AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಂಸತ್ ಭವನ ಸ್ಥಳಾಂತರ: ಹಿರಿಯ ಕಾಂಗ್ರೆಸ್​ ನಾಯಕ ಬೇಡವೆಂದ್ರು, ಯಾಕೆ?

ದೆಹಲಿ: ಸಂಸತ್ ಭವನ ಸ್ಥಳಾಂತರ ಕುರಿತು ಮಾಜಿ ರಾಜ್ಯಸಭಾ ಸದಸ್ಯ ಮತ್ತು ಹಿರಿಯ ಕಾಂಗ್ರೆಸ್ ನಾಯಕ ಡಾ.ಕರಣ್ ಸಿಂಗ್ ಅವರು ಸೋಮವಾರ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರಿಗೆ ಪತ್ರ ಬರೆದಿದ್ದಾರೆ. ಈಗ ಇರುವ ಸುಂದರವಾದ, ವಿಶಿಷ್ಟವಾದ, ವೃತ್ತಾಕಾರದ ಸಂಸತ್ ಭವನ ಬೇರೆಲ್ಲೂ ಇಲ್ಲ. ಮತ್ತೆ ನಾವೆಂದು ಈ ಮಾದರಿಯ ಕಟ್ಟಡ ಕಟ್ಟಲು ಸಾಧ್ಯವಿಲ್ಲ. ಹಳೆಯ ಕಟ್ಟಡ ತ್ಯಜಿಸಿ ಹೊಸ ಆಧುನಿಕ ಕಟ್ಟಡಕ್ಕೆ ಹೋದರೆ ಅದು ಹಳೆಯ ಕಟ್ಟಡದ ವೈಶಿಷ್ಟವನ್ನು ಭರಿಸುವುದಿಲ್ಲ ಎಂದು ಕರಣ್ ಸಿಂಗ್ ತಮ್ಮ ಪತ್ರದಲ್ಲಿ […]

ಸಂಸತ್ ಭವನ ಸ್ಥಳಾಂತರ: ಹಿರಿಯ ಕಾಂಗ್ರೆಸ್​ ನಾಯಕ ಬೇಡವೆಂದ್ರು, ಯಾಕೆ?
ಸಾಧು ಶ್ರೀನಾಥ್​
|

Updated on:Oct 29, 2019 | 11:12 AM

Share

ದೆಹಲಿ: ಸಂಸತ್ ಭವನ ಸ್ಥಳಾಂತರ ಕುರಿತು ಮಾಜಿ ರಾಜ್ಯಸಭಾ ಸದಸ್ಯ ಮತ್ತು ಹಿರಿಯ ಕಾಂಗ್ರೆಸ್ ನಾಯಕ ಡಾ.ಕರಣ್ ಸಿಂಗ್ ಅವರು ಸೋಮವಾರ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರಿಗೆ ಪತ್ರ ಬರೆದಿದ್ದಾರೆ.

ಈಗ ಇರುವ ಸುಂದರವಾದ, ವಿಶಿಷ್ಟವಾದ, ವೃತ್ತಾಕಾರದ ಸಂಸತ್ ಭವನ ಬೇರೆಲ್ಲೂ ಇಲ್ಲ. ಮತ್ತೆ ನಾವೆಂದು ಈ ಮಾದರಿಯ ಕಟ್ಟಡ ಕಟ್ಟಲು ಸಾಧ್ಯವಿಲ್ಲ. ಹಳೆಯ ಕಟ್ಟಡ ತ್ಯಜಿಸಿ ಹೊಸ ಆಧುನಿಕ ಕಟ್ಟಡಕ್ಕೆ ಹೋದರೆ ಅದು ಹಳೆಯ ಕಟ್ಟಡದ ವೈಶಿಷ್ಟವನ್ನು ಭರಿಸುವುದಿಲ್ಲ ಎಂದು ಕರಣ್ ಸಿಂಗ್ ತಮ್ಮ ಪತ್ರದಲ್ಲಿ ಪ್ರಸ್ತಾಪಿಸಿದ್ದಾರೆ.

