AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Corona second wave | ಎರಡು ಗಂಟೆಗಿಂತ ಕಡಿಮೆ ಅವಧಿಯ ದೇಶೀ ವಿಮಾನಗಳ ಒಳಗೆ ಆಹಾರ ಪೂರೈಕೆಗೆ ನಿಷೇಧ

ಎರಡು ಗಂಟೆ ಅವಧಿಯೊಳಗಿನ ದೇಶೀ ವಿಮಾನ ಯಾನದಲ್ಲಿ ಆಹಾರ ಪೂರೈಕೆ ನಿಷೇಧಿಸಿ ಕೇಂದ್ರ ನಾಗರಿಕ ವಿಮಾನ ಯಾನ ಸಚಿವಾಲಯದ ಅಧಿಸೂಚನೆಯು ಏಪ್ರಿಲ್ 12ರಂದು ತಿಳಿಸಿದೆ.

Corona second wave | ಎರಡು ಗಂಟೆಗಿಂತ ಕಡಿಮೆ ಅವಧಿಯ ದೇಶೀ ವಿಮಾನಗಳ ಒಳಗೆ ಆಹಾರ ಪೂರೈಕೆಗೆ ನಿಷೇಧ
ಪ್ರಾತಿನಿಧಿಕ ಚಿತ್ರ
Follow us
Srinivas Mata
|

Updated on: Apr 12, 2021 | 5:44 PM

ನವದೆಹಲಿ: ಎರಡು ಗಂಟೆಗಿಂತ ಕಡಿಮೆ ಅವಧಿಯ ದೇಶೀ ವಿಮಾನಗಳ ಒಳಗೆ ಸರ್ಕಾರವು ಆಹಾರ ಪದಾರ್ಥಗಳ ಪೂರೈಕೆಯನ್ನು (ಕ್ಯಾಟರಿಂಗ್) ನಿಷೇಧ ಮಾಡಿದೆ. ಕೋವಿಡ್- 19 ಸೋಂಕಿನ ಅಪಾಯವನ್ನು ಮಿತಿಗೊಳಿಸುವ ನಿಟ್ಟಿನಲ್ಲಿ ಈ ಕ್ರಮವನ್ನು ತೆಗೆದುಕೊಳ್ಳಲಾಗಿದೆ. “ಏರ್​ಲೈನ್​ಗಳು, ದೇಶೀ ವಲಯದಲ್ಲಿ ಕಾರ್ಯ ನಿರ್ವಹಿಸುವ ವಿಮಾನಗಳು ಊಟದ ಸೇವೆಯನ್ನು ಒದಗಿಸಬಹುದು. ಆದರೆ ವಿಮಾನ ಹಾರಾಟದ ಸಮಯ ಎರಡು ಗಂಟೆ ಮತ್ತು ಅದಕ್ಕಿಂತ ಹೆಚ್ಚಗಿರಬೇಕು,” ಎಂದು ನಾಗರಿಕ ವಿಮಾನ ಯಾನ ಸಚಿವಾಲಯದ ಅಧಿಸೂಚನೆಯು ಏಪ್ರಿಲ್ 12ರಂದು ತಿಳಿಸಿದೆ.

ಕಳೆದ ಎರಡು ವಾರಗಳಿಂದ ಕೊರೊನಾ ಸೋಂಕು ಪ್ರಮಾಣದಲ್ಲಿ ತೀವ್ರವಾಗಿ ಹೆಚ್ಚಳವಾಗಿದ್ದು, ರಾಜ್ಯ ಸರ್ಕಾರಗಳಿಂದ ಹೊಸದಾಗಿ ನಿರ್ಬಂಧಗಳನ್ನು ಹೇರಿರುವುದರಿಂದ ವಿಮಾನ ಪ್ರಯಾಣಿಕರ ಸಂಖ್ಯೆಯಲ್ಲಿ ಗಣನೀಯವಾಗಿ ಇಳಿಕೆ ಆಗಿದೆ. ಇದರ ಮಧ್ಯೆಯೂ ಆಹಾರ ಪೂರೈಕೆ ಸೇವೆ ಬಗ್ಗೆ ಆದೇಶ ಬಂದಿದೆ. ಇನ್ನು ಸರ್ಕಾರದ ಹೊಸ ಮಾರ್ಗದರ್ಶಿ ಸೂತ್ರಗಳು ಕೆಲವು ಷರತ್ತುಗಳನ್ನು ಒಳಗೊಂಡಂತೆ ಎರಡು ಗಂಟೆಗೆ ಮೇಲ್ಪಟ್ಟ ದೂರ ಪ್ರಯಾಣದ ವಿಮಾನಗಳ ಕ್ಯಾಟರಿಂಗ್ ಸೇವೆಗಳಿಗೆ ಅನ್ವಯ ಆಗುತ್ತವೆ.

