AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಾಶ್ಮೀರ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ ವಿವಾದ: ಖ್ಯಾತ ಬ್ರಾಂಡ್​​ಗಳಿಂದ ಕ್ಷಮೆಯಾಚನೆ

ಸೋಮವಾರ ಕೆಎಫ್‌ಸಿ ಇಂಡಿಯಾ, ದೇಶದ ಹೊರಗಿನ ಕೆಲವು ಕೆಎಫ್‌ಸಿ ಸಾಮಾಜಿಕ ಮಾಧ್ಯಮ ಚಾನೆಲ್‌ಗಳಲ್ಲಿ ಪ್ರಕಟವಾದ ಪೋಸ್ಟ್‌ಗೆ ತೀವ್ರವಾದ ಕ್ಷಮೆಯಾಚಿಸಿರುವುದಾಗಿ ಹೇಳಿದೆ

ಕಾಶ್ಮೀರ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ ವಿವಾದ: ಖ್ಯಾತ ಬ್ರಾಂಡ್​​ಗಳಿಂದ ಕ್ಷಮೆಯಾಚನೆ
ಖ್ಯಾತ ಬ್ರಾಂಡ್​​ಗಳು
TV9 Web
| Edited By: |

Updated on: Feb 09, 2022 | 2:17 PM

Share

ದೆಹಲಿ: ಹುಂಡೈ ಮೋಟಾರ್ಸ್‌ನ ಪಾಕಿಸ್ತಾನಿ ಡೀಲರ್‌ನಿಂದ ಕಾಶ್ಮೀರದ ಸಾಮಾಜಿಕ ಮಾಧ್ಯಮ ಪೋಸ್ಟ್‌ನ ವಿವಾದದ ನಂತರ, ಆಕ್ರೋಶ ಮತ್ತು ಬಹಿಷ್ಕಾರದ ಕರೆಗಳನ್ನು ಎದುರಿಸುತ್ತಿರುವ ಹಲವಾರು ಬಹು-ರಾಷ್ಟ್ರೀಯ ಸಂಸ್ಥೆಗಳ (MNCs) ಭಾರತೀಯ ಅಂಗಸಂಸ್ಥೆಗಳು ಕ್ಷಮೆಯಾಚಿಸಿವೆ. ಸೋಮವಾರ ಕೆಎಫ್‌ಸಿ ಇಂಡಿಯಾ, ದೇಶದ ಹೊರಗಿನ ಕೆಲವು ಕೆಎಫ್‌ಸಿ ಸಾಮಾಜಿಕ ಮಾಧ್ಯಮ ಚಾನೆಲ್‌ಗಳಲ್ಲಿ ಪ್ರಕಟವಾದ ಪೋಸ್ಟ್‌ಗೆ ತೀವ್ರವಾದ ಕ್ಷಮೆಯಾಚಿಸಿರುವುದಾಗಿ ಹೇಳಿದೆ. ಕೆಎಫ್‌ಸಿಯ ವೆರಿಫೈಡ್ ಹ್ಯಾಂಡಲ್ ಫೇಸ್‌ಬುಕ್‌ನಲ್ಲಿ ಕಾಶ್ಮೀರ ಒಗ್ಗಟ್ಟಿನ ದಿನವನ್ನು ಬೆಂಬಲಿಸುವ ಸಂದೇಶವನ್ನು ಪೋಸ್ಟ್ ಮಾಡಿತ್ತು. ಕಾಶ್ಮೀರ ಒಗ್ಗಟ್ಟಿನ ದಿನವನ್ನು (Kashmir Solidarity Day) ಬೆಂಬಲಿಸುವ ಸಾಮಾಜಿಕ ಮಾಧ್ಯಮ ಸಂದೇಶವನ್ನು ಹಲವಾರು ಬಳಕೆದಾರರು ಖಂಡಿಸಿದ ನಂತರ ವಿವಾದ ಭುಗಿಲೆದ್ದಿತು, ಪಾಕಿಸ್ತಾನದ ಹುಂಡೈ ಡೀಲರ್‌ನ ಟ್ವಿಟರ್ ಖಾತೆಯು @hyundaiPakistanOfficial ಹ್ಯಾಂಡಲ್‌ “ಸ್ವಾತಂತ್ರ್ಯಕ್ಕಾಗಿ ಹೋರಾಟ” ಎಂದು ಟ್ವೀಟ್ ಮಾಡಿತ್ತು. ಮಂಗಳವಾರದ ಹೊಸ ಹೇಳಿಕೆಯಲ್ಲಿ, ಹುಂಡೈ ಮೋಟಾರ್ಸ್ “ಅನಧಿಕೃತ ಕಾಶ್ಮೀರ ಸಂಬಂಧಿತ ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳಿಂದ” ಭಾರತೀಯರಿಗೆ ಉಂಟಾದ ಅಪರಾಧಕ್ಕೆ ವಿಷಾದ ವ್ಯಕ್ತಪಡಿಸಿದೆ ಮತ್ತು ಈ ಕ್ರಮವು ತನ್ನ ಜಾಗತಿಕ ನೀತಿಗೆ ವಿರುದ್ಧವಾಗಿದೆ ಎಂದು ಹೇಳಿದೆ. ಭಾರತದಲ್ಲಿನ ಕಂಪನಿಯ ಅಂಗಸಂಸ್ಥೆಯು ಫೆಬ್ರವರಿ 6 ರಂದು ಕ್ಷಮೆಯಾಚಿಸಿತ್ತು, “ಭಾರತವು ಹುಂಡೈ ಬ್ರ್ಯಾಂಡ್‌ಗೆ ಎರಡನೇ ನೆಲೆಯಾಗಿದೆ ಮತ್ತು ಸೂಕ್ಷ್ಮವಲ್ಲದ ಸಂವಹನಕ್ಕೆ ನಾವು ಶೂನ್ಯ ಸಹಿಷ್ಣುತೆಯ ನೀತಿಯನ್ನು ಹೊಂದಿದ್ದೇವೆ ಮತ್ತು ಅಂತಹ ಯಾವುದೇ ದೃಷ್ಟಿಕೋನವನ್ನು ನಾವು ಬಲವಾಗಿ ಖಂಡಿಸುತ್ತೇವೆ ಎಂದು ಕಂಪನಿ ಹೇಳಿದೆ.

