ರೈಲ್ವೆ ನಿಲ್ದಾಣದಲ್ಲಿ ಕ್ಯೂ ಆರ್​ ಕೋಡ್​ ಇಟ್ಟುಕೊಂಡು ಭಿಕ್ಷೆ ಬೇಡುವ ವ್ಯಕ್ತಿ: ಡಿಜಿಟಲ್​ ಭಿಕ್ಷುಕನನ್ನು ಕಂಡು ಬೆರಗಾದ ನೆಟ್ಟಿಗರು

ಭಿಕ್ಷುಕನೊಬ್ಬ ಜನರಿಂದ ಹಣ ಪಡೆಯಲು ಫೋನ್​ ಪೇಯನ್ನು (PhonePe) ಅಳವಡಿಸಿಕೊಂಡಿದ್ದಾನೆ. ಸದ್ಯ ಈ ವಿಚಾರ ದೇಶದೆಲ್ಲೆಡೆ ನೆಟ್ಟಿಗರನ್ನು ಮೂಗಿನ ಮೇಲೆ ಬೆರಳಿಡುವಂತೆ ಮಾಡಿದೆ.

ರೈಲ್ವೆ ನಿಲ್ದಾಣದಲ್ಲಿ ಕ್ಯೂ ಆರ್​ ಕೋಡ್​ ಇಟ್ಟುಕೊಂಡು ಭಿಕ್ಷೆ ಬೇಡುವ ವ್ಯಕ್ತಿ: ಡಿಜಿಟಲ್​ ಭಿಕ್ಷುಕನನ್ನು ಕಂಡು ಬೆರಗಾದ ನೆಟ್ಟಿಗರು
ಭಿಕ್ಷುಕ
Follow us
| Updated By: Pavitra Bhat Jigalemane

Updated on: Feb 09, 2022 | 4:03 PM

ಭಾರತದಲ್ಲಿ ಪ್ರಧಾನಿ ಮೋದಿ ನೇತೃತ್ವದ ಸರ್ಕಾರ ಡಿಜಿಟಲ್​ ಇಂಡಿಯಾವನ್ನು(Digital India)  ಜಾರಿಗೆ ತಂದಿದೆ. ಹೀಗಾಗಿ ನಮ್ಮ ದಿನನಿತ್ಯದ ಬದುಕಿನಲ್ಲಿ ಹಣಪಾವತಿಯ ಎಲ್ಲ ಕೆಲಸವೂ ಆನ್ಲೈನ್​ನಲ್ಲಿಯೇ ನಡೆಯುತ್ತದೆ. ಹಣ ಪಾವತಿಯ ಬಹುತೇಕ ಸಂದರ್ಭಗಳಲ್ಲಿ ಕ್ಯಾಶ್​​ಲೆಸ್ (Cash Less)​ ಆಗಿಯೇ ಇರಲು ಬಯಸುತ್ತೇವೆ. ಅದು ಸುರಕ್ಷಿತ ಕೂಡ ಹೌದು. ಈ ಡಿಜಿಟಲ್​ ಇಂಡಿಯಾ ಯೋಜನೆ ದೇಶದ ಪ್ರತೀ ವ್ಯಕ್ತಿಗೂ ತಲುಪಿದೆ ಎನ್ನುವುದಕ್ಕೆ ಇಲ್ಲೊಂದು ಉದಾಹರಣೆಯಿದೆ.  ಹೌದು ಭಿಕ್ಷುಕನೊಬ್ಬ (Begger) ಜನರಿಂದ ಹಣ ಪಡೆಯಲು ಫೋನ್​ ಪೇಯನ್ನು (PhonePe) ಅಳವಡಿಸಿಕೊಂಡಿದ್ದಾನೆ. ಸದ್ಯ ಈ ವಿಚಾರ ದೇಶದೆಲ್ಲೆಡೆ ನೆಟ್ಟಿಗರನ್ನು ಮೂಗಿನ ಮೇಲೆ ಬೆರಳಿಡುವಂತೆ ಮಾಡಿದೆ.  ಬಿಹಾರದ ರಾಜು ಪಟೇಲ್​ ಎನ್ನುವ 40 ವರ್ಷದ ಭಿಕ್ಷುಕ ಈ ವ್ಯವಸ್ಥೆಯನ್ನು ಅಳವಡಿಸಿಕೊಂಡಿದ್ದಾನೆ.

