AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸುಪ್ರೀಂಕೋರ್ಟ್ ಮಾಜಿ ಮುಖ್ಯ ನ್ಯಾಯಮೂರ್ತಿ ಆರ್​ ಸಿ ಲಾಹೋಟಿ ನಿಧನ; ಪ್ರಧಾನಿ ಮೋದಿ, ಎನ್​.ವಿ.ರಮಣರಿಂದ ಸಂತಾಪ

1978ರಲ್ಲಿ ಜಿಲ್ಲಾ ಮತ್ತು ಸೆಷನ್ಸ್​ ನ್ಯಾಯಾಲಯದ ನ್ಯಾಯಾಧೀಶನ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ರಮೇಶ್​ ಚಂದ್ರ ಲಾಹೋತಿ​ ಹೈಕೋರ್ಟ್​​ನಲ್ಲಿ ಪ್ರಾಕ್ಟೀಸ್​ ಮಾಡಲು ಪ್ರಾರಂಭಿಸಿದರು. 1988ರ ಮೇ 3ರಂದು ಮಧ್ಯಪ್ರದೇಶದ ಹೈಕೋರ್ಟ್​​ನಲ್ಲಿ ಹೆಚ್ಚುವರಿ ಜಡ್ಜ್​ ಆದರು.

ಸುಪ್ರೀಂಕೋರ್ಟ್ ಮಾಜಿ ಮುಖ್ಯ ನ್ಯಾಯಮೂರ್ತಿ ಆರ್​ ಸಿ ಲಾಹೋಟಿ ನಿಧನ; ಪ್ರಧಾನಿ ಮೋದಿ, ಎನ್​.ವಿ.ರಮಣರಿಂದ ಸಂತಾಪ
ಆರ್​.ಸಿ.ಲಾಹೋಟಿ
TV9 Web
| Updated By: Lakshmi Hegde|

Updated on:Mar 24, 2022 | 1:36 PM

Share

ಸುಪ್ರೀಂಕೋರ್ಟ್​ ಮಾಜಿ ಮುಖ್ಯ ನ್ಯಾಯಮೂರ್ತಿ (Supreme Court Former CJI) ರಮೇಶ್​ ಚಂದ್ರ ಲಾಹೋಟಿ​ ಬುಧವಾರ ದೆಹಲಿ ಆಸ್ಪತ್ರೆಯಲ್ಲಿ ನಿಧನರಾದರು. ಇವರು 2004ರ ಜೂನ್​ 1ರಂದು ಸಿಜೆಐ (Chief Justice Of India) ಆಗಿ ನೇಮಕಗೊಂಡಿದ್ದರು. 2005ರ ನವೆಂಬರ್​ 1ರಂದು ನಿವೃತ್ತಗೊಂಡಿದ್ದರು. 1940ರ ನವೆಂಬರ್​ 1ರಂದು ಜನಿಸಿದ ಇವರಿಗೆ ಈಗ 82 ವರ್ಷ ವಯಸ್ಸಾಗಿತ್ತು. 1962ರಿಂದ ವಕೀಲಿ ವೃತ್ತಿಯಲ್ಲಿ ತೊಡಗಿಕೊಂಡಿದ್ದರು. 1977ರಲ್ಲಿ ರಾಜ್ಯದ ಉನ್ನತ ನ್ಯಾಯಾಂಗ ಸೇವೆಗೆ ಆಯ್ಕೆಯಾಗಿ, ಜಿಲ್ಲಾ ಮತ್ತು ಸೆಶನ್ಸ್​ ನ್ಯಾಯಾಧೀಶರಾಗಿ ನೇಮಕಗೊಂಡಿದ್ದರು. ಅವರ ನಿಧನಕ್ಕೆ ಪ್ರಧಾನಿ ಮೋದಿ, ಈಗಿನ ಸಿಜೆಐ ಎನ್​.ವಿ.ರಮಣ ಸೇರಿ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ.

1978ರಲ್ಲಿ ಜಿಲ್ಲಾ ಮತ್ತು ಸೆಷನ್ಸ್​ ನ್ಯಾಯಾಲಯದ ನ್ಯಾಯಾಧೀಶನ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ರಮೇಶ್​ ಚಂದ್ರ ಲಾಹೋತಿ​ ಹೈಕೋರ್ಟ್​​ನಲ್ಲಿ ಪ್ರಾಕ್ಟೀಸ್​ ಮಾಡಲು ಪ್ರಾರಂಭಿಸಿದರು. 1988ರ ಮೇ 3ರಂದು ಮಧ್ಯಪ್ರದೇಶದ ಹೈಕೋರ್ಟ್​​ನಲ್ಲಿ ಹೆಚ್ಚುವರಿ ಜಡ್ಜ್​ ಆದರು. 1989ರಲ್ಲಿ ಅವರ ಸ್ಥಾನ ಕಾಯಂ ಆಯಿತು. ಬಳಿಕ 1994ರ ಫೆಬ್ರವರಿ 7ರಂದು ದೆಹಲಿ ಹೈಕೋರ್ಟ್​ಗೆ ಇವರನ್ನು ವರ್ಗಾವಣೆ ಮಾಡಲಾಯಿತು. 1998ರ ಡಿಸೆಂಬರ್​​ನಲ್ಲಿ ಸುಪ್ರೀಂಕೋರ್ಟ್​​ ಜಡ್ಜ್​ ಆಗಿ ನೇಮಕಗೊಂಡಿದ್ದರು.

