AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪ್ರಧಾನಿ ಮೋದಿ ಸ್ವೀಕರಿಸಿದ ಉಡುಗೊರೆಗಳು ಆನ್​ಲೈನ್​ನಲ್ಲಿ ಹರಾಜು, ನೀವೂ ಪಡೀಬೇಕೆ? ಇಲ್ಲಿದೆ ವಿವರ

ಪ್ರಧಾನಿ ನರೇಂದ್ರ ಮೋದಿ ಸ್ವೀಕರಿಸಿದ ಸ್ಮರಣಿಕೆಗಳನ್ನು ಆನ್​​​ಲೈನ್​​​ ಹರಾಜು ಮಾಡಲಾಗುತ್ತಿದೆ. ಈ ಪ್ರಕ್ರಿಯೆ ಅ.31ರವರೆಗೆ ಇದೆ ಎಂದು ಹೇಳಲಾಗಿದೆ. ಇನ್ನು ಈ ಉಡುಗೊರೆಗಳನ್ನು ನೀವು ಹೇಗೆ ಪಡೆಯುವುದು? ಇದರ ಹಂತಗಳಾವುವು? ಇಲ್ಲಿ ತಿಳಿಸಲಾಗಿದೆ.

ಪ್ರಧಾನಿ ಮೋದಿ ಸ್ವೀಕರಿಸಿದ ಉಡುಗೊರೆಗಳು ಆನ್​ಲೈನ್​ನಲ್ಲಿ ಹರಾಜು, ನೀವೂ ಪಡೀಬೇಕೆ? ಇಲ್ಲಿದೆ ವಿವರ
ಸಾಂದರ್ಭಿಕ ಚಿತ್ರ
TV9 Web
| Edited By: |

Updated on: Oct 03, 2023 | 12:56 PM

Share

ಪ್ರಧಾನಿ ನರೇಂದ್ರ ಮೋದಿ ಸ್ವೀಕರಿಸಿದ ಸ್ಮರಣಿಕೆಗಳನ್ನು (A gift received by Prime Minister Modi) ಆನ್​​​ಲೈನ್​​​ ಹರಾಜು ಮಾಡಲಾಗುತ್ತಿದೆ. ಈ ಪ್ರಕ್ರಿಯೆ ಅ.31ರವರೆಗೆ ಇದೆ ಎಂದು ಹೇಳಲಾಗಿದೆ. ಇದರಲ್ಲಿ ಸೊಗಸಾದ ಶಿಲ್ಪಗಳು, ವರ್ಣಚಿತ್ರಗಳು, ರೇಖಾಚಿತ್ರಗಳು, ಕರಕುಶಲ ವಸ್ತುಗಳು, ಸಾಂಪ್ರದಾಯಿಕ ಉಡುಗೆಗಳು, ಪೇಟ ಇನ್ನಿತರ ವಸ್ತುಗಳನ್ನು ಒಳಗೊಂಡಿದೆ. ಇವುಗಳ ಬೆಲೆ 700 ರೂ.ನಿಂದ ಆರಂಭವಾಗಲಿದ್ದು 64,80,000 ರೂ. ವರೆಗಿನ ವಸ್ತುಗಳು ಇದೆ. ಇನ್ನು ಈ ವಸ್ತುಗಳನ್ನು ನೀವು ಪಡೆಯಬೇಕೆಂದರೆ ಆನ್​​ಲೈನ್​ ಮೂಲಕ PM Mementos ಪೋರ್ಟಲ್​​ಗೆ ಭೇಟಿ ನೀಡಬೇಕು. ಇಲ್ಲಿ ನೀವು ಪ್ರಧಾನಿ ಮೋದಿ ಅವರಿಗೆ ಸಿಕ್ಕ ಸ್ಮರಣಿಕೆಗಳನ್ನು ಪಡೆಯಬಹುದು.

ನೀವೂ ಪಡೀಬೇಕೆ? ಈ ಹಂತಗಳನ್ನು ಅನುಸರಿಸಿ:

ಹಂತ-1

– ಹೊಸ ಖರೀದಿದಾರರು PM Mementos ಪೋರ್ಟಲ್ ಮುಖಪುಟದ ಮೇಲಿನ ಬಲ ಮೂಲೆಯಲ್ಲಿರುವ “ಖರೀದಿದಾರರ ಸೈನ್ ಅಪ್” ಬಟನ್ ಅನ್ನು ಕ್ಲಿಕ್ ಮಾಡಬೇಕು .

– ಖರೀದಿದಾರರ ಸೈನ್‌ಅಪ್ ಪುಟದಲ್ಲಿ ಮೊಬೈಲ್ ಸಂಖ್ಯೆ, ಇಮೇಲ್ ವಿಳಾಸ ಮತ್ತು ಪಾಸ್‌ವರ್ಡ್‌ನಂತಹ ವಿವರಗಳನ್ನು ಒದಗಿಸಿ.

