AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Google Doodle: ವೈಜ್ಞಾನಿಕ ಕ್ಷೇತ್ರದಲ್ಲಿ ಪಿಎಚ್‌ಡಿ ಪಡೆದ ಭಾರತೀಯ ಮೊದಲ ಮಹಿಳೆ ಡಾ ಕಮಲಾ ಸೊಹೊನಿಗೆ ಗೂಗಲ್ ಗೌರವ

ವೈಜ್ಞಾನಿಕ ಕ್ಷೇತ್ರದಲ್ಲಿ ಪಿಎಚ್‌ಡಿ ಪಡೆದ ಭಾರತೀಯ ಮೊದಲ ಮಹಿಳೆ ಡಾ ಕಮಲಾ ಸೊಹೊನಿಯವರನ್ನು ಗೂಗಲ್ ಸ್ಮರಿಸಿದೆ. ಇಂದು ಗೂಗಲ್ ಕಮಲಾ ಸೊಹೊನಿಗೆ ಸಂಬಂಧಿಸಿದ ಡೂಡಲ್ ಒಂದನ್ನು ರೂಪಿಸಿದೆ.

Google Doodle: ವೈಜ್ಞಾನಿಕ ಕ್ಷೇತ್ರದಲ್ಲಿ ಪಿಎಚ್‌ಡಿ ಪಡೆದ ಭಾರತೀಯ ಮೊದಲ ಮಹಿಳೆ ಡಾ ಕಮಲಾ ಸೊಹೊನಿಗೆ ಗೂಗಲ್ ಗೌರವ
ಗೂಗಲ್ ಡೂಡಲ್
Follow us
ನಯನಾ ರಾಜೀವ್
|

Updated on: Jun 18, 2023 | 9:06 AM

ವೈಜ್ಞಾನಿಕ ಕ್ಷೇತ್ರದಲ್ಲಿ ಪಿಎಚ್‌ಡಿ ಪಡೆದ ಭಾರತೀಯ ಮೊದಲ ಮಹಿಳೆ ಡಾ ಕಮಲಾ ಸೊಹೊನಿಯವರನ್ನು ಗೂಗಲ್ ಸ್ಮರಿಸಿದೆ. ಇಂದು ಗೂಗಲ್ ಕಮಲಾ ಸೊಹೊನಿಗೆ ಸಂಬಂಧಿಸಿದ ಡೂಡಲ್ ಒಂದನ್ನು ರೂಪಿಸಿದೆ. ಕಮಲಾ ಸೊಹೋನಿ ವೈಜ್ಞಾನಿಕ ಕ್ಷೇತ್ರ ಪಿಎಚ್‌ಡಿ ಪದವಿ ಪಡೆದ ಭಾರತದ ಮೊದಲ ಮಹಿಳೆ. ಗೂಗಲ್ ಅವರ 112ನೇ ಜನ್ಮದಿನವನ್ನು ಇಂದು ಆಚರಿಸುತ್ತಿದೆ. ದೇಶದ ಮೊದಲ ಮಹಿಳಾ ವಿಜ್ಞಾನಿ ಕಮಲಾ ಸೊಹೊನಿ ಅವರು ಭಾರತದ ಪ್ರತಿಷ್ಠಿತ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ ಬೆಂಗಳೂರಿನಲ್ಲಿ (IISc) ಪ್ರವೇಶ ಪಡೆದ ಭಾರತದ ಮೊದಲ ಮಹಿಳೆ.

ಓದುವ ಹಂಬಲವಿದ್ದು ಧೈರ್ಯವಿಲ್ಲದೆ ಕುಳಿತಿದ್ದ ಎಷ್ಟೋ ಹೆಣ್ಣುಮಕ್ಕಳಿಗೆ ದಾರಿದೀಪವಾಗಿದ್ದಾರೆ. IISc ಅನ್ನು ದೇಶದ ಅತ್ಯುತ್ತಮ ಸಂಸ್ಥೆ ಎಂದು ಪರಿಗಣಿಸಲಾಗಿದೆ, ಸೊಹೊನಿ ಪಿಎಚ್‌ಡಿ ಮಾಡಿದ ಮೊದಲ ಭಾರತೀಯ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

ಮತ್ತಷ್ಟು ಓದಿ: Google Doodle: ಅಲೆನ್​ ರಿಕ್​ಮ್ಯಾನ್​ಗೆ ಗೂಗಲ್​ ಡೂಡಲ್​ ಮೂಲಕ ಗೌರವ ಸಲ್ಲಿಕೆ; ನಟನ ಸಾಧನೆ ಬಗ್ಗೆ ಇಲ್ಲಿದೆ ಮಾಹಿತಿ

