AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನೂಪುರ್ ಶರ್ಮಾ ಹೇಳಿಕೆಗೆ ಹಲವು ದೇಶಗಳ ಆಕ್ಷೇಪ: ಸರ್ಕಾರದ ನಿಲುವು ಮತ್ತೊಮ್ಮೆ ಸ್ಪಷ್ಟಪಡಿಸಿದ ವಿದೇಶಾಂಗ ಸಚಿವ ಜೈಶಂಕರ್

‘ಜನರ ಸಂವೇದನೆಗಳು ಮತ್ತು ಭಾವನೆಗಳಿಗೆ ಈ ಬೆಳವಣಿಗೆಯಿಂದ ಧಕ್ಕೆಯಾಗಿದೆ’ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್ ಹೇಳಿದ್ದಾರೆ.

ನೂಪುರ್ ಶರ್ಮಾ ಹೇಳಿಕೆಗೆ ಹಲವು ದೇಶಗಳ ಆಕ್ಷೇಪ: ಸರ್ಕಾರದ ನಿಲುವು ಮತ್ತೊಮ್ಮೆ ಸ್ಪಷ್ಟಪಡಿಸಿದ ವಿದೇಶಾಂಗ ಸಚಿವ ಜೈಶಂಕರ್
ಎಸ್​.ಜೈಶಂಕರ್​
Follow us
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on:Jun 19, 2022 | 9:38 AM

ದೆಹಲಿ: ಪ್ರವಾದಿ ಮೊಹಮದ್ ಪೈಗಂಬರ್ ಅವರ ಬಗ್ಗೆ ಬಿಜೆಪಿ ವಕ್ತಾರೆ ನೂಪುರ್ ಶರ್ಮಾ (Nupur Sharma) ಮತ್ತು ಬಿಜೆಪಿ ನಾಯಕ ನವೀನ್ ಜಿಂದಾಲ್ (Naveen Jindal) ನೀಡಿದ್ದ ಹೇಳಿಕೆಗೆ ಹಲವು ದೇಶಗಳಿಂದ ಖಂಡನೆ ವ್ಯಕ್ತವಾಗಿತ್ತು. ಆಕ್ಷೇಪಾರ್ಹ ಹೇಳಿಕೆ ನೀಡಿದ ನೂಪುರ್ ಶರ್ಮಾ ಅವರನ್ನು ಬಿಜೆಪಿ ಪಕ್ಷದಿಂದ ಹೊರಹಾಕಿತ್ತು. ಇದು ಸರ್ಕಾರದ ನಿಲುವಲ್ಲ ಎಂದು ಹಲವು ಹಿರಿಯ ನಾಯಕರು ಸ್ಪಷ್ಟಪಡಿಸಿದ್ದರು. ಇದೀಗ ಮತ್ತೊಮ್ಮೆ ಈ ವಿವಾದಕ್ಕೆ ಸಂಬಂಧಿಸಿದಂತೆ ಸರ್ಕಾರದ ನಿಲುವನ್ನು ಸ್ಪಷ್ಟಪಡಿಸಿರುವ ಕೇಂದ್ರ ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್ (External Affairs Minister S Jaishankar) ಸ್ಪಷ್ಟಪಡಿಸಿದ್ದಾರೆ. ‘ಜನರ ಸಂವೇದನೆಗಳು ಮತ್ತು ಭಾವನೆಗಳಿಗೆ ಈ ಬೆಳವಣಿಗೆಯಿಂದ ಧಕ್ಕೆಯಾಗಿದೆ’ ಎಂದು ಹೇಳಿದ್ದಾರೆ.

ಪ್ರವಾದಿಯ ಕುರಿತ ಹೇಳಿಕೆಗೆ ಇತರ ದೇಶಗಳ ಪ್ರತಿಕ್ರಿಯೆಯನ್ನು ‘ಉಪದೇಶ’ ಎಂದು ಭಾವಿಸಲು ಆಗುವುದಿಲ್ಲ ಎಂದು ಹೇಳಿದ ಅವರು, ‘ಅವರು ತಮ್ಮ ಭಾವನೆಗಳಿಗೆ ಧಕ್ಕೆಯಾಗಿದೆ ಎಂದು ಅಸಮಾಧಾನ ಹೊರಹಾಕಿದ್ದಾರೆ. ಇದನ್ನು ಉಪದೇಶ ಎಂದು ತಳ್ಳಿಹಾಕಲು ಆಗುವುದಿಲ್ಲ. ನನಗೆ ಮತ್ತು ಸರ್ಕಾರಕ್ಕೆ ಈ ಬಗ್ಗೆ ಅರಿವು ಇದೆ’ ಎಂದು ಹೇಳಿದರು.

