AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭಾರತೀಯ ಮೂಲದ ಹಿಂದು ಯೋಧನಿಗೆ ಕರ್ತವ್ಯದ ವೇಳೆ ತಿಲಕವಿಡಲು ಅನುಮತಿ ಕೊಟ್ಟ ಯುಎಸ್ ಏರ್​ಫೋರ್ಸ್

ದರ್ಶನ್​ ಶಾ ಯುಎಸ್​ ಏರ್​ಫೋರ್ಸ್​ಗೆ ಸೇರಿ 2 ವರ್ಷಗಳಾದವು. 90ನೇ ಆಪರೇಶನಲ್​ ಮೆರಿಕಲ್​ ರೆಡಿನೆಸ್​ ಸ್ಕ್ವಾಡ್ರನ್​​ನಲ್ಲಿ ಎರೋಸ್ಪೇಸ್​ ಮೆಡಿಕಲ್​ ಟೆಕ್ನೀಷಿಯನ್ ಆಗಿದ್ದಾರೆ. ಅವರು ಕೆಲಸಕ್ಕೆ ಸೇರಿದಾಗಿನಿಂದಲೂ ಈ ಬೇಡಿಕೆಯನ್ನು ಇಡುತ್ತಲೇ ಬಂದಿದ್ದರು.

ಭಾರತೀಯ ಮೂಲದ ಹಿಂದು ಯೋಧನಿಗೆ ಕರ್ತವ್ಯದ ವೇಳೆ ತಿಲಕವಿಡಲು ಅನುಮತಿ ಕೊಟ್ಟ ಯುಎಸ್ ಏರ್​ಫೋರ್ಸ್
ದರ್ಶನ್ ಶಾಗೆ ತಿಲಕವಿಡಲು ಅನುಮತಿ ಕೊಟ್ಟ ಯುಎಸ್ ಏರ್​ಫೋರ್ಸ್​
TV9 Web
| Updated By: Lakshmi Hegde|

Updated on:Mar 24, 2022 | 2:55 PM

Share

ಯುಎಸ್ ವಾಯುಸೇನೆಯಲ್ಲಿ (US Airforce) ಇರುವ ಭಾರತೀಯ ಮೂಲದ ಯೋಧರು  ತಮ್ಮ ಸೇನಾ ಸಮವಸ್ತ್ರದೊಟ್ಟಿಗೆ ಹಣೆಗೆ ತಿಲಕ (Tilak)ವನ್ನೂ ಇಟ್ಟುಕೊಳ್ಳಬಹುದಾಗಿದೆ. ಕರ್ತವ್ಯದಲ್ಲಿದ್ದಾಗ ತಿಲಕ ಇಡಲು ಸಂಪೂರ್ಣ ಅನುಮತಿ ಇರುವುದಾಗಿ ಯುಎಸ್ ಏರ್​ಪೋರ್ಸ್  ಹೇಳಿದೆ. ಯುಎಸ್​​ನ ವ್ಯೋಮಿಂಗ್​ ಎಂಬಲ್ಲಿರುವ ಎಫ್​ಇ ವಾರೆನ್​ ಏರ್​ಫೋರ್ಸ್​ ನೆಲೆಯಲ್ಲಿ ಏರ್​ಮ್ಯಾನ್​ ಆಗಿರುವ ಭಾರತ ಮೂಲದ ದರ್ಶನ್​ ಶಾ, ತಾವು ಕರ್ತವ್ಯದಲ್ಲಿದ್ದಾಗಲೂ ಹಣೆಗೆ ಚಾಂಡ್ಲೋ ತಿಲಕ ಇಡಲು ಅನುಮತಿ ನೀಡಬೇಕು ಎಂದು ಮನವಿ ಮಾಡಿದ್ದರು. ಈ ಚಾಂಡ್ಲೋ ತಿಲಕವೆಂದರೆ ಇಂಗ್ಲಿಷ್​ ಅಕ್ಷರ U ಆಕಾರದಲ್ಲಿ ಇದ್ದು, ಮಧ್ಯೆ ಬೊಟ್ಟು ಇರುತ್ತದೆ. ಇದು ವೈಷ್ಣವರು ಇಡುವ ಧಾರ್ಮಿಕ ಆಚರಣೆಯ ತಿಲಕ.

