AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊರೊನಾ ಎಫೆಕ್ಟ್: ಭಾರತದಲ್ಲಿ ನೆಲೆಯೂರಲು ಚೀನಾ ಕಂಪನಿಗಳು ಸಜ್ಜು, ಬೆಂಗಳೂರಿಗೆ ಎಷ್ಟು ಬರಲಿವೆ?

ದೆಹಲಿ: ಚೀನಾ ಹೆಸರು ಕೇಳಿದ್ರೆ ಸಾಕು ಜಗತ್ತಿನ ಘಟಾನುಘಟಿ ರಾಷ್ಟ್ರಗಳು ಉರಿದುರಿದು ಬೀಳ್ತಿವೆ. ಇನ್ನು ಉತ್ಪಾದನಾ ವಲಯದ ದೈತ್ಯ ಚೀನಾಗೆ ಕೊರೊನಾ ವೈರಸ್ ವಿಲನ್ ಪಟ್ಟಕಟ್ಟಿದೆ. ಯಾಕಂದ್ರೆ ತನ್ನ ಪ್ರಜೆಗಳಿಗೆ ಸರಿಯಾಗಿ ಆಹಾರ ಪದ್ಧತಿ ಕಲಿಸದ ರಾಷ್ಟ್ರದಿಂದ ಏನೇನೋ ವಿಪತ್ತು ನಡೆದು ಹೋಗಿದೆ. ಚೀನಿಯರ ಆಹಾರ ಪದ್ಧತಿಯಿಂದಲೇ ಇವತ್ತಿನ ಸಂದಿಗ್ಧ ಸ್ಥಿತಿ ಎದುರಾಗಿರೋದು. ಹೀಗಾಗಿ ರಿವೇಂಜ್ ತೆಗೆದುಕೊಳ್ಳಲು ಜಗತ್ತಿನ ಪ್ರತಿ ರಾಷ್ಟ್ರವೂ ಕಾಯ್ತಾ ಇದೆ. ‘ಡ್ರ್ಯಾಗನ್’ ನಾಡಿನ ಕಂಪನಿಗಳಿಗೆ ಗಾಳ! ಕೊರೊನಾ ಅಟ್ಯಾಕ್ ಆದಾಗಿನಿಂದ ಚೀನಾ ಗ್ರಹಚಾರ […]

ಕೊರೊನಾ ಎಫೆಕ್ಟ್: ಭಾರತದಲ್ಲಿ ನೆಲೆಯೂರಲು ಚೀನಾ ಕಂಪನಿಗಳು ಸಜ್ಜು, ಬೆಂಗಳೂರಿಗೆ ಎಷ್ಟು ಬರಲಿವೆ?
ಸಾಧು ಶ್ರೀನಾಥ್​
ಸಾಧು ಶ್ರೀನಾಥ್​|

Updated on:May 17, 2020 | 1:10 PM

Share

ದೆಹಲಿ: ಚೀನಾ ಹೆಸರು ಕೇಳಿದ್ರೆ ಸಾಕು ಜಗತ್ತಿನ ಘಟಾನುಘಟಿ ರಾಷ್ಟ್ರಗಳು ಉರಿದುರಿದು ಬೀಳ್ತಿವೆ. ಇನ್ನು ಉತ್ಪಾದನಾ ವಲಯದ ದೈತ್ಯ ಚೀನಾಗೆ ಕೊರೊನಾ ವೈರಸ್ ವಿಲನ್ ಪಟ್ಟಕಟ್ಟಿದೆ. ಯಾಕಂದ್ರೆ ತನ್ನ ಪ್ರಜೆಗಳಿಗೆ ಸರಿಯಾಗಿ ಆಹಾರ ಪದ್ಧತಿ ಕಲಿಸದ ರಾಷ್ಟ್ರದಿಂದ ಏನೇನೋ ವಿಪತ್ತು ನಡೆದು ಹೋಗಿದೆ. ಚೀನಿಯರ ಆಹಾರ ಪದ್ಧತಿಯಿಂದಲೇ ಇವತ್ತಿನ ಸಂದಿಗ್ಧ ಸ್ಥಿತಿ ಎದುರಾಗಿರೋದು. ಹೀಗಾಗಿ ರಿವೇಂಜ್ ತೆಗೆದುಕೊಳ್ಳಲು ಜಗತ್ತಿನ ಪ್ರತಿ ರಾಷ್ಟ್ರವೂ ಕಾಯ್ತಾ ಇದೆ.

