AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗಗನಕ್ಕೇರುತ್ತಲೇ ಇದೆ ಚಿನ್ನದ ಬೆಲೆ, ಬೆಳ್ಳಿ ಎಷ್ಟು?

ನವದೆಹಲಿ: ಎಲ್ಲೆಡೆ ಕೊರೊನಾ ಹಾವಳಿಯಿಂದಾಗಿ ಮಾರುಕಟ್ಟೆ ಕುಸಿತ ಕಾಣುತ್ತಿದ್ರೆ, ಬಂಗಾರದ ಬೆಲೆ ಮಾತ್ರ ನಾಗಾಲೋಟದಲ್ಲಿ ಏರುತ್ತಲೆ ಇದೆ. ಇದುವರೆಗಿನ ಎಲ್ಲಾ ದಾಖಲೆಗಳನ್ನು ಮುರಿದು ಬಂಗಾರದ ಬೆಲೆ ಗಗನಕ್ಕೇರಿದೆ. ಹೌದು, ಬಂಗಾರದ ಬೆಲೆ ಈಗ ಗಗನಕ್ಕೇರಿದೆ. ಶುಕ್ರವಾರ ರಾತ್ರಿ  ಸರಕು ಮಾರುಕಟ್ಟೆ ಮುಕ್ತಾಯದ ಹೊತ್ತಿಗೆ ಬಂಗಾರದ ಬೆಲೆ ಭಾರತದಲ್ಲಿ 10 ಗ್ರಾಮ್‌ಗೆ 57,008 ರೂಪಾಯಿಗೆ ಏರಿದೆ. ಇದು ಇದುವರೆಗಿನ ದಾಖಲೆಯ ಬೆಲೆ. ಕಳೆದ 16 ವಾರಗಳಿಂದ ಬಂಗಾರದ ಬೆಲೆ ಇದೇ ರೀತಿ ಏರುತ್ತಲೇ ಇದೆ. ಒಮ್ಮೆಯೂ ಬೆಲೆಯಲ್ಲಿ ಇಳಿಕೆ […]

ಗಗನಕ್ಕೇರುತ್ತಲೇ ಇದೆ ಚಿನ್ನದ ಬೆಲೆ, ಬೆಳ್ಳಿ ಎಷ್ಟು?
Guru
| Edited By: |

Updated on: Aug 08, 2020 | 3:50 PM

Share

ನವದೆಹಲಿ: ಎಲ್ಲೆಡೆ ಕೊರೊನಾ ಹಾವಳಿಯಿಂದಾಗಿ ಮಾರುಕಟ್ಟೆ ಕುಸಿತ ಕಾಣುತ್ತಿದ್ರೆ, ಬಂಗಾರದ ಬೆಲೆ ಮಾತ್ರ ನಾಗಾಲೋಟದಲ್ಲಿ ಏರುತ್ತಲೆ ಇದೆ. ಇದುವರೆಗಿನ ಎಲ್ಲಾ ದಾಖಲೆಗಳನ್ನು ಮುರಿದು ಬಂಗಾರದ ಬೆಲೆ ಗಗನಕ್ಕೇರಿದೆ.

ಹೌದು, ಬಂಗಾರದ ಬೆಲೆ ಈಗ ಗಗನಕ್ಕೇರಿದೆ. ಶುಕ್ರವಾರ ರಾತ್ರಿ  ಸರಕು ಮಾರುಕಟ್ಟೆ ಮುಕ್ತಾಯದ ಹೊತ್ತಿಗೆ ಬಂಗಾರದ ಬೆಲೆ ಭಾರತದಲ್ಲಿ 10 ಗ್ರಾಮ್‌ಗೆ 57,008 ರೂಪಾಯಿಗೆ ಏರಿದೆ. ಇದು ಇದುವರೆಗಿನ ದಾಖಲೆಯ ಬೆಲೆ. ಕಳೆದ 16 ವಾರಗಳಿಂದ ಬಂಗಾರದ ಬೆಲೆ ಇದೇ ರೀತಿ ಏರುತ್ತಲೇ ಇದೆ. ಒಮ್ಮೆಯೂ ಬೆಲೆಯಲ್ಲಿ ಇಳಿಕೆ ಕಂಡಿಲ್ಲ.