ಕೆಎಫ್​​ಸಿಯಂತೆಯೇ ಡೊಮಿನೋಸ್ ತನ್ನ ಪಾಕಿಸ್ತಾನಿ ಹ್ಯಾಂಡಲ್‌ನಿಂದ ಪೋಸ್ಟ್ ಮಾಡಿದ ಇದೇ ರೀತಿಯ ಸಂದೇಶಕ್ಕಾಗಿ ಟ್ವಿಟರ್​​ನಲ್ಲಿ #boycottdominos ಟ್ರೆಂಡಿಂಗ್‌ನೊಂದಿಗೆ ಆಕ್ರೋಶವನ್ನು ಎದುರಿಸಿತು. ಕಂಪನಿಯು ಬುಧವಾರ  ಸಾಮಾಜಿಕ ಮಾಧ್ಯಮ ಪೋಸ್ಟ್​​ಗಾಗಿ ಕ್ಷಮೆಯಾಚಿಸಿದೆ. ” ಇದು ಕಳೆದ 25 ವರ್ಷಗಳಿಂದ ನಾವು ನಮ್ಮ ಮನೆ ಎಂದು ಕರೆದ ದೇಶ, ಮತ್ತು ಅದರ ಪರಂಪರೆಯನ್ನು ಶಾಶ್ವತವಾಗಿ ರಕ್ಷಿಸಲು ನಾವು ಇಲ್ಲಿ ನಿಂತಿದ್ದೇವೆ ” ಎಂದು ಹೇಳಿದೆ.