ದರ್ಶನ್​ ಶಾ ಯುಎಸ್​ ಏರ್​ಫೋರ್ಸ್​ಗೆ ಸೇರಿ 2 ವರ್ಷಗಳಾದವು. 90ನೇ ಆಪರೇಶನಲ್​ ಮೆರಿಕಲ್​ ರೆಡಿನೆಸ್​ ಸ್ಕ್ವಾಡ್ರನ್​​ನಲ್ಲಿ ಎರೋಸ್ಪೇಸ್​ ಮೆಡಿಕಲ್​ ಟೆಕ್ನೀಷಿಯನ್ ಆಗಿದ್ದಾರೆ. ಅವರು ಕೆಲಸಕ್ಕೆ ಸೇರಿದಾಗಿನಿಂದಲೂ ಈ ಬೇಡಿಕೆಯನ್ನು ಇಡುತ್ತಲೇ ಬಂದಿದ್ದರು. ಧಾರ್ಮಿಕ ಆಚರಣೆಗೆ ವಿನಾಯಿತಿ ಕೊಡಿ ಎಂದು ಇವರು ಇಟ್ಟ ಬೇಡಿಕೆ ಬಗ್ಗೆ ಎಲ್ಲೆಡೆ ಸುದ್ದಿಯಾಗಿತ್ತು. ಇದಕ್ಕೆ ವಿಶ್ವದ ಹಲವರು ಬೆಂಬಲವನ್ನೂ ವ್ಯಕ್ತಪಡಿಸಿದ್ದರು.  ಕೊನೆಗೂ 2022ರ ಫೆ.22ರಂದು ಅವರಿಗೆ ತಿಲಕ್ ಚಾಂಡ್ಲೋ ಧರಿಸಲು ಅನುಮತಿ ನೀಡಲಾಯಿತು. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಶಾ,  ಸೇನಾ ಕರ್ತವ್ಯದಲ್ಲಿ ಇರುವಾಗ ಸಮವಸ್ತ್ರದೊಂದಿಗೆ ತಿಲಕ ಧರಿಸಲೂ ಅನುಮತಿ ಸಿಕ್ಕಿದೆ. ಈ ವಿಷಯ ಗೊತ್ತಾಗುತ್ತಿದ್ದಂತೆ ಟೆಕ್ಸಾಸ್​, ಕ್ಯಾಲಿಫೋರ್ನಿಯಾ, ನ್ಯೂಜೆರ್ಸಿ, ನ್ಯೂಯಾರ್ಕ್​​ಗಳಲ್ಲಿರುವ ನನ್ನ ಹಲವು ಸ್ನೇಹಿತರು ಸಂದೇಶಗಳನ್ನು ಕಳಿಸುತ್ತಿದ್ದಾರೆ. ನಮ್ಮ ಪಾಲಕರೂ ಸಿಕ್ಕಾಪಟೆ ಖುಷಿಪಟ್ಟಿದ್ದಾರೆ. ಏರ್​ಫೋರ್ಸ್​​ನಲ್ಲಿ ಇಂಥ ಅವಕಾಶ ಕೊಟ್ಟಿದ್ದು ಎಲ್ಲರಿಗೂ ಸಂತೋಷವಾಗಿದೆ ಎಂದು ತಿಳಿಸಿದ್ದಾರೆ.

