‘Covid Emergency ದೇವಸ್ಥಾನಗಳ ಚಿನ್ನವನ್ನು ಸರ್ಕಾರ ತಕ್ಷಣವೇ ಪಡೆದುಕೊಳ್ಳಲಿ’

ಮುಂಬೈ: ಕೊರೊನಾ ಕ್ರಿಮಿಗೆ ಇಡೀ ವಿಶ್ವವೇ ತತ್ತರಿಸಿ ಹೋಗಿದೆ. ಮಹಾಮಾರಿಯಿಂದ ಆರ್ಥಿಕತೆಯೂ ಪಾತಾಳಕ್ಕೆ ಕುಸಿದಿದೆ. ಈ ನಡುವೆ ಇತ್ತೀಚೆಗಷ್ಟೇ ಪ್ರಧಾನಿ ನರೇಂದ್ರ ಮೋದಿ ಅವರು 20 ಲಕ್ಷ ಕೋಟಿ ರೂಪಾಯಿ ಪ್ಯಾಕೇಜ್ ಘೋಷಣೆ ಮಾಡಿದ್ದಾರೆ. ಇಂತಹ ಸಂದರ್ಭದಲ್ಲಿ ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಪೃಥ್ವಿರಾಜ್‌ ಚೌಹಾಣ್ ವಿವಾದಾತ್ಮಕ ಹೇಳಿಕೆಯೊಂದನ್ನ ನೀಡಿದ್ದಾರೆ. ವರ್ಲ್ಡ್ ಗೋಲ್ಡ್ ಕೌನ್ಸಿಲ್ ಮಾಹಿತಿ ಪ್ರಕಾರ ದೇಶದ ದೇವಾಲಯಗಳಲ್ಲಿ ಒಂದು ಟ್ರಿಲಿಯನ್ ಡಾಲರ್ ಅಂದ್ರೆ 75 ಲಕ್ಷ ಕೋಟಿ ಮೌಲ್ಯದ ಚಿನ್ನ ಇದೆ. ದೇಶದಲ್ಲಿ ಇದು ತುರ್ತು […]

‘Covid Emergency ದೇವಸ್ಥಾನಗಳ ಚಿನ್ನವನ್ನು ಸರ್ಕಾರ ತಕ್ಷಣವೇ ಪಡೆದುಕೊಳ್ಳಲಿ’
ಸಾಧು ಶ್ರೀನಾಥ್​

Updated on: May 15, 2020 | 2:48 PM

ಮುಂಬೈ: ಕೊರೊನಾ ಕ್ರಿಮಿಗೆ ಇಡೀ ವಿಶ್ವವೇ ತತ್ತರಿಸಿ ಹೋಗಿದೆ. ಮಹಾಮಾರಿಯಿಂದ ಆರ್ಥಿಕತೆಯೂ ಪಾತಾಳಕ್ಕೆ ಕುಸಿದಿದೆ. ಈ ನಡುವೆ ಇತ್ತೀಚೆಗಷ್ಟೇ ಪ್ರಧಾನಿ ನರೇಂದ್ರ ಮೋದಿ ಅವರು 20 ಲಕ್ಷ ಕೋಟಿ ರೂಪಾಯಿ ಪ್ಯಾಕೇಜ್ ಘೋಷಣೆ ಮಾಡಿದ್ದಾರೆ. ಇಂತಹ ಸಂದರ್ಭದಲ್ಲಿ ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಪೃಥ್ವಿರಾಜ್‌ ಚೌಹಾಣ್ ವಿವಾದಾತ್ಮಕ ಹೇಳಿಕೆಯೊಂದನ್ನ ನೀಡಿದ್ದಾರೆ.

ವರ್ಲ್ಡ್ ಗೋಲ್ಡ್ ಕೌನ್ಸಿಲ್ ಮಾಹಿತಿ ಪ್ರಕಾರ ದೇಶದ ದೇವಾಲಯಗಳಲ್ಲಿ ಒಂದು ಟ್ರಿಲಿಯನ್ ಡಾಲರ್ ಅಂದ್ರೆ 75 ಲಕ್ಷ ಕೋಟಿ ಮೌಲ್ಯದ ಚಿನ್ನ ಇದೆ. ದೇಶದಲ್ಲಿ ಇದು ತುರ್ತು ಪರಿಸ್ಥಿತಿ ಸಂದರ್ಭವಾಗಿದೆ. ಹಾಗಾಗಿ ಕಡಿಮೆ ಬಡ್ಡಿ ದರಕ್ಕೆ ಗೋಲ್ಡ್ ಪಡೆದುಕೊಳ್ಳಬಹುದು‌‌. ದೇವಾಲಯ, ಧಾರ್ಮಿಕ ಟ್ರಸ್ಟ್​ಗಳಲ್ಲಿರುವ ಚಿನ್ನವನ್ನು ಸರ್ಕಾರ ತಕ್ಷಣವೇ ಪಡೆದುಕೊಳ್ಳಲಿ ಎಂದು ಪೃಥ್ವಿರಾಜ್‌ ಚೌಹಾಣ್ ಟ್ವೀಟ್ ಮಾಡಿದ್ದಾರೆ.

ಚೌಹಾಣ್ ಟ್ವೀಟ್​ಗೆ ಬಿಜೆಪಿ ಆಕ್ಷೇಪ:

ಕಾಂಗ್ರೆಸ್ ಯಾವಾಗಲೂ ಹಿಂದೂ ದೇವಾಲಯಗಳ ಚಿನ್ನದ ಮೇಲೆಯೇ ಕಣ್ಣಿಟ್ಟಿದೆ ಎಂದು ಪೃಥ್ವಿರಾಜ್‌ ಚೌಹಾಣ್ ಟ್ವೀಟ್​ಗೆ ಬಿಜೆಪಿ ನಾಯಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಚಿನ್ನ ಅಡಮಾನ ಯೋಜನೆಯನ್ನ ವಾಜಪೇಯಿ ಸರ್ಕಾರವೇ ಆರಂಭಿಸಿತ್ತು ಎಂದು ಪ್ರತಿಕ್ರಿಯಿಸಿದ್ದಾರೆ.

ಕೇಂದ್ರ ಸರ್ಕಾರವೇ ಲೋಕಸಭೆಗೆ ನೀಡಿರುವ ಮಾಹಿತಿ ಪ್ರಕಾರ ಬಹಳಷ್ಟು ದೇವಾಲಯಗಳು ಈಗಾಗಲೇ ಚಿನ್ನ ಅಡಮಾನ ಮಾಡಿವೆ ಎಂದು ದಾಖಲೆ ಬಿಡುಗಡೆ ಮಾಡಿದರು. ಇದೇ ವೇಳೆ ನನ್ನ ಹೇಳಿಕೆಗೆ ಉದ್ದೇಶಪೂರ್ವಕವಾಗಿ ಕೋಮು ಬಣ್ಣ ನೀಡಿದರೆ ಸೂಕ್ತ ಕ್ರಮ ಕೈಗೊಳ್ಳುವೆ ಎಂದು ಚೌಹಾಣ್ ಎಚ್ಚರಿಕೆ ನೀಡಿದ್ದಾರೆ.

Published On - 2:47 pm, Fri, 15 May 20

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us