ಕಮಲಾ ಸೊಹೊನಿ ಅವರು ನೀರಾ ಕೃತಿಗಾಗಿ ರಾಷ್ಟ್ರಪತಿ ಪ್ರಶಸ್ತಿಯನ್ನು ಪಡೆದರು ಮತ್ತು ಬಾಂಬೆಯ ರಾಯಲ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್‌ನ ಮೊದಲ ಮಹಿಳಾ ನಿರ್ದೇಶಕಿ ಕೂಡ ಆಗಿದ್ದರು. ಶಕ್ತಿ ಉತ್ಪಾದನೆಗೆ ಪ್ರಮುಖವಾದ ಕಿಣ್ವವಾದ ಸೈಟೋಕ್ರೋಮ್ ಸಿ ಅನ್ನು ಸೊಹೋನಿ ಕಂಡುಹಿಡಿದರು ಮತ್ತು ಎಲ್ಲಾ ಸಸ್ಯ ಕೋಶಗಳಲ್ಲಿ ಅದನ್ನು ಕಂಡುಕೊಂಡರು.

ಕಮಲಾ ಸೊಹೊನಿ ಅವರು 1912 ರಲ್ಲಿ ಭಾರತದ ಮಧ್ಯಪ್ರದೇಶದ ಇಂದೋರ್‌ನಲ್ಲಿ ಜನಿಸಿದರು. ಆಕೆಯ ತಂದೆ ನಾರಾಯಣರಾವ್ ಭಾಗವತ್ ರಸಾಯನಶಾಸ್ತ್ರಜ್ಞರಾಗಿದ್ದರು. ಕಮಲಾ ಅವರು 1933 ರಲ್ಲಿ ಬಾಂಬೆ ವಿಶ್ವವಿದ್ಯಾನಿಲಯದಿಂದ ರಸಾಯನಶಾಸ್ತ್ರ (ಪ್ರಧಾನ) ಮತ್ತು ಭೌತಶಾಸ್ತ್ರ (ಅನುಬಂಧ) ಬಿ.ಎಸ್ಸಿ ಪದವಿಯನ್ನು ಪಡೆದರು.

ನಂತರ ಅವರು ಸಂಶೋಧನಾ ಫೆಲೋಶಿಪ್‌ಗಾಗಿ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್‌ಗೆ ಅರ್ಜಿ ಸಲ್ಲಿಸಿದರು, ಆದರೆ ಆಕೆಯ ಅರ್ಜಿಯನ್ನು ಆಗಿನ ನಿರ್ದೇಶಕ ಪ್ರೊ.ಸಿ.ವಿ.ರಾಮನ್ ಅವರು ಸಂಶೋಧನೆಯನ್ನು ಮುಂದುವರಿಸಲು ಸಾಕಷ್ಟು ಸಮರ್ಥರಲ್ಲ ಎಂಬ ಕಾರಣಕ್ಕಾಗಿ ತಿರಸ್ಕರಿಸಿದರು. ಕೆಲವು ಮನವೊಲಿಕೆಯ ನಂತರ, ಅವರಿಗೆ IISc ನಲ್ಲಿ ಪ್ರವೇಶ ನೀಡಲಾಯಿತು.