ಮತ್ತೊಂದು ಅಂತರಾಷ್ಟ್ರೀಯ ಪಿಜ್ಜಾ ಫ್ರಾಂಚೈಸಿ ಆಗಿರುವ ಪಿಜ್ಜಾ ಹಟ್‌ನ ಪಾಕಿಸ್ತಾನ್ ಹ್ಯಾಂಡಲ್ ಇನ್‌ಸ್ಟಾಗ್ರಾಮ್‌ನಲ್ಲಿ ಸಹ ಇದೇ ರೀತಿಯ ಸಂದೇಶವನ್ನು ಪೋಸ್ಟ್ ಮಾಡಿದೆ. ಬುಧವಾರ ಪಿಜ್ಜಾ ಹಟ್ “ಇದು ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರವಾಗುವ ಪೋಸ್ಟ್‌ನ ವಿಷಯಗಳನ್ನು ಕ್ಷಮಿಸುವುದಿಲ್ಲ, ಬೆಂಬಲಿಸುವುದಿಲ್ಲ ಅಥವಾ ಒಪ್ಪುವುದಿಲ್ಲ” ಎಂದು ಹೇಳಿರುವುದಾಗಿ ಪಿಟಿಐ ತಿಳಿಸಿದೆ.

ಮಾರುತಿ ಸುಜುಕಿ ಸಹ ಹೇಳಿಕೆಯನ್ನು ಇದೇ ರೀತಿಯ ಹೇಳಿಕೆ ಬಿಡುಗಡೆ ಮಾಡಿತು: “ಕಾರ್ಪೊರೇಟ್ ನೀತಿಯಂತೆ, ನಾವು ಪ್ರಪಂಚದ ಯಾವುದೇ ಭಾಗದಲ್ಲಿ ಯಾವುದೇ ರಾಜಕೀಯ ಅಥವಾ ಧಾರ್ಮಿಕ ಒಲವುಗಳೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ. ಈ ವಿಷಯಗಳ ಕುರಿತು ನಮ್ಮ ವಿತರಕರು ಅಥವಾ ವ್ಯಾಪಾರ ಸಹವರ್ತಿಗಳಿಂದ ಅಂತಹ ಸಂವಹನವು ನಮ್ಮ ಕಂಪನಿಯ ಸ್ಥಾನವನ್ನು ಪ್ರತಿನಿಧಿಸುವುದಿಲ್ಲ ಎಂದು ಕಂಪನಿ ಹೇಳಿದೆ.

ದಕ್ಷಿಣ ಕೊರಿಯಾ ಮೂಲದ ಮತ್ತೊಂದು ಆಟೋಮೊಬೈಲ್ ತಯಾರಕ ಸಂಸ್ಥೆಯಾದ ಕಿಯಾ, ದೇಶದ ಹೊರಗಿನ ಸ್ವತಂತ್ರ ಸ್ವಾಮ್ಯದ ವಿತರಕರು ಡೀಲರ್‌ನ ಸ್ವಂತ ಖಾತೆಗಳನ್ನು ಬಳಸಿಕೊಂಡು ಮಾಡಿದ ಅನಧಿಕೃತ ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳನ್ನು ಕಿಯಾ ಇಂಡಿಯಾ ಗಮನಿಸಿದೆ. ಕಿಯಾ ಬ್ರ್ಯಾಂಡ್ ಗುರುತಿನ ಇಂತಹ ದುರುಪಯೋಗವನ್ನು ತಪ್ಪಿಸಲು ನಾವು ಕಟ್ಟುನಿಟ್ಟಿನ ಕ್ರಮಗಳನ್ನು ತೆಗೆದುಕೊಂಡಿದ್ದೇವೆ ಮತ್ತು ಮರುಕಳಿಸುವಿಕೆಯನ್ನು ತಡೆಯಲು ಪ್ರಕ್ರಿಯೆಗಳನ್ನು ಜಾರಿಗೆ ತಂದಿದ್ದೇವೆ ಎಂದಿದೆ.

ದಕ್ಷಿಣ ಕೊರಿಯಾದಲ್ಲಿ ನೆಲೆಸಿರುವ ಹುಂಡೈ ಪೋಸ್ಟ್‌ನ ವಿವಾದ ಬಗ್ಗೆ ದೇಶದ ವಿದೇಶಾಂಗ ಸಚಿವ ಚುಂಗ್ ಇಯು-ಯೋಂಗ್ ಅವರು ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರಿಗೆ ಕರೆ ಮಾಡಿದ್ದಾರೆ. ಕೊರಿಯಾದ ಸಚಿವರು ಸಾಮಾಜಿಕ ಮಾಧ್ಯಮ ಪೋಸ್ಟ್‌ನಿಂದ ಜನರು ಮತ್ತು ಭಾರತ ಸರ್ಕಾರಕ್ಕೆ ಉಂಟಾದ “ಅಪರಾಧಕ್ಕೆ ವಿಷಾದಿಸಿದ್ದಾರೆ” ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಮಂಗಳವಾರ ತಿಳಿಸಿದೆ.