ಕೇವಲ ಮಧ್ಯಪ್ರಾಚ್ಯ ದೇಶಗಳು ಮಾತ್ರವೇ ಈ ಬಗ್ಗೆ ಭಾರತದೊಂದಿಗೆ ತಮ್ಮ ಅಸಮಾಧಾನ ಹೊರಹಾಕಿಲ್ಲ. ಆಗ್ನೇಯ ಏಷ್ಯಾದಂಥ ಹಲವು ದೇಶಗಳೂ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿವೆ. ಆದರೆ ಈ ದೇಶಗಳಲ್ಲಿ ಸರ್ಕಾರವನ್ನು ಮುನ್ನಡೆಸುವ ನಾಯಕರಿಗೆ ಆಕ್ಷೇಪಾರ್ಹ ಹೇಳಿಕೆ ನೀಡಿದ ವ್ಯಕ್ತಿ ಮತ್ತು ಸರ್ಕಾರ ಬೇರೆಬೇರೆ ಎಂಬ ಅರಿವು ಇದೆ. ಅಷ್ಟೇ ಅಲ್ಲ, ಭಾರತದ ಸರ್ಕಾರದ ನಿಲುವನ್ನು ಈ ಪೈಕಿ ಹಲವು ದೇಶಗಳು ಮೆಚ್ಚಿಕೊಂಡಿವೆ ಎಂದು ವಿವರಿಸಿದರು.

‘ನಮ್ಮ ದೇಶದೊಂದಿಗೆ (ಆಕ್ಷೇಪ ವ್ಯಕ್ತಪಡಿಸಿರುವ ದೇಶಗಳಿಗೆ) ಹಲವು ರೀತಿಯ ಸಂಬಂಧಗಳನ್ನು ಇವು ಹೊಂದಿವೆ. ನಾವು ಎಂಥವರು ಎಂಬುದು ಇವರಿಗೆ ಗೊತ್ತಾಗಿದೆ’ ಎಂದು ಹೇಳಿದರು.

‘ಕದಡಿದ ನೀರಿನಲ್ಲಿ ಮೀನು ಹಿಡಿಯುವ ಮನಸ್ಥಿತಿಯ ಜನರು ಹಲವರಿದ್ದಾರೆ. ವಿಶ್ವ ರಾಜಕಾರಣ, ವಿವಿಧ ದೇಶಗಳ ನಡುವಣ ಸಂಬಂಧಗಳನ್ನು ನಿರ್ವಹಿಸುವುದು ತುಂಬಾ ಸವಾಲಿನ ಕೆಲಸ. ಬಾಕ್ಸಿಂಗ್ ನಿಯಮಗಳಂತೆ ಆಡಲು ಆಗುವುದಿಲ್ಲ. ಇನ್ನೊಬ್ಬರ ದುರ್ಬಲ ಕ್ಷಣಗಳ ಲಾಭ ಪಡೆಯಲು ಯತ್ನಿಸುವ ಸಾಕಷ್ಟು ಜನರು ಇದದೇ ಇರುತ್ತಾರೆ’ ಎಂದು ಅವರು ಯಾವುದೇ ದೇಶದ ಹೆಸರು ಹೇಳದೆ ಪ್ರತಿಕ್ರಿಯಿಸಿದರು.

ನೂಪುರ್ ಶರ್ಮಾ ಮತ್ತು ನವೀನ್ ಜಿಂದಾಲ್ ಇತ್ತೀಚೆಗೆ ನೀಡಿದ್ದ ಹೇಳಿಕೆಯನ್ನು ಹಲವು ಮುಸ್ಲಿಂ ದೇಶಗಳು ಖಂಡಿಸಿದ್ದವು ಕತಾರ್, ಕುವೈತ್, ಇರಾನ್, ಸೌದಿ ಅರೇಬಿಯಾ, ಒಮಾನ್, ಅಫ್ಘಾನಿಸ್ತಾನ, ಇಂಡೋನೇಷಿಯಾ, ಯುಎಸ್​ಇ, ಮಾಲ್ಡೀವ್ಸ್, ಜೋರ್ಡಾನ್, ಬಹ್ರೇನ್ ಮತ್ತು ಲಿಬಿಯಾ ದೇಶಗಳು ಈ ಬಗ್ಗೆ ತಮ್ಮ ಅಕ್ಷೇಪವನ್ನು ಅಧಿಕೃತವಾಗಿ ವ್ಯಕ್ತಪಡಿಸಿದ್ದವು. ಆಕ್ಷೇಪಾರ್ಹ ಹೇಳಿಕೆಯಿಂದ ಸರ್ಕಾರವು ಪ್ರತಿ ಹಂತದಲ್ಲಿಯೂ ಅಂತರ ಕಾಯ್ದುಕೊಂಡು ಬರುತ್ತಿದೆ.

