AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Video: ಟ್ರಿಪ್‌ಗೆ ಹೊರಟ ಯುವತಿ ವಿಮಾನ ಹತ್ತುತ್ತಿದ್ದಂತೆ ರಜೆ ಕ್ಯಾನ್ಸಲ್ ಮಾಡಿದ ಬಾಸ್

ಉದ್ಯೋಗಿಗಳಿಗೆ ಬಾಸ್ ಬಳಿ ರಜೆ ಕೇಳುವುದೇ ದೊಡ್ಡ ಸವಾಲಿನ ಕೆಲಸ. ರಜೆ ತೆಗದುಕೊಂಡ್ರು ಕೊನೆ ಕ್ಷಣದಲ್ಲಿ ರಜೆ ಕ್ಯಾನ್ಸಲ್ ಆಗೋದಿದೆ. ಇಂತಹ ಅನುಭವ ಜೆನ್ ಝೆಡ್ ಉದ್ಯೋಗಿಗೂ ಆಗಿದೆ. ಯುವತಿಯು ರಜೆ ಎಂದು ಪ್ರವಾಸಕ್ಕೆ ವಿಮಾನ ಹತ್ತುವಷ್ಟರಲ್ಲಿ ಬಾಸ್ ರಜೆ ಕ್ಯಾನ್ಸಲ್ ಮಾಡಿದ್ದಾರೆ. ಈ ಕಾರಣಕ್ಕೆ ಯುವತಿ ಗರಂ ಆಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡ ಪೋಸ್ಟ್ ಚರ್ಚೆಗೆ ಕಾರಣವಾಗಿದೆ.

Video: ಟ್ರಿಪ್‌ಗೆ ಹೊರಟ ಯುವತಿ ವಿಮಾನ ಹತ್ತುತ್ತಿದ್ದಂತೆ ರಜೆ ಕ್ಯಾನ್ಸಲ್ ಮಾಡಿದ ಬಾಸ್
ವೈರಲ್ ವಿಡಿಯೋImage Credit source: Twitter
ಸಾಯಿನಂದಾ
|

Updated on:Mar 01, 2026 | 6:57 PM

Share

ರೆಸ್ಟ್ ಇಲ್ಲದೇ ದುಡಿಯುವ ಉದ್ಯೋಗಿಗಳಿಗೆ (employees) ಒಂದೇ ಒಂದು ದಿನ ಕೊಟ್ಟರೆ ಸಾಕು ಎನ್ನುವಂತಾಗಿರುತ್ತದೆ. ರಜೆ ಸಿಕ್ಕೊಡನೆ ಟ್ರಿಪ್ ಮಾಡ್ತಾರೆ. ರಜೆಯ ವಿಚಾರವಾಗಿ ಜೆನ್ ಝೆಡ್ ತಲೆಮಾರಿನ ಯುವತಿಯ ಪೋಸ್ಟ್ ವೈರಲ್ ಆಗಿದೆ. ಹೌದು, ರಜೆ ಎಂದು ಟ್ರಿಪ್‌ಗೆ ಹೊರಟ ಯುವತಿಯೂ ವಿಮಾನ ಹತ್ತುವಷ್ಟರಲ್ಲಿ ಬಾಸ್ ರಜೆ ಕ್ಯಾನ್ಸಲ್ ಎಂಬ ಸಂದೇಶ ಕಳುಹಿಸಿ ಶಾಕ್ ನೀಡಿದ್ದಾರೆ. ಈ ಕುರಿತಾದ ಸ್ಟೋರಿ ಇಲ್ಲಿದೆ.

