AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭಾರತೀಯ ಮೂಲದ ಹಿಂದು ಯೋಧನಿಗೆ ಕರ್ತವ್ಯದ ವೇಳೆ ತಿಲಕವಿಡಲು ಅನುಮತಿ ಕೊಟ್ಟ ಯುಎಸ್ ಏರ್​ಫೋರ್ಸ್

ದರ್ಶನ್​ ಶಾ ಯುಎಸ್​ ಏರ್​ಫೋರ್ಸ್​ಗೆ ಸೇರಿ 2 ವರ್ಷಗಳಾದವು. 90ನೇ ಆಪರೇಶನಲ್​ ಮೆರಿಕಲ್​ ರೆಡಿನೆಸ್​ ಸ್ಕ್ವಾಡ್ರನ್​​ನಲ್ಲಿ ಎರೋಸ್ಪೇಸ್​ ಮೆಡಿಕಲ್​ ಟೆಕ್ನೀಷಿಯನ್ ಆಗಿದ್ದಾರೆ. ಅವರು ಕೆಲಸಕ್ಕೆ ಸೇರಿದಾಗಿನಿಂದಲೂ ಈ ಬೇಡಿಕೆಯನ್ನು ಇಡುತ್ತಲೇ ಬಂದಿದ್ದರು.

ಭಾರತೀಯ ಮೂಲದ ಹಿಂದು ಯೋಧನಿಗೆ ಕರ್ತವ್ಯದ ವೇಳೆ ತಿಲಕವಿಡಲು ಅನುಮತಿ ಕೊಟ್ಟ ಯುಎಸ್ ಏರ್​ಫೋರ್ಸ್
ದರ್ಶನ್ ಶಾಗೆ ತಿಲಕವಿಡಲು ಅನುಮತಿ ಕೊಟ್ಟ ಯುಎಸ್ ಏರ್​ಫೋರ್ಸ್​
TV9 Web
| Edited By: |

Updated on:Mar 24, 2022 | 2:55 PM

Share

ಯುಎಸ್ ವಾಯುಸೇನೆಯಲ್ಲಿ (US Airforce) ಇರುವ ಭಾರತೀಯ ಮೂಲದ ಯೋಧರು  ತಮ್ಮ ಸೇನಾ ಸಮವಸ್ತ್ರದೊಟ್ಟಿಗೆ ಹಣೆಗೆ ತಿಲಕ (Tilak)ವನ್ನೂ ಇಟ್ಟುಕೊಳ್ಳಬಹುದಾಗಿದೆ. ಕರ್ತವ್ಯದಲ್ಲಿದ್ದಾಗ ತಿಲಕ ಇಡಲು ಸಂಪೂರ್ಣ ಅನುಮತಿ ಇರುವುದಾಗಿ ಯುಎಸ್ ಏರ್​ಪೋರ್ಸ್  ಹೇಳಿದೆ. ಯುಎಸ್​​ನ ವ್ಯೋಮಿಂಗ್​ ಎಂಬಲ್ಲಿರುವ ಎಫ್​ಇ ವಾರೆನ್​ ಏರ್​ಫೋರ್ಸ್​ ನೆಲೆಯಲ್ಲಿ ಏರ್​ಮ್ಯಾನ್​ ಆಗಿರುವ ಭಾರತ ಮೂಲದ ದರ್ಶನ್​ ಶಾ, ತಾವು ಕರ್ತವ್ಯದಲ್ಲಿದ್ದಾಗಲೂ ಹಣೆಗೆ ಚಾಂಡ್ಲೋ ತಿಲಕ ಇಡಲು ಅನುಮತಿ ನೀಡಬೇಕು ಎಂದು ಮನವಿ ಮಾಡಿದ್ದರು. ಈ ಚಾಂಡ್ಲೋ ತಿಲಕವೆಂದರೆ ಇಂಗ್ಲಿಷ್​ ಅಕ್ಷರ U ಆಕಾರದಲ್ಲಿ ಇದ್ದು, ಮಧ್ಯೆ ಬೊಟ್ಟು ಇರುತ್ತದೆ. ಇದು ವೈಷ್ಣವರು ಇಡುವ ಧಾರ್ಮಿಕ ಆಚರಣೆಯ ತಿಲಕ.