ಅಷ್ಟೇ ಅಲ್ಲದೆ ಪ್ರಸ್ತುತ ಕಟ್ಟಡದಿಂದ ಅನಗತ್ಯ ವಸ್ತುಗಳು ಮತ್ತು ಕಚೇರಿಯನ್ನು ಸ್ಥಳಾಂತರಿಸಲು ಸಾಧ್ಯವಿದೆ. ಅಲ್ಲದೆ ಹೆಚ್ಚಿನ ಸದಸ್ಯರಿಗೆ ಅವಕಾಶ ಕಲ್ಪಿಸಲು ಸಭಾಂಗಣಗಳನ್ನು ವಿಸ್ತರಿಸಲು ನಮಗೆ ಸಾಧ್ಯವಿದೆ. ಹಲವಾರು ವರ್ಷಗಳಿಂದ ಸಂವಿಧಾನ ಸಭೆ ನಡೆಸಿಕೊಂಡು ಬಂದಿರುವ ಸೆಂಟ್ರಲ್ ಹಾಲ್​ಗೆ ಲೋಕಸಭೆಯನ್ನು  ಸ್ಥಳಾಂತರಿಸಿ ಎಂದು ತಿಳಿಸಿದ್ದಾರೆ.

ರಾಜ್ಯಸಭೆಯನ್ನು ಲೋಕಸಭಾ ಸಭಾಂಗಣಕ್ಕೆ ಸ್ಥಳಾಂತರಿಸಬಹುದು. ಅದರ ಹಳೆಯ ಸಭಾಂಗಣವನ್ನು ಸದಸ್ಯರಿಗೆ ಕೇಂದ್ರ ಹಾಲ್ ಮಾದರಿಯ ಕೋಣೆಯಾಗಿ ಬಳಸಬಹುದು. ಐತಿಹಾಸಿಕವಾಗಿರುವ ಈ ಭವ್ಯವಾದ ಕಟ್ಟಡವನ್ನು ತ್ಯಜಿಸುವುದಕ್ಕಿಂತ ಇದು ಉತ್ತಮವಾಗಿದೆ. ಈ ರೀತಿ ಮಾಡುವುದರಿಂದ ನಮ್ಮ ಶ್ರೇಷ್ಠ ಸಂವಿಧಾನ ರಚನೆಕಾರರು ಮತ್ತು ಸಂಸದರ ಸ್ಮರಣೆಯಾಗಿದೆ ಎಂದು ಅವರು ತಮ್ಮ ಪತ್ರದಲ್ಲಿ ಬರೆದಿದ್ದಾರೆ.

ವೆಂಕಯ್ಯನಾಯ್ಡು ಹೇಳಿದ್ದೇನು? ಆಗಸ್ಟ್​ 5ರಂದು ಉಪರಾಷ್ಟ್ರಪತಿ ವೆಂಕಯ್ಯನಾಯ್ಡು ಈ ವಿಚಾರವನ್ನು ಪ್ರಸ್ತಾಪಿಸಿದ್ದರು. ಸಂಸತ್ತಿನ ಆಧುನೀಕರಣ ಕೈಗೊಳ್ಳುವ ವಿಚಾರ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ಬಿಟ್ಟಿದ್ದು, ಸಂಸತ್ ಭವನ ಈಗಾಗಲೇ ತುಂಬ ಹಳೆಯ ಕಟ್ಟಡವಾಗಿದೆ. ಅಲ್ಲದೆ ತನ್ನ ಅಧಿಕಾರಾವಧಿಯಲ್ಲಿ ನಗರಾಭಿವೃದ್ಧಿ ಮತ್ತು ಸಂಸತ್ ವ್ಯವಹಾರಿಕ ಮಂತ್ರಿಗಳೊಡನೆ ಸಂಸತ್ ಕಟ್ಟಡ ಆಧುನೀಕರಣ ಕುರಿತು ಚರ್ಚೆಯಾಗಿದೆ ಎಂದಿದ್ದರು.

ಸಂಸತ್ ಸಾರ್ವಭೌಮತ್ವ ಹಾಗೇ ನಡೆಯಲಿದೆ ಎಂದು ನಾನು ಸಾರ್ವಜನಿಕರಿಗೆ ಭರವಸೆ ನೀಡುತ್ತೇನೆ. ಇದು ದೇಶಗಳ ಪವಿತ್ರ ಸಂಸ್ಥೆಗಳ ಜವಾಬ್ದಾರಿ ಹೆಚ್ಚಿಸಿದೆ ಮತ್ತು ಜನರ ನಿರೀಕ್ಷೆಯನ್ನೂ ಹೆಚ್ಚಿಸಿದೆ. ಸಂಸತ್ ಭವನ ಇನ್ನಷ್ಟು ಸುಂದರವಾಗಿರಲಿದೆ ಎಂದು ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಹೇಳಿದ್ದರು.

ಬ್ರಿಟಿಷರ ಆಡಳಿತಾವಧಿಯಲ್ಲಿ ಸಂಸತ್ ಭವನವನ್ನು ನಿರ್ಮಾಣ ಮಾಡಲಾಗಿತ್ತು. 1912-13ರಲ್ಲಿ ಈ ಭವನದ ವಿನ್ಯಾಸವಾಗಿದೆ. 1921ರಲ್ಲಿ ಆರಂಭವಾದ ಕಟ್ಟಡದ ಕಾಮಗಾರಿ 1927ರಲ್ಲಿ ಪೂರ್ಣಗೊಂಡಿತ್ತು.

