AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹೊಸ ವರ್ಷಾಚರಣೆ ಅಫರ್​! ‘ಶಿವನ ದರ್ಶನ ಮಾಡಿಸುತ್ತೇನೆ’ ಕೈಲಾಸ ದೇಶಕ್ಕೆ ಬರುವಂತೆ ಭಕ್ತರಿಗೆ ನಿತ್ಯಾನಂದನ ಆಹ್ವಾನ..

ಸ್ವಘೋಷಿತ ದೇವಮಾನವ, ಭಾರತದಲ್ಲಿ ಅತ್ಯಾಚಾರ ಪ್ರಕರಣದ ಆರೋಪಿಯಾಗಿರುವ ನಿತ್ಯಾನಂದ ತನ್ನದೇ ದೇಶ ಕಟ್ಟಿ ವಾಸಿಸುತ್ತಿದ್ದಾನೆ. ಕೈಲಾಸ ಎಲ್ಲಿದೆ, ಅಲ್ಲಿಗೆ ಹೋಗುವುದು ಹೇಗೆ ಅನ್ನೋ ಬಗ್ಗೆ ಭಕ್ತರಿಗೂ ಖುದ್ದಾಗಿ ನಿತ್ಯ ಮಾಹಿತಿ ನೀಡಿದ್ದಾನೆ. ಎಲ್ಲ ಮಾಹಿತಿಯನ್ನು ಖುದ್ದಾಗಿ ಸ್ವಘೋಷಿತ ದೇವಮಾನವ ನಿತ್ಯಾನಂದನೇ ನೀಡಿದ್ದಾನೆ.

ಹೊಸ ವರ್ಷಾಚರಣೆ ಅಫರ್​! 'ಶಿವನ ದರ್ಶನ ಮಾಡಿಸುತ್ತೇನೆ' ಕೈಲಾಸ ದೇಶಕ್ಕೆ ಬರುವಂತೆ ಭಕ್ತರಿಗೆ ನಿತ್ಯಾನಂದನ ಆಹ್ವಾನ..
ನಿತ್ಯಾನಂದ ಸ್ವಾಮಿ
ಆಯೇಷಾ ಬಾನು
|

Updated on:Dec 18, 2020 | 10:44 AM

Share

ಅರೆ ನಿತ್ಯಾನಂದನ ಸದ್ದೇ ಇಲ್ಲ, ಎಲ್ಲಿ ಹೋದನಪ್ಪಾ ಆಸಾಮಿ ಅಂತಾ ಎಲ್ಲರಿಗೂ ಆಶ್ಚರ್ಯ ಆಗ್ತಿರಬಹುದು. ನಿಮ್ಮ ಕುತೂಹಲಕ್ಕೆ ಉತ್ತರ ಸಿಕ್ಕಿದೆ. ಖುದ್ದು ನಿತ್ಯಾನಂದನೇ ವೀಡಿಯೋ ಮೂಲಕ ತನ್ನ ಭಕ್ತರಿಗೆ ವಿಶೇಷ ಸಂದೇಶ ರವಾನಿಸಿದ್ದಾನೆ. ಹೊಸ ವರ್ಷಾಚರಣೆ ಸಂದರ್ಭದಲ್ಲಿ ಈ ಅಫರ್ ಬಂದಿರುವುದು ವಿಶೇಷವಾಗಿದೆ​!

ಸ್ವಘೋಷಿತ ದೇವಮಾನವ ನಿತ್ಯಾನಂದ ತನ್ನ ಕೈಲಾಸ ದೇಶಕ್ಕೆ ಬರುವ ಮಾರ್ಗ ತೋರಿದ್ದಾನೆ. ಇಷ್ಟು ದಿನಗಳ ಕಾಲ ಟ್ರಿನಿಡಾ-ಟೊಬ್ಯಾಗೋ ಬಳಿ ದ್ವೀಪದಲ್ಲಿ ನಿತ್ಯಾನಂದ ಇದ್ದಾನೆ. ಅಲ್ಲೇ ಕೈಲಾಸ ದೇಶವನ್ನ ಸ್ಥಾಪಿಸಿದ್ದಾನೆ ಅಂತಾ ನಂಬಲಾಗಿತ್ತು. ಆದ್ರೆ, ಈಗ ತನ್ನ ಭಕ್ತರಿಗೆ ಸೀದಾ ಆಸ್ಟ್ರೇಲಿಯಾಗೆ ಬನ್ನಿ. ಅಲ್ಲಿಂದ ವಿಮಾನದಲ್ಲಿ ಕೈಲಾಸಕ್ಕೆ ಕರೆದುಕೊಂಡು ಹೋಗ್ತೀವಿ ಅಂತಾ ವಿಡಿಯೋದಲ್ಲಿ ನಿತ್ಯಾನಂದ ಸಂದೇಶ ನೀಡಿದ್ದಾನೆ.

ಶಿವನ ದರ್ಶನ ಮಾಡಿಸುತ್ತೇನೆ ಎಂದ ನಿತ್ಯಾನಂದ! ಸ್ವಘೋಷಿತ ದೇವಮಾನವ, ಭಾರತದಲ್ಲಿ ಅತ್ಯಾಚಾರ ಪ್ರಕರಣದ ಆರೋಪಿಯಾಗಿರುವ ನಿತ್ಯಾನಂದ ತನ್ನದೇ ದೇಶ ಕಟ್ಟಿ ವಾಸಿಸುತ್ತಿದ್ದಾನೆ. ಕೈಲಾಸ ಎಲ್ಲಿದೆ, ಅಲ್ಲಿಗೆ ಹೋಗುವುದು ಹೇಗೆ ಅನ್ನೋ ಬಗ್ಗೆ ಭಕ್ತರಿಗೂ ಖುದ್ದಾಗಿ ನಿತ್ಯ ಮಾಹಿತಿ ನೀಡಿದ್ದಾನೆ. ಎಲ್ಲ ಮಾಹಿತಿಯನ್ನು ಖುದ್ದಾಗಿ ಸ್ವಘೋಷಿತ ದೇವಮಾನವ ನಿತ್ಯಾನಂದನೇ ನೀಡಿದ್ದಾನೆ.