ಘರ್ ಕೆ ಕಲೇಶ್ (Gharkekalesh) ಹೆಸರಿನ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾದ ವಿಡಿಯೋದಲ್ಲಿ ಜೆನ್ ಜಿ ಉದ್ಯೋಗಿಯೂ ರಜೆ ಕ್ಯಾನ್ಸಲ್ ಆದ ಬಗ್ಗೆ ವಿವರಿಸಿರುವುದನ್ನು ಕಾಣಬಹುದು. ರಜೆಯಂದು ವಿಯೆಟ್ನಾಂಗೆ ಹೊರಟ ಸಿಮ್ರಾನ್‌ಳ ಬಾಸ್ ನಿರ್ಣಾಯಕ ಕೆಲಸಕ್ಕಾಗಿ ರಜೆಯನ್ನು ಇದ್ದಕ್ಕಿದ್ದಂತೆ ರದ್ದುಗೊಳಿಸಿದರು. ಹೀಗಾಗಿ ಈ ಉದ್ಯೋಗಿ ನಾನು ಕಂಪನಿಗಾಗಿ ಅಲ್ಲ, ಮುಕ್ತವಾಗಿ ಬದುಕಲು ಕೆಲಸ ಮಾಡುತ್ತೇನೆ. ಯೋಜನೆಯನ್ನು ರದ್ದುಗೊಳಿಸುತ್ತೇನೆ. ಆದರೆ ನನ್ನ ಲ್ಯಾಪ್‌ಟಾಪ್ 10 ದಿನಗಳವರೆಗೆ ಆಫ್ ಆಗಿರುತ್ತದೆ ಎಂದು ಹೇಳಿರುವುದನ್ನು ಶೀರ್ಷಿಕೆಯಲ್ಲಿ ಉಲ್ಲೇಖಿಸಲಾಗಿದೆ.

ವೈರಲ್ ವಿಡಿಯೋ ಇಲ್ಲಿದೆ

ಈ ವಿಡಿಯೋದಲ್ಲಿ ಜೆನ್ ಝೆಡ್ ಉದ್ಯೋಗಿ ಸಿಮ್ರಾನ್ ತನ್ನ ಈ ಟ್ರಿಪ್ ಪ್ಲ್ಯಾನ್ ಬಗ್ಗೆ ವಾರಗಳ ಮೊದಲೇ ತನ್ನ ಮ್ಯಾನೇಜರ್‌ಗೆ ತಿಳಿಸಿದ್ದೆ. ಆದರೆ ಸಮಯದಲ್ಲಿ ಯಾವುದೇ ಆಕ್ಷೇಪಣೆ ವ್ಯಕ್ತವಾಗಿರಲಿಲ್ಲ. ವಿಮಾನ ನಿಲ್ದಾಣದಲ್ಲಿದ್ದಾಗ, ತುರ್ತು ನಿಯೋಜನೆಯ ಅಗತ್ಯತೆಯಿಂದಾಗಿ ರಜೆಯನ್ನು ರದ್ದುಗೊಳಿಸಲಾಗಿದೆ ಎಂದು ತಿಳಿಸಿದ್ರು. ಇದು ನಿಜವಾದ ಸಂವಹನ ವೈಫಲ್ಯ. ನೌಕರರ ವೈಯಕ್ತಿಕ ಸಮಯದ ಬಗ್ಗೆ ಕಂಪನಿಯ ಬಾಸ್‌ಗಳಿಗೆ ಇರದ ಗೌರವದ ಕೊರತೆಯನ್ನು ತೋರಿಸುತ್ತದೆ. ಕೆಲಸದಲ್ಲಿ ತುರ್ತು ಪರಿಸ್ಥಿತಿಗಳು ಸಂಭವಿಸಿದ್ರೂ, ಅವು ವೈಯಕ್ತಿಕ ಬದ್ಧತೆಗಳನ್ನು ಪದೇ ಪದೇ ಮೀರಬಾರದು. ತನ್ನ ವೈಯಕ್ತಿಕ ಜೀವನ ಹಾಗೂ ಪ್ರಯಾಣವನ್ನು ಆನಂದಿಸುವುದಕ್ಕಾಗಿ ತಾನು ಕೆಲಸ ಮಾಡುತ್ತೇನೆ. ಕೊನೆಯ ಕ್ಷಣದ ಬೇಡಿಕೆಗಳಿಗೆ ನೌಕರರು ಯಾವಾಗಲೂ ಲಭ್ಯವಿರಬೇಕು ಎಂಬ ನಿಯಮಗಳನ್ನು ನಾನು ಒಪ್ಪುವುದಿಲ್ಲ ಹೀಗಾಗಿ ಬಾಸ್‌ ಏನು ಬೇಕಾದರೂ ಮಾಡಲಿ ಐ ಡೋಂಟ್ ಕೇರ್ ಎಂದಿದ್ದಾರೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ 38 ಲಕ್ಷ ರೂ ಆಫರ್, ದುಬೈನಲ್ಲಿ ತಿಂಗಳಿಗೆ 5 ಲಕ್ಷ ರೂ ಸಂಬಳ; ವೃತ್ತಿ ಆಯ್ಕೆಯ ಬಗ್ಗೆ ಸಲಹೆ ಕೇಳಿದ ಟೆಕ್ಕಿ