– ಚೆಕ್‌ಬಾಕ್ಸ್ ನ್ನು ಕ್ಲಿಕ್ ಮಾಡುವ ಮೂಲಕ ಹರಾಜು ನಿಯಮಗಳು ಮತ್ತು ಷರತ್ತುಗಳನ್ನು ಒಪ್ಪಿಕೊಳ್ಳಿ.

– ನೋಂದಾಯಿತ ಮೊಬೈಲ್ ಸಂಖ್ಯೆ ಮತ್ತು ಇಮೇಲ್ ಐಡಿ ಮೂಲಕ ಸ್ವೀಕರಿಸಿದ OTPನ್ನು ಇಲ್ಲಿ ತಿಳಿಸಿ.

– ಪ್ರೊಫೈಲ್ ವಿವರಗಳ ಪುಟದಲ್ಲಿ ಹೆಸರು, ಲಿಂಗ, ಹುಟ್ಟಿದ ದಿನಾಂಕ ಮತ್ತು ವಿಳಾಸದ ವಿವರಗಳನ್ನು ನಮೂದಿಸಿ.

-ಎಲ್ಲ ವಿವರಗಳನ್ನು ಒಮ್ಮೆ ಪರಿಶೀಲಿಸಿ ಮತ್ತು “ಸಲ್ಲಿಸು” ನೀಡಿರುವ ಆಯ್ಕೆಗೆ ಕ್ಲಿಕ್ ಮಾಡಿ.

– ನಂತರ ಪೋರ್ಟಲ್​​ “ನಿಮ್ಮ ಸೈನ್ ಅಪ್ ಯಶಸ್ವಿಯಾಗಿ ಮಾಡಲಾಗಿದೆ” ಎಂಬ ಸಂದೇಶವನ್ನು ತೋರಿಸುತ್ತದೆ.

ಹಂತ 2:

ಹಂತ ಒಂದು ಮುಗಿದ ನಂತರ ಲಾಗಿನ್​​​ ಐಡಿಯನ್ನು ಇಲ್ಲಿ ಹಾಕಿ (ಮಾನ್ಯವಾದ ಪಾಸ್‌ವರ್ಡ್‌ನೊಂದಿಗೆ ಇಮೇಲ್ ಐಡಿ ಅಥವಾ ಮೊಬೈಲ್ ಸಂಖ್ಯೆ) ಲಾಗಿನ್​​ ಮಾಡಿಕೊಳ್ಳಿ.

ಹಂತ 3:

-ಇನ್ನು ನೀವು ನೀಡಿದ ಮಾಹಿತಿಯಲ್ಲಿ ಆಧಾರ ದೃಢೀಕರಣ ಇದೆಯೇ ಎಂದು ಪರಿಶೀಲನೆ ಮಾಡುತ್ತದೆ.

– ಒಂದು ವೇಳೆ ಮಾಹಿತಿಯಲ್ಲಿ ಆಧಾರ ದೃಢೀಕರಣ ಇಲ್ಲವೆಂದರೆ, ಆಧಾರ ದೃಢೀಕರಣ ಪುಟಕ್ಕೆ ನ್ಯಾವಿಗೇಟ್ ಮಾಡುತ್ತದೆ.

ಹಂತ 4:

ಲಾಗಿನ್​​ ನಂತರ ನೀವು ಹರಾಜು ಮಾಡಲಾದ ವಸ್ತುಗಳ ಮೇನುವನ್ನು ತೋರಿಸುತ್ತದೆ. ಇಲ್ಲಿ ನಿಮಗೆ ಬೇಕಾದ ವಷ್ತುಗಳನ್ನು ಆಯ್ಕೆ ಮಾಡಿಕೊಳ್ಳಬಹುದು.

ಹಂತ 5:

-ನೀವು ಆಯ್ಕೆ ಮಾಡಿದ ವಸ್ತುಗಳನ್ನು ಮತ್ತೊಮ್ಮೆ ಪರಿಶೀಲನೆ ಮಾಡಿ. ಜತೆಗೆ ಅದರ ದರವನ್ನು ಕೂಡ ಅಲ್ಲಿ ತಿಳಿಸಲಾಗುತ್ತದೆ. ಇದರ ಜತೆಗೆ ನಿಮಗೆ ಕಾರ್ಟ್ ಕೂಡ ನೀಡಲಾಗುತ್ತದೆ. ಅದಕ್ಕೆ ನೀವು ಆಯ್ಕೆ ಮಾಡಿದ ವಸ್ತುಗಳನ್ನು ಸೇರಿಸಬೇಕು.