ಬಿಹಾರದ ಬೆಟ್ಟೈ ರೈಲು ನಿಲ್ದಾಣದಲ್ಲಿ  ರಾಜು ಪಟೇಲ್​ ಎನ್ನುವ ಭಿಕ್ಷುಕ ಕುತ್ತಿಗೆಯಲ್ಲಿ  ಕ್ಯೂರ್​ ಕೋಡ್ ಅನ್ನು ನೇತುಹಾಕಿಕೊಂಡು, ಟ್ಯಾಬ್​ ​ ಇಟ್ಟುಕೊಂಡು ರಿಚ್​ ಅಗಿ ಭಿಕ್ಷೆ ಬೇಡುತ್ತಿದ್ದಾನೆ. ಈ ಕುರಿತು ಎ ಎನ್​ಐ ಜೊತೆ ಮಾತನಾಡಿದ ರಾಜು ಪಟೇಲ್​​ ಕೊರೊನಾ ಬಳಿಕವಂತೂ ಜನ ದುಡ್ಡುನ್ನು ಕೊಡಲು ಹಿಂದೆ ಮುಂದೆ ನೋಡುತ್ತಿದ್ದಾರೆ. ಚಿಲ್ಲರೆ ಇಲ್ಲ, ಕ್ಯಾಶ್ ಇಲ್ಲ​ ಎನ್ನುತ್ತಿದ್ದಾರೆ. ಹೀಗಾಗಿ ನಾನು ಕೂಡ ಡಿಜಿಟಲ್​ ವಿಧಾನವನ್ನು ಅಳವಡಿಸಿಕೊಂಡಿದ್ದೇನೆ. ಚಿಕ್ಕಂದಿನಿಂದಲು ಇದೇ ಜಾಗದಲ್ಲಿ ಭಿಕ್ಷೆ ಬೇಡುತ್ತಿದ್ದೇನೆ. ಈಗ ವಿಧಾನವನ್ನು ಬದಲಿಸಿಕೊಂಡಿದ್ದೇನೆ. ಭಿಕ್ಷೆ ಬೇಡಿದ ಬಳಿಕ ರೈಲ್ವೆ ನಿಲ್ದಾಣದಲ್ಲಿಯೇ ಮಲಗುತ್ತೇನೆ ಎನ್ನುವ ರಾಜು, ಡಿಜಿಟಲ್​ ಮೂಲಕ ಹಣ ಪಡೆಯಲು ಬ್ಯಾಂಕ್​ ಖಾತೆಯನ್ನೂ ತೆರೆದು, ಆನ್ಲೈನ್​ ಪೇಮೆಂಟ್​ ಸೌಲಭ್ಯವನ್ನು ಪಡೆದಿದ್ದೇನೆ ಎಂದಿದ್ದಾರೆ.

ಬ್ಯಾಂಕ್​ ಖಾತೆ ತೆರೆಯಲು ಆಧಾರ್​ ಮತ್ತು ಪಾನ್​ ಕಾರ್ಡ್​ನ ಅಗತ್ಯವಿತ್ತು. ಹೀಗಾಗಿ ರಾಜು ಪಾನ್​ಕಾರ್ಡ್ ಅನ್ನು ಮಾಡಿಸಿಕೊಂಡಿದ್ದಾರೆ. ರಾಜು ಪಟೇಲ್​ ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲು ಪ್ರಸಾದ್​ ಯಾದವ್​ ಅವರ ಅಭಿಮಾನಿಯಾಗಿದ್ದು ಅವರ ಕಾರ್ಯಕ್ರಮಗಳಲ್ಲೂ ಭಾಗವಹಿಸಿದ್ದಾರಂತೆ. ಎಎನ್​ಐ ವರದಿಯ ಪ್ರಕಾರ, ರಾಜು ಪ್ರಧಾನಿ ನರೇಂದ್ರ ಮೋದಿಯವರ ಡಿಜಿಟಲ್​ ಇಂಡಿಯಾ ಕಾರ್ಯಕ್ರಮದಿಂದ ಪ್ರೇರಿತರಾಗಿದ್ದು, ಮನ್​ ಕೀ ಬಾತ್​ ಅನ್ನು ತಪ್ಪದೇ ಕೇಳುತ್ತಾರಂತೆ. ಸದ್ಯ ಈ ಡಿಜಿಟಲ್​ ಹೈಟೆಕ್​ ಭಿಕ್ಷುಕನ ವಿಚಾರ ದೇಶದೆಲ್ಲೆಡೆ ವೈರಲ್​ ಆಗಿದೆ.

