AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭಾರತ ಅಮೆರಿಕ ನೇತೃತ್ವದ ಆರ್ಟೆಮಿಸ್ ತಂಡದ ಭಾಗವಾಗಬೇಕಿದೆ: ನಾಸಾದ ಉನ್ನತ ಅಧಿಕಾರಿ

ಆರ್ಟೆಮಿಸ್ ಒಪ್ಪಂದಗಳಿಗೆ ಸಹಿ ಮಾಡುವುದು ಭಾರತಕ್ಕೆ ಆದ್ಯತೆಯಾಗಿರಬೇಕು ಎಂದು ನಾನು ಭಾವಿಸುತ್ತೇನೆ. ಅಂದರೆ, ಭಾರತವು ಜಾಗತಿಕ ಶಕ್ತಿ ಎಂದು ನಾಸಾ ಭಾವಿಸುತ್ತದೆ. ಇದು ಬಾಹ್ಯಾಕಾಶಕ್ಕೆ ಸ್ವತಂತ್ರ ಪ್ರವೇಶವನ್ನು ಹೊಂದಿರುವ ಕೆಲವೇ ದೇಶಗಳಲ್ಲಿ ಒಂದಾಗಿದ್ದು, ಅಭಿವೃದ್ಧಿ ಹೊಂದುತ್ತಿರುವ ಉಡಾವಣಾ ಉದ್ಯಮವನ್ನು ಹೊಂದಿದೆ

ಭಾರತ ಅಮೆರಿಕ ನೇತೃತ್ವದ ಆರ್ಟೆಮಿಸ್ ತಂಡದ ಭಾಗವಾಗಬೇಕಿದೆ: ನಾಸಾದ ಉನ್ನತ ಅಧಿಕಾರಿ
ಭವ್ಯ ಲಾಲ್
ರಶ್ಮಿ ಕಲ್ಲಕಟ್ಟ
|

Updated on:Jun 17, 2023 | 7:52 PM

Share

ಜಾಗತಿಕ ಶಕ್ತಿಯಾಗಿರುವ ಮತ್ತು ಬಾಹ್ಯಾಕಾಶಕ್ಕೆ ಸ್ವತಂತ್ರ ಪ್ರವೇಶ ಹೊಂದಿರುವ ಕೆಲವೇ ದೇಶಗಳಲ್ಲಿ ಒಂದಾಗಿರುವ ಭಾರತ, ನಾಗರಿಕ ಬಾಹ್ಯಾಕಾಶ ಪರಿಶೋಧನೆಯಲ್ಲಿ ಸಮಾನ ಮನಸ್ಕ ರಾಷ್ಟ್ರಗಳನ್ನು ಒಟ್ಟುಗೂಡಿಸುವ ಆರ್ಟೆಮಿಸ್ (Artemis) ತಂಡದ ಭಾಗವಾಗಬೇಕಾಗಿದೆ ಎಂದು ನಾಸಾದ (NASA) ಉನ್ನತ ಅಧಿಕಾರಿಯೊಬ್ಬರು ಹೇಳಿದ್ದಾರೆ. 1967 ರ ಬಾಹ್ಯಾಕಾಶ ಒಪ್ಪಂದದ (OST) ಆಧಾರದಲ್ಲಿ, ಆರ್ಟೆಮಿಸ್ ಒಪ್ಪಂದಗಳು 21 ನೇ ಶತಮಾನದಲ್ಲಿ ನಾಗರಿಕ ಬಾಹ್ಯಾಕಾಶ ಪರಿಶೋಧನೆ ಮತ್ತು ಬಳಕೆಗೆ ಮಾರ್ಗದರ್ಶನ ನೀಡಲು ವಿನ್ಯಾಸಗೊಳಿಸಲಾಗಿದೆ. 2025 ರ ವೇಳೆಗೆ ಮಾನವರನ್ನು ಚಂದ್ರನತ್ತ ಕಳುಹಿಸುವ ಅಮೆರಿಕ ನೇತೃತ್ವದ ಪ್ರಯತ್ನವಾಗಿದೆ. ಮೇ 2023 ರ ಹೊತ್ತಿಗೆ, ಆರ್ಟೆಮಿಸ್ ಒಪ್ಪಂದಗಳಿಗೆ 25 ರಾಷ್ಚ್ರಗಳು ಸಹಿ ಹಾಕಿದ್ದಾರೆ. 26ನೇ ದೇಶ ಭಾರತ ಆಗಬಹುದು ಎಂದು ನಾಸಾ ನಿರ್ವಾಹಕರ ಕಚೇರಿಯೊಳಗಿನ ತಂತ್ರಜ್ಞಾನ, ನೀತಿ ಮತ್ತು ಕಾರ್ಯತಂತ್ರದ ಸಹಾಯಕ ನಿರ್ವಾಹಕರಾದ ಭವ್ಯ ಲಾಲ್ ಹೇಳಿರುವುದಾಗಿ ಪಿಟಿಐ ವರದಿ ಮಾಡಿದೆ.