ದರ್ಶನ್​ ಶಾ, ಯುಎಸ್​ನ ಮಿನ್ನೆಸೋಟಾದ ಈಡನ್​ ಪ್ರೈರೀ ಎಂಬಲ್ಲಿ ಬೆಳೆದಿದ್ದಾರೆ. ಇವರು ಮೂಲತಃ ಗುಜರಾತಿ ಕುಟುಂಬದವಾಗಿದ್ದು, ಬೋಚಸನ್ವಾಸಿ ಶ್ರೀ ಅಕ್ಷರ ಪುರುಷೋತ್ತನ್ ಸ್ವಾಮಿನಾರಾಯಣ ಅವರ ಪಂಥಕ್ಕೆ ಸೇರಿದವರು. ಈ ಪಂಥದ ಜನರು ಹಣೆಗೆ ಕೆಂಪು ಬೊಟ್ಟು ಇಟ್ಟು, ಅದರ ಸುತ್ತಲೂ U ಆಕಾರದಲ್ಲಿ ಕಿತ್ತಳೆ ಬಣ್ಣದಲ್ಲಿ ತಿಲಕ ಇಟ್ಟುಕೊಳ್ಳುತ್ತಾರೆ. 2020ರ ಜೂನ್​ನಿಂದ ಸೇನಾ ತರಬೇತಿ ಪಡೆಯುತ್ತಿದ್ದ ಇವರು, ಆಗಿನಿಂದಲೂ ತನಗೆ ಧಾರ್ಮಿಕ ತಿಲಕ ಇಡಲು ಅವಕಾಶ ಮಾಡಿಕೊಡಿ ಎಂದು ಕೇಳಿಕೊಳ್ಳುತ್ತಲೇ ಇದ್ದರು. ಇದೀಗ ಅನುಮತಿ ಸಿಕ್ಕಿದ್ದು ಖುಷಿಯಾಗಿದೆ. ಹೀಗೆ ತಿಲಕ ಧರಿಸಿ ಕೆಲಸ ಮಾಡಲು ಒಂಥರ ರೋಮಾಂಚನವಾಗುತ್ತದೆ ಎಂದೂ ದರ್ಶನ್​ ಶಾ ಹೇಳಿಕೊಂಡಿದ್ದಾರೆ.

ಇದನ್ನೂ ಓದಿ: Birbhum Violence ಬಿರ್‌ಭೂಮ್​​ನಲ್ಲಿ ಸಜೀವ ದಹನ ಮಾಡುವ ಮುನ್ನ ಥಳಿಸಲಾಗಿತ್ತು: ಮರಣೋತ್ತರ ಪರೀಕ್ಷೆ ವರದಿ

Published On - 2:54 pm, Thu, 24 March 22

ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್
ಡಿಕೆಶಿ ತಂಡದ ಡಿನ್ನರ್​​ ಮೀಟಿಂಗ್​​ ಬಗ್ಗೆ ಸೋಮಶೇಖರ್​​ ಬಿಗ್​​ ಅಪ್ಡೇಟ್​​
ಡಿಕೆಶಿ ತಂಡದ ಡಿನ್ನರ್​​ ಮೀಟಿಂಗ್​​ ಬಗ್ಗೆ ಸೋಮಶೇಖರ್​​ ಬಿಗ್​​ ಅಪ್ಡೇಟ್​​
ಕಾಂಗ್ರೆಸ್​ನ ನೂರಕ್ಕೂ ಹೆಚ್ಚು ಶಾಸಕರು ಡಿಕೆಶಿ ತೆಕ್ಕೆಗೆ?
ಕಾಂಗ್ರೆಸ್​ನ ನೂರಕ್ಕೂ ಹೆಚ್ಚು ಶಾಸಕರು ಡಿಕೆಶಿ ತೆಕ್ಕೆಗೆ?
ಕಷ್ಟಪಟ್ಟಿದ್ದ ಡಿಕೆಶಿಗೆ ಕೊನೆಗೂ ಫಲ, ಅಧಿವೇಶನದ ಬಳಿಕ ಶುಭಸುದ್ದಿ?
ಕಷ್ಟಪಟ್ಟಿದ್ದ ಡಿಕೆಶಿಗೆ ಕೊನೆಗೂ ಫಲ, ಅಧಿವೇಶನದ ಬಳಿಕ ಶುಭಸುದ್ದಿ?