ಅವರ ಸಂಶೋಧನೆಯು ವಿಟಮಿನ್‌ಗಳ ಪರಿಣಾಮಗಳನ್ನು ಮತ್ತು ದ್ವಿದಳ ಧಾನ್ಯಗಳು, ಭತ್ತ ಮತ್ತು ಭಾರತೀಯ ಜನಸಂಖ್ಯೆಯ ಕೆಲವು ಬಡ ವರ್ಗಗಳು ಸೇವಿಸುವ ಆಹಾರ ಪದಾರ್ಥಗಳ ಪೌಷ್ಠಿಕಾಂಶದ ಮೌಲ್ಯಗಳನ್ನು ಪರಿಶೋಧಿಸಿತು. ಅವರ ಕೃತಿಗೆ ರಾಷ್ಟ್ರಪತಿ ಪ್ರಶಸ್ತಿ ಲಭಿಸಿತು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ಸ್ಮಶಾನವಾದ ಚಿನ್ನಸ್ವಾಮಿ ಸ್ಟೇಡಿಯಂ, ದುರಂತಕ್ಕೆ ಸಾಕ್ಷಿಯಾದ ರಾಶಿ ಚಪ್ಪಲಿ
ಸ್ಮಶಾನವಾದ ಚಿನ್ನಸ್ವಾಮಿ ಸ್ಟೇಡಿಯಂ, ದುರಂತಕ್ಕೆ ಸಾಕ್ಷಿಯಾದ ರಾಶಿ ಚಪ್ಪಲಿ
Daily Devotional: ಸಹವಾಸದಿಂದ ಏನೆಲ್ಲಾ ಪ್ರಭಾವ ಬೀರುತ್ತೆ ಗೊತ್ತಾ?
Daily Devotional: ಸಹವಾಸದಿಂದ ಏನೆಲ್ಲಾ ಪ್ರಭಾವ ಬೀರುತ್ತೆ ಗೊತ್ತಾ?
Daily Horoscope: ಈ ರಾಶಿಯವರಿಗೆ ಇಂದು ಐದು ಗ್ರಹಗಳ ಅಶುಭ ಫಲ
Daily Horoscope: ಈ ರಾಶಿಯವರಿಗೆ ಇಂದು ಐದು ಗ್ರಹಗಳ ಅಶುಭ ಫಲ
RCB ವಿಜಯ ಸಂಭ್ರಮಾಚರಣೆ ವೇಳೆ ಕಾಲ್ತುಳಿತ, ಪ್ರತ್ಯಕ್ಷದರ್ಶಿ ಹೇಳಿದ್ದಿಷ್ಟು
RCB ವಿಜಯ ಸಂಭ್ರಮಾಚರಣೆ ವೇಳೆ ಕಾಲ್ತುಳಿತ, ಪ್ರತ್ಯಕ್ಷದರ್ಶಿ ಹೇಳಿದ್ದಿಷ್ಟು
ಪ್ರತಿಯೊಬ್ಬ ಪ್ರಜೆಗೂ ನೋವಾಗಿದೆ: ಕಾಲ್ತುಳಿತ ದುರಂತಕ್ಕೆ ಮರುಗಿದ ನಿಖಿಲ್
ಪ್ರತಿಯೊಬ್ಬ ಪ್ರಜೆಗೂ ನೋವಾಗಿದೆ: ಕಾಲ್ತುಳಿತ ದುರಂತಕ್ಕೆ ಮರುಗಿದ ನಿಖಿಲ್
ಮಗಳು ಕಾಲ್ತುಳಿತಕ್ಕೊಳಗಾಗಿ ಸತ್ತಿದ್ದು ಒಬ್ಬ ಮಹಿಳೆಗೆ ಗೊತ್ತೇ ಇರಲಿಲ್ಲವಂತೆ
ಮಗಳು ಕಾಲ್ತುಳಿತಕ್ಕೊಳಗಾಗಿ ಸತ್ತಿದ್ದು ಒಬ್ಬ ಮಹಿಳೆಗೆ ಗೊತ್ತೇ ಇರಲಿಲ್ಲವಂತೆ
ಚಿನ್ನಸ್ವಾಮಿ ಸ್ಟೇಡಿಯಂ ಹೊರಗೆ ಚೆಲ್ಲಾಪಿಲ್ಲಿಯಾಗಿ ಬಿದ್ದ ಚಪ್ಪಲಿಗಳ ರಾಶಿ
ಚಿನ್ನಸ್ವಾಮಿ ಸ್ಟೇಡಿಯಂ ಹೊರಗೆ ಚೆಲ್ಲಾಪಿಲ್ಲಿಯಾಗಿ ಬಿದ್ದ ಚಪ್ಪಲಿಗಳ ರಾಶಿ
ಪೊಲೀಸರನ್ನು ದೂರುವುದು ಬೇಡ, ಅವರಿಂದ ಉತ್ತಮ ಕೆಲಸವಾಗಿದೆ: ಶಿವಕುಮಾರ್
ಪೊಲೀಸರನ್ನು ದೂರುವುದು ಬೇಡ, ಅವರಿಂದ ಉತ್ತಮ ಕೆಲಸವಾಗಿದೆ: ಶಿವಕುಮಾರ್
ನೀವೇ ನಮ್ಮ ಜೀವ ಸ್ವರ; ಅಭಿಮಾನಿಗಳ ಅಭಿಮಾನಕ್ಕೆ ಮನಸೋತ ಆರ್​ಸಿಬಿ
ನೀವೇ ನಮ್ಮ ಜೀವ ಸ್ವರ; ಅಭಿಮಾನಿಗಳ ಅಭಿಮಾನಕ್ಕೆ ಮನಸೋತ ಆರ್​ಸಿಬಿ
ಬಸ್ ಹಿಂದಕ್ಕೆ ಚಲಿಸುತ್ತಿದ್ದಾಗ ಪೊಲೀಸರ ಸಮಯಪ್ರಜ್ಞೆಯಿಂದ ತಪ್ಪಿದ ಅನಾಹುತ
ಬಸ್ ಹಿಂದಕ್ಕೆ ಚಲಿಸುತ್ತಿದ್ದಾಗ ಪೊಲೀಸರ ಸಮಯಪ್ರಜ್ಞೆಯಿಂದ ತಪ್ಪಿದ ಅನಾಹುತ