Sign In

By signing in or creating an account, you agree with Associated Broadcasting Company's Terms & Conditions and Privacy Policy.

ರೈತ ಸಂಘಟನೆಯ ಫೇಸ್​ಬುಕ್ ಪೇಜ್ ರದ್ದು : ಸಮಜಾಯಿಷಿ ನೀಡಿದ ಫೇಸ್​ಬುಕ್

ಫೇಸ್​ಬುಕ್​ನ ಈ ಕ್ರಮ ಸಾಮಾಜಿಕ ಜಾಲತಾಣಗಳಲ್ಲಿ ಟೀಕೆಗೆ ಗುರಿಯಾಗಿತ್ತು. ಸ್ಪಷ್ಟನೆ ನೀಡಿದ್ದ ಫೇಸ್​ಬುಕ್, ಸ್ಪಾಮ್ ಕಂಟೆಂಟ್​ಗಳ ವಿರುದ್ಧ ಹೋರಾಡಲು ಸ್ವಯಂ ಚಾಲಿತ ವ್ಯವಸ್ಥೆ ಜಾರಿಗೊಳಿಸಲಾಗಿದೆ ಎಂದು ಫೇಸ್​ಬುಕ್​ ಹೇಳಿದೆ.

ರೈತ ಸಂಘಟನೆಯ ಫೇಸ್​ಬುಕ್ ಪೇಜ್ ರದ್ದು : ಸಮಜಾಯಿಷಿ ನೀಡಿದ ಫೇಸ್​ಬುಕ್
ಪ್ರಾತಿನಿಧಿಕ ಚಿತ್ರ
Follow us
guruganesh bhat
| Updated By: ರಾಜೇಶ್ ದುಗ್ಗುಮನೆ

Updated on: Dec 22, 2020 | 7:49 PM

ದೆಹಲಿ: ಸಾಮಾಜಿಕ ಜಾಲತಾಣ ದೈತ್ಯ ಫೇಸ್​ಬುಕ್​ನ ಸ್ವಯಂಚಾಲಿತ ವ್ಯವಸ್ಥೆ ಕಿಸಾನ್ ಏಕ್ತಾ ಮೋರ್ಚಾದ ಫೇಸ್​ಬುಕ್ ಪುಟವನ್ನು ಸ್ಪಾಮ್ ಎಂದು ಪರಿಗಣಿಸಿ ಮೂರು ಘಂಟೆ ಸ್ಥಗಿತಗೊಳಿಸಿತ್ತು. ಆದರೆ ತಕ್ಷಣ ಎಚ್ಚೆತ್ತ ಫೇಸ್​ಬುಕ್, ದೆಹಲಿ ಚಲೋ ಚಳವಳಿಯಲ್ಲಿ ಸಕ್ರಿಯವಾಗಿರುವ ಸಂಘಟನೆಯ ಪುಟವನ್ನು ಪುನಃ ಸಕ್ರಿಯಗೊಳಿಸಿದೆ. ಏಕಾಏಕಿ ಸಂಘಟನೆಯ ಪುಟದಲ್ಲಿ ಪೋಸ್ಟ್​ಗಳ ಸಂಖ್ಯೆ ಹೆಚ್ಚಾದ ಕಾರಣ ತನ್ನ ಸ್ವಯಂಚಾಲಿತ ವ್ಯವಸ್ಥೆಯಿಂದ ಸಂಘಟನೆಯ ಪುಟ ಸ್ಥಗಿತಗೊಂಡಿತ್ತು ಎಂದು ಫೇಸ್​ಬುಕ್ ಸ್ಪಷ್ಟನೆ ನೀಡಿದೆ.

