AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರೈಲ್ವೆ ನಿಲ್ದಾಣದಲ್ಲಿ ಕ್ಯೂ ಆರ್​ ಕೋಡ್​ ಇಟ್ಟುಕೊಂಡು ಭಿಕ್ಷೆ ಬೇಡುವ ವ್ಯಕ್ತಿ: ಡಿಜಿಟಲ್​ ಭಿಕ್ಷುಕನನ್ನು ಕಂಡು ಬೆರಗಾದ ನೆಟ್ಟಿಗರು

ಭಿಕ್ಷುಕನೊಬ್ಬ ಜನರಿಂದ ಹಣ ಪಡೆಯಲು ಫೋನ್​ ಪೇಯನ್ನು (PhonePe) ಅಳವಡಿಸಿಕೊಂಡಿದ್ದಾನೆ. ಸದ್ಯ ಈ ವಿಚಾರ ದೇಶದೆಲ್ಲೆಡೆ ನೆಟ್ಟಿಗರನ್ನು ಮೂಗಿನ ಮೇಲೆ ಬೆರಳಿಡುವಂತೆ ಮಾಡಿದೆ.

ರೈಲ್ವೆ ನಿಲ್ದಾಣದಲ್ಲಿ ಕ್ಯೂ ಆರ್​ ಕೋಡ್​ ಇಟ್ಟುಕೊಂಡು ಭಿಕ್ಷೆ ಬೇಡುವ ವ್ಯಕ್ತಿ: ಡಿಜಿಟಲ್​ ಭಿಕ್ಷುಕನನ್ನು ಕಂಡು ಬೆರಗಾದ ನೆಟ್ಟಿಗರು
ಭಿಕ್ಷುಕ
Follow us
TV9 Web
| Updated By: Pavitra Bhat Jigalemane

Updated on: Feb 09, 2022 | 4:03 PM

ಭಾರತದಲ್ಲಿ ಪ್ರಧಾನಿ ಮೋದಿ ನೇತೃತ್ವದ ಸರ್ಕಾರ ಡಿಜಿಟಲ್​ ಇಂಡಿಯಾವನ್ನು(Digital India)  ಜಾರಿಗೆ ತಂದಿದೆ. ಹೀಗಾಗಿ ನಮ್ಮ ದಿನನಿತ್ಯದ ಬದುಕಿನಲ್ಲಿ ಹಣಪಾವತಿಯ ಎಲ್ಲ ಕೆಲಸವೂ ಆನ್ಲೈನ್​ನಲ್ಲಿಯೇ ನಡೆಯುತ್ತದೆ. ಹಣ ಪಾವತಿಯ ಬಹುತೇಕ ಸಂದರ್ಭಗಳಲ್ಲಿ ಕ್ಯಾಶ್​​ಲೆಸ್ (Cash Less)​ ಆಗಿಯೇ ಇರಲು ಬಯಸುತ್ತೇವೆ. ಅದು ಸುರಕ್ಷಿತ ಕೂಡ ಹೌದು. ಈ ಡಿಜಿಟಲ್​ ಇಂಡಿಯಾ ಯೋಜನೆ ದೇಶದ ಪ್ರತೀ ವ್ಯಕ್ತಿಗೂ ತಲುಪಿದೆ ಎನ್ನುವುದಕ್ಕೆ ಇಲ್ಲೊಂದು ಉದಾಹರಣೆಯಿದೆ.  ಹೌದು ಭಿಕ್ಷುಕನೊಬ್ಬ (Begger) ಜನರಿಂದ ಹಣ ಪಡೆಯಲು ಫೋನ್​ ಪೇಯನ್ನು (PhonePe) ಅಳವಡಿಸಿಕೊಂಡಿದ್ದಾನೆ. ಸದ್ಯ ಈ ವಿಚಾರ ದೇಶದೆಲ್ಲೆಡೆ ನೆಟ್ಟಿಗರನ್ನು ಮೂಗಿನ ಮೇಲೆ ಬೆರಳಿಡುವಂತೆ ಮಾಡಿದೆ.  ಬಿಹಾರದ ರಾಜು ಪಟೇಲ್​ ಎನ್ನುವ 40 ವರ್ಷದ ಭಿಕ್ಷುಕ ಈ ವ್ಯವಸ್ಥೆಯನ್ನು ಅಳವಡಿಸಿಕೊಂಡಿದ್ದಾನೆ.

