ಪೋಕ್ಸೊ, ಗೋಹತ್ಯೆ ಪ್ರಕರಣಗಳಲ್ಲಿ ತ್ವರಿತ ವಿಚಾರಣೆಗಾಗಿ ‘ಆಪರೇಷನ್ ಕನ್ವಿಕ್ಷನ್’ ಪ್ರಾರಂಭಿಸಿದ ಯೋಗಿ ಸರ್ಕಾರ

2017 ರಿಂದ  ರಾಜ್ಯ ಸರ್ಕಾರವು ತನ್ನ ಶೂನ್ಯ ಸಹಿಷ್ಣುತೆ ನೀತಿಯಡಿಯಲ್ಲಿ ಮಾಫಿಯಾಗಳ ವಿರುದ್ಧ ಶಿಸ್ತುಕ್ರಮವನ್ನು ನಡೆಸುತ್ತಿದೆ.ಸರ್ಕಾರವು ಪ್ರತಿ ಜಿಲ್ಲೆಯಲ್ಲಿ 20 ಪ್ರಕರಣಗಳನ್ನು ಗುರುತಿಸಲು ‘ಆಪರೇಷನ್ ಕನ್ವಿಕ್ಷನ್’ ಅನ್ನು ಪ್ರಾರಂಭಿಸಿದೆ ಎಂದು ಡಿಜಿಪಿ ವಿಜಯ ಕುಮಾರ್ ಹೇಳಿದ್ದಾರೆ

ಪೋಕ್ಸೊ, ಗೋಹತ್ಯೆ ಪ್ರಕರಣಗಳಲ್ಲಿ ತ್ವರಿತ ವಿಚಾರಣೆಗಾಗಿ ಆಪರೇಷನ್ ಕನ್ವಿಕ್ಷನ್ ಪ್ರಾರಂಭಿಸಿದ ಯೋಗಿ ಸರ್ಕಾರ
ಯೋಗಿ ಆದಿತ್ಯನಾಥ
ರಶ್ಮಿ ಕಲ್ಲಕಟ್ಟ

Updated on: Jun 27, 2023 | 7:41 PM

ಉತ್ತರ ಪ್ರದೇಶ:  ಯೋಗಿ ಆದಿತ್ಯನಾಥ (Yogi Adityanath) ನೇತೃತ್ವದ ಉತ್ತರ ಪ್ರದೇಶ (Uttar Pradesh) ಸರ್ಕಾರವು ಶೂನ್ಯ-ಸಹಿಷ್ಣು ನೀತಿಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವ ಭಾಗವಾಗಿ ದೊಡ್ಡ ಅಪರಾಧಗಳಿಗೆ ಕಾರಣವಾದ ಅಪರಾಧಿಗಳ ತ್ವರಿತ ಶಿಕ್ಷೆಯನ್ನು ಖಾತರಿಪಡಿಸಲು ಆಪರೇಷನ್ ಕನ್ವಿಕ್ಷನ್ (Operation conviction)  ಎಂಬ ಹೊಸ ಅಭಿಯಾನವನ್ನು ಪ್ರಾರಂಭಿಸಿದೆ. ಅಧಿಕಾರಿಗಳ ಪ್ರಕಾರ ಅತ್ಯಾಚಾರ, ಕೊಲೆ, ಅನ್ಯ ಧರ್ಮಕ್ಕೆ ಮತಾಂತರ, ಗೋಹತ್ಯೆಗೆ ಸಂಬಂಧಿಸಿದ ಪ್ರಕರಣಗಳಲ್ಲಿ ಶೀಘ್ರ ಕ್ರಮ ಕೈಗೊಳ್ಳಲಾಗುವುದು. ಆಪರೇಷನ್ ಕನ್ವಿಕ್ಷನ್  ಅಪರಾಧಿಗಳ ತ್ವರಿತ ಬಂಧನ, ಅವರ ವಿರುದ್ಧ ದೃಢವಾದ ಪುರಾವೆಗಳ ಸಂಗ್ರಹ, ಸಂಪೂರ್ಣ ತನಿಖೆ ಮತ್ತು ಅತ್ಯುತ್ತಮ ನ್ಯಾಯಾಲಯದ ಪ್ರಾತಿನಿಧ್ಯವನ್ನು ಖಾತ್ರಿಪಡಿಸುವ ಮೂಲಕ ಸಾಧ್ಯವಾದಷ್ಟು ಬೇಗ ಅಪರಾಧಿಗಳನ್ನು ಶಿಕ್ಷೆಗೆ ಗುರಿಪಡಿಸುತ್ತದೆ ಎಂದು ಪೊಲೀಸರು ಹೇಳಿದ್ದಾರೆ.

2017 ರಿಂದ  ರಾಜ್ಯ ಸರ್ಕಾರವು ತನ್ನ ಶೂನ್ಯ ಸಹಿಷ್ಣುತೆ ನೀತಿಯಡಿಯಲ್ಲಿ ಮಾಫಿಯಾಗಳ ವಿರುದ್ಧ ಶಿಸ್ತುಕ್ರಮವನ್ನು ನಡೆಸುತ್ತಿದೆ.ಸರ್ಕಾರವು ಪ್ರತಿ ಜಿಲ್ಲೆಯಲ್ಲಿ 20 ಪ್ರಕರಣಗಳನ್ನು ಗುರುತಿಸಲು ‘ಆಪರೇಷನ್ ಕನ್ವಿಕ್ಷನ್’ ಅನ್ನು ಪ್ರಾರಂಭಿಸಿದೆ ಎಂದು ಡಿಜಿಪಿ ವಿಜಯ ಕುಮಾರ್ ಹೇಳಿರುವುದಾಗಿ ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ.

