Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮದುವೆಯಾಗಿ 15 ವರ್ಷಗಳಾದರೂ ಮಕ್ಕಳಿಲ್ಲ; ಗಂಡು ಕರುವನ್ನು ದತ್ತು ಪಡೆದ ದಂಪತಿ

ಗಂಡುಕರುವನ್ನು ದತ್ತು ಪಡೆದ ರೈತ ದಂಪತಿ ಮುಂಡನ (ಕೇಶಮುಂಡನ ಕಾರ್ಯಕ್ರಮ) ಆಯೋಜಿಸಿದ್ದು, ಅತಿಥಿಗಳಿಗೆ ಆಹ್ವಾನ ನೀಡಿದ್ದಾರೆ.ಮುಂಡನ ಕಾರ್ಯಕ್ರಮದಲ್ಲಿ ಸುಮಾರು 500 ಅತಿಥಿಗಳು ಭಾಗಿಯಾಗಿದ್ದರು

ಮದುವೆಯಾಗಿ 15 ವರ್ಷಗಳಾದರೂ ಮಕ್ಕಳಿಲ್ಲ; ಗಂಡು ಕರುವನ್ನು ದತ್ತು ಪಡೆದ ದಂಪತಿ
ಪ್ರಾತಿನಿಧಿಕ ಚಿತ್ರ
Follow us
ರಶ್ಮಿ ಕಲ್ಲಕಟ್ಟ
|

Updated on:Dec 18, 2020 | 1:43 PM

ಲಕ್ನೋ: ಉತ್ತರ ಪ್ರದೇಶದ ಶಹಜಾನ್​ಪುರ್​ದ ರೈತ ದಂಪತಿ ವಿಜಯ್ ಪಾಲ್ ಮತ್ತು ರಾಜೇಶ್ವರಿ ದೇವಿ ಅವರಿಗೆ ಮದುವೆಯಾಗಿ 15 ವರ್ಷಗಳಾದರೂ ಮಕ್ಕಳಾಗಿಲ್ಲ. ಹಾಗಾಗಿ ಅವರು ದತ್ತು ಪಡೆಯಲು ತೀರ್ಮಾನಿಸಿದ್ದರು. ವಿಶೇಷವೇನೆಂದರೆ ಅವರು ದತ್ತು ಪಡೆದಿದ್ದು ಗಂಡು ಕರುವನ್ನು!

ಗುರುವಾರ ಗಂಡು ಕರುವನ್ನು ದತ್ತು ಪಡೆದ ಈ ದಂಪತಿ ಅದಕ್ಕೆ ‘ಲಾಲ್ತೂ ಬಾಬಾ’ ಎಂದು ನಾಮಕರಣ ಮಾಡಿದ್ದಾರೆ. ವಿಜಯ್ ಪಾಲ್ ಅವರ ಅಪ್ಪ ಅವರ ಮನೆಯಲ್ಲಿ ಸಾಕಿದ್ದ ಹಸುವಿನ ಕರು ಇದಾಗಿದೆ. ವಿಜಯ್ ಪಾಲ್ ಅವರ ಹೆತ್ತವರು ತೀರಿಕೊಂಡಾಗ ಹಸು ಕೂಡಾ ಸಾವಿಗೀಡಾಗಿತ್ತು.