ಬಿಹಾರದ ಬೆಟ್ಟೈ ರೈಲು ನಿಲ್ದಾಣದಲ್ಲಿ  ರಾಜು ಪಟೇಲ್​ ಎನ್ನುವ ಭಿಕ್ಷುಕ ಕುತ್ತಿಗೆಯಲ್ಲಿ  ಕ್ಯೂರ್​ ಕೋಡ್ ಅನ್ನು ನೇತುಹಾಕಿಕೊಂಡು, ಟ್ಯಾಬ್​ ​ ಇಟ್ಟುಕೊಂಡು ರಿಚ್​ ಅಗಿ ಭಿಕ್ಷೆ ಬೇಡುತ್ತಿದ್ದಾನೆ. ಈ ಕುರಿತು ಎ ಎನ್​ಐ ಜೊತೆ ಮಾತನಾಡಿದ ರಾಜು ಪಟೇಲ್​​ ಕೊರೊನಾ ಬಳಿಕವಂತೂ ಜನ ದುಡ್ಡುನ್ನು ಕೊಡಲು ಹಿಂದೆ ಮುಂದೆ ನೋಡುತ್ತಿದ್ದಾರೆ. ಚಿಲ್ಲರೆ ಇಲ್ಲ, ಕ್ಯಾಶ್ ಇಲ್ಲ​ ಎನ್ನುತ್ತಿದ್ದಾರೆ. ಹೀಗಾಗಿ ನಾನು ಕೂಡ ಡಿಜಿಟಲ್​ ವಿಧಾನವನ್ನು ಅಳವಡಿಸಿಕೊಂಡಿದ್ದೇನೆ. ಚಿಕ್ಕಂದಿನಿಂದಲು ಇದೇ ಜಾಗದಲ್ಲಿ ಭಿಕ್ಷೆ ಬೇಡುತ್ತಿದ್ದೇನೆ. ಈಗ ವಿಧಾನವನ್ನು ಬದಲಿಸಿಕೊಂಡಿದ್ದೇನೆ. ಭಿಕ್ಷೆ ಬೇಡಿದ ಬಳಿಕ ರೈಲ್ವೆ ನಿಲ್ದಾಣದಲ್ಲಿಯೇ ಮಲಗುತ್ತೇನೆ ಎನ್ನುವ ರಾಜು, ಡಿಜಿಟಲ್​ ಮೂಲಕ ಹಣ ಪಡೆಯಲು ಬ್ಯಾಂಕ್​ ಖಾತೆಯನ್ನೂ ತೆರೆದು, ಆನ್ಲೈನ್​ ಪೇಮೆಂಟ್​ ಸೌಲಭ್ಯವನ್ನು ಪಡೆದಿದ್ದೇನೆ ಎಂದಿದ್ದಾರೆ.

ಬ್ಯಾಂಕ್​ ಖಾತೆ ತೆರೆಯಲು ಆಧಾರ್​ ಮತ್ತು ಪಾನ್​ ಕಾರ್ಡ್​ನ ಅಗತ್ಯವಿತ್ತು. ಹೀಗಾಗಿ ರಾಜು ಪಾನ್​ಕಾರ್ಡ್ ಅನ್ನು ಮಾಡಿಸಿಕೊಂಡಿದ್ದಾರೆ. ರಾಜು ಪಟೇಲ್​ ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲು ಪ್ರಸಾದ್​ ಯಾದವ್​ ಅವರ ಅಭಿಮಾನಿಯಾಗಿದ್ದು ಅವರ ಕಾರ್ಯಕ್ರಮಗಳಲ್ಲೂ ಭಾಗವಹಿಸಿದ್ದಾರಂತೆ. ಎಎನ್​ಐ ವರದಿಯ ಪ್ರಕಾರ, ರಾಜು ಪ್ರಧಾನಿ ನರೇಂದ್ರ ಮೋದಿಯವರ ಡಿಜಿಟಲ್​ ಇಂಡಿಯಾ ಕಾರ್ಯಕ್ರಮದಿಂದ ಪ್ರೇರಿತರಾಗಿದ್ದು, ಮನ್​ ಕೀ ಬಾತ್​ ಅನ್ನು ತಪ್ಪದೇ ಕೇಳುತ್ತಾರಂತೆ. ಸದ್ಯ ಈ ಡಿಜಿಟಲ್​ ಹೈಟೆಕ್​ ಭಿಕ್ಷುಕನ ವಿಚಾರ ದೇಶದೆಲ್ಲೆಡೆ ವೈರಲ್​ ಆಗಿದೆ.