ನಮ್ಮ ಚಳವಳಿಯ ಸಂದೇಶ ರವಾನೆಗೆ ಫೇಸ್​ಬುಕ್ ಪುಟವನ್ನು ಬಳಸಿಕೊಳ್ಳುತ್ತಿದ್ದೇವೆ. ಸ್ಥಗಿತವಾಗಿದ್ದರಿಂದ ಸಂದೇಶ ರವಾನೆಗೆ ತೊಂದರೆಯುಂಟಾಯಿತು. ನಮ್ಮ ಚಳವಳಿಯನ್ನು ನಿಲ್ಲಿಸಲೆಂದೇ ಫೇಸ್​ಬುಕ್ ಪುಟವನ್ನು ಸ್ಥಗಿತಗೊಳಿಸಲಾಗಿದೆ ಎಂದೂ ಹಲವರು ಭಾವಿಸಿದ್ದರು ಎಂದು ಕಿಸಾನ್ ಏಕ್ತಾ ಮೋರ್ಚಾ ದೂರಿದೆ.

ಫೇಸ್​ಬುಕ್​ನ ಈ ಕ್ರಮ ಸಾಮಾಜಿಕ ಜಾಲತಾಣಗಳಲ್ಲಿ ಟೀಕೆಗೆ ಗುರಿಯಾಗಿತ್ತು. ಸ್ಪಷ್ಟನೆ ನೀಡಿದ್ದ ಫೇಸ್​ಬುಕ್, ಸ್ಪಾಮ್ ಕಂಟೆಂಟ್​ಗಳ ವಿರುದ್ಧ ಹೋರಾಡಲು ಸ್ವಯಂ ಚಾಲಿತ ವ್ಯವಸ್ಥೆ ಜಾರಿಗೊಳಿಸಲಾಗಿದೆ. 2020ರ ಮೂರನೇ ತ್ರೈಮಾಸಿಕದಲ್ಲಿ ನಮ್ಮ ನೀತಿಗಳನ್ನು ಉಲ್ಲಂಘಿಸಿದ ಹಿನ್ನೆಲೆಯಲ್ಲಿ 190 ಕೋಟಿ ಕಂಟೆಂಟ್​ಗಳನ್ನು ಸ್ಪಾಮ್ ಎಂದು ಪರಿಗಣಿಸಿದ್ದೆವು. ನಂತರ ಸ್ಪಾಮ್ ಅಲ್ಲದ 7.49 ಕೋಟಿ ಕಂಟೆಂಟ್​ಗಳನ್ನು ಮತ್ತೆ ಸಕ್ರಿಯಗೊಳಿಸಿದ್ದೇವೆ ಎಂದು ತಿಳಿಸಿದೆ.

ಫೇಸ್​ಬುಕ್-ಆ್ಯಪಲ್ ನಡುವೆ ಹಗ್ಗಜಗ್ಗಾಟಕ್ಕೆ ಏನೆಲ್ಲಾ ಆಯಾಮ: ಕಾಳಜಿಯೋ? ಹುನ್ನಾರವೋ?