ಗಂಡು ಕರುವನ್ನು ದತ್ತು ಪಡೆದ ಈ ದಂಪತಿ ಮುಂಡನ (ಕೇಶಮುಂಡನ ಕಾರ್ಯಕ್ರಮ) ಆಯೋಜಿಸಿದ್ದು, ಅತಿಥಿಗಳಿಗೆ ಆಹ್ವಾನ ನೀಡಿದ್ದಾರೆ. ಮುಂಡನ ಕಾರ್ಯಕ್ರಮದಲ್ಲಿ ಸುಮಾರು 500 ಅತಿಥಿಗಳು ಭಾಗಿಯಾಗಿದ್ದರು. ಈ ಕರು ಹುಟ್ಟಿದಾಗಿನಿಂದ ನಮ್ಮ ಜೀವನದ ಜತೆ ಉತ್ತಮ ನಂಟು ಬೆಸೆದು ಕೊಂಡಿದ್ದು, ನಮ್ಮ ಮಗನಂತೆ ನಾವು ಇವನನ್ನು ಸ್ವೀಕರಿಸಿದ್ದೇವೆ. ನಾವು ಗೋವನ್ನು ಅಮ್ಮ ಎಂದು ಪರಿಗಣಿಸುವಾಗ ಗಂಡು ಕರುವನ್ನು ಮಗ ಎಂದು ಯಾಕೆ ಸ್ವೀಕರಿಸಬಾರದು ಎಂದು ಮಾಧ್ಯಮದವರೊಂದಿಗೆ ಮಾತನಾಡಿದ ವಿಜಯ್ ಪಾಲ್ ಹೇಳಿದ್ದಾರೆ.

ಉತ್ತರ ಪ್ರದೇಶ ಸರ್ಕಾರ ಕಳೆದ ವರ್ಷ ‘ನಿರಾಶ್ರಿತ್/ ಬೇಸಹಾರಾ ಗೋವಂಶ್ ಸಹಭಾಗಿತಾ ಯೋಜನಾ’ ಎಂಬ ಯೋಜನೆಯೊಂದನ್ನು ಜಾರಿಗೆ ತಂದಿತ್ತು. ಈ ಯೋಜನೆ ಪ್ರಕಾರ, ಯಾವುದೇ ವ್ಯಕ್ತಿ ಹಸುವನ್ನು ದತ್ತು ಪಡೆದರೆ ಅದ ಪಾಲನೆ-ಪೋಷಣೆಗಾಗಿ ದಿನಕ್ಕೆ 30 ರೂಪಾಯಿ ನೀಡಲಾಗುತ್ತದೆ.

ಗೋವಿನ ಮೇಲೆ ಕ್ರೌರ್ಯ ಆರೋಪ: ಯೂಟ್ಯೂಬ್, ಫೇಸ್​​ಬುಕ್​​ನಲ್ಲಿರುವ ವಿಡಿಯೊ ತೆಗೆಯಲು ಅಮೂಲ್ ಒತ್ತಾಯ