Published On - 8:02 am, Tue, 29 October 19

ಸಿಕ್ಕ ಸಿಕ್ಕ ಜಾನುವಾರುಗಳನ್ನು ತಿಂದು ತೇಗಿದ ಚಿರತೆ ಬೋನಿಗೆ ಬಿತ್ತು
ಸಿಕ್ಕ ಸಿಕ್ಕ ಜಾನುವಾರುಗಳನ್ನು ತಿಂದು ತೇಗಿದ ಚಿರತೆ ಬೋನಿಗೆ ಬಿತ್ತು
ಗೋಪಾಲ್‌ಗಂಜ್‌ನ ದೇವಸ್ಥಾನದಿಂದ 50 ಲಕ್ಷ ಮೌಲ್ಯದ ಚಿನ್ನದ ಕಿರೀಟ, ಆಭರಣ ಕಳವು
ಗೋಪಾಲ್‌ಗಂಜ್‌ನ ದೇವಸ್ಥಾನದಿಂದ 50 ಲಕ್ಷ ಮೌಲ್ಯದ ಚಿನ್ನದ ಕಿರೀಟ, ಆಭರಣ ಕಳವು
ಗಂಡನ ಬಗ್ಗೆ ಬಿಗ್ ಬಾಸ್​ನಲ್ಲಿ ಚೈತ್ರಾ ಕುಂದಾಪುರ ಹೇಳಿದ್ದು ಸುಳ್ಳು: ತಂದೆ
ಗಂಡನ ಬಗ್ಗೆ ಬಿಗ್ ಬಾಸ್​ನಲ್ಲಿ ಚೈತ್ರಾ ಕುಂದಾಪುರ ಹೇಳಿದ್ದು ಸುಳ್ಳು: ತಂದೆ
ಪ್ರೇಮ್ ಕಹಾನಿ: 19 ವರ್ಷದ ಯುವತಿ ಹಿಂದೆ ಬಿದ್ದು ದುರಂತ ಅಂತ್ಯಕಂಡ 40 ಅಂಕಲ್
ಪ್ರೇಮ್ ಕಹಾನಿ: 19 ವರ್ಷದ ಯುವತಿ ಹಿಂದೆ ಬಿದ್ದು ದುರಂತ ಅಂತ್ಯಕಂಡ 40 ಅಂಕಲ್
ಬೇರೆ ಮಹಿಳೆ ಜತೆ ಲವ್ವಿಡವ್ವಿ: ಹೆಂಡ್ತಿ ಹತ್ಯೆಗೆ ಸುಪಾರಿ ಕೊಟ್ಟ ಪತಿ
ಬೇರೆ ಮಹಿಳೆ ಜತೆ ಲವ್ವಿಡವ್ವಿ: ಹೆಂಡ್ತಿ ಹತ್ಯೆಗೆ ಸುಪಾರಿ ಕೊಟ್ಟ ಪತಿ
ಡಿಕೆಶಿ ಪ್ರಾರ್ಥನೆಗೆ ಅಸ್ತು ಎಂದಳಾ ಶಕ್ತಿದೇವಿ? ಅರ್ಚಕರು ಹೇಳಿದ್ದಿಷ್ಟು
ಡಿಕೆಶಿ ಪ್ರಾರ್ಥನೆಗೆ ಅಸ್ತು ಎಂದಳಾ ಶಕ್ತಿದೇವಿ? ಅರ್ಚಕರು ಹೇಳಿದ್ದಿಷ್ಟು
ಚೈತ್ರಾ ಕುಂದಾಪುರ ಡಿಬಾರ್ ಆಗಿದ್ದಳು: ಎಲ್ಲ ವಿಷಯ ಹೇಳಿದ ತಂದೆ ಬಾಲಕೃಷ್ಣ
ಚೈತ್ರಾ ಕುಂದಾಪುರ ಡಿಬಾರ್ ಆಗಿದ್ದಳು: ಎಲ್ಲ ವಿಷಯ ಹೇಳಿದ ತಂದೆ ಬಾಲಕೃಷ್ಣ
ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್
ಗೃಹಲಕ್ಷ್ಮೀ ಹಣದ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಿಎಂ ಆರ್ಥಿಕ ಸಲಹೆಗಾರ
ಗೃಹಲಕ್ಷ್ಮೀ ಹಣದ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಿಎಂ ಆರ್ಥಿಕ ಸಲಹೆಗಾರ