ದರ್ಶನ್​ ಶಾ ಯುಎಸ್​ ಏರ್​ಫೋರ್ಸ್​ಗೆ ಸೇರಿ 2 ವರ್ಷಗಳಾದವು. 90ನೇ ಆಪರೇಶನಲ್​ ಮೆರಿಕಲ್​ ರೆಡಿನೆಸ್​ ಸ್ಕ್ವಾಡ್ರನ್​​ನಲ್ಲಿ ಎರೋಸ್ಪೇಸ್​ ಮೆಡಿಕಲ್​ ಟೆಕ್ನೀಷಿಯನ್ ಆಗಿದ್ದಾರೆ. ಅವರು ಕೆಲಸಕ್ಕೆ ಸೇರಿದಾಗಿನಿಂದಲೂ ಈ ಬೇಡಿಕೆಯನ್ನು ಇಡುತ್ತಲೇ ಬಂದಿದ್ದರು. ಧಾರ್ಮಿಕ ಆಚರಣೆಗೆ ವಿನಾಯಿತಿ ಕೊಡಿ ಎಂದು ಇವರು ಇಟ್ಟ ಬೇಡಿಕೆ ಬಗ್ಗೆ ಎಲ್ಲೆಡೆ ಸುದ್ದಿಯಾಗಿತ್ತು. ಇದಕ್ಕೆ ವಿಶ್ವದ ಹಲವರು ಬೆಂಬಲವನ್ನೂ ವ್ಯಕ್ತಪಡಿಸಿದ್ದರು.  ಕೊನೆಗೂ 2022ರ ಫೆ.22ರಂದು ಅವರಿಗೆ ತಿಲಕ್ ಚಾಂಡ್ಲೋ ಧರಿಸಲು ಅನುಮತಿ ನೀಡಲಾಯಿತು. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಶಾ,  ಸೇನಾ ಕರ್ತವ್ಯದಲ್ಲಿ ಇರುವಾಗ ಸಮವಸ್ತ್ರದೊಂದಿಗೆ ತಿಲಕ ಧರಿಸಲೂ ಅನುಮತಿ ಸಿಕ್ಕಿದೆ. ಈ ವಿಷಯ ಗೊತ್ತಾಗುತ್ತಿದ್ದಂತೆ ಟೆಕ್ಸಾಸ್​, ಕ್ಯಾಲಿಫೋರ್ನಿಯಾ, ನ್ಯೂಜೆರ್ಸಿ, ನ್ಯೂಯಾರ್ಕ್​​ಗಳಲ್ಲಿರುವ ನನ್ನ ಹಲವು ಸ್ನೇಹಿತರು ಸಂದೇಶಗಳನ್ನು ಕಳಿಸುತ್ತಿದ್ದಾರೆ. ನಮ್ಮ ಪಾಲಕರೂ ಸಿಕ್ಕಾಪಟೆ ಖುಷಿಪಟ್ಟಿದ್ದಾರೆ. ಏರ್​ಫೋರ್ಸ್​​ನಲ್ಲಿ ಇಂಥ ಅವಕಾಶ ಕೊಟ್ಟಿದ್ದು ಎಲ್ಲರಿಗೂ ಸಂತೋಷವಾಗಿದೆ ಎಂದು ತಿಳಿಸಿದ್ದಾರೆ.