ವೆಬ್​ಸೈಟ್​ನಲ್ಲಿ ತನ್ನ ದೇಶ ಕೈಲಾಸಕ್ಕೆ ಬರಲು ಇ-ವೀಸಾಕ್ಕೆ ಭಕ್ತರು ಅರ್ಜಿ ಸಲ್ಲಿಸಬಹುದು. ವೀಸಾ ಉಚಿತವಾಗಿ ನೀಡಲಾಗುತ್ತೆ. ಕೈಲಾಸಕ್ಕೆ ಹೋಗಲು ನಿತ್ಯಾನಂದ ಭಕ್ತರು ಸೀದಾ ಆಸ್ಟ್ರೇಲಿಯಾಕ್ಕೆ ಮೊದಲು ಹೋಗಬೇಕು. ಬಳಿಕ ಅಲ್ಲಿಂದ ಗರುಡ ಹೆಸರಿನ ವಿಮಾನದಲ್ಲಿ ಕೈಲಾಸಕ್ಕೆ ಕರೆದುಕೊಂಡು ಹೋಗುವ ವ್ಯವಸ್ಥೆ ಮಾಡಲಾಗಿದೆ ಅಂತಾ ನಿತ್ಯಾನಂದ ವಿಡಿಯೋ ಸಂದೇಶದಲ್ಲಿ ತನ್ನ ಭಕ್ತರಿಗೆ ಹೇಳಿದ್ದಾನೆ.

ಯಾರೇ ಬಂದರೂ 3 ದಿನ ಮಾತ್ರ ಅವಕಾಶ! ಇನ್ನು ಕೈಲಾಸ ದೇಶದಲ್ಲಿ ಭಕ್ತರು ಹೆಚ್ಚಿನ ದಿನ ಇರುವಂತಿಲ್ಲವಂತೆ. 3 ದಿನ ಮಾತ್ರ ಕೈಲಾಸದಲ್ಲಿರಲು ನಿತ್ಯಾನಂದ ಅವಕಾಶ ಕೊಡ್ತಿದ್ದಾನೆ. 3 ದಿನಕ್ಕಿಂತ ಹೆಚ್ಚಿನ ದಿನಕ್ಕೆ ವೀಸಾ ಕೊಡಲ್ಲವಂತೆ. 3 ದಿನಗಳಲ್ಲಿ ಒಮ್ಮೆ ಮಾತ್ರ ನಿತ್ಯಾನಂದ ದರ್ಶನಕ್ಕೆ ಅವಕಾಶ ಇರುತ್ತೆ. 10 ನಿಮಿಷದಿಂದ 1 ಗಂಟೆಯವರೆಗೆ ಮಾತ್ರ ನಿತ್ಯಾನಂದ ದರ್ಶನಕ್ಕೆ ಅವಕಾಶ ಇರುತ್ತೆ. ಊಟ, ವಸತಿ ವ್ಯವಸ್ಥೆಯನ್ನು ಕೈಲಾಸದಲ್ಲಿ ಬಂದ ಭಕ್ತರಿಗೆ ಉಚಿತವಾಗಿ ನೀಡ್ತೀವಿ ಎಂದಿದ್ದಾನೆ.

ಒಟ್ನಲ್ಲಿ ಇಷ್ಟು ದಿನ ಕಾಣದ ನಿತ್ಯಾನಂದ ಈಗ ಮತ್ತೆ ಪ್ರತ್ಯಕ್ಷನಾಗಿದ್ದಾನೆ. ಅಲ್ದೆ ತನ್ನ ಭಕ್ತರಿಗೆ ಸ್ಪೆಷಲ್ ಆಫರ್ ಕೂಡ ಕೊಟ್ಟಿದ್ದಾನೆ. ಇದನ್ನೆಲ್ಲಾ ಭಕ್ತರು ಯಾವ ರೀತಿ ಸ್ವಿಕರಿಸಲಿದ್ದಾರೆ ಅನ್ನೋದನ್ನ ಕಾದು ನೋಡಬೇಕಿದೆ.

ಬೆಂಗಳೂರಿನ ಬಿಡದಿಯಲ್ಲಿ ನನ್ನ ದೇಹ ಸಜೀವ ಸಮಾಧಿಯಾಗಲಿದೆ -ಇದು ನಿತ್ಯಾನಂದನ ಸ್ವಘೋಷಣೆ

Published On - 10:41 am, Fri, 18 December 20

ಸುಳ್ಳು ಹೇಳಿದ್ರೆ ಒದ್ದು ಒಳಗೆ ಹಾಕ್ತೀನಿ: ಸಚಿವ ಎಂಬಿ ಪಾಟೀಲ್
ಸುಳ್ಳು ಹೇಳಿದ್ರೆ ಒದ್ದು ಒಳಗೆ ಹಾಕ್ತೀನಿ: ಸಚಿವ ಎಂಬಿ ಪಾಟೀಲ್
ದೈತ್ಯ ಹೆಬ್ಬಾವು ರಕ್ಷಣೆ, ನಿಟ್ಟುಸಿರು ಬಿಟ್ಟ ರೈತರು
ದೈತ್ಯ ಹೆಬ್ಬಾವು ರಕ್ಷಣೆ, ನಿಟ್ಟುಸಿರು ಬಿಟ್ಟ ರೈತರು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