ಕರ್ನಾಟಕದ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ. ದೇಶದ ಇತರ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ ಪ್ರಮುಖ  ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 9:37 am, Sun, 19 June 22

ನನ್ನ ಆರೋಗ್ಯ ಚೆನ್ನಾಗಿದೆ, ಅದನ್ನು ದೇವರು ನೋಡ್ಕೋತಾನೆ: ಕುಮಾರಸ್ವಾಮಿ
ನನ್ನ ಆರೋಗ್ಯ ಚೆನ್ನಾಗಿದೆ, ಅದನ್ನು ದೇವರು ನೋಡ್ಕೋತಾನೆ: ಕುಮಾರಸ್ವಾಮಿ
ವಿರಾಟ್ ಕೊಹ್ಲಿ ಏನು ದೇವರಾ: ಮೃತ ಪ್ರಜ್ವಲ್ ತಾಯಿ ಆಕ್ರೋಶದ ಮಾತು
ವಿರಾಟ್ ಕೊಹ್ಲಿ ಏನು ದೇವರಾ: ಮೃತ ಪ್ರಜ್ವಲ್ ತಾಯಿ ಆಕ್ರೋಶದ ಮಾತು
ಸರ್ಕಾರದಿಂದ ನೆರವು ಸಿಕ್ಕಿಲ್ಲ, ಅಧಿಕಾರಿಗಳು ಮನಗೆ ಬಂದಿಲ್ಲ:ಶಿವಲಿಂಗನ ತಾಯಿ
ಸರ್ಕಾರದಿಂದ ನೆರವು ಸಿಕ್ಕಿಲ್ಲ, ಅಧಿಕಾರಿಗಳು ಮನಗೆ ಬಂದಿಲ್ಲ:ಶಿವಲಿಂಗನ ತಾಯಿ
ನಾನು ಪುನಃ ಜೈಲಿಗೆ ಹೋಗುವುದನ್ನು ನೋಡಲು ಬಹಳ ಜನ ಕಾಯುತ್ತಿದ್ದರು: ಕುಲಕರ್ಣಿ
ನಾನು ಪುನಃ ಜೈಲಿಗೆ ಹೋಗುವುದನ್ನು ನೋಡಲು ಬಹಳ ಜನ ಕಾಯುತ್ತಿದ್ದರು: ಕುಲಕರ್ಣಿ
ಕೇದಾರನಾಥಕ್ಕೆ ಹೋಗುವಾಗ ರಸ್ತೆಯಲ್ಲೇ ಲ್ಯಾಂಡ್ ಆದ ಹೆಲಿಕಾಪ್ಟರ್
ಕೇದಾರನಾಥಕ್ಕೆ ಹೋಗುವಾಗ ರಸ್ತೆಯಲ್ಲೇ ಲ್ಯಾಂಡ್ ಆದ ಹೆಲಿಕಾಪ್ಟರ್
ಮೃತಪ್ರೇಮಿಯನ್ನು ಮಾತಾಡುವ ನೆಪದಲ್ಲಿ ತೋಟದ ಮನೆಗೆ ಕರೆಸಲಾಗಿತ್ತು
ಮೃತಪ್ರೇಮಿಯನ್ನು ಮಾತಾಡುವ ನೆಪದಲ್ಲಿ ತೋಟದ ಮನೆಗೆ ಕರೆಸಲಾಗಿತ್ತು
ಆಟಗಾರರೊಂದಿಗೆ ತಮ್ಮ ಮಕ್ಕಳ ಫೋಟೋಗಾಗಿ ನಮ್ಮ ಮಕ್ಕಳ ಬಲಿ ಪಡೆದರು: ಲಕ್ಷ್ಮಣ
ಆಟಗಾರರೊಂದಿಗೆ ತಮ್ಮ ಮಕ್ಕಳ ಫೋಟೋಗಾಗಿ ನಮ್ಮ ಮಕ್ಕಳ ಬಲಿ ಪಡೆದರು: ಲಕ್ಷ್ಮಣ
‘ಆಡಿಯೋ ಮೂಲಕ ನನ್ನ ನಾಶ ಮಾಡಿದರು’; ಜೈಲಿನಿಂದ ಹೊರ ಬಂದ ಮನು ರಿಯಾಕ್ಷನ್
‘ಆಡಿಯೋ ಮೂಲಕ ನನ್ನ ನಾಶ ಮಾಡಿದರು’; ಜೈಲಿನಿಂದ ಹೊರ ಬಂದ ಮನು ರಿಯಾಕ್ಷನ್
ಪರಿಹಾರಕ್ಕಾಗಿ ವಿಶೇಷ ಪ್ರಕರಣವೆಂದು ಸರ್ಕಾರ ಪರಿಗಣಿಸಲಿ: ಕುಮಾರಸ್ವಾಮಿ
ಪರಿಹಾರಕ್ಕಾಗಿ ವಿಶೇಷ ಪ್ರಕರಣವೆಂದು ಸರ್ಕಾರ ಪರಿಗಣಿಸಲಿ: ಕುಮಾರಸ್ವಾಮಿ
‘ಸರಿಗಮಪ’ ಫಿನಾಲೆಯಲ್ಲಿ ಹೇಗಿತ್ತು ಬಾಳು ಬೆಳಗುಂದಿ ಪರ್ಫಾರ್ಮೆನ್ಸ್?
‘ಸರಿಗಮಪ’ ಫಿನಾಲೆಯಲ್ಲಿ ಹೇಗಿತ್ತು ಬಾಳು ಬೆಳಗುಂದಿ ಪರ್ಫಾರ್ಮೆನ್ಸ್?