‘ಡ್ರ್ಯಾಗನ್’ ನಾಡಿನ ಕಂಪನಿಗಳಿಗೆ ಗಾಳ! ಕೊರೊನಾ ಅಟ್ಯಾಕ್ ಆದಾಗಿನಿಂದ ಚೀನಾ ಗ್ರಹಚಾರ ನೆಟ್ಟಗಿಲ್ಲ. ಅದಕ್ಕಿಂತ ಹೆಚ್ಚಾಗಿ ಚೀನಾದ ಕಂಪನಿಗಳೀಗ ಬರ್ಬಾದ್ ಆಗಿವೆ. ಹೀಗಾಗಿ ಚೀನಾದಿಂದ ಕಾಲುಕೀಳಲು ಚೀನಿ ಕಂಪನಿಗಳು ಸಿದ್ಧವಾಗಿವೆ. ಭಾರತವೇ ನಮಗೆ ಬೆಸ್ಟ್ ಅನ್ನೋದು ಚೀನಿ ಕಂಪನಿಗಳಿಗೆ ಅರಿವಾದಂತಿದೆ. ಭಾರತದಲ್ಲಿ ನೆಲೆಯೂರಲು ಚೀನಿ ಕಂಪನಿಗಳು ಸಿದ್ಧವಾಗಿವೆ. ಇನ್ನು ಹೀಗೆ ವಲಸೆ ಬರುವ ಕಂಪನಿಗಳಿಗೆ ಭಾರತದಲ್ಲಿ ಉದ್ಯಮ ಸ್ಥಾಪನೆ ಮಾಡಲು ಕೇಂದ್ರ ಸರ್ಕಾರ ಸಕಲ ವ್ಯವಸ್ಥೆ ಮಾಡಲು ಮುಂದಾಗಿದೆ. 10 ಮೆಗಾ ಕ್ಲಸ್ಟರ್​ಪ್ಲ್ಯಾನ್ ರೆಡಿಯಾಗಿದ್ದು 9 ರಾಜ್ಯಗಳ ಪೈಕಿ 10 ನಗರಗಳಲ್ಲಿ ಭರದ ಸಿದ್ಧತೆ ನಡೆದಿದೆ. ಹಾಗಾದ್ರೆ ಚೀನಿ ಕಂಪನಿಗಳಿಗೆ ಗಾಳ ಹಾಕಲು ಪ್ಲ್ಯಾನ್ ಹೇಗೆ ರೆಡಿಯಾಗಿದೆ ಅನ್ನೋದನ್ನ ನೋಡೋದಾದ್ರೆ.

ಚೀನಾಗೆ ಗುನ್ನಾ? ಗ್ರೇಟರ್ ನೋಯ್ಡಾ ಪ್ರದೇಶವನ್ನು ದೇಶದ ಎಲೆಕ್ಟ್ರಾನಿಕ್ಸ್ ಹಬ್ ಮಾಡಲು ಚಿಂತನೆ ನಡೆದಿದೆ. ಔಷಧ ತಯಾರಿಕಾ ವಲಯಕ್ಕೆ ಮುತ್ತಿನನಗರಿ ಹೈದರಾಬಾದ್ ಆಯ್ಕೆಯಾಗಿದೆ. ಆಟೋಮೊಬೈಲ್ ಉದ್ಯಮಕ್ಕೆ ಪುಣೆ ಮತ್ತು ಔರಂಗಾಬಾದ್‌ ಸೆಲೆಕ್ಟ್ ಆಗಿದ್ದರೆ, ಮುಂಬೈ, ಚೆನ್ನೈ ಹಾಗೂ ಬೆಂಗಳೂರು ಕೂಡ ಮೆಗಾ ಕ್ಲಸ್ಟರ್​ ಲಿಸ್ಟ್​ನಲ್ಲಿವೆ. ಇನ್ನೂ ಗುಜರಾತ್​ನ ವಡೋದರ, ನೆಲ್ಲೂರು ಹಾಗೂ ಅಹಮದಾಬಾದ್​ಗೂ ಸ್ಥಾನ ಸಿಕ್ಕಿದೆ. ಆಂಧ್ರದ ತಿರುಪತಿ, ನೆಲ್ಲೂರಿಗೂ ಚೀನಾ ಕಂಪನಿಗಳು ಬರಲು ಸಿದ್ಧವಾಗಿವೆ.

