AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಚಿನ್ನ’ ತಂದ ನೀವಾರ್​ ಚಂಡಮಾರುತ; ಸಮುದ್ರ ತೀರಕ್ಕೆ ಮೀನುಗಾರರು ದೌಡು

ಪೂರ್ವ ಗೋದಾವರಿಯ ಯು ಕೋಠಾಪಲ್ಲಿ ಮಂಡಲ್ ವ್ಯಾಪ್ತಿಯ ಹಳ್ಳಿಯಲ್ಲಿರುವ ಮೀನುಗಾರರಂತೂ ಬೀಚ್​ನಲ್ಲಿ ಬಿದ್ದ ಚಿನ್ನ ಆಯ್ದುಕೊಳ್ಳಲು ತರಾತುರಿಯಿಂದ ಓಡಿದ್ದಾರೆ. ಮುಂಜಾನೆ ಆರುಗಂಟೆಯಿಂದ, ಸಂಜೆಯವರೆಗೂ ಈ ಕಾಯಕ ಮುಂದುವರಿದಿತ್ತು.

‘ಚಿನ್ನ’ ತಂದ ನೀವಾರ್​ ಚಂಡಮಾರುತ; ಸಮುದ್ರ ತೀರಕ್ಕೆ ಮೀನುಗಾರರು ದೌಡು
ಸಮುದ್ರ ತೀರದಲ್ಲಿ ಸಿಕ್ಕ ಹಳದಿ ಬಣ್ಣದ ಮಣಿ...
Lakshmi Hegde
|

Updated on:Nov 30, 2020 | 3:55 PM

Share

ನಿವಾರ್ ಚಂಡಮಾರುತದ ನಂತರ ಜನರು ಸಮುದ್ರತೀರಕ್ಕೆ ಓಡಿದ ಘಟನೆ ಆಂಧ್ರಪ್ರದೇಶದ ಪೂರ್ವಗೋದಾವರಿ ಜಿಲ್ಲೆಯಲ್ಲಿ ನಡೆದಿದೆ. ಸಮುದ್ರದಲ್ಲಿ ಅಲೆಗಳು ಅಬ್ಬರಿಸುತ್ತಿದ್ದರೂ ಲೆಕ್ಕಿಸದೆ ಜನರು ಉಪ್ಪಡಾ ಬೀಚ್​ನಲ್ಲಿ ಚಿನ್ನ ಆಯ್ದುಕೊಳ್ಳಲು ತಾಮುಂದು-ನಾಮುಂದು ಎನ್ನುತ್ತಿದ್ದರು ಎಂದು ವರದಿಯಾಗಿದೆ.

ಬೀಚ್​ನಲ್ಲಿ ಪತ್ತೆಯಾದ ಹಳದಿ ಬಣ್ಣದ (ಚಿನ್ನವನ್ನು ಹೋಲುವ) ಸಣ್ಣ ಮಣಿಯ ಫೋಟೋವನ್ನು ಸ್ಥಳೀಯರೊಬ್ಬರು ಟ್ವಿಟರ್​ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಈ ಚಿನ್ನಕ್ಕಾಗಿ 100ಕ್ಕೂ ಹೆಚ್ಚು ಮಂದಿ ಉಪ್ಪಡಾ ಬೀಚ್​ಗೆ ಆಗಮಿಸಿ ತಮ್ಮ ಅದೃಷ್ಟ ಪರೀಕ್ಷೆ ಮಾಡಿಕೊಂಡರು ಎಂದು ತಿಳಿಸಿದ್ದಾರೆ.

ಹೇಗೆ ಸಿಕ್ತು ಈ ಚಿನ್ನ? ಈ ಭಾಗದಲ್ಲಿದ್ದ ಹಲವು ಪುರಾತನ, ಪ್ರಮುಖ ದೇವಸ್ಥಾನಗಳು ಕಾಲಕ್ರಮೇಣ ಸಮುದ್ರದಲ್ಲಿ ಮುಳುಗಿಹೋಗಿ, ಧ್ವಂಸಗೊಂಡಿವೆ. ಇದೀಗ ನಿವಾರ್​ ಚಂಡಮಾರುತದಿಂದ ದೊಡ್ಡದೊಡ್ಡ ಅಲೆಗಳು ಸಾಗರದೊಳಗಿಂದ ಏಳುತ್ತಿವೆ. ಹೀಗಾಗಿ ಸಮುದ್ರದ ಅಡಿಯಲ್ಲಿರಬಹುದಾದ ದೇಗುಲಗಳ ವಿಗ್ರಹದಲ್ಲಿರುವ ಆಭರಣಗಳು ಅಲೆಗಳೊಂದಿಗೆ ತೀರಕ್ಕೆ ಬರುತ್ತಿವೆ ಎಂದು ಸ್ಥಳೀಯರು ಅಂದಾಜಿಸಿದ್ದಾರೆ.

ಮೀನುಗಾರರು ಫುಲ್ ಖುಷ್​ ಪೂರ್ವ ಗೋದಾವರಿಯ ಯು ಕೋಠಾಪಲ್ಲಿ ಮಂಡಲ್ ವ್ಯಾಪ್ತಿಯ ಹಳ್ಳಿಯಲ್ಲಿರುವ ಮೀನುಗಾರರಂತೂ ಬೀಚ್​ನಲ್ಲಿ ಬಿದ್ದ ಚಿನ್ನ ಆಯ್ದುಕೊಳ್ಳಲು ತರಾತುರಿಯಿಂದ ಓಡಿದ್ದಾರೆ. ಮುಂಜಾನೆ ಆರುಗಂಟೆಯಿಂದ, ಸಂಜೆಯವರೆಗೂ ಈ ಕಾಯಕ ಮುಂದುವರಿದಿತ್ತು. ಬಲವಾಗಿ ಗಾಳಿಬೀಸುತ್ತಿದ್ದರೂ ಲೆಕ್ಕಿಸದೆ ಮಹಿಳೆಯರು, ಮಕ್ಕಳು ಬೀಚ್​ನಲ್ಲಿ ಗುಂಪುಗೂಡಿದ್ದರು. ಅನೇಕರಿಗೆ ಹಳದಿ ಬಣ್ಣದ ಮಣಿಗಳು ಸಿಕ್ಕಿವೆ. ಆದರೆ ಅದು ಚಿನ್ನವೇ ಹೌದೋ..ಅಲ್ಲವೋ ಎಂಬುದಿನ್ನೂ ದೃಢವಾಗಿಲ್ಲ.

ಪ್ರತಿ ಚಂಡಮಾರುತವೂ ಚಿನ್ನ ಅಥವಾ ಇನ್ಯಾವುದಾದರೂ ಬೆಲೆಬಾಳುವ ವಸ್ತುಗಳನ್ನು ತೀರಕ್ಕೆ ತರುತ್ತದೆ ಎಂದು ನಂಬುವ ಮೀನುಗಾರರು, ಈ ಬಾರಿ ಚಂಡಮಾರುತದ ಬಳಿಕವೂ ಬೀಚ್​ನಲ್ಲಿ ಹುಡುಕಾಟ ನಡೆಸಿದ್ದರು.

ಇದನ್ನೂ ಓದಿ:  ನಿವಾರ್​ ಚಂಡಮಾರುತದ ಪ್ರಭಾವ: ಬೆಂಗಳೂರಿನಲ್ಲಿ ಚಳಿ, ತಮಿಳುನಾಡಿನಲ್ಲಿ 3 ಸಾವು, ಆಂಧ್ರದಲ್ಲಿ ಭಾರಿ ಮಳೆ

Published On - 3:50 pm, Mon, 30 November 20

ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!