ರೈತರ ಜತೆ ಮಾತುಕತೆ ನಡೆಸಿ ಸಮಸ್ಯೆ ಪರಿಹರಿಸಲು ಕೇಂದ್ರ ಸರ್ಕಾರ ಸಿದ್ಧ: ಹರ್​ದೀಪ್ ಸಿಂಗ್ ಪುರಿ

ಪ್ರತಿಭಟನೆಯಲ್ಲಿ ಭಾಗಿಯಾಗಿರುವ ಹಲವರಿಗೆ ತಾವು ಯಾಕೆ ಪ್ರತಿಭಟನೆ ಮಾಡುತ್ತಿದ್ದೇವೆ ಎಂಬುದು ಗೊತ್ತಿಲ್ಲ. ಇದು ನನಗೆ ಬೇಸರವನ್ನುಂಟು ಮಾಡಿದೆ. ನಮ್ಮ ಜತೆ ಬಂದು ಮಾತನಾಡಿ ಎಂದು ಸರ್ಕಾರ ಈಗಲೂ ಎಲ್ಲ ರೈತರಿಗೆ ಸಂದೇಶ ಕಳುಹಿಸುತ್ತಿದೆ ಎಂದು ಎಚ್​ಡಿಸಿಸಿಐ ನಡೆಸಿದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಪುರಿ ಹೇಳಿದ್ದಾರೆ.

ರೈತರ ಜತೆ ಮಾತುಕತೆ ನಡೆಸಿ ಸಮಸ್ಯೆ ಪರಿಹರಿಸಲು ಕೇಂದ್ರ ಸರ್ಕಾರ ಸಿದ್ಧ: ಹರ್​ದೀಪ್ ಸಿಂಗ್ ಪುರಿ
ಹರ್​ದೀಪ್ ಸಿಂಗ್ ಪುರಿ

Updated on: Dec 17, 2020 | 6:45 PM

ನವದೆಹಲಿ: ಕೇಂದ್ರ ಸರ್ಕಾರದ ಕೃಷಿ ಕಾನೂನಿನ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ರೈತರ ಜತೆ ಕುಳಿತು ಮಾತುಕತೆ ನಡೆಸಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಸಲು ನಾವು ಸಿದ್ಧ ಎಂದು ಕೇಂದ್ರ ವಸತಿ ಸಚಿವ ಹರ್​ದೀಪ್ ಸಿಂಗ್ ಪುರಿ ಹೇಳಿದ್ದಾರೆ.

ಪಂಜಾಬ್, ಹರ್ಯಾಣ ಮತ್ತು ಇತರ ರಾಜ್ಯಗಳಿಂದ ಬಂದ ಸಾವಿರಾರು ರೈತರು ದೆಹಲಿ ಗಡಿಭಾಗವಾದ ಸಿಂಘು ಮತ್ತು ಟಿಕ್ರಿಯಲ್ಲಿ ಪ್ರತಿಭಟನೆ ಮಾಡುತ್ತಿದ್ದಾರೆ. 22 ದಿನಗಳಿಂದ ರೈತರ ಪ್ರತಿಭಟನೆ ಮುಂದುವರಿದಿದೆ.

ಪ್ರತಿಭಟನೆಯಲ್ಲಿ ಭಾಗಿಯಾಗಿರುವ ಹಲವರಿಗೆ ತಾವು ಯಾಕೆ ಪ್ರತಿಭಟನೆ ಮಾಡುತ್ತಿದ್ದೇವೆ ಎಂಬುದು ಗೊತ್ತಿಲ್ಲ. ಇದು ನನಗೆ ಬೇಸರವನ್ನುಂಟು ಮಾಡಿದೆ. ನಮ್ಮ ಜತೆ ಬಂದು ಮಾತನಾಡಿ ಎಂದು ಸರ್ಕಾರ ಈಗಲೂ ಎಲ್ಲ ರೈತರಿಗೆ ಸಂದೇಶ ಕಳುಹಿಸುತ್ತಿದೆ ಎಂದು ಉದ್ಯಮ ಸಂಸ್ಥೆ ಎಚ್​ಡಿಸಿಸಿಐ ನಡೆಸಿದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಪುರಿ ಹೇಳಿದ್ದಾರೆ.

ಅವರದ್ದು ಮೂರು ಬೇಡಿಕೆಗಳಿವೆ- ಎಂಎಸ್​ಪಿ (ಕನಿಷ್ಠ ಬೆಂಬಲ ಬೆಲೆ) ವ್ಯವಸ್ಥೆ ರದ್ದು ಮಾಡಬಾರದು. ಮಂಡಿ ವ್ಯವಸ್ಥೆ ಇರಬೇಕು. ಯಾರೂ ರೈತರ ಭೂಮಿಯನ್ನು ಕಸಿದುಕೊಳ್ಳಬಾರದು ಎಂಬುದಾಗಿತ್ತು. ಇವುಗಳನ್ನು ನಾವು ಸಮ್ಮತಿಸಿದ್ದೇವೆ. ಪ್ರತಿಭಟನೆಕಾರರಲ್ಲಿ ತಪ್ಪು ಗ್ರಹಿಕೆ ಇದೆ. ಸಮಸ್ಯೆ ಪರಿಹಾರಕ್ಕಾಗಿ ನಾವು ಯಾರ ಜತೆಗೂ ಮಾತುಕತೆ ನಡೆಸಲು ಸಿದ್ದ ಎಂದಿದ್ದಾರೆ ನಾಗರಿಕ ವಿಮಾನ ಯಾನ ಸಚಿವ ಪುರಿ.

ಡಿಸೆಂಬರ್ ತಿಂಗಳ ಅಂತ್ಯ ಅಥವಾ 2021 ಮಾರ್ಚ್ ತಿಂಗಳೊಳಗೆ ನಾವು ಕೋವಿಡ್ ಪೂರ್ವ ಸಹಜ ಸ್ಥಿತಿಗೆ ಮರಳುವ ಸಾಧ್ಯತೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಮಾರ್ಚ್ ತಿಂಗಳಲ್ಲಿ ಲಾಕ್​​ಡೌನ್ ಘೋಷಣೆ ಆದಾಗ ಬಂದ್ ಆಗಿದ್ದ ವಿಮಾನಯಾನವು ಮೇ 25ರಂದು ಪುನರಾರಂಭವಾಗಿತ್ತು. ಆಗ ಪ್ರತಿದಿನ 30,000 ಪ್ರಯಾಣಿಕರು ಪ್ರಯಾಣ ನಡೆಸುತ್ತಿದ್ದರು. ಕೆಲವು ದಿನಗಳ ಹಿಂದೆ 2,53,000 ಪ್ರಯಾಣಿಕರು ಪ್ರಯಾಣಿಸಿದ್ದರು ಎಂದು ಸಚಿವರು ಹೇಳಿದ್ದಾರೆ.

Delhi chalo | ರೈತರು ಗಲಭೆಕೋರರಲ್ಲ, ಪ್ರತಿಭಟಿಸುವ ಹಕ್ಕು ಅವರಿಗಿದೆ: ಸುಪ್ರೀಂಕೋರ್ಟ್ ಸ್ಪಷ್ಟ ನುಡಿ

 

Published On - 6:41 pm, Thu, 17 December 20