ಸರ್ಕಾರದ ಆದೇಶವನ್ನು ಅಲ್ಟಾನ್ ಏವಿಯೇಷನ್​ನ ಸಂಜೀವ್ ಕಪೂರ್ ಅವರು, ಉತ್ತಮ ನಡೆ ಎಂದು ಕರೆದಿದ್ದಾರೆ. ಸ್ಪೈಸ್ ಜೆಟ್​​ನ ಮಾಜಿ ಸಿಒಒ ಮತ್ತು ವಿಸ್ತಾರಾದ ಸಿಎಸ್​ಸಿಒ ಪ್ರಸ್ತಾವ ಮಾಡಿರುವಂತೆ, ಈ ನಿಷೇಧವನ್ನು ಮೂರರಿಂದ ನಾಲ್ಕು ಗಂಟೆಗೆ ವಿಸ್ತರಿಸುವಂತೆ ಕೇಳಿಕೊಂಡಿದ್ದಾರೆ. ಕೋವಿಡ್ ಅಪಾಯವನ್ನು ಕಡಿಮೆ ಮಾಡುವುದಕ್ಕೆ ಹೋಲಿಸಿದಲ್ಲಿ ಆದಾಯ ನಷ್ಟ ಎಂಬುದು ಸಣ್ನ ತ್ಯಾಗ. ದೊಡ್ಡ ಸಮಸ್ಯೆಗೆ ಪರಿಷ್ಕಾರ ಸಿಕ್ಕಂತೆ ಆಗಿದೆ. ದೂರದ ವಿಮಾನಗಳಿಗೂ ಆಹಾರ ಪೂರೈಕೆ ನಿಲ್ಲಿಸಬಹುದು. ಏಕೆಂದರೆ ಒಂದೇ ಸಮಯಕ್ಕೆ ಎಲ್ಲ ಮಾಸ್ಕ್​ಗಳನ್ನು ತೆಗೆಯಲು ಆಗಲ್ಲ ಎಂದು ಟ್ವೀಟ್ ಮಾಡಿದ್ದಾರೆ.

ದನ್ನೂ ಓದಿ: ಕೊರೊನಾ ಎರಡನೇ ಅಲೆಯ ಆತಂಕ; ಮತ್ತೆ ಲಾಕ್ ಆದ್ರೆ ಎದುರಾಗಲಿದೆ ಕಷ್ಟ-ನಷ್ಟ

( Civil aviation ministry banned meals catering inside flight during short duration journey, which is less than 2 hours.)