ಬಂಗಾರದ ಜೊತೆಗೆ ಬೆಳ್ಳಿಯ ಬೆಲೆಯೂ ಗಗನಕ್ಕೇರುತ್ತಿದೆ. ಗುರುವಾರ ಮಾರುಕಟ್ಟೆ ಮುಕ್ತಾಯದ ಹೊತ್ತಿಗೆ ಬೆಳ್ಳಿಯ ಬೆಲೆ ಪ್ರತಿ ಕಿ. ಗ್ರಾಂ.ಗೆ 576 ರೂ.ಗಳಷ್ಟು ಹೆಚ್ಚಾಗಿದೆ. ಅಂದ್ರೆ ಪ್ರತಿ ಕಿ.ಗ್ರಾ ಬೆಳ್ಳಿಯ ಬೆಲೆ ಈಗ 77,840 ರೂಪಾಯಿಯಷ್ಟಿದೆ. ಬೆಳ್ಳಿಯ ಬೆಲೆ ಕೂಡಾ ಕಳೆದ ಕೆಲ ದಿನಗಳಿಂದ ಏರುತ್ತಲೇ ಇದೆ.

ಭಾರತದಲ್ಲಿ ಚಿನ್ನ ಮತ್ತು ಬೆಳ್ಳಿಯ ಬೆಲೆ ಈ ರೀತಿ ನಾಗಾಲೋಟದಲ್ಲಿ ಏರುತ್ತಿದ್ರೆ, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಮಾತ್ರ ಚಿನ್ನದ ಬೆಲೆ ಅಷ್ಟಕ್ಕಷ್ಟೆ ಇದೆ. ಅಂದ್ರೆ ಸಾಮಾನ್ಯ ಸಮಯದಲ್ಲಿರುವುದಕ್ಕಿಂತ ಕಡಿಮೆ ಇದೆ. ಚಿನ್ನ ಅಮೆರಿಕದ ಡಾಲರ್‌ ಮೌಲ್ಯದಲ್ಲಿ ಪ್ರತಿ ಔನ್ಸ್‌ಗೆ 2,061 ಯುಎಸ್ ‌ಡಾಲರ್‌ ಇದ್ರೆ, ಬೆಳ್ಳಿ ಪ್ರತಿ ಔನ್ಸ್‌ಗೆ 28.36 ಯುಎಸ್‌ ಡಾಲರ್‌ನಷ್ಟಿದೆ.

