ಬರೋಬ್ಬರಿ 6 ವರ್ಷಗಳಿಂದ ಮೊಸಳೆಯ ಕುತ್ತಿಗೆಯಲ್ಲಿ ಸಿಲುಕಿದ್ದ ​ಟೈರ್​ ಹೊರತೆಗೆದ ವ್ಯಕ್ತಿ

ಮೊಸಳೆಯ ಕುತ್ತಿಗೆ ಸಿಲಿಕಿದ್ದ ಬೈಕ್​ನ ಟೈರ್​ಅನ್ನು ಬರೋಬ್ಬರಿ 6 ವರ್ಷಗಳ ಬಳಿಕ ಹೊರತೆಗೆದು ಮೊಸಳೆಯನ್ನು ರಕ್ಷಿಸಲಾಗಿದೆ. ಈ ಘಟನೆ ಇಂಡೋನೇಷ್ಯಾದಲ್ಲಿ ನಡೆದಿದೆ.

ಬರೋಬ್ಬರಿ 6 ವರ್ಷಗಳಿಂದ ಮೊಸಳೆಯ ಕುತ್ತಿಗೆಯಲ್ಲಿ ಸಿಲುಕಿದ್ದ ​ಟೈರ್​ ಹೊರತೆಗೆದ ವ್ಯಕ್ತಿ
ಮೊಸಳೆ
Follow us
| Updated By: Pavitra Bhat Jigalemane

Updated on: Feb 09, 2022 | 12:09 PM

ಪ್ರಾಣಿಗಳು ಅದೆಷ್ಟೇ ಭಯಾನಕವಾಗಿದ್ದರೂ ಕೆಲವೊಮ್ಮೆ ಜೀವಸಂಕಟಕ್ಕೆ ಒಳಗಾಗಿಬಿಡುತ್ತವೆ. ಅಂತಹ ಸಂದರ್ಭದಲ್ಲಿ ಅವುಗಳನ್ನು ರಕ್ಷಿಸುವುದು ಮಾನವರ ಹೊಣೆಯಾಗಿರುತ್ತದೆ. ಇದೀಗ ಮೊಸಳೆಯ (Crocodile)ಕುತ್ತಿಗೆ ಸಿಲಿಕಿದ್ದ ಬೈಕ್​ನ ಟೈರ್​ಅನ್ನು (Tyre) ಬರೋಬ್ಬರಿ 6 ವರ್ಷಗಳ ಬಳಿಕ ಹೊರತೆಗೆದು ಮೊಸಳೆಯನ್ನು ರಕ್ಷಿಸಲಾಗಿದೆ. ಈ ಘಟನೆ ಇಂಡೋನೇಷ್ಯಾದಲ್ಲಿ (Indonesia)ನಡೆದಿದೆ. ವ್ಯಕ್ತಿಯೊಬ್ಬರು ಮೊಸಳೆಯನ್ನು ಹಿಡಿದು ಟೈರ್​ಅನ್ನು ಹೊರತೆಗೆದಿದ್ದಾರೆ. ವ್ಯಕ್ತಿಯ ಧೈರ್ಯಕ್ಕೆ  ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ.

ಇಂಡೋನೇಷ್ಯಾದ ತಿಲಿ ಎನ್ನುವ 35 ವರ್ಷದ ಪ್ರಾಣಿ ಪ್ರಿಯ ವ್ಯಕ್ತಿ ಮೊಸಳೆಯ ಕುತ್ತಿಗೆಗೆ ಸಿಲುಕಿದ್ದ ಟೈರ್​​ಅನ್ನು ಹೊರತೆಗೆದಿದ್ದಾರೆ. 2018ರಲ್ಲಿ ಮೊಸಳೆಯ ಕುತ್ತಿಗೆಗೆ ಟೈರ್​ ಸಿಲುಕಿಕೊಂಡಿತ್ತು ಎನ್ನಲಾಗಿದೆ. ಈ ಹಿಂದೆ ಹಲವರು ಮೊಸಳೆಯನ್ನು ಟೈರ್​ನಿಂದ ಮುಕ್ತಿಗೊಳಿಸಲು ಯತ್ನಿಸಿದ್ದು, ವಿಫಲರಾಗಿದ್ದಾರೆ ಎನ್ನಲಾಗಿದೆ. ಇದೀಗ 35 ವರ್ಷದ ತಿಲಿ ಎನ್ನುವ ವ್ಯಕ್ತಿ ಮರದ ದಿಮ್ಮಿಯ ಮೂಲಕ ಮೊಸಳೆಯನ್ನು ಸೆರೆಹಿಡಿದು, ಕಣ್ಣಿಗೆ ಬಟ್ಟೆಯನ್ನು ಸುತ್ತಿ, ಗರಗಸದ ಮೂಲಕ ಟೈರ್​ಅನ್ನು ಹೊರತಗೆದಿದ್ದಾರೆ.

ಈ ಕುರಿತು ತಿಲಿ ಮಾತನಾಡಿ. ನಾನು ಒಬ್ಬನೇ ಮೊಸಳೆಯನ್ನು ಸೆರೆ ಹಿಡಿದೆ. ಸ್ಥಳೀಯರನ್ನು ಸಹಾಯ ಕೇಳಿದರೂ ಅವರು ಭಯಗೊಂಡು ಸಹಾಯಕ್ಕೆ ಮುಂದಾಗಲಿಲ್ಲ ಹೀಗಾಗಿ ಮರದ ದಿಮ್ಮಿಗಳನ್ನು ಅಳವಡಿಸಿಕೊಂಡು ಮೊಸಳೆಯನ್ನು ಸೆರೆಹಿಡಿದು ರಕ್ಷಿಸಲಾಗಿದೆ ಎಂದಿದ್ದಾರೆ.  ಮೊಸಳೆಯ ಕುತ್ತಿಗೆಯಿಂದ ಟೈರ್​ಅನ್ನು ತೆಗೆದ ಬಳಿಕ ಮತ್ತೆ ನೀರಿಗೆ ಬಿಡಲಾಗಿದೆ ಎಂದು ವರದಿ ತಿಳಿಸಿದೆ. ಈ ಹಿಂದೆ ನ್ಯಾಷನಲ್​ ಜಿಯೋಗ್ರಫಿಯ ಆ್ಯಂಕರ್​ ಒಬ್ಬರು ಮೊಸಳೆಯನ್ನು ರಕ್ಷಿಸಲು ಯತ್ನಿಸಿದ್ದರು. ಆದರೆ ಮೊಸಳೆ ಹಲವು ಬಾರಿ ಕಣ್ಮರೆಯಾಗಿದ್ದು, ಟೈರ್​ಅನ್ನು ಹೊರತೆಗೆಯಲು ಸಾಧ್ಯವಾಗಿರಲಿಲ್ಲ.

ಇದನ್ನೂ ಓದಿ:

Viral News: ಉದ್ಯೋಗಿಗಳಿಗೆ ಧನ್ಯವಾದ ಹೇಳಲು 1 ಕೋಟಿ ರೂ.ಗಳ ಟೂರ್​ ಪ್ಯಾಕೇಜ್​ ನೀಡಿದ ಕಂಪನಿ

ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