ಧೂಮಪಾನ ಮತ್ತು ಡ್ರಗ್ಸ್ ಸೇವನೆ ಅಪಾಯಕಾರಿಯಾಗಿ ಪರಿಣಮಿಸುತ್ತಿದೆ: ಡಾ ಸದಾನಂದ
ಧೂಮಪಾನ ಮತ್ತು ಡ್ರಗ್ಸ್ ಸೇವನೆ ಅಪಾಯಕಾರಿಯಾಗಿ ಪರಿಣಮಿಸುತ್ತಿದೆ: ಡಾ ಸದಾನಂದ
ಸ್ಕಂದಗಿರಿ ಮತ್ತು ಬಹುನಂದೀಶ್ವವರ ದೇವಸ್ಥಾನಕ್ಕೂ ನೋ ಎಂಟ್ರಿ: ಜಿಲ್ಲಾಡಳಿತ
ಸ್ಕಂದಗಿರಿ ಮತ್ತು ಬಹುನಂದೀಶ್ವವರ ದೇವಸ್ಥಾನಕ್ಕೂ ನೋ ಎಂಟ್ರಿ: ಜಿಲ್ಲಾಡಳಿತ
ಬೌಲಿಂಗ್ ಕೋಚ್ ಜೊತೆ WWE ಆಡಿ ಸೋತ ಅರ್ಷದೀಪ್, ಆಕಾಶ್
ಬೌಲಿಂಗ್ ಕೋಚ್ ಜೊತೆ WWE ಆಡಿ ಸೋತ ಅರ್ಷದೀಪ್, ಆಕಾಶ್
ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರು ಮುಖಾಮುಖಿಯಾಗುವುದನ್ನು ತಪ್ಪಿಸಿದ ಪೊಲೀಸ್
ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರು ಮುಖಾಮುಖಿಯಾಗುವುದನ್ನು ತಪ್ಪಿಸಿದ ಪೊಲೀಸ್
ಅಂಬೇಡ್ಕರ್​ ಅವರನ್ನು ಕಾಂಗ್ರೆಸ್ ಯಾವತ್ತೂ ಗೌರವಿಸಲಿಲ್ಲ: ಸಿಟಿ ರವಿ
ಅಂಬೇಡ್ಕರ್​ ಅವರನ್ನು ಕಾಂಗ್ರೆಸ್ ಯಾವತ್ತೂ ಗೌರವಿಸಲಿಲ್ಲ: ಸಿಟಿ ರವಿ
ಅಧಿಕಾರಕ್ಕಾಗಿ ಆಸೆಪಟ್ಟವನಲ್ಲ, 50 ವರ್ಷಗಳಿಂದ ರಾಜಕೀಯದಲ್ಲಿದ್ದೇವೆ: ಶಾಸಕ
ಅಧಿಕಾರಕ್ಕಾಗಿ ಆಸೆಪಟ್ಟವನಲ್ಲ, 50 ವರ್ಷಗಳಿಂದ ರಾಜಕೀಯದಲ್ಲಿದ್ದೇವೆ: ಶಾಸಕ
ವಿನಯ್ ರಾಜ್​ಕುಮಾರ್ ಹೃದಯದಲ್ಲಿ ಯಾರ ಹೆಸರಿದೆ? ಅವರೇ ಕೊಟ್ಟ ಉತ್ತರ
ವಿನಯ್ ರಾಜ್​ಕುಮಾರ್ ಹೃದಯದಲ್ಲಿ ಯಾರ ಹೆಸರಿದೆ? ಅವರೇ ಕೊಟ್ಟ ಉತ್ತರ
ದಸರಾ ಮಹೋತ್ಸವ-2025 ಹನ್ನೊಂದು ದಿನಗಳ ಕಾಲ ನಡೆಯಲಿದೆ: ಸಿದ್ದರಾಮಯ್ಯ
ದಸರಾ ಮಹೋತ್ಸವ-2025 ಹನ್ನೊಂದು ದಿನಗಳ ಕಾಲ ನಡೆಯಲಿದೆ: ಸಿದ್ದರಾಮಯ್ಯ
ಮಧುಗಿರಿ ಜಮೀನು ಒತ್ತುವರಿ ಪ್ರಕರಣ ತನಿಖೆಗೊಪ್ಪಿಸಲಾಗಿದೆ: ರಾಜಣ್ಣ
ಮಧುಗಿರಿ ಜಮೀನು ಒತ್ತುವರಿ ಪ್ರಕರಣ ತನಿಖೆಗೊಪ್ಪಿಸಲಾಗಿದೆ: ರಾಜಣ್ಣ
ವಿಶ್ವಪ್ರಸಿದ್ಧ ಜಗನ್ನಾಥ ರಥಯಾತ್ರೆಯಲ್ಲಿ ಪತ್ನಿ ಪ್ರೀತಿ ಜೊತೆ ಗೌತಮ್ ಅದಾನಿ
ವಿಶ್ವಪ್ರಸಿದ್ಧ ಜಗನ್ನಾಥ ರಥಯಾತ್ರೆಯಲ್ಲಿ ಪತ್ನಿ ಪ್ರೀತಿ ಜೊತೆ ಗೌತಮ್ ಅದಾನಿ