Published On - 1:36 pm, Fri, 18 December 20

ಟಿವಿ9 ಎಕ್ಸ್​ಪೋನಲ್ಲಿ ರಾಶಿಕಾ ಶೆಟ್ಟಿ ಸುತ್ತಾಟ, ನಟಿಗೆ ಇಷ್ಟವಾಗಿದ್ದೇನು?
ಟಿವಿ9 ಎಕ್ಸ್​ಪೋನಲ್ಲಿ ರಾಶಿಕಾ ಶೆಟ್ಟಿ ಸುತ್ತಾಟ, ನಟಿಗೆ ಇಷ್ಟವಾಗಿದ್ದೇನು?
ಸ್ಪೀಕರ್ ವರ್ತನೆ ಸರಿಯಾ ತಪ್ಪಾ ಅಂತ ಜನ ತೀರ್ಮಾನಿಸುತ್ತಾರೆ: ಯುಟಿ ಖಾದರ್
ಸ್ಪೀಕರ್ ವರ್ತನೆ ಸರಿಯಾ ತಪ್ಪಾ ಅಂತ ಜನ ತೀರ್ಮಾನಿಸುತ್ತಾರೆ: ಯುಟಿ ಖಾದರ್
ಸರ್ಕಾರದ ಕ್ರಮವನ್ನು ಹೈಕೋರ್ಟ್​​ನಲ್ಲಿ ಪ್ರಶ್ನಿಸುತ್ತೇವೆ: ಬಸನಗೌಡ ಯತ್ನಾಳ್
ಸರ್ಕಾರದ ಕ್ರಮವನ್ನು ಹೈಕೋರ್ಟ್​​ನಲ್ಲಿ ಪ್ರಶ್ನಿಸುತ್ತೇವೆ: ಬಸನಗೌಡ ಯತ್ನಾಳ್
ನಿರ್ದೇಶಕ ಎಟಿ ರಘು ನಿಧನದ ಸುದ್ದಿ ಕೇಳಿ ಆಘಾತ ಆಯಿತು: ದೊಡ್ಡಣ್ಣ
ನಿರ್ದೇಶಕ ಎಟಿ ರಘು ನಿಧನದ ಸುದ್ದಿ ಕೇಳಿ ಆಘಾತ ಆಯಿತು: ದೊಡ್ಡಣ್ಣ
ಸದನದ ಗೌರವ ಕಾಪಾಡಲು ನಾವು ಹೋರಾಟ ಮಾಡಿದ್ದು: ಅಶೋಕ
ಸದನದ ಗೌರವ ಕಾಪಾಡಲು ನಾವು ಹೋರಾಟ ಮಾಡಿದ್ದು: ಅಶೋಕ
ಸಸ್ಪೆಂಡ್ ಮಾಡುವ ಪ್ರಸ್ತಾವನೆ ಮಂಡಿಸಿದ ಸಂಸದೀಯ ವ್ಯವಹಾರಗಳ ಸಚಿವ ಪಾಟೀಲ್
ಸಸ್ಪೆಂಡ್ ಮಾಡುವ ಪ್ರಸ್ತಾವನೆ ಮಂಡಿಸಿದ ಸಂಸದೀಯ ವ್ಯವಹಾರಗಳ ಸಚಿವ ಪಾಟೀಲ್
18 ಬಿಜೆಪಿ ಶಾಸಕರು ಅಮಾನತು: ಕೈಕಾಲು ಹಿಡ್ದು ಮುನಿರತ್ನನ ಹೊರಹಾಕಿದ ಮಾರ್ಷಲ್
18 ಬಿಜೆಪಿ ಶಾಸಕರು ಅಮಾನತು: ಕೈಕಾಲು ಹಿಡ್ದು ಮುನಿರತ್ನನ ಹೊರಹಾಕಿದ ಮಾರ್ಷಲ್
ಭಲೇ ಕಳ್ಳರು! ಜಡ್ಜ್ ಮನೆಗೆ ನುಗ್ಗಿ ಕಳ್ಳತನಕ್ಕೆ ಯತ್ನ, ಖದೀಮರ ವಿಡಿಯೋ ನೋಡಿ
ಭಲೇ ಕಳ್ಳರು! ಜಡ್ಜ್ ಮನೆಗೆ ನುಗ್ಗಿ ಕಳ್ಳತನಕ್ಕೆ ಯತ್ನ, ಖದೀಮರ ವಿಡಿಯೋ ನೋಡಿ
ಸಿದ್ದರಾಮಯ್ಯ ಮತ್ತು ಶಿವಕುಮಾರ್ ಆಗಮನದ ನಂತರ ಹೆಚ್ಚಿದ ಗಲಾಟೆ
ಸಿದ್ದರಾಮಯ್ಯ ಮತ್ತು ಶಿವಕುಮಾರ್ ಆಗಮನದ ನಂತರ ಹೆಚ್ಚಿದ ಗಲಾಟೆ
ಕಾಂಗ್ರೆಸ್ 2009ರಲ್ಲಿ ಸ್ಪೀಕರ್ ಜೊತೆ ನಡೆದುಕೊಂಡ ರೀತಿ ಗೊತ್ತಿದೆ: ಶಾಸಕ
ಕಾಂಗ್ರೆಸ್ 2009ರಲ್ಲಿ ಸ್ಪೀಕರ್ ಜೊತೆ ನಡೆದುಕೊಂಡ ರೀತಿ ಗೊತ್ತಿದೆ: ಶಾಸಕ