– ಇನ್ನು ಇಲ್ಲಿ ಕಾರ್ಟ್​​ಗಳನ್ನು ಆಯ್ಕೆ ಮಾಡಿಕೊಳ್ಳುವುದು ಕಡ್ಡಾಯವಾಗಿದೆ. ಏಕೆಂದರೆ ಕಾರ್ಟ್ ಆಯ್ಕೆ ಮಾಡಿದವರಿಗೆ ಮಾತ್ರ ಈ ಹರಾಜಿನಲ್ಲಿ ಭಾಗವಹಿಸಲು ಅವಕಾಶ ನೀಡಲಾಗುತ್ತದೆ.

ಹಂತ 6:

-ಇನ್ನು ಕಾರ್ಟ್​​ಗೆ ವಸ್ತುಗಳನ್ನು ಸೇರಿಸಿದ ನಂತರ ಬಿಡ್ ಮಾಡಬಹುದು. ಅಲ್ಲಿಂದ ಹರಾಜು ಪ್ರಾರಂಭವಾಗುತ್ತದೆ.

-ಈ ಬಿಡ್​​ನ್ನು ಹರಾಜು ಮುಗಿಯುವರೆಗೆ ಮಾಡಬಹುದು.

ಹಂತ -7 :

ಹರಾಜು ಮುಗಿದ ನಂತರ ಮತ್ತು ಇಲಾಖೆ ಹರಾಜಿನ ಸೂಚಕಗಳನ್ನು ತಿಳಿಸುತ್ತದೆ. ಅಲ್ಲಿಂದ ಹರಾಜುದಾರರು ವಸ್ತುವಿನ ಬೆಲೆಗೆ ಅನುಗುಣವಾಗಿ ಅಂದರೆ ಹರಾಜಿನಲ್ಲಿ ತಿಳಿಸಿದ ಮೊತ್ತವನ್ನು ಪಾವತಿಸಬೇಕು. ಮೊತ್ತವನ್ನು ಪೋರ್ಟಲ್​​ನಲ್ಲಿ ಪಾವತಿಸಬೇಕು. ಜತೆಗೆ ದೇಶದೊಳಗಿನ ವಿಳಾಸಕ್ಕೆ ಮಾತ್ರ ಇಲಾಖೆಯೇ ತಲುಪಿಸುತ್ತದೆ.

ಇದನ್ನೂ ಓದಿ: ಪ್ರಧಾನಿ ಮೋದಿ ಸ್ವೀಕರಿಸಿದ ಉಡುಗೊರೆ, ಸ್ಮರಣಿಕೆಗಳ ಹರಾಜು; ಕ್ರೀಡಾಪಟುಗಳು ಕೊಟ್ಟ ಗಿಫ್ಟ್​ಗಳಿಗೆ ಭರ್ಜರಿ ಬೇಡಿಕೆ

ಭಾರತ ಸರ್ಕಾರದ ಸಂಸ್ಕೃತಿ ಸಚಿವಾಲಯ ನ್ಯಾಷನಲ್ ಗ್ಯಾಲರಿ ಆಫ್ ಮಾಡರ್ನ್ ಆರ್ಟ್ (NGMA) ಆಯೋಜಿಸಿರುವ ಈ ಇ-ಹರಾಜನ್ನು ಭಾರತೀಯರು ಪ್ರತ್ಯೇಕವಾಗಿ ಪ್ರವೇಶಿಸಬಹುದಾಗಿದೆ. ಇನ್ನು ಈ ಆನ್‌ಲೈನ್ ಹರಾಜಿನಿಂದ ಬರುವ ಆದಾಯವು ಗಂಗಾ ನದಿಯನ್ನು ಪುನರುಜ್ಜೀವನಗೊಳಿಸುವ “ನಮಾಮಿ ಗಂಗೆ ಕಾರ್ಯಕ್ರಮ”ಕ್ಕೆ ಉಪಯೋಗಿಸಲಾಗುವುದು ಎಂದು ಇಲಾಖೆ ಹೇಳಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