ಪ್ರಧಾನಿ ಮೋದಿಯವರಿಂದ ಟ್ವೀಟ್​

ಮಾಜಿ ಸಿಜೆಐ ಆರ್​.ಸಿ.ಲಾಹೋಟಿ ನಿಧನಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿ ಸಂತಾಪ ಸೂಚಿಸಿ ಟ್ವೀಟ್ ಮಾಡಿದ್ದಾರೆ. ಲಾಹೋಟಿಯವರ ನಿಧನದ ವಾರ್ತೆ ಕೇಳಿ ನೋವಾಯಿತು. ನ್ಯಾಯಾಂಗ ಕ್ಷೇತ್ರಕ್ಕೆ ಅವರ ಕೊಡುಗೆ ಅಪಾರ. ಹಿಂದುಳಿದವರಿಗೆ ಆಗುವ ಅನ್ಯಾಯಕ್ಕೆ ತ್ವರಿತವಾಗಿ ನ್ಯಾಯ ಸಿಗಬೇಕು ಎಂಬುದು ಅವರ ಆಶಯವಾಗಿತ್ತು ಮತ್ತು ಅದರಕ್ಕೆ ಆದ್ಯತೆ ಕೊಟ್ಟೇ ಕೆಲಸ ಮಾಡುತ್ತಿದ್ದರು. ಅವರ ಕುಟುಂಬಕ್ಕೆ ನನ್ನ ಸಾಂತ್ವನಗಳು ಎಂದು ಹೇಳಿದ್ದಾರೆ.  ಹಾಗೇ, ಈಗಿನ ಮುಖ್ಯ ನ್ಯಾಯಮೂರ್ತಿ ಎನ್​.ವಿ.ರಮಣ ಅವರೂ ಟ್ವೀಟ್ ಮಾಡಿದ್ದಾರೆ. ಆರ್.ಸಿ.ಲಾಹೋಟಿ ಅವರು ಕೊನೆ ಉಸಿರು ಇರುವವರೆಗೂ ಭಯವೆಂಬುದು ಬಾಧಿಸದಂತೆ ಸ್ವತಂತ್ರವಾಗಿ ಇದ್ದ ನ್ಯಾಯಾಧೀಶರು. ಅವರ ನಿಧನಕ್ಕೆ ಸಂತಾಪಗಳು ಎಂದಿದ್ದಾರೆ.

ಇದನ್ನೂ ಓದಿ: ಹೋಳಿ ಹಬ್ಬವೆಂದು ವಾಟರ್ ಬಲೂನ್​ ಎಸೆದ ಯುವಕ; ಪಲ್ಟಿ ಹೊಡೆದ ಆಟೋ ರಿಕ್ಷಾ: ತಮಾಷೆ ಮಾಡಲು ಹೋಗಿ ಸೀರಿಯಸ್ಸಾದ ಘಟನೆ

Published On - 1:35 pm, Thu, 24 March 22

ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್
ಡಿಕೆಶಿ ತಂಡದ ಡಿನ್ನರ್​​ ಮೀಟಿಂಗ್​​ ಬಗ್ಗೆ ಸೋಮಶೇಖರ್​​ ಬಿಗ್​​ ಅಪ್ಡೇಟ್​​
ಡಿಕೆಶಿ ತಂಡದ ಡಿನ್ನರ್​​ ಮೀಟಿಂಗ್​​ ಬಗ್ಗೆ ಸೋಮಶೇಖರ್​​ ಬಿಗ್​​ ಅಪ್ಡೇಟ್​​
ಕಾಂಗ್ರೆಸ್​ನ ನೂರಕ್ಕೂ ಹೆಚ್ಚು ಶಾಸಕರು ಡಿಕೆಶಿ ತೆಕ್ಕೆಗೆ?
ಕಾಂಗ್ರೆಸ್​ನ ನೂರಕ್ಕೂ ಹೆಚ್ಚು ಶಾಸಕರು ಡಿಕೆಶಿ ತೆಕ್ಕೆಗೆ?
ಕಷ್ಟಪಟ್ಟಿದ್ದ ಡಿಕೆಶಿಗೆ ಕೊನೆಗೂ ಫಲ, ಅಧಿವೇಶನದ ಬಳಿಕ ಶುಭಸುದ್ದಿ?
ಕಷ್ಟಪಟ್ಟಿದ್ದ ಡಿಕೆಶಿಗೆ ಕೊನೆಗೂ ಫಲ, ಅಧಿವೇಶನದ ಬಳಿಕ ಶುಭಸುದ್ದಿ?