ಒಟ್ನಲ್ಲಿ ವಿದೇಶಿ ನೇರ ಬಂಡವಾಳ ಸೆಳೆಯುವ ಜೊತೆಗೆ, ಬ್ರಾಂಡ್‌ ಇಂಡಿಯಾ ಹವಾ ಕ್ರಿಯೇಟ್ ಮಾಡೋಕೆ ಕೇಂದ್ರಸರ್ಕಾರ ಸಿದ್ಧವಾಗಿದೆ. ಇನ್ನೂ ಭಾರತದಲ್ಲಿ 22 ಮಿಲಿಯನ್ ಚದರ ಅಡಿ ಕೈಗಾರಿಕಾ ಜಾಗ ರೆಡಿಯಾಗಿದೆ. ಈ ಜಾಗವನ್ನು ಬಳಸಿಕೊಂಡು ಚೀನಾದಿಂದ ಬರುವ ಕೈಗಾರಿಕೆಗಳಿಂದ ಉತ್ಪಾದನಾ ವಲಯ ಸೃಷ್ಟಿಸಬಹುದು. ಭಾರತದಲ್ಲಿ ಉದ್ಯಮ ನಡೆಸುವುದು ಮೊದಲಿಗಿಂತ ಸುಲಭವಾಗಿದೆ. ಉದ್ಯಮ ಸರಳೀಕರಣದಲ್ಲಿ ಭಾರತದ ಬೆಸ್ಟ್ ಆಗಿದ್ದು, ಹಣದ ಉಳಿತಾಯವೂ ಆಗಲಿದೆ. ಚೀನಿ ಕಂಪನಿಗಳು ಎಂಟ್ರಿಯಾದ್ರೆ ಭಾರತದಲ್ಲಿ ಕೋಟ್ಯಂತರ ಉದ್ಯೋಗ ಸೃಷ್ಟಿಯಾಗಲಿದೆ.