ಚಕ್ರವರ್ತಿ ಚಂದ್ರಚೂಡ್ ವಿಡಿಯೋ ನೋಡಿ ಅಸಹ್ಯ ಆಯ್ತು: ನಟಿ ಪ್ರಿಯಾ ಹಾಸನ್
ಚಕ್ರವರ್ತಿ ಚಂದ್ರಚೂಡ್ ವಿಡಿಯೋ ನೋಡಿ ಅಸಹ್ಯ ಆಯ್ತು: ನಟಿ ಪ್ರಿಯಾ ಹಾಸನ್
ವಿಪಕ್ಷ ಶಾಸಕರ ಮಾತಿಗೆ ಸಿಎಂ ಸಿದ್ದರಾಮಯ್ಯ ಖಡಕ್ ಉತ್ತರ, ಸದನ ಫುಲ್ ಸೈಲೆಂಟ್
ವಿಪಕ್ಷ ಶಾಸಕರ ಮಾತಿಗೆ ಸಿಎಂ ಸಿದ್ದರಾಮಯ್ಯ ಖಡಕ್ ಉತ್ತರ, ಸದನ ಫುಲ್ ಸೈಲೆಂಟ್
ಟೀ, ಸಿಗರೇಟ್​​ ನೆಪದಲ್ಲಿ ಅಂಗಡಿಗೆ ಬಂದು ಮಾಂಗಲ್ಯ ಸರ ಕದ್ದು ಎಸ್ಕೇಪ್​!
ಟೀ, ಸಿಗರೇಟ್​​ ನೆಪದಲ್ಲಿ ಅಂಗಡಿಗೆ ಬಂದು ಮಾಂಗಲ್ಯ ಸರ ಕದ್ದು ಎಸ್ಕೇಪ್​!
ಕನಕೋತ್ಸವ ವೇದಿಕೆಯಲ್ಲಿ ಗಿಲ್ಲಿ, ಮಂಗ್ಲಿ ಮಸ್ತ್ ಮನರಂಜನೆ; ವಿಡಿಯೋ ನೋಡಿ
ಕನಕೋತ್ಸವ ವೇದಿಕೆಯಲ್ಲಿ ಗಿಲ್ಲಿ, ಮಂಗ್ಲಿ ಮಸ್ತ್ ಮನರಂಜನೆ; ವಿಡಿಯೋ ನೋಡಿ
ರಾಯಲ್ ಸ್ಟ್ರಾಂಗ್ ಅಂತ ಬಿಯರ್ ಇದೆ ಕಣ್ಣಯ್ಯ:ಸದನದಲ್ಲಿ ಅಶೋಕ್‌-ಸಿಎಂ ಕಾಮಿಡಿ
ರಾಯಲ್ ಸ್ಟ್ರಾಂಗ್ ಅಂತ ಬಿಯರ್ ಇದೆ ಕಣ್ಣಯ್ಯ:ಸದನದಲ್ಲಿ ಅಶೋಕ್‌-ಸಿಎಂ ಕಾಮಿಡಿ
ವಿದ್ಯಾರ್ಥಿಗಳಿಗೆ ಶಾಕ್​​: ಸಾಂಬಾರಿನಲ್ಲಿ ನುಸಿ ಹುಳ ಪತ್ತೆ
ವಿದ್ಯಾರ್ಥಿಗಳಿಗೆ ಶಾಕ್​​: ಸಾಂಬಾರಿನಲ್ಲಿ ನುಸಿ ಹುಳ ಪತ್ತೆ
ಮಕ್ಕಳನ್ನು ರಸ್ತೆಗೆ ಬಿಡುವ ಮುನ್ನ ಎಚ್ಚರ!
ಮಕ್ಕಳನ್ನು ರಸ್ತೆಗೆ ಬಿಡುವ ಮುನ್ನ ಎಚ್ಚರ!
ದೇವಸ್ಥಾನದ ಸುಪ್ರಭಾತ ಹಾಡು ಹಾಕಿದಕ್ಕೆ ಮುಸ್ಲಿಂ ಯವಕನಿಂದ ಕಿರಿಕ್
ದೇವಸ್ಥಾನದ ಸುಪ್ರಭಾತ ಹಾಡು ಹಾಕಿದಕ್ಕೆ ಮುಸ್ಲಿಂ ಯವಕನಿಂದ ಕಿರಿಕ್
ನಟ ಯಶ್​ ತಾಯಿ ಜಾಗ ವಿವಾದಕ್ಕೆ ಟ್ವಿಸ್ಟ್​​: ಒಂದೇ ಸೈಟ್​​ಗೆ ಎರಡು ದಾಖಲೆ?
ನಟ ಯಶ್​ ತಾಯಿ ಜಾಗ ವಿವಾದಕ್ಕೆ ಟ್ವಿಸ್ಟ್​​: ಒಂದೇ ಸೈಟ್​​ಗೆ ಎರಡು ದಾಖಲೆ?
ಬಾಯಿಯ ಆರೋಗ್ಯ ಚೆನ್ನಾಗಿಲ್ಲದಿದ್ದರೆ ಹೃದಯದ ಆಯಸ್ಸು ಕಡಿಮೆಯಾಗುತ್ತಾ?
ಬಾಯಿಯ ಆರೋಗ್ಯ ಚೆನ್ನಾಗಿಲ್ಲದಿದ್ದರೆ ಹೃದಯದ ಆಯಸ್ಸು ಕಡಿಮೆಯಾಗುತ್ತಾ?