ಏತನ್ಮಧ್ಯೆ, ಎಂಇಎ ಅಧಿಕೃತ ವಕ್ತಾರ ಅರಿಂದಮ್ ಬಾಗ್ಚಿ,“ಕಾಶ್ಮೀರ ಒಗ್ಗಟ್ಟಿನ ದಿನ ಎಂದು ಕರೆಯಲ್ಪಡುವ ಸಾಮಾಜಿಕ ಮಾಧ್ಯಮ ಪೋಸ್ಟ್ ಅನ್ನು ಹುಂಡೈ ಪಾಕಿಸ್ತಾನ ಮಾಡಿರುವುದನ್ನು ನಾವು ನೋಡಿದ್ದೇವೆ. ಫೆಬ್ರವರಿ 6, 2022 ರಂದು ಭಾನುವಾರದಂದು ಈ ಸಾಮಾಜಿಕ ಮಾಧ್ಯಮ ಪೋಸ್ಟ್ ಮಾಡಿದ ತಕ್ಷಣ, ಸಿಯೋಲ್‌ನಲ್ಲಿರುವ ನಮ್ಮ ರಾಯಭಾರಿ ಹುಂಡೈ ಪ್ರಧಾನ ಕಛೇರಿಯನ್ನು ಸಂಪರ್ಕಿಸಿ ವಿವರಣೆಯನ್ನು ಕೇಳಿದೆ. ಆಕ್ಷೇಪಾರ್ಹ ಪೋಸ್ಟ್ ಅನ್ನು ನಂತರ ತೆಗೆದುಹಾಕಲಾಗಿದೆ. ರಿಪಬ್ಲಿಕ್ ಆಫ್ ಕೊರಿಯಾದ ರಾಯಭಾರಿಯನ್ನು ವಿದೇಶಾಂಗ ವ್ಯವಹಾರಗಳ ಸಚಿವಾಲಯವು ನಿನ್ನೆ ಫೆಬ್ರವರಿ 7, 2022 ರಂದು ಕರೆ ಮಾಡಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ:ಕಾಶ್ಮೀರ ಬಗ್ಗೆ ಪೋಸ್ಟ್: ಹುಂಡೈ ಬೆನ್ನಲ್ಲೇ ಕೆಎಫ್‌ಸಿ, ಪಿಜ್ಜಾ ಹಟ್ ವಿರುದ್ಧ ಸಿಡಿದೆದ್ದ ನೆಟ್ಟಿಗರು