ಉತ್ತರ ಪ್ರದೇಶ ಪೊಲೀಸರ ಅಧಿಕೃತ ಪ್ರಕಟಣೆ ಪ್ರಕಾರ, ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆಯಡಿಯಲ್ಲಿ ವರದಿಯಾದ ಅಪರಾಧಗಳ ಜೊತೆಗೆ, ಪ್ರತಿ ಕಮಿಷನರ್ ಮತ್ತು ಜಿಲ್ಲೆಗಳು “ಆಪರೇಷನ್ ಕನ್ವಿಕ್ಷನ್” ಅಡಿಯಲ್ಲಿ ಪ್ರತಿಯೊಂದು ವಿಭಾಗಗಳಲ್ಲಿ 20 ಪ್ರಕರಣಗಳನ್ನು ಗುರುತಿಸಬೇಕಾಗುತ್ತದೆ.

ಇದನ್ನೂ ಓದಿ: ಮತ ಬ್ಯಾಂಕ್ ರಾಜಕೀಯ, ತ್ರಿವಳಿ ತಲಾಖ್, ಏಕರೂಪ ನಾಗರಿಕ ಸಂಹಿತೆ ಕುರಿತು ಪ್ರಧಾನಿ ಮೋದಿ ಹೇಳಿಕೆಗೆ ಕಾಂಗ್ರೆಸ್, ಡಿಎಂಕೆ ವಾಗ್ದಾಳಿ

ಸಂತ್ರಸ್ತರಿಗೆ ತ್ವರಿತ ನ್ಯಾಯ ಒದಗಿಸುವ ಸಲುವಾಗಿ, ಆರೋಪಪಟ್ಟಿ ಸಲ್ಲಿಸಿದ ಮೂರು ದಿನಗಳ ನಂತರ ತನಿಖೆ ಕೈಗೊಂಡು ಮುಂದಿನ 30 ದಿನಗಳಲ್ಲಿ ವಿಚಾರಣೆಯನ್ನು ಪೂರ್ಣಗೊಳಿಸಲಾಗುವುದು. ಇದರ ಜೊತೆಗೆ, ಪಟ್ಟಿ ಮಾಡಲಾದ ನಿದರ್ಶನಗಳಲ್ಲಿ ಕಾನೂನು ಕ್ರಮದ ಬಗ್ಗೆ ನಿಗಾ ಇಡಲು ಅಧಿಕಾರಿಯ ಮೇಲ್ವಿಚಾರಣೆಯಲ್ಲಿ ಪ್ರತಿ ಆಯುಕ್ತರು ಅಥವಾ ಜಿಲ್ಲಾ ಉಸ್ತುವಾರಿ ಕಚೇರಿಯಲ್ಲಿ ಮೇಲ್ವಿಚಾರಣಾ ಸೆಲ್ ಸ್ಥಾಪಿಸಲಾಗುತ್ತದೆ. ಪ್ರತಿದಿನವೂ ದೂರುಗಳನ್ನು ಹೇಗೆ ನಿರ್ವಹಿಸಲಾಗುತ್ತಿದೆ ಎಂಬುದನ್ನು ಮಾನಿಟರಿಂಗ್ ಸೆಲ್ ಪರಿಶೀಲಿಸುತ್ತದೆ.
ಪ್ರಧಾನ ಕಚೇರಿಯ ಉನ್ನತ ಅಧಿಕಾರಿಗಳು ಮಾಡುವ ಕ್ರಮಗಳನ್ನು ನಿಯಮಿತವಾಗಿ ಪತ್ತೆಹಚ್ಚಲು, ಪತ್ತೆಯಾದ ಆರೋಪಗಳ ಸಾಪ್ತಾಹಿಕ ಮೌಲ್ಯಮಾಪನಕ್ಕಾಗಿ ಪೊಲೀಸ್ ಪ್ರಧಾನ ಕಚೇರಿಯಲ್ಲಿ ವೆಬ್‌ಸೈಟ್ ಕೂಡಾ ಇರಲಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Rashmi Kallakatta

ಊರು ಕಾಸರಗೋಡು. ಓದಿದ್ದು ಇಂಜಿನಿಯರಿಂಗ್, ಪಬ್ಲಿಕ್ ಅಡ್ಮಿನಿಸ್ಟ್ರೇಷನ್ ಮತ್ತು ಇಂಗ್ಲಿಷ್ ಸ್ನಾತಕೋತ್ತರ ಪದವಿ. ಕನ್ನಡಪ್ರಭ, ಪ್ರಜಾವಾಣಿ ಡಿಜಿಟಲ್ ಮತ್ತು ಪ್ರಿಂಟ್ ವಿಭಾಗದಲ್ಲಿ ಕೆಲಸದ ಅನುಭವ. ಬ್ಲಾಗರ್, ಸಾಹಿತ್ಯ ಪ್ರೇಮಿ. ಇಲ್ಲಿವರೆಗೆ 2 ಪುಸ್ತಕಗಳು ಪ್ರಕಟವಾಗಿವೆ. ಕಲೆ,ಸಾಹಿತ್ಯ,ತಂತ್ರಜ್ಞಾನ,ಸಂದರ್ಶನ, ಫ್ಯಾಕ್ಟ್ ಚೆಕಿಂಗ್ ಆಸಕ್ತಿಕರ ವಿಷಯಗಳು. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷ ಅನುಭವ

Follow Us