ಈ ಪೋಸ್ಟ್ ಒಂದು ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಒಬ್ಬ ಬಳಕೆದಾರ ವೈಯುಕ್ತಿಕ ಜೀವನಕ್ಕಿಂತ ಮುಖ್ಯ ದುಡಿಮೆನಾ ಎಂದು ಪ್ರಶ್ನೆ ಮಾಡಿದ್ದಾರೆ. ಇನ್ನೊಬ್ಬರು, ಬಾಸ್ ಗಳ ಈ ವರ್ತನೆಗಳು ಅತೀರೇಕ ಅನಿಸುತ್ತದೆ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, ಈ ನಡವಳಿಕೆ ಸ್ವೀಕಾರಾರ್ಹವೇ? ಎಂದು ಕೇಳಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:06 pm, Fri, 27 February 26

Follow Us
Sainandha P
Sainandha P

ಮೂಲತಃ ಉಡುಪಿಯವರು. ಪ್ರತಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ. ಪ್ರತಿಷ್ಠಿತ ಕಾಲೇಜುಗಳಲ್ಲಿ ಉಪನ್ಯಾಸಕಿಯಾಗಿ ಕೆಲಸ ಮಾಡಿದ ಅನುಭವ ಇದೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಒಲವು ಹೆಚ್ಚಿರುವ ಇವರು ಕರ್ನಾಟಕ ಟೈಮ್ ವೆಬ್ ಸೈಟ್ ನಲ್ಲಿ ಕೆಲಸ ಮಾಡಿದ ಅನುಭವವಿದೆ. ಬಿಡುವು ಸಿಕ್ಕಾಗಲೆಲ್ಲಾ ಸಿನಿಮಾ ನೋಡುವುದು ಹಾಗೂ ಓದುವುದು ಇವರ ಹವ್ಯಾಸ