ಈ ಕುರಿತು ನೆಟ್ಟಿಗರು ಹಲವು ರೀತಿಯಲ್ಲಿ ಕಾಮೆಂಟ್​ ಮಾಡಿದ್ದಾರೆ. ಎಎನ್​ಐ ಟ್ವಿಟರ್ನಲ್ಲಿ ರಾಜು ಪಟೇಲ್​ ಅವರ ಫೋಟೋಗಳನ್ನು ಹಂಚಿಕೊಳ್ಳಲಾಗಿದೆ. ಬಳಕೆದಾರರೊಬ್ಬರು ಭಿಕ್ಷುಕರಲ್ಲೂ ಡಿಜಿಟಲ್​ ಇಂಡಿಯಾ ಅಳವಡಿಕೆಯಾಗಿರುವುದು ಅಚ್ಚರಿಯ ವಿಚಾರ. ಅಲ್ಲದೆ ಆನ್ಲೈನ್​ ಪೇಮೆಂಟ್ ಮಾಡಿದಾಗ ಅವರು ಕ್ಯಾಶ್​ ಬ್ಯಾಕ್​ ಕೂಡ ಗೆಲ್ಲಬಹುದು ಎಂದು ಕಾಮೆಂಟ್​ ಮಾಡಿದ್ದಾರೆ. ಇನ್ನೊಬ್ಬ ಬಳಕೆದಾರರು ಡಿಜಿಟಲ್​ ಇಂಡಿಯಾ ಸಧ್ಬಳಕೆಯ ಬಗ್ಗೆ ಸಂತಸವಿದೆ ಆದರೆ ದೇಶದಲ್ಲಿರುವ ನಿರುದ್ಯೋಗ ಸಮಸ್ಯೆ ಎದ್ದು ಕಾಣುತ್ತಿದೆ ಎಂದಿದ್ದಾರೆ.

ಇದನ್ನೂ ಓದಿ;