ಆರತಕ್ಷತೆಗೆ ತೆರಳುವಾಗ ವರನಿಗೆ ಚಾಕ ಇರಿತ: ವಧು ನಯನಾಳ ನೌಟಂಕಿ ಆಟ ಬಯಲು
ಆರತಕ್ಷತೆಗೆ ತೆರಳುವಾಗ ವರನಿಗೆ ಚಾಕ ಇರಿತ: ವಧು ನಯನಾಳ ನೌಟಂಕಿ ಆಟ ಬಯಲು
‘ಅಂಬಲಿ ರಾಶಿಗೆ ಮುತ್ತಿನ ಗಿಣಿ ಸಮೃದ್ಧಿ ಆಯ್ತಲೇ ಪರಾಕ್’
‘ಅಂಬಲಿ ರಾಶಿಗೆ ಮುತ್ತಿನ ಗಿಣಿ ಸಮೃದ್ಧಿ ಆಯ್ತಲೇ ಪರಾಕ್’
ಬೋಗಸ್ ಮಾಡವ್ರೆ, ಯಶ್ ಹೆಸರು ಹಾಳು ಮಾಡ್ತಾವ್ರೆ: ಯಶ್ ತಾಯಿ ಆರೋಪ
ಬೋಗಸ್ ಮಾಡವ್ರೆ, ಯಶ್ ಹೆಸರು ಹಾಳು ಮಾಡ್ತಾವ್ರೆ: ಯಶ್ ತಾಯಿ ಆರೋಪ
ಫಿಲಂ ಚೇಂಬರ್ ನೂತನ ಅಧ್ಯಕ್ಷೆ ಜಯಮಾಲ ಹಾಕಿಕೊಂಡಿರುವ ಯೋಜನೆಗಳೇನು?
ಫಿಲಂ ಚೇಂಬರ್ ನೂತನ ಅಧ್ಯಕ್ಷೆ ಜಯಮಾಲ ಹಾಕಿಕೊಂಡಿರುವ ಯೋಜನೆಗಳೇನು?
ದೇವದತ್ ಪಡಿಕ್ಕಲ್ ಶತಕ; ಕ್ವಾರ್ಟರ್ ಫೈನಲ್​ಗೇರಿದ ಕರ್ನಾಟಕ
ದೇವದತ್ ಪಡಿಕ್ಕಲ್ ಶತಕ; ಕ್ವಾರ್ಟರ್ ಫೈನಲ್​ಗೇರಿದ ಕರ್ನಾಟಕ
ಮದ್ವೆಯಾಗಿ 5 ವರ್ಷವಾದರೂ ಅವ್ನ ಕೈಯಲ್ಲಿ ಮಗು ಮಾಡಿಕೊಳ್ಳಲಾಗಿಲ್ಲ
ಮದ್ವೆಯಾಗಿ 5 ವರ್ಷವಾದರೂ ಅವ್ನ ಕೈಯಲ್ಲಿ ಮಗು ಮಾಡಿಕೊಳ್ಳಲಾಗಿಲ್ಲ
ಕೇಂದ್ರ ಬಜೆಟ್ ಬಗ್ಗೆ ವ್ಯಂಗ್ಯ ಮಾಡುತ್ತಲ್ಲೇ ಕಟುವಾಗಿ ಟೀಕಿಸಿದ ಸಿಎಂ!
ಕೇಂದ್ರ ಬಜೆಟ್ ಬಗ್ಗೆ ವ್ಯಂಗ್ಯ ಮಾಡುತ್ತಲ್ಲೇ ಕಟುವಾಗಿ ಟೀಕಿಸಿದ ಸಿಎಂ!
ಆಸ್ಟ್ರೇಲಿಯನ್ ಓಪನ್ ಗೆದ್ದು ಇತಿಹಾಸ ನಿರ್ಮಿಸಿದ ಕಾರ್ಲೋಸ್ ಅಲ್ಕರಾಝ್
ಆಸ್ಟ್ರೇಲಿಯನ್ ಓಪನ್ ಗೆದ್ದು ಇತಿಹಾಸ ನಿರ್ಮಿಸಿದ ಕಾರ್ಲೋಸ್ ಅಲ್ಕರಾಝ್
ಚಿಮುಲ್ ಚುನಾವಣೆ: ಮತದಾರರಿಗೆ ಲಕ್ಷ ಲಕ್ಷ ನಗದು, ಬೆಳ್ಳಿ ತಟ್ಟೆ!
ಚಿಮುಲ್ ಚುನಾವಣೆ: ಮತದಾರರಿಗೆ ಲಕ್ಷ ಲಕ್ಷ ನಗದು, ಬೆಳ್ಳಿ ತಟ್ಟೆ!
ಟ್ಯಾಕ್ಸ್‌ ಟೆರರಿಸಂ: ಐಟಿ ದಾಳಿ ವಿರುದ್ಧ ತಿರುಗಿಬಿದ್ದ ಮೋಹನ್ ದಾಸ್ ಪೈ
ಟ್ಯಾಕ್ಸ್‌ ಟೆರರಿಸಂ: ಐಟಿ ದಾಳಿ ವಿರುದ್ಧ ತಿರುಗಿಬಿದ್ದ ಮೋಹನ್ ದಾಸ್ ಪೈ