‘ಜನ ನಾಯಗನ್’ಗೆ ಹೈಕೋರ್ಟ್ ಶಾಕ್: ಬೆಳಿಗ್ಗೆ ನೀಡಿದ ಆದೇಶಕ್ಕೆ ಮಧ್ಯಾಹ್ನ ತಡೆ
‘ಜನ ನಾಯಗನ್’ಗೆ ಹೈಕೋರ್ಟ್ ಶಾಕ್: ಬೆಳಿಗ್ಗೆ ನೀಡಿದ ಆದೇಶಕ್ಕೆ ಮಧ್ಯಾಹ್ನ ತಡೆ
ಆಸ್ತಿ ವಿವಾದ: ಕೆಸರು ಗದ್ದೆಯಲ್ಲೇ ನಡೀತು ಫಿಲ್ಮಿ ಸ್ಟೈಲ್​​ ಫೈಟ್​​
ಆಸ್ತಿ ವಿವಾದ: ಕೆಸರು ಗದ್ದೆಯಲ್ಲೇ ನಡೀತು ಫಿಲ್ಮಿ ಸ್ಟೈಲ್​​ ಫೈಟ್​​
ಕಳಪೆ ಕೊಟ್ಟ ರಾಶಿಕಾ ಮೇಲೆ ಉರಿದು ಬಿದ್ದ ರಕ್ಷಿತಾ, ನಕ್ಕ ಧ್ರುವಂತ್
ಕಳಪೆ ಕೊಟ್ಟ ರಾಶಿಕಾ ಮೇಲೆ ಉರಿದು ಬಿದ್ದ ರಕ್ಷಿತಾ, ನಕ್ಕ ಧ್ರುವಂತ್
ಡೆಂಟಲ್ ವಿದ್ಯಾರ್ಥಿನಿ ಆತ್ಮಹತ್ಯೆ: ಉಪನ್ಯಾಸಕನ ವಿರುದ್ಧ ತಾಯಿ ಗಂಭೀರ ಆರೋಪ
ಡೆಂಟಲ್ ವಿದ್ಯಾರ್ಥಿನಿ ಆತ್ಮಹತ್ಯೆ: ಉಪನ್ಯಾಸಕನ ವಿರುದ್ಧ ತಾಯಿ ಗಂಭೀರ ಆರೋಪ
ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಬಗ್ಗೆ ಸತೀಶ್ ಜಾರಕಿಹೊಳಿ ಸ್ಫೋಟಕ ಹೇಳಿಕೆ
ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಬಗ್ಗೆ ಸತೀಶ್ ಜಾರಕಿಹೊಳಿ ಸ್ಫೋಟಕ ಹೇಳಿಕೆ
ಬಿಳಿಗಿರಿರಂಗನ ಬೆಟ್ಟದಲ್ಲಿ ಅಗ್ನಿ ಅವಘಡ; ಅಂಗಡಿಗಳು ಭಸ್ಮ!
ಬಿಳಿಗಿರಿರಂಗನ ಬೆಟ್ಟದಲ್ಲಿ ಅಗ್ನಿ ಅವಘಡ; ಅಂಗಡಿಗಳು ಭಸ್ಮ!
KPCC ಅಧ್ಯಕ್ಷ ಸ್ಥಾನಕ್ಕೆ ಟವೆಲ್ ಹಾಕಿದ ರಾಜಣ್ಣ: ಮಾಜಿ ಸಚಿವರು ಏನಂದ್ರು?
KPCC ಅಧ್ಯಕ್ಷ ಸ್ಥಾನಕ್ಕೆ ಟವೆಲ್ ಹಾಕಿದ ರಾಜಣ್ಣ: ಮಾಜಿ ಸಚಿವರು ಏನಂದ್ರು?
ಕ್ಷುಲ್ಲಕ ಕಾರಣಕ್ಕೆ ನಡು ರಸ್ತೆಯಲ್ಲೇ ಮಾರಾಮಾರಿ: ಸ್ಥಳೀಯರಿಂದ ಬಿತ್ತು ಗೂಸಾ
ಕ್ಷುಲ್ಲಕ ಕಾರಣಕ್ಕೆ ನಡು ರಸ್ತೆಯಲ್ಲೇ ಮಾರಾಮಾರಿ: ಸ್ಥಳೀಯರಿಂದ ಬಿತ್ತು ಗೂಸಾ
ಸುಜಾತಾ ಹಂಡಿ ಕ್ರೂರತೆಯ ಮತ್ತಷ್ಟು ವಿಡಿಯೋ ವೈರಲ್
ಸುಜಾತಾ ಹಂಡಿ ಕ್ರೂರತೆಯ ಮತ್ತಷ್ಟು ವಿಡಿಯೋ ವೈರಲ್
ನಾನು ಸತ್ತು 47 ವರ್ಷವಾಗಿದೆ ಎಂದು ಕೂಗುತ್ತಾ ಪ್ರತಿಭಟಿಸಿದ ಇರಾನ್ ಮಹಿಳೆ
ನಾನು ಸತ್ತು 47 ವರ್ಷವಾಗಿದೆ ಎಂದು ಕೂಗುತ್ತಾ ಪ್ರತಿಭಟಿಸಿದ ಇರಾನ್ ಮಹಿಳೆ