ಬರೋಬ್ಬರಿ 6 ವರ್ಷಗಳಿಂದ ಮೊಸಳೆಯ ಕುತ್ತಿಗೆಯಲ್ಲಿ ಸಿಲುಕಿದ್ದ ​ಟೈರ್​ ಹೊರತೆಗೆದ ವ್ಯಕ್ತಿ

ಲಖಿಂಪುರ ಖೇರಿಯ ಇಟ್ಟಿಗೆ ಗೂಡಿನಲ್ಲಿ ಕಪ್ಪು ಚಿರತೆ ಜೊತೆ ಸೆಣಸಾಡಿದ ಯುವಕ
ಲಖಿಂಪುರ ಖೇರಿಯ ಇಟ್ಟಿಗೆ ಗೂಡಿನಲ್ಲಿ ಕಪ್ಪು ಚಿರತೆ ಜೊತೆ ಸೆಣಸಾಡಿದ ಯುವಕ
ನನ್ನ ಪತ್ರ ಸಿಎಂ ಏನು ಮಾಡಬೇಕೆಂದು ಕುಮಾರಸ್ವಾಮಿ ಹೇಳಬೇಕಿಲ್ಲ: ಪಾಟೀಲ್
ನನ್ನ ಪತ್ರ ಸಿಎಂ ಏನು ಮಾಡಬೇಕೆಂದು ಕುಮಾರಸ್ವಾಮಿ ಹೇಳಬೇಕಿಲ್ಲ: ಪಾಟೀಲ್
ಅಬ್ಬಬ್ಬಾ...ಒಂದೇ ಬೈಕ್​​ ನಲ್ಲಿ 5 ಜನ ಸವಾರಿ, ಈ ವಿಡಿಯೋ ನೋಡ್ರಿ
ಅಬ್ಬಬ್ಬಾ...ಒಂದೇ ಬೈಕ್​​ ನಲ್ಲಿ 5 ಜನ ಸವಾರಿ, ಈ ವಿಡಿಯೋ ನೋಡ್ರಿ
ಗಮನಸೆಳೆದ ಶತಾಯುಷಿ ಅಜ್ಜಿಯ 100ನೇ ಬರ್ತಡೇ ಸಂಭ್ರಮಾಚರಣೆ
ಗಮನಸೆಳೆದ ಶತಾಯುಷಿ ಅಜ್ಜಿಯ 100ನೇ ಬರ್ತಡೇ ಸಂಭ್ರಮಾಚರಣೆ
ಒಳ್ಳೆಯದಕ್ಕೂ, ಕೆಟ್ಟದ್ದಕ್ಕೂ ಓಕೆ ಅಂತಾಳೆ; ಪತ್ನಿ ಬಗ್ಗೆ ಮಾತಾಡಿದ ಹಂಸಲೇಖ
ಒಳ್ಳೆಯದಕ್ಕೂ, ಕೆಟ್ಟದ್ದಕ್ಕೂ ಓಕೆ ಅಂತಾಳೆ; ಪತ್ನಿ ಬಗ್ಗೆ ಮಾತಾಡಿದ ಹಂಸಲೇಖ
ರಾಷ್ಟ್ರಪತಿಯವರನ್ನು ಭೇಟಿಯಾಗಿ ಮಸೂದೆಗಳ ಅನುಮೋದನೆ ಜ್ಞಾಪಿಸಿದೆವು: ಸಿಎಂ
ರಾಷ್ಟ್ರಪತಿಯವರನ್ನು ಭೇಟಿಯಾಗಿ ಮಸೂದೆಗಳ ಅನುಮೋದನೆ ಜ್ಞಾಪಿಸಿದೆವು: ಸಿಎಂ
ಸಿಎಂ ಬದಲಾವಣೆ, ಸಂಪುಟ ವಿಸ್ತರಣೆ ಹೈಕಮಾಂಡ್ ವಿವೇಚನೆಗೆ ಬಿಟ್ಟಿದ್ದು: ಸಚಿವ
ಸಿಎಂ ಬದಲಾವಣೆ, ಸಂಪುಟ ವಿಸ್ತರಣೆ ಹೈಕಮಾಂಡ್ ವಿವೇಚನೆಗೆ ಬಿಟ್ಟಿದ್ದು: ಸಚಿವ
ಈಗ ಅನುಮತಿ ನೀಡಿದರೆ ಏನು ಪ್ರಯೋಜನ? ಪತ್ರಕ್ಕೆ ಉತ್ತರ ಕೂಡ ಇಲ್ಲ: ಖರ್ಗೆ
ಈಗ ಅನುಮತಿ ನೀಡಿದರೆ ಏನು ಪ್ರಯೋಜನ? ಪತ್ರಕ್ಕೆ ಉತ್ತರ ಕೂಡ ಇಲ್ಲ: ಖರ್ಗೆ
ಗುತ್ತಿಗೆದಾರನ ಹತ್ಯೆ: ಕೊಚ್ಚಿ ಕೊಲ್ಲುತ್ತಿರುವ ಭಯಾನಕ ದೃಶ್ಯ ಇಲ್ಲಿದೆ!
ಗುತ್ತಿಗೆದಾರನ ಹತ್ಯೆ: ಕೊಚ್ಚಿ ಕೊಲ್ಲುತ್ತಿರುವ ಭಯಾನಕ ದೃಶ್ಯ ಇಲ್ಲಿದೆ!
ರೀಲ್ಸ್ ಮಾಡುತ್ತಿದ್ದ ಯುವತಿಗೆ ಮಾಡೆಲಿಂಗ್​ನಲ್ಲಿ ಆಸಕ್ತಿಯಿತ್ತು: ಸಂಬಂಧಿ
ರೀಲ್ಸ್ ಮಾಡುತ್ತಿದ್ದ ಯುವತಿಗೆ ಮಾಡೆಲಿಂಗ್​ನಲ್ಲಿ ಆಸಕ್ತಿಯಿತ್ತು: ಸಂಬಂಧಿ