆ ಸಚಿವ ಜೈಶಂಕರ್ ಕರೆ

Follow Us
‘ಬುಲ್ಲಿ’ ಸಿನಿಮಾದ ಸುದ್ದಿಗೋಷ್ಠಿಯಲ್ಲಿ ಪುನೀತ್ ನೆನಪು ಮಾಡಿಕೊಂಡ ಊರ್ವಶಿ
‘ಬುಲ್ಲಿ’ ಸಿನಿಮಾದ ಸುದ್ದಿಗೋಷ್ಠಿಯಲ್ಲಿ ಪುನೀತ್ ನೆನಪು ಮಾಡಿಕೊಂಡ ಊರ್ವಶಿ
ಸಂಪುಟ ವಿಸ್ತರಣೆ ಕ್ಲೈಮ್ಯಾಕ್ಸ್: ಕುತೂಹಲ ಮೂಡಿಸಿದ ರಾಹುಲ್ ಗಾಂಧಿ ನಡೆ
ಸಂಪುಟ ವಿಸ್ತರಣೆ ಕ್ಲೈಮ್ಯಾಕ್ಸ್: ಕುತೂಹಲ ಮೂಡಿಸಿದ ರಾಹುಲ್ ಗಾಂಧಿ ನಡೆ
ಯಾದಗಿರಿಯಲ್ಲಿ ಒಂದೂವರೆ ಗಂಟೆ ಅಬ್ಬರಿಸಿದ ಮಳೆ: ನಿಟ್ಟುಸಿರುವ ಬಿಟ್ಟ ರೈತರು
ಯಾದಗಿರಿಯಲ್ಲಿ ಒಂದೂವರೆ ಗಂಟೆ ಅಬ್ಬರಿಸಿದ ಮಳೆ: ನಿಟ್ಟುಸಿರುವ ಬಿಟ್ಟ ರೈತರು
ಕನ್ನಡ ಚಿತ್ರರಂಗಕ್ಕೆ ಮರಳಿದ ನಟಿ ಊರ್ವಶಿ: ಶೀರ್ಷಿಕೆ, ಫಸ್ಟ್ ಲುಕ್ ಪೋಸ್ಟರ್
ಕನ್ನಡ ಚಿತ್ರರಂಗಕ್ಕೆ ಮರಳಿದ ನಟಿ ಊರ್ವಶಿ: ಶೀರ್ಷಿಕೆ, ಫಸ್ಟ್ ಲುಕ್ ಪೋಸ್ಟರ್
ಬೆಂಗಳೂರಿನ ಬ್ಯಾಡರಹಳ್ಳಿಯಲ್ಲಿ ಐದನೇ ಬಾರಿ ಚಿರತೆ ಪ್ರತ್ಯಕ್ಷ!
ಬೆಂಗಳೂರಿನ ಬ್ಯಾಡರಹಳ್ಳಿಯಲ್ಲಿ ಐದನೇ ಬಾರಿ ಚಿರತೆ ಪ್ರತ್ಯಕ್ಷ!
ತಾಯಿ ನಮ್ಮನ್ನಗಲಿದ್ದಾರೆ ಎನ್ನುವುದು ನೆನಸಿಕೊಳ್ಳಲಿಕ್ಕೂ ಸಾಧ್ಯವಿಲ್ಲ: hdk
ತಾಯಿ ನಮ್ಮನ್ನಗಲಿದ್ದಾರೆ ಎನ್ನುವುದು ನೆನಸಿಕೊಳ್ಳಲಿಕ್ಕೂ ಸಾಧ್ಯವಿಲ್ಲ: hdk
37 ಟಿಎಂಸಿ ಸಾಮರ್ಥ್ಯದ ಹೇಮಾವತಿಯಲ್ಲಿ ಉಳಿದಿದ್ದು ಕೇವಲ 24 ಟಿಎಂಸಿ
37 ಟಿಎಂಸಿ ಸಾಮರ್ಥ್ಯದ ಹೇಮಾವತಿಯಲ್ಲಿ ಉಳಿದಿದ್ದು ಕೇವಲ 24 ಟಿಎಂಸಿ
ಕಾವೇರಿ ಜಲ ವಿವಾದ: ಸಂಕಷ್ಟ ಸೂತ್ರ ಪಾಲಿಸುವಂತೆ CWRC ಸಲಹೆ
ಕಾವೇರಿ ಜಲ ವಿವಾದ: ಸಂಕಷ್ಟ ಸೂತ್ರ ಪಾಲಿಸುವಂತೆ CWRC ಸಲಹೆ
ಭೋಪಾಲ್‌ನಲ್ಲಿ ಹಿಂಸಾಚಾರಕ್ಕೆ ತಿರುಗಿದ ರೈತರ ಪ್ರತಿಭಟನೆ
ಭೋಪಾಲ್‌ನಲ್ಲಿ ಹಿಂಸಾಚಾರಕ್ಕೆ ತಿರುಗಿದ ರೈತರ ಪ್ರತಿಭಟನೆ
ಕುತೂಹಲಕಾರಿ ಘಟ್ಟ ತಲುಪಿದ ಸಂಪುಟ ವಿಸ್ತರಣೆ ಕಸರತ್ತು
ಕುತೂಹಲಕಾರಿ ಘಟ್ಟ ತಲುಪಿದ ಸಂಪುಟ ವಿಸ್ತರಣೆ ಕಸರತ್ತು