Read More
ಚಂದನವನದಲ್ಲಿ ಹಲವು ಸಮಸ್ಯೆ: ಪರಿಹಾರ ಹುಡುಕಲು ಮುಂದಾದ ವಾಣಿಜ್ಯ ಮಂಡಳಿ
ಚಂದನವನದಲ್ಲಿ ಹಲವು ಸಮಸ್ಯೆ: ಪರಿಹಾರ ಹುಡುಕಲು ಮುಂದಾದ ವಾಣಿಜ್ಯ ಮಂಡಳಿ
ಕಾಕ್ರೋಚ್‌ ಪಕ್ಷದ ಸಂಸ್ಥಾಪಕ ಯಾರು?ಭಾರತದ ಬಗ್ಗೆ ಧ್ವನಿ ಎತ್ತಿದ್ದೇಕೆ?
ಕಾಕ್ರೋಚ್‌ ಪಕ್ಷದ ಸಂಸ್ಥಾಪಕ ಯಾರು?ಭಾರತದ ಬಗ್ಗೆ ಧ್ವನಿ ಎತ್ತಿದ್ದೇಕೆ?
ಕೋರ್ಟ್​ ಮುಂದೆ ಶರಣಾದ ತ್ವಿಶಾ ಶರ್ಮಾ ಗಂಡನ ಕಾನೂನು ಲೈಸೆನ್ಸ್ ರದ್ದು
ಕೋರ್ಟ್​ ಮುಂದೆ ಶರಣಾದ ತ್ವಿಶಾ ಶರ್ಮಾ ಗಂಡನ ಕಾನೂನು ಲೈಸೆನ್ಸ್ ರದ್ದು
ಕೇದಾರನಾಥ ಮಾರ್ಗದ ಸೋನ್‌ಪ್ರಯಾಗ್ ಬಳಿ ಪ್ರವಾಸಿಗರ ಮೇಲೆ ಉರುಳಿದ ಬಂಡೆಗಳು
ಕೇದಾರನಾಥ ಮಾರ್ಗದ ಸೋನ್‌ಪ್ರಯಾಗ್ ಬಳಿ ಪ್ರವಾಸಿಗರ ಮೇಲೆ ಉರುಳಿದ ಬಂಡೆಗಳು
3 ಜೀವದಾನಗಳ ಲಾಭ ಪಡೆದು ಅರ್ಧಶತಕ ಬಾರಿಸಿದ ಅಭಿಷೇಕ್
3 ಜೀವದಾನಗಳ ಲಾಭ ಪಡೆದು ಅರ್ಧಶತಕ ಬಾರಿಸಿದ ಅಭಿಷೇಕ್
4 ವರ್ಷಗಳ ಬಳಿಕ ಸಿಕ್ಕ ಮಗನನ್ನು ನೋಡಿ ಕಣ್ಣೀರು ಹಾಕಿದ ಅಮ್ಮ
4 ವರ್ಷಗಳ ಬಳಿಕ ಸಿಕ್ಕ ಮಗನನ್ನು ನೋಡಿ ಕಣ್ಣೀರು ಹಾಕಿದ ಅಮ್ಮ
ಹೊಸಕೋಟೆಯ ಟೋಲ್ ಪ್ಲಾಜಾ ಬಳಿ ಭಾರಿ ಗಾಳಿಗೆ ಮುರಿದು ಬಿದ್ದ ಬೃಹತ್ ಫಲಕ
ಹೊಸಕೋಟೆಯ ಟೋಲ್ ಪ್ಲಾಜಾ ಬಳಿ ಭಾರಿ ಗಾಳಿಗೆ ಮುರಿದು ಬಿದ್ದ ಬೃಹತ್ ಫಲಕ
ನೋರಾ ಫತೇಹಿ ಮ್ಯೂಸಿಕ್ ವಿಡಿಯೋ, ತೆರೆ ಹಿಂದಿನ ಶ್ರಮ ತೋರಿಸಿದ ನಟಿ
ನೋರಾ ಫತೇಹಿ ಮ್ಯೂಸಿಕ್ ವಿಡಿಯೋ, ತೆರೆ ಹಿಂದಿನ ಶ್ರಮ ತೋರಿಸಿದ ನಟಿ
ವಿಶ್ವದ ಅತ್ಯಂತ ದುಬಾರಿ ಮಾವಿನ ಹಣ್ಣು ಬೆಳೆದು ಸೈ ಎನಿಸಿಕೊಂಡ ಬೀದರ್ ರೈತ
ವಿಶ್ವದ ಅತ್ಯಂತ ದುಬಾರಿ ಮಾವಿನ ಹಣ್ಣು ಬೆಳೆದು ಸೈ ಎನಿಸಿಕೊಂಡ ಬೀದರ್ ರೈತ
ಬಿಜೆಪಿ ರಾಜ್ಯಾಧ್ಯಕ್ಷ ಬದಲಾಗ್ತಾರಾ?ಅಭಿಪ್ರಾಯ ಸಂಗ್ರಹದಲ್ಲಿ ಏನೆಲ್ಲಾ ಆಯ್ತು
ಬಿಜೆಪಿ ರಾಜ್ಯಾಧ್ಯಕ್ಷ ಬದಲಾಗ್ತಾರಾ?ಅಭಿಪ್ರಾಯ ಸಂಗ್ರಹದಲ್ಲಿ ಏನೆಲ್ಲಾ ಆಯ್ತು