AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Video: ಅರಣ್ಯಾಧಿಕಾರಿಗಳ ಮುಂದೆ ದೊಡ್ಡದಾಗಿ ಬಾಯಿ ಬಿಟ್ಟ ದೈತ್ಯ ಹೆಬ್ಬಾವು

Video: ಅರಣ್ಯಾಧಿಕಾರಿಗಳ ಮುಂದೆ ದೊಡ್ಡದಾಗಿ ಬಾಯಿ ಬಿಟ್ಟ ದೈತ್ಯ ಹೆಬ್ಬಾವು

ಅಕ್ಷಯ್​ ಪಲ್ಲಮಜಲು​​
|

Updated on:Dec 05, 2025 | 4:25 PM

Share

ಮೈಸೂರಿನ ನಂಜನಗೂಡು ತಾಲ್ಲೂಕಿನ ಮಹಾದೇವನಗರದ ಕೋಡಹಳ್ಳಿ ಬಳಿ ದೈತ್ಯ ಹೆಬ್ಬಾವು ಸೆರೆಹಿಡಿಯಲಾಗಿದೆ. ರೈತರ ಕುರಿ ಮತ್ತು ಮೇಕೆಗಳನ್ನು ನುಂಗಿ ಭಾರೀ ತೊಂದರೆ ನೀಡುತ್ತಿದ್ದ ಈ ಹೆಬ್ಬಾವು ರೈತರಲ್ಲಿ ಆತಂಕ ಸೃಷ್ಟಿಸಿತ್ತು. ಅರಣ್ಯ ಇಲಾಖೆ ಮತ್ತು ಉರಗ ತಜ್ಞ ಸಂಜಯ್ ಸಹಕಾರದಿಂದ ಇದನ್ನು ರಕ್ಷಿಸಲಾಗಿದ್ದು, ಇದರಿಂದ ರೈತರು ನಿಟ್ಟುಸಿರು ಬಿಟ್ಟಿದ್ದಾರೆ. ಹುಣಸೂರು ನಂತರ ಇದೇ ರೀತಿಯ ಘಟನೆ ಮೈಸೂರು ಭಾಗದಲ್ಲಿ ನಡೆದಿದೆ.

ಮೈಸೂರು, ಡಿ.5: ಹುಣಸೂರು ನಂತರ ನಂಜನಗೂಡು ತಾಲ್ಲೂಕಿನ ಮಹಾದೇವನಗರದ ಕೋಡಹಳ್ಳ ಸಮೀಪದಲ್ಲಿ ದೈತ್ಯ ಹೆಬ್ಬಾವನ್ನು ಸೆರೆಹಿಡಿಯಲಾಗಿದೆ. ರೈತರಲ್ಲಿ ಆತಂಕ ಸೃಷ್ಟಿಸಿದ್ದ ಭಾರಿ ಗಾತ್ರದ ಹೆಬ್ಬಾವನ್ನು ಅರಣ್ಯ ಇಲಾಖೆ ಸಿಬ್ಬಂದಿಗಳ ಸಹಾಯದಿಂದ ಉರಗ ತಜ್ಞ ಸಂಜಯ್‌ ರಕ್ಷಣೆ ಮಾಡಿದ್ದಾರೆ. ರೈತರು ಜಮೀನಿಗೆ ತೆರಳುತ್ತಿದ್ದ ವೇಳೆ ಈ ಹೆಬ್ಬಾವು ಕಾಣಿಸಿಕೊಂಡಿದೆ. ಇದೇ ಹೆಬ್ಬಾವು ಕುರಿ ಹಾಗೂ ಮೇಕೆಗಳನ್ನು ನುಂಗಿ ರೈತರಿಗೆ ಭಾರೀ ತೊಂದರೆಯನ್ನು ನೀಡುತ್ತಿತ್ತು. ಇದೀಗ ಹೆಬ್ಬಾವನ್ನು ಪತ್ತೆ ಮಾಡಿ ಸೆರೆ ಹಿಡಿಯಲಾಗಿದ್ದು, ರೈತರು ನಿಟ್ಟುಸಿರು ಬಿಟ್ಟಿದ್ದಾರೆ.

ವಿಡಿಯೋ ಸ್ಟೋರಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published on: Dec 05, 2025 04:23 PM
Follow Us
Akshay Pallamajalu
Akshay Pallamajalu

ನನ್ನ ಹೆಸರು ಅಕ್ಷಯ್ ಕುಮಾರ್ ಪಲ್ಲಮಜಲು, ನನ್ನ ಊರು ದಕ್ಷಿಣ ಕನ್ನಡ ಜಿಲ್ಲೆ, ಬಂಟ್ವಾಳ ತಾಲ್ಲೂಕು, ಡಿಜಿಟಲ್​ ವಿಭಾಗದಲ್ಲಿ 3 ವರ್ಷಗಳ ಅನುಭವ, ಇದರ ಜತೆಗೆ ಸೋಶಿಯಲ್ ಮೀಡಿಯಾದ ಬಗ್ಗೆ ಹೆಚ್ಚಿನ ಆಸಕ್ತಿಯನ್ನು ಹೊಂದಿದ್ದು, ಟಿವಿ9ನಲ್ಲೂ ಸೋಶಿಯಲ್​​​ ಮೀಡಿಯಾವನ್ನು ನೋಡಿಕೊಳ್ಳುತ್ತಿದ್ದೇನೆ. ಡಿಜಿಟಲ್ ಕ್ಷೇತ್ರದಲ್ಲಿ ಆಸಕ್ತಿಯನ್ನು ಹೊಂದಿದ್ದು, ಸೋಶಿಯಲ್​​​ ಮೀಡಿಯಾದಲ್ಲಿ ಇನ್ನೂ ಹೆಚ್ಚಿನ ವಿಚಾರಗಳನ್ನು ತಿಳಿದುಕೊಳ್ಳವ ಆಸಕ್ತಿ ಇದೆ. ಇದರ ಜತೆಗೆ ರಾಷ್ಟ್ರೀಯ ಲೇಖನಗಳನ್ನು ಬರೆಯುತ್ತೇನೆ.

Read More