ಓವರ್ ಟೇಕ್ ಮಾಡುವ ವೇಳೆ ಲಾರಿಗೆ ಡಿಕ್ಕಿ.. ತಿರುಪತಿಗೆ ಹೋಗ್ತಿದ್ದ ನಾಲ್ವರು ಸ್ಥಳದಲ್ಲೇ ಸಾವು

ಹೈದರಾಬಾದ್​: ಕರ್ನಾಟಕದಿಂದ ತಿರುಪತಿಗೆ ಕಾರಿನಲ್ಲಿ ಹೊರಟಿದ್ದ ನಾಲ್ವರು, ಭೀಕರ ಅಪಘಾತಕ್ಕೆ ಈಡಾಗಿ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಆಂಧ್ರ ಪ್ರದೇಶದ ಚಿತ್ತೂರು ಜಿಲ್ಲೆಯಲ್ಲಿ ನಡೆದಿದೆ. ಆಂಧ್ರ ಪ್ರದೇಶದ ಚಿತ್ತೂರು ಜಿಲ್ಲೆಯ ಬಲಿಜಪಲ್ಲಿ ಬಳಿ ಈ ಘಟನೆ ಸಂಭವಿಸಿದೆ. ವೋಲ್ವೋ ಕಾರಿನಲ್ಲಿ ಕರ್ನಾಟಕದ ನಾಲ್ಕು ಜನರು ಆಂಧ್ರ ಪ್ರದೇಶದ ತಿರುಪತಿಗೆ ಹೊರಟಿದ್ದರು. ಈ ವೇಳೆ ಬಂಗಾರು ಪಾಲೆಂ‌ ಮಂಡಲಂ‌ನ ಬಲಿಜಪಲ್ಲಿ ಬಳಿ‌ ವಾಹನವೊಂದನ್ನು ಓವರ್ ಟೇಕ್ ಮಾಡಲು ಹೋಗಿ ಎದುರಿನಿಂದ‌ ಬರುತ್ತಿದ್ದ ಲಾರಿಗೆ  ಡಿಕ್ಕಿ‌ ಹೊಡೆದಿದ್ದಾರೆ. ಅತಿ ವೇಗದಲ್ಲಿದ್ದ ಕಾರು‌ […]

ಓವರ್ ಟೇಕ್ ಮಾಡುವ ವೇಳೆ ಲಾರಿಗೆ ಡಿಕ್ಕಿ.. ತಿರುಪತಿಗೆ ಹೋಗ್ತಿದ್ದ ನಾಲ್ವರು ಸ್ಥಳದಲ್ಲೇ ಸಾವು
Edited By:

Updated on: Aug 30, 2020 | 12:31 PM

ಹೈದರಾಬಾದ್​: ಕರ್ನಾಟಕದಿಂದ ತಿರುಪತಿಗೆ ಕಾರಿನಲ್ಲಿ ಹೊರಟಿದ್ದ ನಾಲ್ವರು, ಭೀಕರ ಅಪಘಾತಕ್ಕೆ ಈಡಾಗಿ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಆಂಧ್ರ ಪ್ರದೇಶದ ಚಿತ್ತೂರು ಜಿಲ್ಲೆಯಲ್ಲಿ ನಡೆದಿದೆ. ಆಂಧ್ರ ಪ್ರದೇಶದ ಚಿತ್ತೂರು ಜಿಲ್ಲೆಯ ಬಲಿಜಪಲ್ಲಿ ಬಳಿ ಈ ಘಟನೆ ಸಂಭವಿಸಿದೆ.

ವೋಲ್ವೋ ಕಾರಿನಲ್ಲಿ ಕರ್ನಾಟಕದ ನಾಲ್ಕು ಜನರು ಆಂಧ್ರ ಪ್ರದೇಶದ ತಿರುಪತಿಗೆ ಹೊರಟಿದ್ದರು. ಈ ವೇಳೆ ಬಂಗಾರು ಪಾಲೆಂ‌ ಮಂಡಲಂ‌ನ ಬಲಿಜಪಲ್ಲಿ ಬಳಿ‌ ವಾಹನವೊಂದನ್ನು ಓವರ್ ಟೇಕ್ ಮಾಡಲು ಹೋಗಿ ಎದುರಿನಿಂದ‌ ಬರುತ್ತಿದ್ದ ಲಾರಿಗೆ  ಡಿಕ್ಕಿ‌ ಹೊಡೆದಿದ್ದಾರೆ.

ಅತಿ ವೇಗದಲ್ಲಿದ್ದ ಕಾರು‌ ಲಾರಿ‌ಯ ಕೆಳಗಡೆ ತೂರಿದ ಪರಿಣಾಮ, ಕಾರಿನಲ್ಲಿದ್ದ ನಾಲ್ವರು ಅಲ್ಲೇ ಸಿಲುಕಿ, ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

Follow Us