Published On - 12:33 pm, Sun, 17 May 20

Follow Us
ಬಾಗೇಪಲ್ಲಿ ಕಾರು ಚಾಲಕನ ಹತ್ಯೆ ಮಾಡಿದ ಆರೋಪಿಗೆ ಪೊಲೀಸರ ತೀವ್ರ ಶೋಧ
ಬಾಗೇಪಲ್ಲಿ ಕಾರು ಚಾಲಕನ ಹತ್ಯೆ ಮಾಡಿದ ಆರೋಪಿಗೆ ಪೊಲೀಸರ ತೀವ್ರ ಶೋಧ
ಬಾಲ್ಯದಲ್ಲೇ ನಟಿಸುವ ಆಸೆಯಿತ್ತು, ಅಪ್ಪ ಬೇಡ ಅಂದಿದ್ರು: ಮೋನಿಷಾ ವಿಜಯ್
ಬಾಲ್ಯದಲ್ಲೇ ನಟಿಸುವ ಆಸೆಯಿತ್ತು, ಅಪ್ಪ ಬೇಡ ಅಂದಿದ್ರು: ಮೋನಿಷಾ ವಿಜಯ್
ಬೆಂಗಳೂರಿಗೆ ಬಂದ ಇಡಿ ನಿರ್ದೇಶಕ ರಾಹುಲ್ ನವೀನ್
ಬೆಂಗಳೂರಿಗೆ ಬಂದ ಇಡಿ ನಿರ್ದೇಶಕ ರಾಹುಲ್ ನವೀನ್
ಜಗ್ಗು ಮಮ್ಮಿಯ ವ್ಯಂಗ್ಯ ಮಾಡಿದ ತಾಂಡವ್​​ಗೆ ಸುದೀಪ್ ತರಾಟೆ: ವಿಡಿಯೋ
ಜಗ್ಗು ಮಮ್ಮಿಯ ವ್ಯಂಗ್ಯ ಮಾಡಿದ ತಾಂಡವ್​​ಗೆ ಸುದೀಪ್ ತರಾಟೆ: ವಿಡಿಯೋ
ಭಾರತ ಮಂಟಪದಲ್ಲಿ ಬ್ರಿಕ್ಸ್ ನಾಯಕರೊಂದಿಗೆ ಸಸಿ ನೆಟ್ಟ ಪ್ರಧಾನಿ ಮೋದಿ
ಭಾರತ ಮಂಟಪದಲ್ಲಿ ಬ್ರಿಕ್ಸ್ ನಾಯಕರೊಂದಿಗೆ ಸಸಿ ನೆಟ್ಟ ಪ್ರಧಾನಿ ಮೋದಿ
ಥಣಿಸಂದ್ರದ ರಿಸರ್ಚ್ ಸೆಂಟರ್‌ಗೆ ಸಚಿವ ರಾಮಲಿಂಗಾರೆಡ್ಡಿ ದಿಢೀರ್ ಭೇಟಿ
ಥಣಿಸಂದ್ರದ ರಿಸರ್ಚ್ ಸೆಂಟರ್‌ಗೆ ಸಚಿವ ರಾಮಲಿಂಗಾರೆಡ್ಡಿ ದಿಢೀರ್ ಭೇಟಿ
ಚಾಮರಾಜನಗರವನ್ನು 'ಕಾಡುಗಳ್ಳ ಮುಕ್ತ' ಮಾಡಲು ಸರ್ಕಾರದ ಬಿಗ್ ಪ್ಲಾನ್
ಚಾಮರಾಜನಗರವನ್ನು 'ಕಾಡುಗಳ್ಳ ಮುಕ್ತ' ಮಾಡಲು ಸರ್ಕಾರದ ಬಿಗ್ ಪ್ಲಾನ್
ಬ್ರಿಕ್ಸ್​ ವೇದಿಕೆಯಲ್ಲಿ ಗಮನಸೆಳೆದ ರಾಮೇಶ್ವರಂ ದೇವಾಲಯದ ಸ್ಕ್ರೀನ್
ಬ್ರಿಕ್ಸ್​ ವೇದಿಕೆಯಲ್ಲಿ ಗಮನಸೆಳೆದ ರಾಮೇಶ್ವರಂ ದೇವಾಲಯದ ಸ್ಕ್ರೀನ್
ಇನ್ಸ್‌ಪೆಕ್ಟರ್ ಧನಂಜಯ್‌ಗೆ ಮಾಜಿ ಸಂಸದ ಪ್ರತಾಪ್ ಸಿಂಹ ಎಚ್ಚರಿಕೆ
ಇನ್ಸ್‌ಪೆಕ್ಟರ್ ಧನಂಜಯ್‌ಗೆ ಮಾಜಿ ಸಂಸದ ಪ್ರತಾಪ್ ಸಿಂಹ ಎಚ್ಚರಿಕೆ
ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಐದನೇ ವರ್ಷದ ಗಣೇಶೋತ್ಸವಕ್ಕೆ ಸಿದ್ಧತೆ
ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಐದನೇ ವರ್ಷದ ಗಣೇಶೋತ್ಸವಕ್ಕೆ ಸಿದ್ಧತೆ