ದರ್ಶನ್​ ಶಾ, ಯುಎಸ್​ನ ಮಿನ್ನೆಸೋಟಾದ ಈಡನ್​ ಪ್ರೈರೀ ಎಂಬಲ್ಲಿ ಬೆಳೆದಿದ್ದಾರೆ. ಇವರು ಮೂಲತಃ ಗುಜರಾತಿ ಕುಟುಂಬದವಾಗಿದ್ದು, ಬೋಚಸನ್ವಾಸಿ ಶ್ರೀ ಅಕ್ಷರ ಪುರುಷೋತ್ತನ್ ಸ್ವಾಮಿನಾರಾಯಣ ಅವರ ಪಂಥಕ್ಕೆ ಸೇರಿದವರು. ಈ ಪಂಥದ ಜನರು ಹಣೆಗೆ ಕೆಂಪು ಬೊಟ್ಟು ಇಟ್ಟು, ಅದರ ಸುತ್ತಲೂ U ಆಕಾರದಲ್ಲಿ ಕಿತ್ತಳೆ ಬಣ್ಣದಲ್ಲಿ ತಿಲಕ ಇಟ್ಟುಕೊಳ್ಳುತ್ತಾರೆ. 2020ರ ಜೂನ್​ನಿಂದ ಸೇನಾ ತರಬೇತಿ ಪಡೆಯುತ್ತಿದ್ದ ಇವರು, ಆಗಿನಿಂದಲೂ ತನಗೆ ಧಾರ್ಮಿಕ ತಿಲಕ ಇಡಲು ಅವಕಾಶ ಮಾಡಿಕೊಡಿ ಎಂದು ಕೇಳಿಕೊಳ್ಳುತ್ತಲೇ ಇದ್ದರು. ಇದೀಗ ಅನುಮತಿ ಸಿಕ್ಕಿದ್ದು ಖುಷಿಯಾಗಿದೆ. ಹೀಗೆ ತಿಲಕ ಧರಿಸಿ ಕೆಲಸ ಮಾಡಲು ಒಂಥರ ರೋಮಾಂಚನವಾಗುತ್ತದೆ ಎಂದೂ ದರ್ಶನ್​ ಶಾ ಹೇಳಿಕೊಂಡಿದ್ದಾರೆ.

ಇದನ್ನೂ ಓದಿ: Birbhum Violence ಬಿರ್‌ಭೂಮ್​​ನಲ್ಲಿ ಸಜೀವ ದಹನ ಮಾಡುವ ಮುನ್ನ ಥಳಿಸಲಾಗಿತ್ತು: ಮರಣೋತ್ತರ ಪರೀಕ್ಷೆ ವರದಿ