ಮನೆಗೆ ಬೆಂಕಿ ಬಿದ್ದಾಗ ಮಕ್ಕಳನ್ನು ಕಾಪಾಡಲು ಅಮ್ಮ ಮಾಡಿದ ಸಾಹಸ ನೀವೇ ನೋಡಿ
ಮನೆಗೆ ಬೆಂಕಿ ಬಿದ್ದಾಗ ಮಕ್ಕಳನ್ನು ಕಾಪಾಡಲು ಅಮ್ಮ ಮಾಡಿದ ಸಾಹಸ ನೀವೇ ನೋಡಿ
ಬೆಂಗಳೂರು ನಗರದ ಹಲವೆಡೆ ಏಕಾಏಕಿ ಮಳೆ
ಬೆಂಗಳೂರು ನಗರದ ಹಲವೆಡೆ ಏಕಾಏಕಿ ಮಳೆ
ಶಿವಾಜಿ ಸಿನಿಮಾ ಈಗಲೇ ನಿಲ್ಲಿಸಿ: ರಿಷಬ್ ಶೆಟ್ಟಿಗೆ ವಾಟಾಳ್ ವಾರ್ನಿಂಗ್
ಶಿವಾಜಿ ಸಿನಿಮಾ ಈಗಲೇ ನಿಲ್ಲಿಸಿ: ರಿಷಬ್ ಶೆಟ್ಟಿಗೆ ವಾಟಾಳ್ ವಾರ್ನಿಂಗ್
ಅತ್ತೆ-ಮಾವ ಅಥವಾ ಗಂಡನಿಂದ ಯಾವುದೇ ಕಿರುಕುಳವಿರಲಿಲ್ಲ: ಲಕ್ಷ್ಮಿಯ ತಂದೆ
ಅತ್ತೆ-ಮಾವ ಅಥವಾ ಗಂಡನಿಂದ ಯಾವುದೇ ಕಿರುಕುಳವಿರಲಿಲ್ಲ: ಲಕ್ಷ್ಮಿಯ ತಂದೆ
ಬೆಳಗ್ಗೆ ಮಂಗಳೂರಲ್ಲೂ ಜೋರು ಮಳೆ, ಜನರಲ್ಲಿ ಕೊಂಚ ನಿರಾಳತೆ
ಬೆಳಗ್ಗೆ ಮಂಗಳೂರಲ್ಲೂ ಜೋರು ಮಳೆ, ಜನರಲ್ಲಿ ಕೊಂಚ ನಿರಾಳತೆ
ದಶಕಗಳಿಂದ ಯತ್ನಾಳ್ ಸಂಸ್ಕೃತಿ ಮತ್ತು ಸಂಸ್ಕಾರವನ್ನು ಬಲ್ಲೆ: ಕಾಶಪ್ಪನವರ್
ದಶಕಗಳಿಂದ ಯತ್ನಾಳ್ ಸಂಸ್ಕೃತಿ ಮತ್ತು ಸಂಸ್ಕಾರವನ್ನು ಬಲ್ಲೆ: ಕಾಶಪ್ಪನವರ್
ತಾನೊಬ್ಬನೇ ಸಮಾಜದ ಪ್ರತಿನಿಧಿ ಅಂತ ಹೇಳೋದನ್ನ ಯತ್ನಾಳ್ ನಿಲ್ಲಿಸಬೇಕು: ಶಾಸಕ
ತಾನೊಬ್ಬನೇ ಸಮಾಜದ ಪ್ರತಿನಿಧಿ ಅಂತ ಹೇಳೋದನ್ನ ಯತ್ನಾಳ್ ನಿಲ್ಲಿಸಬೇಕು: ಶಾಸಕ
ಮಧ್ಯಪ್ರದೇಶದ ಆನಂದಪುರ ಧಾಮದಲ್ಲಿ ಪೂಜೆ ಸಲ್ಲಿಸಿದ ಪ್ರಧಾನಿ ಮೋದಿ
ಮಧ್ಯಪ್ರದೇಶದ ಆನಂದಪುರ ಧಾಮದಲ್ಲಿ ಪೂಜೆ ಸಲ್ಲಿಸಿದ ಪ್ರಧಾನಿ ಮೋದಿ
ಗಂಭೀರವಾಗಿ ಗಾಯಗೊಂಡಿರುವ ಪತಿ ಕಲಬುರಗಿ ಜಿಲ್ಲಾಸ್ಪತ್ರೆಗೆ ದಾಖಲು
ಗಂಭೀರವಾಗಿ ಗಾಯಗೊಂಡಿರುವ ಪತಿ ಕಲಬುರಗಿ ಜಿಲ್ಲಾಸ್ಪತ್ರೆಗೆ ದಾಖಲು
ಉತ್ತರ ಕರ್ನಾಟಕದಲ್ಲಿ ನೀರು ಪೋಲಾಗಲು ಬಿಡೋದು ಕ್ರಿಮಿನಲ್ ಅಪರಾಧ
ಉತ್ತರ ಕರ್ನಾಟಕದಲ್ಲಿ ನೀರು ಪೋಲಾಗಲು ಬಿಡೋದು ಕ್ರಿಮಿನಲ್ ಅಪರಾಧ