ಆರ್ಟೆಮಿಸ್ ಒಪ್ಪಂದಗಳಿಗೆ ಸಹಿ ಮಾಡುವುದು ಭಾರತಕ್ಕೆ ಆದ್ಯತೆಯಾಗಿರಬೇಕು ಎಂದು ನಾನು ಭಾವಿಸುತ್ತೇನೆ. ಅಂದರೆ, ಭಾರತವು ಜಾಗತಿಕ ಶಕ್ತಿ ಎಂದು ನಾಸಾ ಭಾವಿಸುತ್ತದೆ. ಇದು ಬಾಹ್ಯಾಕಾಶಕ್ಕೆ ಸ್ವತಂತ್ರ ಪ್ರವೇಶವನ್ನು ಹೊಂದಿರುವ ಕೆಲವೇ ದೇಶಗಳಲ್ಲಿ ಒಂದಾಗಿದ್ದು, ಅಭಿವೃದ್ಧಿ ಹೊಂದುತ್ತಿರುವ ಉಡಾವಣಾ ಉದ್ಯಮವನ್ನು ಹೊಂದಿದೆ.ಇದು ಆರ್ಟೆಮಿಸ್ ತಂಡದ ಭಾಗವಾಗಿರಬೇಕು ಎಂದು ಅವರು ಹೇಳಿದ್ದಾರೆ.

ಹಾಗಾಗಿ, ಒಂದೇ ರೀತಿಯ ಮೌಲ್ಯಗಳನ್ನು ಹೊಂದಿರುವ ಸಮಾನ ಮನಸ್ಕ ದೇಶಗಳು ಒಟ್ಟಾಗಿ ಅನ್ವೇಷಿಸಲು ಅವಕಾಶವನ್ನು ಹೊಂದಿರುವುದು ಪ್ರಯೋಜನವಾಗಿದೆ ಎಂದು ಲಾಲ್ ಹೇಳಿದರು.

ಇದನ್ನೂ ಓದಿ: 9 Years Of PM Modi: ನರೇಂದ್ರ ಮೋದಿ ಪ್ರಧಾನಿಯಾಗಿ 9 ವರ್ಷ ಪೂರೈಕೆ: ಬಿಜೆಪಿ ನಾಯಕರಿಂದ ರಾಜ್ಯ ಪ್ರವಾಸ

ಪ್ರಯೋಜನವೆಂದರೆ ಭಾರತವು ಜಾಗತಿಕ ಬಾಹ್ಯಾಕಾಶ ಶಕ್ತಿ ಎಂದು ಘೋಷಿಸುತ್ತದೆ ಮತ್ತು ಸುಸ್ಥಿರ ಅನ್ವೇಷಣೆ, ಬಾಹ್ಯಾಕಾಶದ ಜವಾಬ್ದಾರಿಯುತ ಬಳಕೆ, ಸಹಕಾರ ಮತ್ತು ಪಾರದರ್ಶಕತೆಯಂತಹ ವಿಷಯಗಳನ್ನು ಗೌರವಿಸುತ್ತದೆ ಎಂದು ಅವರು ಹೇಳಿದರು. ಮಥುರಾದಲ್ಲಿ ಹುಟ್ಟಿ ನವದೆಹಲಿಯಲ್ಲಿ ಬೆಳೆದ ಲಾಲ್, ಈ ಹಿಂದೆ ನಾಸಾದ ಕಾರ್ಯನಿರ್ವಹಣಾ ಮುಖ್ಯ ತಂತ್ರಜ್ಞರಾಗಿ ಸೇವೆ ಸಲ್ಲಿಸಿದ್ದರು. ನಾಸಾದ 60 ವರ್ಷಗಳ ಇತಿಹಾಸದಲ್ಲಿ ಈ ಹುದ್ದೆಯನ್ನು ಅಲಂಕರಿಸಿದ ಮೊದಲ ಮಹಿಳೆಯಾಗಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 7:50 pm, Sat, 17 June 23

ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!