Published On - 2:54 pm, Thu, 24 March 22

Follow Us
ಚಾಮರಾಜನಗರವನ್ನು 'ಕಾಡುಗಳ್ಳ ಮುಕ್ತ' ಮಾಡಲು ಸರ್ಕಾರದ ಬಿಗ್ ಪ್ಲಾನ್
ಚಾಮರಾಜನಗರವನ್ನು 'ಕಾಡುಗಳ್ಳ ಮುಕ್ತ' ಮಾಡಲು ಸರ್ಕಾರದ ಬಿಗ್ ಪ್ಲಾನ್
ಇನ್ಸ್‌ಪೆಕ್ಟರ್ ಧನಂಜಯ್‌ಗೆ ಮಾಜಿ ಸಂಸದ ಪ್ರತಾಪ್ ಸಿಂಹ ಎಚ್ಚರಿಕೆ
ಇನ್ಸ್‌ಪೆಕ್ಟರ್ ಧನಂಜಯ್‌ಗೆ ಮಾಜಿ ಸಂಸದ ಪ್ರತಾಪ್ ಸಿಂಹ ಎಚ್ಚರಿಕೆ
ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಐದನೇ ವರ್ಷದ ಗಣೇಶೋತ್ಸವಕ್ಕೆ ಸಿದ್ಧತೆ
ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಐದನೇ ವರ್ಷದ ಗಣೇಶೋತ್ಸವಕ್ಕೆ ಸಿದ್ಧತೆ
ಸದ್ಯದಲ್ಲೇ ಸಚಿವ ಸತೀಶ್ ಜಾರಕಿಹೊಳಿಗೆ ಮತ್ತೊಂದು ಶಾಕ್!
ಸದ್ಯದಲ್ಲೇ ಸಚಿವ ಸತೀಶ್ ಜಾರಕಿಹೊಳಿಗೆ ಮತ್ತೊಂದು ಶಾಕ್!
ಗಗನ್​-ತಾಂಡವ್ ರಾಮ್​​ಗೆ ಕ್ಲಾಸ್; ದೊಡ್ಡ ಸೂಚನೆ ಕೊಟ್ಟ ಸುದೀಪ್
ಗಗನ್​-ತಾಂಡವ್ ರಾಮ್​​ಗೆ ಕ್ಲಾಸ್; ದೊಡ್ಡ ಸೂಚನೆ ಕೊಟ್ಟ ಸುದೀಪ್
ಕೊಪ್ಪಳ ಸರ್ಕಾರಿ ಆಸ್ಪತ್ರೆಯಲ್ಲಿ ಮೂಲಭೂತ ಸೌಲಭ್ಯಗಳ ಕೊರತೆ: ರೋಗಿಗಳ ಪರದಾಟ!
ಕೊಪ್ಪಳ ಸರ್ಕಾರಿ ಆಸ್ಪತ್ರೆಯಲ್ಲಿ ಮೂಲಭೂತ ಸೌಲಭ್ಯಗಳ ಕೊರತೆ: ರೋಗಿಗಳ ಪರದಾಟ!
ಮುದ್ದಾದ ಮಗಳಿದ್ರೂ ಪ್ರಿಯಕರನ ಹಿಂದೆ ಬಿದ್ದು ಗಂಡನ ಕಥೆ ಮುಗಿಸಿದ ಹೆಂಡ್ತಿ!
ಮುದ್ದಾದ ಮಗಳಿದ್ರೂ ಪ್ರಿಯಕರನ ಹಿಂದೆ ಬಿದ್ದು ಗಂಡನ ಕಥೆ ಮುಗಿಸಿದ ಹೆಂಡ್ತಿ!
ಏಳು ವರ್ಷಗಳ ಬಳಿಕ ಭಾರತಕ್ಕೆ ಚೀನಾ ಅಧ್ಯಕ್ಷ: ದೆಹಲಿಗೆ ಬಂದಿಳಿದ ಜಿನ್‌ಪಿಂಗ್
ಏಳು ವರ್ಷಗಳ ಬಳಿಕ ಭಾರತಕ್ಕೆ ಚೀನಾ ಅಧ್ಯಕ್ಷ: ದೆಹಲಿಗೆ ಬಂದಿಳಿದ ಜಿನ್‌ಪಿಂಗ್
ಹಾಸನ: ಬೆಂಗಳೂರು-ಮಂಗಳೂರು ಹೆದ್ದಾರಿಯಲ್ಲಿ ಪೆಟ್ರೋಲ್ ಟ್ಯಾಂಕರ್ ಪಲ್ಟಿ
ಹಾಸನ: ಬೆಂಗಳೂರು-ಮಂಗಳೂರು ಹೆದ್ದಾರಿಯಲ್ಲಿ ಪೆಟ್ರೋಲ್ ಟ್ಯಾಂಕರ್ ಪಲ್ಟಿ
ಶಾರ್ಟ್​ ಸರ್ಕ್ಯೂಟ್​ಗೆ ಸಿಲಿಂಡರ್​ ಸ್ಫೋಟ; 21 ಲಕ್ಷ ರೂ. ಕಳೆದುಕೊಂಡ ಮಾಲೀಕ
ಶಾರ್ಟ್​ ಸರ್ಕ್ಯೂಟ್​ಗೆ ಸಿಲಿಂಡರ್​ ಸ್ಫೋಟ; 21 ಲಕ್ಷ ರೂ. ಕಳೆದುಕೊಂಡ ಮಾಲೀಕ