ಈ ಕುರಿತು ನೆಟ್ಟಿಗರು ಹಲವು ರೀತಿಯಲ್ಲಿ ಕಾಮೆಂಟ್​ ಮಾಡಿದ್ದಾರೆ. ಎಎನ್​ಐ ಟ್ವಿಟರ್ನಲ್ಲಿ ರಾಜು ಪಟೇಲ್​ ಅವರ ಫೋಟೋಗಳನ್ನು ಹಂಚಿಕೊಳ್ಳಲಾಗಿದೆ. ಬಳಕೆದಾರರೊಬ್ಬರು ಭಿಕ್ಷುಕರಲ್ಲೂ ಡಿಜಿಟಲ್​ ಇಂಡಿಯಾ ಅಳವಡಿಕೆಯಾಗಿರುವುದು ಅಚ್ಚರಿಯ ವಿಚಾರ. ಅಲ್ಲದೆ ಆನ್ಲೈನ್​ ಪೇಮೆಂಟ್ ಮಾಡಿದಾಗ ಅವರು ಕ್ಯಾಶ್​ ಬ್ಯಾಕ್​ ಕೂಡ ಗೆಲ್ಲಬಹುದು ಎಂದು ಕಾಮೆಂಟ್​ ಮಾಡಿದ್ದಾರೆ. ಇನ್ನೊಬ್ಬ ಬಳಕೆದಾರರು ಡಿಜಿಟಲ್​ ಇಂಡಿಯಾ ಸಧ್ಬಳಕೆಯ ಬಗ್ಗೆ ಸಂತಸವಿದೆ ಆದರೆ ದೇಶದಲ್ಲಿರುವ ನಿರುದ್ಯೋಗ ಸಮಸ್ಯೆ ಎದ್ದು ಕಾಣುತ್ತಿದೆ ಎಂದಿದ್ದಾರೆ.

ಇದನ್ನೂ ಓದಿ;

ಬರೋಬ್ಬರಿ 6 ವರ್ಷಗಳಿಂದ ಮೊಸಳೆಯ ಕುತ್ತಿಗೆಯಲ್ಲಿ ಸಿಲುಕಿದ್ದ ​ಟೈರ್​ ಹೊರತೆಗೆದ ವ್ಯಕ್ತಿ

ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ನಕ್ಸಲರ ದಾಳಿಗೆ ತುತ್ತಾದ ಜನರ ಸಂಕಟ ತೆರೆದಿಡುವ ಸಾಕ್ಷ್ಯಚಿತ್ರವಿದು
ನಕ್ಸಲರ ದಾಳಿಗೆ ತುತ್ತಾದ ಜನರ ಸಂಕಟ ತೆರೆದಿಡುವ ಸಾಕ್ಷ್ಯಚಿತ್ರವಿದು
ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್
ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್
ಹೊಸ ಹಾನರ್ ಸ್ಮಾರ್ಟ್​ಫೋನ್​ನಲ್ಲಿದೆ 108 ಮೆಗಾಪಿಕ್ಸೆಲ್ ಸಖತ್ ಎಐ ಕ್ಯಾಮೆರಾ
ಹೊಸ ಹಾನರ್ ಸ್ಮಾರ್ಟ್​ಫೋನ್​ನಲ್ಲಿದೆ 108 ಮೆಗಾಪಿಕ್ಸೆಲ್ ಸಖತ್ ಎಐ ಕ್ಯಾಮೆರಾ
ಮುನಿರತ್ನ ವಿರುದ್ಧದ ಪ್ರಕರಣಗಳ ತನಿಖೆಗೆ SIT ರಚಿಸಿ: ಸಿಎಂಗೆ ಮನವಿ
ಮುನಿರತ್ನ ವಿರುದ್ಧದ ಪ್ರಕರಣಗಳ ತನಿಖೆಗೆ SIT ರಚಿಸಿ: ಸಿಎಂಗೆ ಮನವಿ
ಕಾಡಿಗೆ ಹೋಗುವ ದಾರಿ ಗೊತ್ತು ಅಂತ ಅರಣ್ಯ ಸಿಬ್ಬಂದಿ ಮೇಲೆ ತಿರುಗಿ ಬಿದ್ದ ಆನೆ
ಕಾಡಿಗೆ ಹೋಗುವ ದಾರಿ ಗೊತ್ತು ಅಂತ ಅರಣ್ಯ ಸಿಬ್ಬಂದಿ ಮೇಲೆ ತಿರುಗಿ ಬಿದ್ದ ಆನೆ